<p><strong>ಹೈದರಾಬಾದ್: </strong>ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐನ ಕೇಂದ್ರೀಯ ಸಮಿತಿಯ ಹಿರಿಯ ಸದಸ್ಯ ಪಸುನೂರಿ ನರಹರಿ ಅಲಿಯಾಸ್ ವಿಶ್ವನಾಥ್ ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕ ಸಿ.ವಿ.ಆನಂದ್ ಅವರ ಎದುರು ಮಂಗಳವಾರ ಶರಣಾದರು.</p><p>ನರಹರಿ (64) ಸಿಪಿಐನ ಬಿಹಾರ–ಜಾರ್ಖಂಡ್ ವಿಶೇಷ ಪ್ರದೇಶ ಸಮಿತಿಯ ಕಾರ್ಯದರ್ಶಿ ಆಗಿದ್ದರು. ಶಸ್ತ್ರಾಸ್ತ್ರಗಳ ರಿಪೇರಿ ಮಾಡುವಲ್ಲಿಯೂ ನಿಪುಣರಾಗಿದ್ದರು. ನರಹರಿ ಅವರ ಶರಣಾಗತಿಯು ಸಿಪಿಐಗಾದ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.</p><p>ಸಂಘಟನೆಯ ರಾಜ್ಯ ಸಮಿತಿಯ ಸದಸ್ಯೆ, ನರಹರಿ ಅವರ ಪತ್ನಿ ಮೇದಾರ ದಾನಮ್ಮ (ಲತಾ) ಅವರೂ ಶರಣಾಗಿದ್ದಾರೆ. ಆರೋಗ್ಯ ಹದಗೆಡುತ್ತಿದ್ದ ಕಾರಣ ದಂಪತಿ ಪೊಲೀಸ್ ಇಲಾಖೆ ಮುಂದೆ ಶರಣಾಗುವ ನಿರ್ಧಾರ ಕೈಗೊಂಡಿದ್ದರು.</p><p>ದಂಪತಿಯ ಶರಣಾಗತಿಯ ಬಳಿಕ, ಸಿಪಿಐನಲ್ಲಿ ಹಿರಿಯ ನಾಯಕರಾದ ವರ್ತಾ ಶೇಖರ್ ಮತ್ತು ಮುಪ್ಪಾಲ ಲಕ್ಷ್ಮಣ ರಾವ್ ಮಾತ್ರ ಸಕ್ರಿಯರಾಗಿದ್ದಾರೆ. ಇವರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.</p><p>‘ತೆಲಂಗಾಣ ಸರ್ಕಾರದ ಪುನರ್ವಸತಿ ಯೋಜನೆ ಅಡಿಯಲ್ಲಿ ನರಹರಿ ಅವರಿಗೆ ₹25 ಲಕ್ಷ ಡಿ.ಡಿ (ಡಿಮ್ಯಾಂಡ್ ಡ್ರಾಫ್ಟ್) ಮತ್ತು ದಾನಮ್ಮ ಅವರಿಗೆ ₹20 ಲಕ್ಷ ಡಿ.ಡಿ ನೀಡಲಾಗಿದೆ. ಯೋಜನೆಯಡಿಯಲ್ಲಿ ಹೆಚ್ಚುವರಿ ಅನುಕೂಲಗಳನ್ನೂ ಪಡೆಯಲಿದ್ದಾರೆ’ ಎಂದು ಡಿಜೆಪಿ ಆನಂದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐನ ಕೇಂದ್ರೀಯ ಸಮಿತಿಯ ಹಿರಿಯ ಸದಸ್ಯ ಪಸುನೂರಿ ನರಹರಿ ಅಲಿಯಾಸ್ ವಿಶ್ವನಾಥ್ ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕ ಸಿ.ವಿ.ಆನಂದ್ ಅವರ ಎದುರು ಮಂಗಳವಾರ ಶರಣಾದರು.</p><p>ನರಹರಿ (64) ಸಿಪಿಐನ ಬಿಹಾರ–ಜಾರ್ಖಂಡ್ ವಿಶೇಷ ಪ್ರದೇಶ ಸಮಿತಿಯ ಕಾರ್ಯದರ್ಶಿ ಆಗಿದ್ದರು. ಶಸ್ತ್ರಾಸ್ತ್ರಗಳ ರಿಪೇರಿ ಮಾಡುವಲ್ಲಿಯೂ ನಿಪುಣರಾಗಿದ್ದರು. ನರಹರಿ ಅವರ ಶರಣಾಗತಿಯು ಸಿಪಿಐಗಾದ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.</p><p>ಸಂಘಟನೆಯ ರಾಜ್ಯ ಸಮಿತಿಯ ಸದಸ್ಯೆ, ನರಹರಿ ಅವರ ಪತ್ನಿ ಮೇದಾರ ದಾನಮ್ಮ (ಲತಾ) ಅವರೂ ಶರಣಾಗಿದ್ದಾರೆ. ಆರೋಗ್ಯ ಹದಗೆಡುತ್ತಿದ್ದ ಕಾರಣ ದಂಪತಿ ಪೊಲೀಸ್ ಇಲಾಖೆ ಮುಂದೆ ಶರಣಾಗುವ ನಿರ್ಧಾರ ಕೈಗೊಂಡಿದ್ದರು.</p><p>ದಂಪತಿಯ ಶರಣಾಗತಿಯ ಬಳಿಕ, ಸಿಪಿಐನಲ್ಲಿ ಹಿರಿಯ ನಾಯಕರಾದ ವರ್ತಾ ಶೇಖರ್ ಮತ್ತು ಮುಪ್ಪಾಲ ಲಕ್ಷ್ಮಣ ರಾವ್ ಮಾತ್ರ ಸಕ್ರಿಯರಾಗಿದ್ದಾರೆ. ಇವರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.</p><p>‘ತೆಲಂಗಾಣ ಸರ್ಕಾರದ ಪುನರ್ವಸತಿ ಯೋಜನೆ ಅಡಿಯಲ್ಲಿ ನರಹರಿ ಅವರಿಗೆ ₹25 ಲಕ್ಷ ಡಿ.ಡಿ (ಡಿಮ್ಯಾಂಡ್ ಡ್ರಾಫ್ಟ್) ಮತ್ತು ದಾನಮ್ಮ ಅವರಿಗೆ ₹20 ಲಕ್ಷ ಡಿ.ಡಿ ನೀಡಲಾಗಿದೆ. ಯೋಜನೆಯಡಿಯಲ್ಲಿ ಹೆಚ್ಚುವರಿ ಅನುಕೂಲಗಳನ್ನೂ ಪಡೆಯಲಿದ್ದಾರೆ’ ಎಂದು ಡಿಜೆಪಿ ಆನಂದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>