ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಚೆರಿಲ್ ಡಿಸೋಜಾ ನೇತೃತ್ವದಲ್ಲಿ ಅರ್ಜಿದಾರರು,ವಾಣಿಜ್ಯಶೃಂಗಸಭೆಗಳು, ಸಮಾಲೋಚನೆ ಅಥವಾ ಪ್ರವಾಸೋದ್ಯಮ ಆಕರ್ಷಣೆ ಮತ್ತು ಖಾಸಗಿ ಹೂಡಿಕೆಗಳಿಗಾಗಿ ಪಾಲುದಾರರನ್ನು ಆಹ್ವಾನಿಸಲು ನೀಡುವ ಜಾಹೀರಾತುಗಳನ್ನು ಹೊರತುಪಡಿಸಿ,ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯ ಹೊರಗೆ ಜಾಹೀರಾತು ಪ್ರಕಟಿಸುವುದನ್ನು ನಿಷೇಧಿಸುವ ಆದೇಶ ಹೊರಡಿಸುವಂತೆ ಕೋರಿದರು.