<p>10 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದ ನಿತೀಶ್ ಕುಮಾರ್ ಈಗ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಹಾರ ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸಿದೆ. </p><p>ನಿತೀಶ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ 57 ವರ್ಷದ ಸಾಮ್ರಾಟ್ ಅವರು ಈಗ ಸಿಎಂ ಹುದ್ದೆಗೆ ಏರುತ್ತಿದ್ದಾರೆ.</p><p><strong>ಗಟ್ಟಿ ರಾಜಕೀಯ ಹಿನ್ನೆಲೆ</strong></p><p>ಸಾಮ್ರಾಟ್ ಅವರು ಕುಟುಂಬವೇ ರಾಜಕೀಯ ಹಿನ್ನೆಲೆಯದ್ದು, ಅವರ ತಂದೆ ಶಕುನಿ ಚೌಧರಿ ತಾರಾಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ತಾಯಿ ಪಾರ್ವತಿ ದೇವಿ ಕೂಡ ಶಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ಸಂಪ್ರದಾಯ ಮುಂದುವರಿದು ಸಾಮ್ರಾಟ್ ಅವರೂ ರಾಜಕೀಯಕ್ಕೆ ಧುಮುಕಿದ್ದರು. </p><p>1999ರಲ್ಲಿ ರಾಷ್ಟ್ರೀಯ ಜನತಾದಳದ (ಆರ್ಜೆಡಿ) ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಸಾಮ್ರಾಟ್ ಅವರು, 2000ರಲ್ಲಿ ಖಗರಿಯಾ ಜಿಲ್ಲೆಯ ಪರರ್ಬಟ್ಟಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ರಾಬ್ರಿ ದೇವಿ ನೇತೃತ್ವದ ಸರ್ಕಾರದಲ್ಲಿ ಸಚಿವರಾದರು.</p><p>2014ರಲ್ಲಿ ಜೆಡಿಯು ಸೇರಿದ ಸಾಮ್ರಾಟ್ ಅವರು, ಜಿತನ್ ರಾಮ್ ಮಾಂಝಿ ಅವರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.</p><p>2017ರಲ್ಲಿ ಬಿಜೆಪಿಗೆ ಸೇರಿದ ಬಳಿಕ ಸಾಮ್ರಾಟ್ ಅವರ ರಾಜಕೀಯ ಜೀವನದ ದಿಕ್ಕೇ ಬದಲಾಯಿತು. ಆರಂಭದಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡರು. ನಂತರ 2023ರಲ್ಲಿ ಬಿಹಾರದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. 2024ರಲ್ಲಿ ಎನ್ಡಿಎ ನೇತೃತ್ವದ ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡರು.</p><p><strong>ಬಿಹಾರ ರಾಜಕೀಯದಲ್ಲಿ ಬಿಗಿ ಹಿಡಿತ</strong></p><p>ಚುನಾವಣಾ ರಾಜಕೀಯದಲ್ಲಿ ಜಾತಿಯೇ ನಿರ್ಣಾಯಕ ಪಾತ್ರ ವಹಿಸುವ ರಾಜ್ಯ ಬಿಹಾರದಲ್ಲಿ ಬಿಜೆಪಿಯ ಪ್ರಮುಖ ಒಬಿಸಿ ಅಭ್ಯರ್ಥಿಯಾಗಿರುವ ಸಾಮ್ರಾಟ್ ಕೊಯಿರಿ–ಕುಶ್ವಾ ಸಮುದಾಯಕ್ಕೆ ಸೇರಿದವರು. ಇವರು ಪಕ್ಷದ ಪ್ರಮುಖ ಪ್ರಚಾರಕರಾಗಿ, ಪಕ್ಷದ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾರೆ.</p><p><strong>ವಿವಾದಗಳ ಸದ್ದು</strong></p><p>ಸಾಮ್ರಾಟ್ ಚೌಧರಿ ವಿವಾದಗಳಿಂದ ಏನೂ ದೂರವುಳಿದಿರಲಿಲ್ಲ. ಅವರ ವಯಸ್ಸಿಗೆ ಸಂಬಂಧಿಸಿದ ಚುನಾವಣಾ ಅಫಿಡವಿಟ್ಗಳಲ್ಲಿ ವ್ಯತ್ಯಾಸಗಳಿವೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದು, ತನಿಖೆಗೂ ಒತ್ತಾಯಿಸಿದ್ದರು.</p><p>ಅಲ್ಲದೆ, 1995ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಶಕುನಿ ಚೌಧರಿ ಅವರ ಹೆಸರಿನೊಂದಿಗೆ ಸಾಮ್ರಾಟ್ ಅವರ ಹೆಸರೂ ತಳುಕುಹಾಕಿಕೊಂಡಿತ್ತು. ಹೀಗಾಗಿ ಕೊಲೆ ಪ್ರಕರಣದ ಆರೋಪ ಕೂಡ ಇವರ ಮೇಲಿದೆ. ಈ ವಿಚಾರಗಳು ರಾಜಕೀಯ ವಲಯದಲ್ಲಿ ಆಗಾಗ ಸದ್ದು ಮಾಡುತ್ತಿದ್ದರೂ ಬಿಹಾರದಲ್ಲಿ ಸಾಮ್ರಾಟ್ ಅವರ ವರ್ಚಸ್ಸು ಕಡಿಮೆಯಾಗಲಿಲ್ಲ. </p><p><strong>ಏಪ್ರಿಲ್ 15ಕ್ಕೆ ಪ್ರಮಾಣ</strong></p><p>ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಾಮ್ರಾಟ್ ಅವರು ನಾಳೆ (ಏಪ್ರಿಲ್ 15) ಪ್ರಮಾಣವಚನ ಸ್ವೀಕರಿಸಲಿದ್ದಾರೆ.</p><p>243 ಸದಸ್ಯ ಬಲದ ವಿಧಾನಸಭೆಯಲ್ಲಿ 89 ಶಾಸಕರನ್ನು ಹೊಂದಿರುವ ಬಿಜೆಪಿ, ಅತಿ ದೊಡ್ಡ ಪಕ್ಷವಾಗಿದೆ. 2005ರಿಂದ ನಿತೀಶ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದ ಬಿಜೆಪಿ, ಇದೀಗ ಮೊದಲ ಬಾರಿಗೆ ಮುಖ್ಯಮಂತ್ರಿಯ ಹುದ್ದೆಯನ್ನು ಪಡೆಯುತ್ತಿರುವುದು ವಿಶೇಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>10 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದ ನಿತೀಶ್ ಕುಮಾರ್ ಈಗ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಹಾರ ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸಿದೆ. </p><p>ನಿತೀಶ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ 57 ವರ್ಷದ ಸಾಮ್ರಾಟ್ ಅವರು ಈಗ ಸಿಎಂ ಹುದ್ದೆಗೆ ಏರುತ್ತಿದ್ದಾರೆ.</p><p><strong>ಗಟ್ಟಿ ರಾಜಕೀಯ ಹಿನ್ನೆಲೆ</strong></p><p>ಸಾಮ್ರಾಟ್ ಅವರು ಕುಟುಂಬವೇ ರಾಜಕೀಯ ಹಿನ್ನೆಲೆಯದ್ದು, ಅವರ ತಂದೆ ಶಕುನಿ ಚೌಧರಿ ತಾರಾಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ತಾಯಿ ಪಾರ್ವತಿ ದೇವಿ ಕೂಡ ಶಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ಸಂಪ್ರದಾಯ ಮುಂದುವರಿದು ಸಾಮ್ರಾಟ್ ಅವರೂ ರಾಜಕೀಯಕ್ಕೆ ಧುಮುಕಿದ್ದರು. </p><p>1999ರಲ್ಲಿ ರಾಷ್ಟ್ರೀಯ ಜನತಾದಳದ (ಆರ್ಜೆಡಿ) ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಸಾಮ್ರಾಟ್ ಅವರು, 2000ರಲ್ಲಿ ಖಗರಿಯಾ ಜಿಲ್ಲೆಯ ಪರರ್ಬಟ್ಟಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ರಾಬ್ರಿ ದೇವಿ ನೇತೃತ್ವದ ಸರ್ಕಾರದಲ್ಲಿ ಸಚಿವರಾದರು.</p><p>2014ರಲ್ಲಿ ಜೆಡಿಯು ಸೇರಿದ ಸಾಮ್ರಾಟ್ ಅವರು, ಜಿತನ್ ರಾಮ್ ಮಾಂಝಿ ಅವರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.</p><p>2017ರಲ್ಲಿ ಬಿಜೆಪಿಗೆ ಸೇರಿದ ಬಳಿಕ ಸಾಮ್ರಾಟ್ ಅವರ ರಾಜಕೀಯ ಜೀವನದ ದಿಕ್ಕೇ ಬದಲಾಯಿತು. ಆರಂಭದಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡರು. ನಂತರ 2023ರಲ್ಲಿ ಬಿಹಾರದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. 2024ರಲ್ಲಿ ಎನ್ಡಿಎ ನೇತೃತ್ವದ ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡರು.</p><p><strong>ಬಿಹಾರ ರಾಜಕೀಯದಲ್ಲಿ ಬಿಗಿ ಹಿಡಿತ</strong></p><p>ಚುನಾವಣಾ ರಾಜಕೀಯದಲ್ಲಿ ಜಾತಿಯೇ ನಿರ್ಣಾಯಕ ಪಾತ್ರ ವಹಿಸುವ ರಾಜ್ಯ ಬಿಹಾರದಲ್ಲಿ ಬಿಜೆಪಿಯ ಪ್ರಮುಖ ಒಬಿಸಿ ಅಭ್ಯರ್ಥಿಯಾಗಿರುವ ಸಾಮ್ರಾಟ್ ಕೊಯಿರಿ–ಕುಶ್ವಾ ಸಮುದಾಯಕ್ಕೆ ಸೇರಿದವರು. ಇವರು ಪಕ್ಷದ ಪ್ರಮುಖ ಪ್ರಚಾರಕರಾಗಿ, ಪಕ್ಷದ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾರೆ.</p><p><strong>ವಿವಾದಗಳ ಸದ್ದು</strong></p><p>ಸಾಮ್ರಾಟ್ ಚೌಧರಿ ವಿವಾದಗಳಿಂದ ಏನೂ ದೂರವುಳಿದಿರಲಿಲ್ಲ. ಅವರ ವಯಸ್ಸಿಗೆ ಸಂಬಂಧಿಸಿದ ಚುನಾವಣಾ ಅಫಿಡವಿಟ್ಗಳಲ್ಲಿ ವ್ಯತ್ಯಾಸಗಳಿವೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದು, ತನಿಖೆಗೂ ಒತ್ತಾಯಿಸಿದ್ದರು.</p><p>ಅಲ್ಲದೆ, 1995ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಶಕುನಿ ಚೌಧರಿ ಅವರ ಹೆಸರಿನೊಂದಿಗೆ ಸಾಮ್ರಾಟ್ ಅವರ ಹೆಸರೂ ತಳುಕುಹಾಕಿಕೊಂಡಿತ್ತು. ಹೀಗಾಗಿ ಕೊಲೆ ಪ್ರಕರಣದ ಆರೋಪ ಕೂಡ ಇವರ ಮೇಲಿದೆ. ಈ ವಿಚಾರಗಳು ರಾಜಕೀಯ ವಲಯದಲ್ಲಿ ಆಗಾಗ ಸದ್ದು ಮಾಡುತ್ತಿದ್ದರೂ ಬಿಹಾರದಲ್ಲಿ ಸಾಮ್ರಾಟ್ ಅವರ ವರ್ಚಸ್ಸು ಕಡಿಮೆಯಾಗಲಿಲ್ಲ. </p><p><strong>ಏಪ್ರಿಲ್ 15ಕ್ಕೆ ಪ್ರಮಾಣ</strong></p><p>ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಾಮ್ರಾಟ್ ಅವರು ನಾಳೆ (ಏಪ್ರಿಲ್ 15) ಪ್ರಮಾಣವಚನ ಸ್ವೀಕರಿಸಲಿದ್ದಾರೆ.</p><p>243 ಸದಸ್ಯ ಬಲದ ವಿಧಾನಸಭೆಯಲ್ಲಿ 89 ಶಾಸಕರನ್ನು ಹೊಂದಿರುವ ಬಿಜೆಪಿ, ಅತಿ ದೊಡ್ಡ ಪಕ್ಷವಾಗಿದೆ. 2005ರಿಂದ ನಿತೀಶ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದ ಬಿಜೆಪಿ, ಇದೀಗ ಮೊದಲ ಬಾರಿಗೆ ಮುಖ್ಯಮಂತ್ರಿಯ ಹುದ್ದೆಯನ್ನು ಪಡೆಯುತ್ತಿರುವುದು ವಿಶೇಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>