<p><strong>ನವದೆಹಲಿ:</strong> ‘ದೇಶಗಳ ನಡುವಿನ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಈ ಉದ್ದೇಶಕ್ಕೆ ಪ್ರಸ್ತುತ, ಸೇನೆ ಬಳಕೆ ಹೆಚ್ಚುತ್ತಿದೆ. ಅಂತರರಾಷ್ಟ್ರೀಯ ಕಾನೂನು ಎಂಬುದು ಕೂಡ ‘ಜಂಗಲ್ ಕಾಯ್ದೆ’ಯಂತಾಗಿದೆ’ ಎಂದು ಭಾರತದಲ್ಲಿನ ಪ್ಯಾಲೆಸ್ಟೀನ್ ರಾಯಭಾರಿ ಅಬ್ದುಲ್ಲಾ ಎಂ.ಅಬು ಶಾವೇಶ್ ಹೇಳಿದ್ದಾರೆ.</p>.<p>‘ಅಪಾರ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ರಾಷ್ಟ್ರಗಳದ್ದೇ ಮೇಲುಗೈ ಆಗುತ್ತಿದ್ದು, ಭೌಗೋಳಿಕವಾಗಿ ದಕ್ಷಿಣದಲ್ಲಿರುವ ದೇಶಗಳ ಭವಿಷ್ಯವನ್ನೇ ಈ ವಿದ್ಯಮಾನಗಳು ಮಸಕು ಮಾಡುತ್ತಿವೆ’ ಎಂದು ವಿಶ್ಲೇಷಿಸಿದ್ದಾರೆ.</p>.<p>ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅಮೆರಿಕ–ಇರಾನ್ ಯುದ್ಧವನ್ನು ಪ್ರಸ್ತಾಪಿಸಿ ಅವರು ಈ ಮಾತುಗಳನ್ನಾಡಿದ್ದಾರೆ.</p>.<p>‘ಆರ್ಥಿಕವಾಗಿ ಹಾಗೂ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಬಲಶಾಲಿಯಾಗಿರುವ ದೇಶಗಳು ನೀಡುತ್ತಿರುವ ಹೇಳಿಕೆಗಳು ಕಳವಳ ಮೂಡಿಸುವಂತಿವೆ. ಸಂಘರ್ಷ ಏರ್ಪಟ್ಟ ಇಂತಹ ಸಂದರ್ಭಗಳಲ್ಲಿ, ಮಾತುಕತೆಗೆ ಬಾಗಿಲು ಮುಚ್ಚಿದೆ ಎಂಬುದನ್ನು ಈ ಹೇಳಿಕೆಗಳು ಸ್ಪಷ್ಟವಾಗಿ ಸೂಚಿಸುತ್ತಿವೆ’ ಎಂದು ಶಾವೇಶ್ ಹೇಳಿದ್ದಾರೆ.</p>.<p>‘ಇರಾನ್–ಅಮೆರಿಕ ಯುದ್ಧದಿಂದ ಪ್ಯಾಲೆಸ್ಟೀನಿಯನ್ನರಿಗೆ ಮಾತ್ರ ಸಮಸ್ಯೆಯಾಗುವುದಿಲ್ಲ. ಭವಿಷ್ಯದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳ ಮೇಲೂ ಪರಿಣಾಮ ಬೀರಲಿದೆ’ ಎಂದಿದ್ದಾರೆ.</p>.<p>ಹಮಾಸ್ ಹಾಗೂ ಹಿಜ್ಬುಲ್ಲಾ ಸಂಘಟನೆಗಳಿಗೆ ಇರಾನ್ ಬೆಂಬಲಿಸುವುದನ್ನು ಸಮರ್ಥಿಸಿಕೊಂಡ ಶಾವೇಶ್,‘ಇಸ್ರೇಲ್ ದಾಳಿಗೆ ಬಹು ಆಯಾಮದಲ್ಲಿ ಪ್ರತಿರೋಧ ಒಡ್ಡಬೇಕಾಗುತ್ತದೆ. ಹಮಾಸ್ ಹಾಗೂ ಹಿಜ್ಬುಲ್ಲಾ ಸಂಘಟನೆಗಳಿಗೆ ನೀಡುವ ಬೆಂಬಲವು ಇಂತಹ ಪ್ರತಿರೋಧದ ಭಾಗವೇ ಆಗಿದೆ’ ಎಂದು ವಿವರಿಸಿದ್ದಾರೆ.</p>.<div><blockquote>ಐತಿಹಾಸಿಕವಾಗಿ ಭಾರತವು ಪ್ಯಾಲೆಸ್ಟೀನ್ಗೆ ಬೆಂಬಲ ನೀಡುವ ಜೊತೆಗೆ ಪಶ್ಚಿಮ ಏಷ್ಯಾದೊಂದಿಗೆ ಸಮತೋಲಿತ ಸಂಬಂಧ ಕಾಯ್ದುಕೊಂಡಿದೆ. ಪ್ಯಾಲೆಸ್ಟೀನ್ ವಿಚಾರದಲ್ಲಿ ಎರಡು ದೇಶ ರಚಿಸುವ ಪರಿಹಾರಸೂತ್ರವನ್ನೂ ಬೆಂಬಲಿಸಿದೆ.</blockquote><span class="attribution">–ಅಬ್ದುಲ್ಲಾ ಎಂ.ಅಬು ಶಾವೇಶ್, ಭಾರತದಲ್ಲಿನ ಪ್ಯಾಲೆಸ್ಟೀನ್ ರಾಯಭಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ದೇಶಗಳ ನಡುವಿನ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಈ ಉದ್ದೇಶಕ್ಕೆ ಪ್ರಸ್ತುತ, ಸೇನೆ ಬಳಕೆ ಹೆಚ್ಚುತ್ತಿದೆ. ಅಂತರರಾಷ್ಟ್ರೀಯ ಕಾನೂನು ಎಂಬುದು ಕೂಡ ‘ಜಂಗಲ್ ಕಾಯ್ದೆ’ಯಂತಾಗಿದೆ’ ಎಂದು ಭಾರತದಲ್ಲಿನ ಪ್ಯಾಲೆಸ್ಟೀನ್ ರಾಯಭಾರಿ ಅಬ್ದುಲ್ಲಾ ಎಂ.ಅಬು ಶಾವೇಶ್ ಹೇಳಿದ್ದಾರೆ.</p>.<p>‘ಅಪಾರ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ರಾಷ್ಟ್ರಗಳದ್ದೇ ಮೇಲುಗೈ ಆಗುತ್ತಿದ್ದು, ಭೌಗೋಳಿಕವಾಗಿ ದಕ್ಷಿಣದಲ್ಲಿರುವ ದೇಶಗಳ ಭವಿಷ್ಯವನ್ನೇ ಈ ವಿದ್ಯಮಾನಗಳು ಮಸಕು ಮಾಡುತ್ತಿವೆ’ ಎಂದು ವಿಶ್ಲೇಷಿಸಿದ್ದಾರೆ.</p>.<p>ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅಮೆರಿಕ–ಇರಾನ್ ಯುದ್ಧವನ್ನು ಪ್ರಸ್ತಾಪಿಸಿ ಅವರು ಈ ಮಾತುಗಳನ್ನಾಡಿದ್ದಾರೆ.</p>.<p>‘ಆರ್ಥಿಕವಾಗಿ ಹಾಗೂ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಬಲಶಾಲಿಯಾಗಿರುವ ದೇಶಗಳು ನೀಡುತ್ತಿರುವ ಹೇಳಿಕೆಗಳು ಕಳವಳ ಮೂಡಿಸುವಂತಿವೆ. ಸಂಘರ್ಷ ಏರ್ಪಟ್ಟ ಇಂತಹ ಸಂದರ್ಭಗಳಲ್ಲಿ, ಮಾತುಕತೆಗೆ ಬಾಗಿಲು ಮುಚ್ಚಿದೆ ಎಂಬುದನ್ನು ಈ ಹೇಳಿಕೆಗಳು ಸ್ಪಷ್ಟವಾಗಿ ಸೂಚಿಸುತ್ತಿವೆ’ ಎಂದು ಶಾವೇಶ್ ಹೇಳಿದ್ದಾರೆ.</p>.<p>‘ಇರಾನ್–ಅಮೆರಿಕ ಯುದ್ಧದಿಂದ ಪ್ಯಾಲೆಸ್ಟೀನಿಯನ್ನರಿಗೆ ಮಾತ್ರ ಸಮಸ್ಯೆಯಾಗುವುದಿಲ್ಲ. ಭವಿಷ್ಯದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳ ಮೇಲೂ ಪರಿಣಾಮ ಬೀರಲಿದೆ’ ಎಂದಿದ್ದಾರೆ.</p>.<p>ಹಮಾಸ್ ಹಾಗೂ ಹಿಜ್ಬುಲ್ಲಾ ಸಂಘಟನೆಗಳಿಗೆ ಇರಾನ್ ಬೆಂಬಲಿಸುವುದನ್ನು ಸಮರ್ಥಿಸಿಕೊಂಡ ಶಾವೇಶ್,‘ಇಸ್ರೇಲ್ ದಾಳಿಗೆ ಬಹು ಆಯಾಮದಲ್ಲಿ ಪ್ರತಿರೋಧ ಒಡ್ಡಬೇಕಾಗುತ್ತದೆ. ಹಮಾಸ್ ಹಾಗೂ ಹಿಜ್ಬುಲ್ಲಾ ಸಂಘಟನೆಗಳಿಗೆ ನೀಡುವ ಬೆಂಬಲವು ಇಂತಹ ಪ್ರತಿರೋಧದ ಭಾಗವೇ ಆಗಿದೆ’ ಎಂದು ವಿವರಿಸಿದ್ದಾರೆ.</p>.<div><blockquote>ಐತಿಹಾಸಿಕವಾಗಿ ಭಾರತವು ಪ್ಯಾಲೆಸ್ಟೀನ್ಗೆ ಬೆಂಬಲ ನೀಡುವ ಜೊತೆಗೆ ಪಶ್ಚಿಮ ಏಷ್ಯಾದೊಂದಿಗೆ ಸಮತೋಲಿತ ಸಂಬಂಧ ಕಾಯ್ದುಕೊಂಡಿದೆ. ಪ್ಯಾಲೆಸ್ಟೀನ್ ವಿಚಾರದಲ್ಲಿ ಎರಡು ದೇಶ ರಚಿಸುವ ಪರಿಹಾರಸೂತ್ರವನ್ನೂ ಬೆಂಬಲಿಸಿದೆ.</blockquote><span class="attribution">–ಅಬ್ದುಲ್ಲಾ ಎಂ.ಅಬು ಶಾವೇಶ್, ಭಾರತದಲ್ಲಿನ ಪ್ಯಾಲೆಸ್ಟೀನ್ ರಾಯಭಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>