<p><strong>ಚೆನ್ನೈ:</strong> ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ಸಿ. ಜೋಸೆಫ್ ವಿಜಯ್ ಅವರು ಗೆದ್ದು ಮುಖ್ಯಮಂತ್ರಿಯಾದದ್ದಕ್ಕೆ ತಮಗೆ ಅಸಮಾಧಾನವಿದೆ ಎಂಬ ಊಹಾಪೋಹಗಳ ಕುರಿತಂತೆ ತಮಿಳು ಸಿನಿಮಾರಂಗದ ಸೂಪರ್ಸ್ಟಾರ್ ರಜನಿಕಾಂತ್ ಮೌನ ಮುರಿದಿದ್ದಾರೆ. </p>.<p>ಪೋಯಸ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಇಂತಹ ವದಂತಿಗಳಿಗೆ ಯಾವುದೇ ಆಧಾರವಿಲ್ಲ. ಇದನ್ನು ತಳ್ಳಿಹಾಕಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ. ಇಲ್ಲದಿದ್ದರೆ, ವದಂತಿಯನ್ನೇ ನಿಜವೆಂದು ಜನ ನಂಬುವ ಸಾಧ್ಯತೆಯಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. </p>.<p>‘ಚುನಾವಣಾ ಫಲಿತಾಂಶಗಳ ನಂತರ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಅವರನ್ನು ನಾನು ಭೇಟಿಯಾಗಿರುವುದು ಟೀಕೆಗೆ ಕಾರಣವಾಯಿತು. ನಮ್ಮ ಸ್ನೇಹ ರಾಜಕೀಯ ಮೀರಿದ್ದು. ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಟಾಲಿನ್ ಸೋತಿದ್ದಕ್ಕೆ ನನಗೆ ಬೇಸರವಾಗಿದೆ’ ಎಂದು ವಿವರಿಸಿದ್ದಾರೆ.</p>.<p>‘ವಿಜಯ್ ಮುಖ್ಯಮಂತ್ರಿಯಾಗಬಾರದು ಎಂದು ನಾನು ಹೇಳಿದ್ದೇನೆ, ಟಿವಿಕೆ ಮತ್ತು ಡಿಎಂಕೆ ಪಕ್ಷಗಳನ್ನು ವಿಲೀನಗೊಳಿಸಲು ಪ್ರಯತ್ನಿಸುತ್ತಿದ್ದೇನೆ ಎಂಬಂತಹ ವದಂತಿಗಳು ಹರಡಲು ಪ್ರಾರಂಭಿಸಿದವು. ನಾನು ಈಗಾಗಲೇ ಅವರಿಗೆ (ವಿಜಯ್) ಸಾಮಾಜಿಕ ಮಾಧ್ಯಮದಲ್ಲಿ (ಎಕ್ಸ್) ಶುಭ ಕೋರಿದ್ದರೂ, ವಿಮಾನ ನಿಲ್ದಾಣದಲ್ಲಿ ಅವರಿಗೆ ಶುಭ ಹಾರೈಸಲಿಲ್ಲ ಎಂದು ತಪ್ಪು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>‘ಯಾವುದೇ ವಿಷಯದ ಬಗ್ಗೆ ಅನಗತ್ಯವಾಗಿ ಮಾತನಾಡಲು ನಾನು ಸಣ್ಣತನದ ವ್ಯಕ್ತಿಯಲ್ಲ. ವಿಜಯ್ ಮುಖ್ಯಮಂತ್ರಿಯಾಗಿದ್ದಾರೆ ಎಂದು ಕೇಳಿದಾಗ ನನಗೆ ಆಶ್ಚರ್ಯವಾಯಿತು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ನಾನು ಅವರಿಗೆ(ವಿಜಯ್) ಅಭಿನಂದನೆ ಸಲ್ಲಿಸಿದೆ. ನಾನು ರಾಜಕೀಯದಲ್ಲೇ ಇಲ್ಲ, ಹಾಗಿರುವಾಗ ನಾನು ವಿಜಯ್ ಬಗ್ಗೆ ಯಾಕೆ ಅಸೂಯೆ ಪಡಬೇಕು? ಬಹುಶಃ ಕಮಲ್ ಹಾಸನ್ ಮುಖ್ಯಮಂತ್ರಿಯಾದರೆ, ನನಗೆ ಅಸೂಯೆ ಆಗುತ್ತಿತ್ತು(ನಗು). ವಿಜಯ್ ಮತ್ತು ನನ್ನ ನಡುವೆ 25 ವರ್ಷಗಳ ಅಂತರವಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.</p>.<p>ಮುಂದುವರಿದು, ‘ಅವರ ಬಗ್ಗೆ ಅಸೂಯೆಪಡಲು ನನಗೆ ಯಾವುದೇ ಕಾರಣವಿಲ್ಲ. ನಾನು ಅವರ ಬಗ್ಗೆ ಸಂತೋಷವಾಗಿದ್ದೇನೆ. ವಿಜಯ್ ಅವರಿಂದ ಸಾಕಷ್ಟು ನಿರೀಕ್ಷೆಗಳಿವೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.</p>.<h2>ಟಿವಿಕೆ ಚಿತ್ತ ಕೇರಳಂನತ್ತ</h2><p>ತಿರುವನಂತಪುರ: ಚೊಚ್ಚಲ ಪ್ರಯತ್ನದಲ್ಲೇ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು, ಇದೀಗ ಕೇರಳಂನತ್ತ ತನ್ನ ಚಿತ್ತ ಹರಿಸಿದೆ.</p><p>ಹಿಂದಿನ ವಾರವೇ ಟಿವಿಕೆಯ ಘಟಕಗಳನ್ನು ರಚಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಅಭಿಮಾನಿಗಳು ಪಾಲಕ್ಕಾಡ್ನಲ್ಲಿ ಭಾನುವಾರ ಸಭೆ ನಡೆಸಿದರು. ಮಹಿಳೆಯರು, ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬಹುತೇಕರು ಐ.ಟಿ ಕ್ಷೇತ್ರದವರು.</p><p>ಎರಡು ವರ್ಷಗಳ ಹಿಂದೆ ಟಿವಿಕೆ ಸ್ಥಾಪನೆ ಆದಾಗಲೇ, ಕೇರಳಂನಲ್ಲಿನ ವಿಜಯ್ ಅಭಿಮಾನಿಗಳು ಪಕ್ಷದ ಘಟಕ ರಚಿಸಲು ಯತ್ನಿಸಿದ್ದರು. ತಮಿಳುನಾಡಿನಲ್ಲಿನ ವಿಜಯವು ಈ ಯತ್ನಕ್ಕೆ ಮತ್ತಷ್ಟು ಬಲ ತುಂಬಿದೆ. ವಿಜಯ್ ಪ್ರಮಾಣವಚನ ಸ್ವೀಕರಿಸಿದಾಗ, ಕೇರಳಂನ ವಿವಿಧ ಭಾಗಗಳಲ್ಲಿರುವ ಅಭಿಮಾನಿಗಳು ಭಾರಿ ಸಂಭ್ರಮಾಚರಣೆಗೆ ಸಾಕ್ಷಿ ಆಗಿದ್ದರು.</p><p>‘ಮತಗಟ್ಟೆ ಮಟ್ಟದಿಂದ ಚಟುವಟಿಕೆಗಳನ್ನು ಆರಂಭಿಸಲಿದೆ. ಕೇರಳಂನಲ್ಲೂ ಭಾರಿ ಬೆಂಬಲ ಸಿಗುವ ಸಾಧ್ಯತೆ ಹೆಚ್ಚಿದೆ. ಟಿವಿಕೆಯ ನಾಯಕತ್ವವು ಎಲ್ಲ ಜಿಲ್ಲೆಗಳಲ್ಲಿನ ಚಟುವಟಿಕೆಗಳನ್ನು ನೇರವಾಗಿ ಸಮನ್ವಯಗೊಳಿಸುತ್ತಿದೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ಸಿ. ಜೋಸೆಫ್ ವಿಜಯ್ ಅವರು ಗೆದ್ದು ಮುಖ್ಯಮಂತ್ರಿಯಾದದ್ದಕ್ಕೆ ತಮಗೆ ಅಸಮಾಧಾನವಿದೆ ಎಂಬ ಊಹಾಪೋಹಗಳ ಕುರಿತಂತೆ ತಮಿಳು ಸಿನಿಮಾರಂಗದ ಸೂಪರ್ಸ್ಟಾರ್ ರಜನಿಕಾಂತ್ ಮೌನ ಮುರಿದಿದ್ದಾರೆ. </p>.<p>ಪೋಯಸ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಇಂತಹ ವದಂತಿಗಳಿಗೆ ಯಾವುದೇ ಆಧಾರವಿಲ್ಲ. ಇದನ್ನು ತಳ್ಳಿಹಾಕಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ. ಇಲ್ಲದಿದ್ದರೆ, ವದಂತಿಯನ್ನೇ ನಿಜವೆಂದು ಜನ ನಂಬುವ ಸಾಧ್ಯತೆಯಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. </p>.<p>‘ಚುನಾವಣಾ ಫಲಿತಾಂಶಗಳ ನಂತರ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಅವರನ್ನು ನಾನು ಭೇಟಿಯಾಗಿರುವುದು ಟೀಕೆಗೆ ಕಾರಣವಾಯಿತು. ನಮ್ಮ ಸ್ನೇಹ ರಾಜಕೀಯ ಮೀರಿದ್ದು. ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಟಾಲಿನ್ ಸೋತಿದ್ದಕ್ಕೆ ನನಗೆ ಬೇಸರವಾಗಿದೆ’ ಎಂದು ವಿವರಿಸಿದ್ದಾರೆ.</p>.<p>‘ವಿಜಯ್ ಮುಖ್ಯಮಂತ್ರಿಯಾಗಬಾರದು ಎಂದು ನಾನು ಹೇಳಿದ್ದೇನೆ, ಟಿವಿಕೆ ಮತ್ತು ಡಿಎಂಕೆ ಪಕ್ಷಗಳನ್ನು ವಿಲೀನಗೊಳಿಸಲು ಪ್ರಯತ್ನಿಸುತ್ತಿದ್ದೇನೆ ಎಂಬಂತಹ ವದಂತಿಗಳು ಹರಡಲು ಪ್ರಾರಂಭಿಸಿದವು. ನಾನು ಈಗಾಗಲೇ ಅವರಿಗೆ (ವಿಜಯ್) ಸಾಮಾಜಿಕ ಮಾಧ್ಯಮದಲ್ಲಿ (ಎಕ್ಸ್) ಶುಭ ಕೋರಿದ್ದರೂ, ವಿಮಾನ ನಿಲ್ದಾಣದಲ್ಲಿ ಅವರಿಗೆ ಶುಭ ಹಾರೈಸಲಿಲ್ಲ ಎಂದು ತಪ್ಪು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>‘ಯಾವುದೇ ವಿಷಯದ ಬಗ್ಗೆ ಅನಗತ್ಯವಾಗಿ ಮಾತನಾಡಲು ನಾನು ಸಣ್ಣತನದ ವ್ಯಕ್ತಿಯಲ್ಲ. ವಿಜಯ್ ಮುಖ್ಯಮಂತ್ರಿಯಾಗಿದ್ದಾರೆ ಎಂದು ಕೇಳಿದಾಗ ನನಗೆ ಆಶ್ಚರ್ಯವಾಯಿತು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ನಾನು ಅವರಿಗೆ(ವಿಜಯ್) ಅಭಿನಂದನೆ ಸಲ್ಲಿಸಿದೆ. ನಾನು ರಾಜಕೀಯದಲ್ಲೇ ಇಲ್ಲ, ಹಾಗಿರುವಾಗ ನಾನು ವಿಜಯ್ ಬಗ್ಗೆ ಯಾಕೆ ಅಸೂಯೆ ಪಡಬೇಕು? ಬಹುಶಃ ಕಮಲ್ ಹಾಸನ್ ಮುಖ್ಯಮಂತ್ರಿಯಾದರೆ, ನನಗೆ ಅಸೂಯೆ ಆಗುತ್ತಿತ್ತು(ನಗು). ವಿಜಯ್ ಮತ್ತು ನನ್ನ ನಡುವೆ 25 ವರ್ಷಗಳ ಅಂತರವಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.</p>.<p>ಮುಂದುವರಿದು, ‘ಅವರ ಬಗ್ಗೆ ಅಸೂಯೆಪಡಲು ನನಗೆ ಯಾವುದೇ ಕಾರಣವಿಲ್ಲ. ನಾನು ಅವರ ಬಗ್ಗೆ ಸಂತೋಷವಾಗಿದ್ದೇನೆ. ವಿಜಯ್ ಅವರಿಂದ ಸಾಕಷ್ಟು ನಿರೀಕ್ಷೆಗಳಿವೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.</p>.<h2>ಟಿವಿಕೆ ಚಿತ್ತ ಕೇರಳಂನತ್ತ</h2><p>ತಿರುವನಂತಪುರ: ಚೊಚ್ಚಲ ಪ್ರಯತ್ನದಲ್ಲೇ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು, ಇದೀಗ ಕೇರಳಂನತ್ತ ತನ್ನ ಚಿತ್ತ ಹರಿಸಿದೆ.</p><p>ಹಿಂದಿನ ವಾರವೇ ಟಿವಿಕೆಯ ಘಟಕಗಳನ್ನು ರಚಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಅಭಿಮಾನಿಗಳು ಪಾಲಕ್ಕಾಡ್ನಲ್ಲಿ ಭಾನುವಾರ ಸಭೆ ನಡೆಸಿದರು. ಮಹಿಳೆಯರು, ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬಹುತೇಕರು ಐ.ಟಿ ಕ್ಷೇತ್ರದವರು.</p><p>ಎರಡು ವರ್ಷಗಳ ಹಿಂದೆ ಟಿವಿಕೆ ಸ್ಥಾಪನೆ ಆದಾಗಲೇ, ಕೇರಳಂನಲ್ಲಿನ ವಿಜಯ್ ಅಭಿಮಾನಿಗಳು ಪಕ್ಷದ ಘಟಕ ರಚಿಸಲು ಯತ್ನಿಸಿದ್ದರು. ತಮಿಳುನಾಡಿನಲ್ಲಿನ ವಿಜಯವು ಈ ಯತ್ನಕ್ಕೆ ಮತ್ತಷ್ಟು ಬಲ ತುಂಬಿದೆ. ವಿಜಯ್ ಪ್ರಮಾಣವಚನ ಸ್ವೀಕರಿಸಿದಾಗ, ಕೇರಳಂನ ವಿವಿಧ ಭಾಗಗಳಲ್ಲಿರುವ ಅಭಿಮಾನಿಗಳು ಭಾರಿ ಸಂಭ್ರಮಾಚರಣೆಗೆ ಸಾಕ್ಷಿ ಆಗಿದ್ದರು.</p><p>‘ಮತಗಟ್ಟೆ ಮಟ್ಟದಿಂದ ಚಟುವಟಿಕೆಗಳನ್ನು ಆರಂಭಿಸಲಿದೆ. ಕೇರಳಂನಲ್ಲೂ ಭಾರಿ ಬೆಂಬಲ ಸಿಗುವ ಸಾಧ್ಯತೆ ಹೆಚ್ಚಿದೆ. ಟಿವಿಕೆಯ ನಾಯಕತ್ವವು ಎಲ್ಲ ಜಿಲ್ಲೆಗಳಲ್ಲಿನ ಚಟುವಟಿಕೆಗಳನ್ನು ನೇರವಾಗಿ ಸಮನ್ವಯಗೊಳಿಸುತ್ತಿದೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>