<p><strong>ನವದೆಹಲಿ</strong>: ‘ಭಯದಿಂದ ನಾವು ಪಕ್ಷ ತೊರೆದಿದ್ದೇವೆ ಎಂಬ ಎಎಪಿಯ ಹೇಳಿಕೆ ತಪ್ಪು. ನಾವು ಯಾವುದೇ ಭಯದಿಂದ ಹೋಗುತ್ತಿಲ್ಲ, ಬದಲಾಗಿ ನಿರಾಶೆ ಮತ್ತು ಅಸಹ್ಯದಿಂದ ಪಕ್ಷ ತೊರೆದಿದ್ದೇವೆ’ ಎಂದು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಶನಿವಾರ ಹೇಳಿದ್ದಾರೆ.</p><p>ಎಎಪಿಯ ಆರು ಇತರ ಸಂಸದರೊಂದಿಗೆ ಬಿಜೆಪಿಗೆ ಸೇರಿದ ಮರುದಿನವೇ ಚಡ್ಡಾ ಈ ಹೇಳಿಕೆ ನೀಡಿದ್ದಾರೆ.</p><p>ಇದೇ ವೇಳೆ 'ಶೀಶ್ ಮಹಲ್' ವಿವಾದವನ್ನು ಪ್ರಸ್ತಾಪಿಸಿದ ಚಡ್ಡಾ, 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸೋಲಿಗೆ ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಪ್ರತಿಪಾದಿಸಿದ್ದಾರೆ.</p><p>‘ಪ್ರತಿಯೊಬ್ಬ ಪ್ರಾಮಾಣಿಕ ವ್ಯಕ್ತಿಗೆ ಈಗ ಎಎಪಿಯಲ್ಲಿ ಕೆಲಸ ಮಾಡಲು ಜಾಗವೇ ಉಳಿದಿಲ್ಲ ಎಂಬ ಭಾವನೆ ಮೂಡಿದೆ. ಪಕ್ಷವು ತಪ್ಪು ಹಾದಿಯಲ್ಲಿ ಸಾಗುತ್ತಿದ್ದು, ಅದರೊಂದಿಗೆ ಗುರುತಿಸಿಕೊಳ್ಳಲು ಯಾರೂ ಬಯಸುತ್ತಿಲ್ಲ. ಈ ಕಾರಣದಿಂದಲೇ ನಾಯಕರು ಒಬ್ಬರ ನಂತರ ಒಬ್ಬರಂತೆ ಪಕ್ಷವನ್ನು ತೊರೆಯುತ್ತಿದ್ದಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಭಯದಿಂದ ನಾವು ಪಕ್ಷ ತೊರೆದಿದ್ದೇವೆ ಎಂಬ ಎಎಪಿಯ ಹೇಳಿಕೆ ತಪ್ಪು. ನಾವು ಯಾವುದೇ ಭಯದಿಂದ ಹೋಗುತ್ತಿಲ್ಲ, ಬದಲಾಗಿ ನಿರಾಶೆ ಮತ್ತು ಅಸಹ್ಯದಿಂದ ಪಕ್ಷ ತೊರೆದಿದ್ದೇವೆ’ ಎಂದು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಶನಿವಾರ ಹೇಳಿದ್ದಾರೆ.</p><p>ಎಎಪಿಯ ಆರು ಇತರ ಸಂಸದರೊಂದಿಗೆ ಬಿಜೆಪಿಗೆ ಸೇರಿದ ಮರುದಿನವೇ ಚಡ್ಡಾ ಈ ಹೇಳಿಕೆ ನೀಡಿದ್ದಾರೆ.</p><p>ಇದೇ ವೇಳೆ 'ಶೀಶ್ ಮಹಲ್' ವಿವಾದವನ್ನು ಪ್ರಸ್ತಾಪಿಸಿದ ಚಡ್ಡಾ, 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸೋಲಿಗೆ ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಪ್ರತಿಪಾದಿಸಿದ್ದಾರೆ.</p><p>‘ಪ್ರತಿಯೊಬ್ಬ ಪ್ರಾಮಾಣಿಕ ವ್ಯಕ್ತಿಗೆ ಈಗ ಎಎಪಿಯಲ್ಲಿ ಕೆಲಸ ಮಾಡಲು ಜಾಗವೇ ಉಳಿದಿಲ್ಲ ಎಂಬ ಭಾವನೆ ಮೂಡಿದೆ. ಪಕ್ಷವು ತಪ್ಪು ಹಾದಿಯಲ್ಲಿ ಸಾಗುತ್ತಿದ್ದು, ಅದರೊಂದಿಗೆ ಗುರುತಿಸಿಕೊಳ್ಳಲು ಯಾರೂ ಬಯಸುತ್ತಿಲ್ಲ. ಈ ಕಾರಣದಿಂದಲೇ ನಾಯಕರು ಒಬ್ಬರ ನಂತರ ಒಬ್ಬರಂತೆ ಪಕ್ಷವನ್ನು ತೊರೆಯುತ್ತಿದ್ದಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>