ಉತ್ತರ ಪ್ರದೇಶದ ಬಡೌತ್ನಲ್ಲಿ 2014ರಲ್ಲಿ ಸತ್ಯವೀರ್ ಅಲಿಯಾಸ್ ಕಲ್ಲು ಎಂಬುವವರ ಹತ್ಯೆ ನಡೆದಿತ್ತು. ಹತ್ಯೆ ಕುರಿತು ಮರುತನಿಖೆ ನಡೆಸುವಂತೆ ಕೋರಿ ಪ್ರಕರಣದ ಆರೋಪಿಯೊಬ್ಬರ ತಾಯಿ ಗೃಹ ಇಲಾಖೆಗೆ ಪತ್ತ ಬರೆದಿದ್ದರು. ಈ ಪತ್ರದ ಆಧಾರದಲ್ಲಿ, ಹತ್ಯೆ ಕುರಿತು ಮರುತನಿಖೆ ನಡೆಸುವಂತೆ ಸಿಬಿ–ಸಿಐಡಿಗೆ ನಿರ್ದೇಶಿಸಿ ಇಲಾಖೆಯ ಕಾರ್ಯದರ್ಶಿ 2019ರ ಫೆ.13ರಂದು ಆದೇಶ ಹೊರಡಿಸಿದ್ದರು.