<p><strong>ಬೆಂಗಳೂರು</strong>: ಒಡಿಶಾದಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬ ಬ್ಯಾಂಕ್ ಠೇವಣಿ ಹಣ ಸಿಗಲಿಲ್ಲವೆಂದು ತನ್ನ ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್ ಬಳಿ ತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬುಡಕಟ್ಟು ವ್ಯಕ್ತಿಗೆ ಬ್ಯಾಂಕ್ ಕಡೆಗೂ ಸ್ಪಂದಿಸಿದೆ.</p><p>ಠೇವಣಿ ಹಣ ಪಡೆಯಲು ಬ್ಯಾಂಕ್ನವರು ಕೇಳಿದ್ದ ದಾಖಲೆಗಳನ್ನು ಪೂರೈಸಲಾಗದೇ ಒಡಿಶಾದಲ್ಲಿ ಅನಕ್ಷರಸ್ಥ ಬುಡಕಟ್ಟು ವ್ಯಕ್ತಿ ಜೀತು ಮುಂಡಾ ಎನ್ನುವಾತ ಸಹೋದರಿಯ ಅಸ್ಥಿಪಂಜರ ಅಗೆದು ತಂದು ದೇಶದಾದ್ಯಂತ ಸುದ್ದಿಯಾಗಿದ್ದ.</p><p>ಅಧಿಕಾರಿಗಳು ಹಾಗೂ ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ಒಡಿಶಾ ಗ್ರಾಮೀಣ ಬ್ಯಾಂಕನ್ನ ಉನ್ನತ ಅಧಿಕಾರಿಗಳೇ ಜೀತು ಇದ್ದ ಸ್ಥಳಕ್ಕೆ ತೆರಳಿ ಠೇವಣಿ ಹಣವನ್ನು ನೀಡಿದ್ದಾರೆ. ಇದಕ್ಕೆ ಬ್ಯಾಂಕ್ನವರಿಗೆ ಸ್ಥಳೀಯ ಅಧಿಕಾರಿಗಳು ಸಹಾಯ ಮಾಡಿದ್ದಾರೆ.</p><p>ಜೀತು ಮುಂಡಾ ಹಾಗೂ ಅವರ ಕುಟಂಬದವರ ಬಳಿ ಘಟನೆಗೆ ವಿಷಾದ ವ್ಯಕ್ತಪಡಿಸಿ, ₹19,402 ನಗದು ಹಣವನ್ನು ಅವರ ಕೈಗಿತ್ತಿದ್ದಾರೆ.</p><p>ಮೃತಳ ಬಗ್ಗೆ ಸರಿಯಾದ ದಾಖಲೆಗಳನ್ನು ಮಾತ್ರ ನಮ್ಮ ಬ್ಯಾಂಕ್ ಸಿಬ್ಬಂದಿ ಕೇಳಿದ್ದರು. ಆದರೆ, ಭೌತಿಕ ಉಪಸ್ಥಿತಿ ಇರಬೇಕು ಎಂದು ಯಾರೂ ಕೇಳಿರಲಿಲ್ಲ. ಸಂತ್ರಸ್ತ ಜೀತು ಮುಂಡಾ ನಮ್ಮ ಸಿಬ್ಬಂದಿಯ ಮಾತು ಸರಿಯಾಗಿ ಅರ್ಥೈಸಿಕೊಳ್ಳದೇ ಕೃತ್ಯ ಎಸಗಿದ್ದಾನೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು.</p><p>ಮಹಿಳೆಯರ ಹಣವನ್ನು ರಕ್ಷಿಸುವ ಹಿತಾಸಕ್ತಿ ಹೊರತು, ಇದರಲ್ಲಿ ಯಾವುದೇ ಕಿರುಕುಳದ ಕೃತ್ಯವಿಲ್ಲ. ಬ್ಯಾಂಕ್ ಎಲ್ಲಾ ಗ್ರಾಹಕರಿಗೆ ಸಹಾನುಭೂತಿಯ, ಹಾಗೂ ಪಾರದರ್ಶಕ ಸೇವೆಗೆ ಬದ್ಧವಾಗಿದೆ ಎಂದು ತಿಳಿಸಿದೆ.</p>.<p><strong>ಏನಿದು ಘಟನೆ?</strong></p><p>ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಟಣಾ ತಾಲ್ಲೂಕಿನ ದೈನಾಳಿ ಎಂಬ ಬುಡಕಟ್ಟು ಗ್ರಾಮದ ಅನಕ್ಷರಸ್ಥ ಜೀತು ಮುಂಡಾ (50) ಅವರ ಹಿರಿಯ ಸಹೋದರಿ ಕರ್ಳಾ ಮುಂಡಾ (56) ಕಳೆದ ಜನವರಿ 26 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು.</p><p>ಹಸು ಮಾರಾಟ ಮಾಡಿ ಬಂದಿದ್ದ ₹19,000 ಹಣವನ್ನು ‘ಒಡಿಶಾ ಗ್ರಾಮೀಣ ಬ್ಯಾಂಕ್’ನ ಪಟಣಾ ತಾಲ್ಲೂಕಿನ ಮಾಳಿಪೋಶಿ ಶಾಖೆಯಲ್ಲಿ ಕರ್ಳಾ ಅವರು ಠೇವಣಿ ಇರಿಸಿದ್ದರು.</p><p>ಕರ್ಳಾ ಅವರ ನಿಧನದ ನಂತರ ಠೇವಣಿ ಹಣ ಪಡೆಯಲು ಜೀತು ಮುಂಡಾ ಬ್ಯಾಂಕಿಗೆ ಅಲೆದಾಡಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ಬುಡಕಟ್ಟು ವ್ಯಕ್ತಿಯ ಹಿನ್ನೆಲೆ ನೋಡದೇ, ಯಥಾವತ್ತು ತಮ್ಮ ಹಳೆಯ ಚಾಳಿಯಂತೆ ‘ದಾಖಲೆಗಳನ್ನು ತಂದು ತೆಗೆದುಕೊಂಡು’ ಹೋಗು ಎಂದಿದ್ದರು.</p><p>ಏನು ಮಾಡಬೇಕು.. ಎಂದು ತಿಳಿಯದೇ ಕೆಲದಿನಗಳ ಬಳಿಕ ಮತ್ತೆ ಬ್ಯಾಂಕ್ಗೆ ಹೋದ ಜೀತು ಅವರು, ಹಣ ನೀಡುವಂತೆ ಕೇಳಿದ್ದಾರೆ. ಈ ಸಾರಿ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ ಬ್ಯಾಂಕ್ ಸಿಬ್ಬಂದಿ, ‘ಅವಳು ಸತ್ತಿದ್ದಾಳೆ ಎನ್ನುವುದಕ್ಕೆ ಏನು ದಾಖಲೆ? ದಾಖಲೆ ತಂದು ತೆಗೆದುಕೊಂಡು ಹೋಗು’ ಎಂದು ಗದರಿಸಿದ್ದರು.</p><p>ಈ ಸಾರಿ ಬಹಳ ಗಂಭೀರವಾದ ಜೀತು, ಸೀದಾ ಸ್ಮಶಾನಕ್ಕೆ ಹೋಗಿ ತನ್ನ ಸಹೋದರಿ ಕರ್ಳಾಳನ್ನು ಹೂತು ಹಾಕಿದ್ದ ಸಮಾಧಿ ಅಗೆದಿದ್ದಾರೆ. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಚೀಲದಲ್ಲಿ ಕಟ್ಟಿ, ಹೆಗಲ ಮೇಲೆ ಹೊತ್ತುಕೊಂಡು ಸುಮಾರು 3 ಕಿ.ಮೀ ನಡೆದುಕೊಂಡೇ ಬ್ಯಾಂಕ್ ಮುಂದೆ ತಂದು ಇಟ್ಟಿದ್ದರು.</p><p>‘ಇವಳೇ ನೋಡಿ ನನ್ನ ಅಕ್ಕ, ಸತ್ತವಳು.. ಇವಾಗಲಾದರೂ ನಿಮಗೆ ನಂಬಿಕೆ ಬಂತಾ, ಹಣ ಕೊಡಿ’ ಎಂದು ಅಂಗಲಾಚಿದ್ದ.</p><p>ಕೊಳೆತ ಶವದ ಅಸ್ಥಿಪಂಜರವನ್ನು ನೋಡಿದ ಬ್ಯಾಂಕ್ ಸಿಬ್ಬಂದಿ ಭಯಭೀತರಾಗಿದ್ದಾರೆ. ಚೀರಾಡಿ ಬ್ಯಾಂಕ್ನ ಬಾಗಿಲು ಹಾಕಿಕೊಂಡಿದ್ದರು.</p>.ದೊಡ್ಡಬಳ್ಳಾಪುರ | ನಿರ್ಜನ ಪ್ರದೇಶದ ಮರದಲ್ಲಿ ನೇತಾಡುತ್ತಿತ್ತು ಅಸ್ಥಿಪಂಜರ.ತೆಕ್ಕಲಕೋಟೆ | ಆದಿಮಾನವನ ಅಸ್ಥಿಪಂಜರ: ಉತ್ಖನನ ಸ್ಥಳಕ್ಕೆ ಜನ; ಕಾರ್ಯಕ್ಕೆ ಅಡ್ಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಒಡಿಶಾದಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬ ಬ್ಯಾಂಕ್ ಠೇವಣಿ ಹಣ ಸಿಗಲಿಲ್ಲವೆಂದು ತನ್ನ ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್ ಬಳಿ ತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬುಡಕಟ್ಟು ವ್ಯಕ್ತಿಗೆ ಬ್ಯಾಂಕ್ ಕಡೆಗೂ ಸ್ಪಂದಿಸಿದೆ.</p><p>ಠೇವಣಿ ಹಣ ಪಡೆಯಲು ಬ್ಯಾಂಕ್ನವರು ಕೇಳಿದ್ದ ದಾಖಲೆಗಳನ್ನು ಪೂರೈಸಲಾಗದೇ ಒಡಿಶಾದಲ್ಲಿ ಅನಕ್ಷರಸ್ಥ ಬುಡಕಟ್ಟು ವ್ಯಕ್ತಿ ಜೀತು ಮುಂಡಾ ಎನ್ನುವಾತ ಸಹೋದರಿಯ ಅಸ್ಥಿಪಂಜರ ಅಗೆದು ತಂದು ದೇಶದಾದ್ಯಂತ ಸುದ್ದಿಯಾಗಿದ್ದ.</p><p>ಅಧಿಕಾರಿಗಳು ಹಾಗೂ ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ಒಡಿಶಾ ಗ್ರಾಮೀಣ ಬ್ಯಾಂಕನ್ನ ಉನ್ನತ ಅಧಿಕಾರಿಗಳೇ ಜೀತು ಇದ್ದ ಸ್ಥಳಕ್ಕೆ ತೆರಳಿ ಠೇವಣಿ ಹಣವನ್ನು ನೀಡಿದ್ದಾರೆ. ಇದಕ್ಕೆ ಬ್ಯಾಂಕ್ನವರಿಗೆ ಸ್ಥಳೀಯ ಅಧಿಕಾರಿಗಳು ಸಹಾಯ ಮಾಡಿದ್ದಾರೆ.</p><p>ಜೀತು ಮುಂಡಾ ಹಾಗೂ ಅವರ ಕುಟಂಬದವರ ಬಳಿ ಘಟನೆಗೆ ವಿಷಾದ ವ್ಯಕ್ತಪಡಿಸಿ, ₹19,402 ನಗದು ಹಣವನ್ನು ಅವರ ಕೈಗಿತ್ತಿದ್ದಾರೆ.</p><p>ಮೃತಳ ಬಗ್ಗೆ ಸರಿಯಾದ ದಾಖಲೆಗಳನ್ನು ಮಾತ್ರ ನಮ್ಮ ಬ್ಯಾಂಕ್ ಸಿಬ್ಬಂದಿ ಕೇಳಿದ್ದರು. ಆದರೆ, ಭೌತಿಕ ಉಪಸ್ಥಿತಿ ಇರಬೇಕು ಎಂದು ಯಾರೂ ಕೇಳಿರಲಿಲ್ಲ. ಸಂತ್ರಸ್ತ ಜೀತು ಮುಂಡಾ ನಮ್ಮ ಸಿಬ್ಬಂದಿಯ ಮಾತು ಸರಿಯಾಗಿ ಅರ್ಥೈಸಿಕೊಳ್ಳದೇ ಕೃತ್ಯ ಎಸಗಿದ್ದಾನೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು.</p><p>ಮಹಿಳೆಯರ ಹಣವನ್ನು ರಕ್ಷಿಸುವ ಹಿತಾಸಕ್ತಿ ಹೊರತು, ಇದರಲ್ಲಿ ಯಾವುದೇ ಕಿರುಕುಳದ ಕೃತ್ಯವಿಲ್ಲ. ಬ್ಯಾಂಕ್ ಎಲ್ಲಾ ಗ್ರಾಹಕರಿಗೆ ಸಹಾನುಭೂತಿಯ, ಹಾಗೂ ಪಾರದರ್ಶಕ ಸೇವೆಗೆ ಬದ್ಧವಾಗಿದೆ ಎಂದು ತಿಳಿಸಿದೆ.</p>.<p><strong>ಏನಿದು ಘಟನೆ?</strong></p><p>ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಟಣಾ ತಾಲ್ಲೂಕಿನ ದೈನಾಳಿ ಎಂಬ ಬುಡಕಟ್ಟು ಗ್ರಾಮದ ಅನಕ್ಷರಸ್ಥ ಜೀತು ಮುಂಡಾ (50) ಅವರ ಹಿರಿಯ ಸಹೋದರಿ ಕರ್ಳಾ ಮುಂಡಾ (56) ಕಳೆದ ಜನವರಿ 26 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು.</p><p>ಹಸು ಮಾರಾಟ ಮಾಡಿ ಬಂದಿದ್ದ ₹19,000 ಹಣವನ್ನು ‘ಒಡಿಶಾ ಗ್ರಾಮೀಣ ಬ್ಯಾಂಕ್’ನ ಪಟಣಾ ತಾಲ್ಲೂಕಿನ ಮಾಳಿಪೋಶಿ ಶಾಖೆಯಲ್ಲಿ ಕರ್ಳಾ ಅವರು ಠೇವಣಿ ಇರಿಸಿದ್ದರು.</p><p>ಕರ್ಳಾ ಅವರ ನಿಧನದ ನಂತರ ಠೇವಣಿ ಹಣ ಪಡೆಯಲು ಜೀತು ಮುಂಡಾ ಬ್ಯಾಂಕಿಗೆ ಅಲೆದಾಡಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ಬುಡಕಟ್ಟು ವ್ಯಕ್ತಿಯ ಹಿನ್ನೆಲೆ ನೋಡದೇ, ಯಥಾವತ್ತು ತಮ್ಮ ಹಳೆಯ ಚಾಳಿಯಂತೆ ‘ದಾಖಲೆಗಳನ್ನು ತಂದು ತೆಗೆದುಕೊಂಡು’ ಹೋಗು ಎಂದಿದ್ದರು.</p><p>ಏನು ಮಾಡಬೇಕು.. ಎಂದು ತಿಳಿಯದೇ ಕೆಲದಿನಗಳ ಬಳಿಕ ಮತ್ತೆ ಬ್ಯಾಂಕ್ಗೆ ಹೋದ ಜೀತು ಅವರು, ಹಣ ನೀಡುವಂತೆ ಕೇಳಿದ್ದಾರೆ. ಈ ಸಾರಿ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ ಬ್ಯಾಂಕ್ ಸಿಬ್ಬಂದಿ, ‘ಅವಳು ಸತ್ತಿದ್ದಾಳೆ ಎನ್ನುವುದಕ್ಕೆ ಏನು ದಾಖಲೆ? ದಾಖಲೆ ತಂದು ತೆಗೆದುಕೊಂಡು ಹೋಗು’ ಎಂದು ಗದರಿಸಿದ್ದರು.</p><p>ಈ ಸಾರಿ ಬಹಳ ಗಂಭೀರವಾದ ಜೀತು, ಸೀದಾ ಸ್ಮಶಾನಕ್ಕೆ ಹೋಗಿ ತನ್ನ ಸಹೋದರಿ ಕರ್ಳಾಳನ್ನು ಹೂತು ಹಾಕಿದ್ದ ಸಮಾಧಿ ಅಗೆದಿದ್ದಾರೆ. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಚೀಲದಲ್ಲಿ ಕಟ್ಟಿ, ಹೆಗಲ ಮೇಲೆ ಹೊತ್ತುಕೊಂಡು ಸುಮಾರು 3 ಕಿ.ಮೀ ನಡೆದುಕೊಂಡೇ ಬ್ಯಾಂಕ್ ಮುಂದೆ ತಂದು ಇಟ್ಟಿದ್ದರು.</p><p>‘ಇವಳೇ ನೋಡಿ ನನ್ನ ಅಕ್ಕ, ಸತ್ತವಳು.. ಇವಾಗಲಾದರೂ ನಿಮಗೆ ನಂಬಿಕೆ ಬಂತಾ, ಹಣ ಕೊಡಿ’ ಎಂದು ಅಂಗಲಾಚಿದ್ದ.</p><p>ಕೊಳೆತ ಶವದ ಅಸ್ಥಿಪಂಜರವನ್ನು ನೋಡಿದ ಬ್ಯಾಂಕ್ ಸಿಬ್ಬಂದಿ ಭಯಭೀತರಾಗಿದ್ದಾರೆ. ಚೀರಾಡಿ ಬ್ಯಾಂಕ್ನ ಬಾಗಿಲು ಹಾಕಿಕೊಂಡಿದ್ದರು.</p>.ದೊಡ್ಡಬಳ್ಳಾಪುರ | ನಿರ್ಜನ ಪ್ರದೇಶದ ಮರದಲ್ಲಿ ನೇತಾಡುತ್ತಿತ್ತು ಅಸ್ಥಿಪಂಜರ.ತೆಕ್ಕಲಕೋಟೆ | ಆದಿಮಾನವನ ಅಸ್ಥಿಪಂಜರ: ಉತ್ಖನನ ಸ್ಥಳಕ್ಕೆ ಜನ; ಕಾರ್ಯಕ್ಕೆ ಅಡ್ಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>