<p><strong>ತಿರುವನಂತಪುರ</strong>: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಮುಂದಿಟ್ಟ ‘ಬಹಿರಂಗ ಚರ್ಚೆ’ಯ ಸವಾಲನ್ನು ಸ್ವೀಕರಿಸಿದ್ದು, ಚುನಾವಣೆಗೆ ಮುನ್ನ ರಾಜಕೀಯ ಕಾವು ಏರುವಂತೆ ಮಾಡಿದ್ದಾರೆ.</p>.<p>‘ಅಭಿವೃದ್ಧಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜತೆ ಬಹಿರಂಗ ಚರ್ಚೆಗೆ ಸಿದ್ಧ’ ಎಂದು ಸತೀಶನ್ ಅವರು ಭಾನುವಾರ ಸವಾಲು ಹಾಕಿದ್ದರು.</p>.<p>ಸೋಮವಾರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸರ್ಕಾರದ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಪೋಸ್ಟ್ ಮಾಡಿರುವ ಪಿಣರಾಯಿ, ‘ಇಲ್ಲಿ ಪಟ್ಟಿ ಮಾಡಲಾದ ಸಾಧನೆಗಳ ಆಧಾರದ ಮೇಲೆ ಚರ್ಚೆಗೆ ಸಿದ್ಧ’ ಎಂದಿದ್ದಾರೆ.</p>.<p>ಪಿಣರಾಯಿ ಅವರ ಪೋಸ್ಟ್ಗೆ ತಕ್ಷಣ ಪ್ರತಿಕ್ರಿಯಿಸಿರುವ ಸತೀಶನ್, ‘ಮುಖ್ಯಮಂತ್ರಿ ಅವರು ತಿಳಿಸುವ ಸಮಯ ಮತ್ತು ಸ್ಥಳದಲ್ಲಿ ಚರ್ಚೆಯಲ್ಲಿ ಭಾಗವಹಿಸಲು ನಾನೂ ಸಿದ್ಧ’ ಎಂದಿದ್ದಾರೆ.</p>.<p>‘ಈಗ ಮುಖ್ಯಮಂತ್ರಿ ಅವರು ಚರ್ಚೆಗೆ ಸಿದ್ಧ ಎಂದು ಹೇಳಿರುವುದರಿಂದ ಸ್ಥಳ ಮತ್ತು ಸಮಯವನ್ನು ಅವರೇ ನಿರ್ಧರಿಸಲಿ. ಅದಕ್ಕೆ ತಕ್ಕಂತೆ ನಾನು ಚರ್ಚೆಯಲ್ಲಿ ಪಾಲ್ಗೊಳ್ಳುವೆ. ಉಳಿದದ್ದನ್ನು ಜನರೇ ನಿರ್ಧರಿಸಲಿ’ ಎಂದು ಸತೀಶನ್ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಮುಂದಿಟ್ಟ ‘ಬಹಿರಂಗ ಚರ್ಚೆ’ಯ ಸವಾಲನ್ನು ಸ್ವೀಕರಿಸಿದ್ದು, ಚುನಾವಣೆಗೆ ಮುನ್ನ ರಾಜಕೀಯ ಕಾವು ಏರುವಂತೆ ಮಾಡಿದ್ದಾರೆ.</p>.<p>‘ಅಭಿವೃದ್ಧಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜತೆ ಬಹಿರಂಗ ಚರ್ಚೆಗೆ ಸಿದ್ಧ’ ಎಂದು ಸತೀಶನ್ ಅವರು ಭಾನುವಾರ ಸವಾಲು ಹಾಕಿದ್ದರು.</p>.<p>ಸೋಮವಾರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸರ್ಕಾರದ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಪೋಸ್ಟ್ ಮಾಡಿರುವ ಪಿಣರಾಯಿ, ‘ಇಲ್ಲಿ ಪಟ್ಟಿ ಮಾಡಲಾದ ಸಾಧನೆಗಳ ಆಧಾರದ ಮೇಲೆ ಚರ್ಚೆಗೆ ಸಿದ್ಧ’ ಎಂದಿದ್ದಾರೆ.</p>.<p>ಪಿಣರಾಯಿ ಅವರ ಪೋಸ್ಟ್ಗೆ ತಕ್ಷಣ ಪ್ರತಿಕ್ರಿಯಿಸಿರುವ ಸತೀಶನ್, ‘ಮುಖ್ಯಮಂತ್ರಿ ಅವರು ತಿಳಿಸುವ ಸಮಯ ಮತ್ತು ಸ್ಥಳದಲ್ಲಿ ಚರ್ಚೆಯಲ್ಲಿ ಭಾಗವಹಿಸಲು ನಾನೂ ಸಿದ್ಧ’ ಎಂದಿದ್ದಾರೆ.</p>.<p>‘ಈಗ ಮುಖ್ಯಮಂತ್ರಿ ಅವರು ಚರ್ಚೆಗೆ ಸಿದ್ಧ ಎಂದು ಹೇಳಿರುವುದರಿಂದ ಸ್ಥಳ ಮತ್ತು ಸಮಯವನ್ನು ಅವರೇ ನಿರ್ಧರಿಸಲಿ. ಅದಕ್ಕೆ ತಕ್ಕಂತೆ ನಾನು ಚರ್ಚೆಯಲ್ಲಿ ಪಾಲ್ಗೊಳ್ಳುವೆ. ಉಳಿದದ್ದನ್ನು ಜನರೇ ನಿರ್ಧರಿಸಲಿ’ ಎಂದು ಸತೀಶನ್ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>