<p><strong>ನವದೆಹಲಿ:</strong> ‘ವಾಟ್ಸ್ಆ್ಯಪ್ ವಿಶ್ವವಿದ್ಯಾಲಯ’ದ ಮಾಹಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. </p>.<p>ಶಬರಿಮಲೆ ಸೇರಿದಂತೆ ದೇಶದ ವಿವಿಧ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ‘ದಾವೂದಿ ಬೊಹರಾ’ ಸಮುದಾಯಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ. </p>.<p>‘ದಾವೂದಿ ಬೊಹರಾ’ ಸಮುದಾಯದ ಪರವಾಗಿ ಹಾಜರಾದ ವಕೀಲ ನೀರಜ್ ಕಿಶನ್ ಕೌಲ್ ಅವರು, ‘ಧಾರ್ಮಿಕ ಪರಿಹಾರದ ವಿಷಯಗಳಲ್ಲಿ ನ್ಯಾಯಾಂಗ ನಿರ್ಬಂಧ’ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಬರೆದಿರುವ ಲೇಖನವೊಂದನ್ನು ಸಂವಿಧಾನ ಪೀಠದ ಗಮನಕ್ಕೆ ತಂದರು. </p>.<p>ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ‘ನಾವು ವಿಷಯ ತಜ್ಞರು, ನ್ಯಾಯ ಪರಿಣಿತರು ಮತ್ತು ಎಲ್ಲರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ. ಆದರೆ, ವೈಯಕ್ತಿಕ ಅಭಿಪ್ರಾಯವು ಯಾವತ್ತೂ ವೈಯಕ್ತಿಕ ಅಭಿಪ್ರಾಯವೇ ಆಗಿದೆ’ ಎಂದರು. </p>.<p class="bodytext">‘ಜ್ಞಾನ ಮತ್ತು ವಿವೇಕವು ಯಾವುದೇ ಮೂಲ, ಯಾವುದೇ ದೇಶ, ಯಾವುದೇ ವಿಶ್ವವಿದ್ಯಾಲಯದಿಂದ ಬಂದರೂ ಸ್ವಾಗತಿಸಬೇಕು, ಇದರಿಂದ ಯಾವುದೇ ಹಾನಿ ಇಲ್ಲ’ ಎಂದು ವಕೀಲ ಕೌಲ್ ಪೀಠಕ್ಕೆ ತಿಳಿಸಿದರು.</p>.<p class="bodytext">ಇದಕ್ಕೆ ಲಘುವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ‘ಆದರೆ, ವಾಟ್ಸ್ಆ್ಯಪ್ ವಿಶ್ವವಿದ್ಯಾಲಯದ ಮಾಹಿತಿ ಒಪ್ಪಲು ಆಗುವುದಿಲ್ಲ’ ಎಂದರು. </p>.<p class="bodytext">‘ನಾನು ಯಾವ ವಿಶ್ವವಿದ್ಯಾಲಯ ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದರ ಬಗ್ಗೆ ಮಾತನಾಡುತ್ತಿಲ್ಲ. ಅದಕ್ಕೂ ಈ ಚರ್ಚೆಗೂ ಸಂಬಂಧವಿಲ್ಲ. ಜ್ಞಾನ ಮತ್ತು ಮಾಹಿತಿ ಯಾವುದೇ ಮೂಲದಿಂದ ಬಂದರೂ ಅದನ್ನು ಒಪ್ಪಿಕೊಳ್ಳಬೇಕು’ ಎಂದು ಕೌಲ್ ಮನವಿ ಮಾಡಿದರು. </p>.<p class="bodytext">‘ಧಾರ್ಮಿಕ ಪಂಗಡದ ನಿರ್ದಿಷ್ಟ ಆಚರಣೆಯನ್ನು ಅಗತ್ಯ ಮತ್ತು ಅನಿವಾರ್ಯವಲ್ಲ ಎಂದು ಘೋಷಿಸಲು ಮಾನದಂಡಗಳನ್ನು ನಿರ್ಣಯಿಸುವುದು ನ್ಯಾಯಾಲಯಕ್ಕೆ ಅಸಾಧ್ಯವಲ್ಲದಿದ್ದರೂ ಕಷ್ಟಕರ’ ಎಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ವಾಟ್ಸ್ಆ್ಯಪ್ ವಿಶ್ವವಿದ್ಯಾಲಯ’ದ ಮಾಹಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. </p>.<p>ಶಬರಿಮಲೆ ಸೇರಿದಂತೆ ದೇಶದ ವಿವಿಧ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ‘ದಾವೂದಿ ಬೊಹರಾ’ ಸಮುದಾಯಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ. </p>.<p>‘ದಾವೂದಿ ಬೊಹರಾ’ ಸಮುದಾಯದ ಪರವಾಗಿ ಹಾಜರಾದ ವಕೀಲ ನೀರಜ್ ಕಿಶನ್ ಕೌಲ್ ಅವರು, ‘ಧಾರ್ಮಿಕ ಪರಿಹಾರದ ವಿಷಯಗಳಲ್ಲಿ ನ್ಯಾಯಾಂಗ ನಿರ್ಬಂಧ’ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಬರೆದಿರುವ ಲೇಖನವೊಂದನ್ನು ಸಂವಿಧಾನ ಪೀಠದ ಗಮನಕ್ಕೆ ತಂದರು. </p>.<p>ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ‘ನಾವು ವಿಷಯ ತಜ್ಞರು, ನ್ಯಾಯ ಪರಿಣಿತರು ಮತ್ತು ಎಲ್ಲರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ. ಆದರೆ, ವೈಯಕ್ತಿಕ ಅಭಿಪ್ರಾಯವು ಯಾವತ್ತೂ ವೈಯಕ್ತಿಕ ಅಭಿಪ್ರಾಯವೇ ಆಗಿದೆ’ ಎಂದರು. </p>.<p class="bodytext">‘ಜ್ಞಾನ ಮತ್ತು ವಿವೇಕವು ಯಾವುದೇ ಮೂಲ, ಯಾವುದೇ ದೇಶ, ಯಾವುದೇ ವಿಶ್ವವಿದ್ಯಾಲಯದಿಂದ ಬಂದರೂ ಸ್ವಾಗತಿಸಬೇಕು, ಇದರಿಂದ ಯಾವುದೇ ಹಾನಿ ಇಲ್ಲ’ ಎಂದು ವಕೀಲ ಕೌಲ್ ಪೀಠಕ್ಕೆ ತಿಳಿಸಿದರು.</p>.<p class="bodytext">ಇದಕ್ಕೆ ಲಘುವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ‘ಆದರೆ, ವಾಟ್ಸ್ಆ್ಯಪ್ ವಿಶ್ವವಿದ್ಯಾಲಯದ ಮಾಹಿತಿ ಒಪ್ಪಲು ಆಗುವುದಿಲ್ಲ’ ಎಂದರು. </p>.<p class="bodytext">‘ನಾನು ಯಾವ ವಿಶ್ವವಿದ್ಯಾಲಯ ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದರ ಬಗ್ಗೆ ಮಾತನಾಡುತ್ತಿಲ್ಲ. ಅದಕ್ಕೂ ಈ ಚರ್ಚೆಗೂ ಸಂಬಂಧವಿಲ್ಲ. ಜ್ಞಾನ ಮತ್ತು ಮಾಹಿತಿ ಯಾವುದೇ ಮೂಲದಿಂದ ಬಂದರೂ ಅದನ್ನು ಒಪ್ಪಿಕೊಳ್ಳಬೇಕು’ ಎಂದು ಕೌಲ್ ಮನವಿ ಮಾಡಿದರು. </p>.<p class="bodytext">‘ಧಾರ್ಮಿಕ ಪಂಗಡದ ನಿರ್ದಿಷ್ಟ ಆಚರಣೆಯನ್ನು ಅಗತ್ಯ ಮತ್ತು ಅನಿವಾರ್ಯವಲ್ಲ ಎಂದು ಘೋಷಿಸಲು ಮಾನದಂಡಗಳನ್ನು ನಿರ್ಣಯಿಸುವುದು ನ್ಯಾಯಾಲಯಕ್ಕೆ ಅಸಾಧ್ಯವಲ್ಲದಿದ್ದರೂ ಕಷ್ಟಕರ’ ಎಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>