<p><strong>ನವದೆಹಲಿ:</strong> ‘ನಾನೊಬ್ಬ ಗೌರವಾನ್ವಿತ ಜಿರಳೆ’ ಎನ್ನುವ ಮೂಲಕ ಪರಿಸರವಾದಿ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಕಾಕ್ರೋಚ್ ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ. </p><p>ಸಿಜೆಐ ಅವರ ಕಾಕ್ರೋಚ್ ಹೇಳಿಕೆಯ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’(ಸಿಜೆಪಿ) ಹೆಸರಿನಲ್ಲಿ ವಿಭಿನ್ನ ಅಭಿಯಾನ ಆರಂಭವಾಗಿದೆ.</p><p>ನಾನು ನಿರುದ್ಯೋಗಿ ಅಥವಾ ಆಲಸಿಯಾಗಿರದ ಕಾರಣ ನಾನು ಆ ಪಕ್ಷದ ಸದಸ್ಯನಾಗಿಲ್ಲ ಎಂದು ನಗುತ್ತಾ ಹೇಳಿದ ಅವರು, ನಾನು ನನ್ನನ್ನು ಗೌರವಾನ್ವಿತ ಜಿರಳೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. </p><p>ಇದೊಂದು ಅಹಿಂಸಾತ್ಮಕ ಆಂದೋಲನವಾಗಿದ್ದು, ಈ ಅಭಿಯಾನದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಈ ರೀತಿಯ ಅಭಿಯಾನಗಳು ಭಾರತವನ್ನು ವಿಶ್ವಗುರು ಮಾಡುತ್ತವೆ ಎಂದು ಹೇಳಿದ್ದಾರೆ.</p><p>ಸರ್ಕಾರವು ಯುವಕರ ಧ್ವನಿಯನ್ನು ಕೇಳಿಸಿಕೊಳ್ಳಬೇಕು, ಅದು ಬಿಟ್ಟು ಅವರ ಅಭಿಪ್ರಾಯಗಳನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಇದನ್ನು ಬೆದರಿಕೆ ಎಂದು ಪರಿಗಣಿಸುವುದಕ್ಕಿಂತ ಪ್ರಜಾಸತ್ತಾತ್ಮಕ ಪ್ರತಿಕ್ರಿಯೆಯ ರೀತಿ ನೋಡಬೇಕಾಗಿದೆ ಎಂದು ಹೇಳಿದ್ದಾರೆ. </p><p>ಇದೊಂದು ವ್ಯಂಗ್ಯಾತ್ಮಕ ಚಳುವಳಿಯಾಗಿದ್ದು, ಪತ್ರಿಕೆಗಳಲ್ಲಿ ಕಾರ್ಟೂನಿಸ್ಟ್ಗಳು ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಪ್ರಧಾನಿಯ ವ್ಯಂಗ್ಯಚಿತ್ರ ಮಾಡಿದಕ್ಕಾಗಿ ವ್ಯಂಗ್ಯಚಿತ್ರಕಾರನಿಗೆ ನೀವು ಗುಂಡು ಹೊಡೆಯಲು ಆಗುವುದಿಲ್ಲ. ಅದೇ ರೀತಿ, ಇದನ್ನೂ ಯುವಜನರ ಪ್ರತಿಕ್ರಿಯೆಯಾಗಿ ಪರಿಗಣಿಸಿ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ನಾನೊಬ್ಬ ಗೌರವಾನ್ವಿತ ಜಿರಳೆ’ ಎನ್ನುವ ಮೂಲಕ ಪರಿಸರವಾದಿ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಕಾಕ್ರೋಚ್ ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ. </p><p>ಸಿಜೆಐ ಅವರ ಕಾಕ್ರೋಚ್ ಹೇಳಿಕೆಯ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’(ಸಿಜೆಪಿ) ಹೆಸರಿನಲ್ಲಿ ವಿಭಿನ್ನ ಅಭಿಯಾನ ಆರಂಭವಾಗಿದೆ.</p><p>ನಾನು ನಿರುದ್ಯೋಗಿ ಅಥವಾ ಆಲಸಿಯಾಗಿರದ ಕಾರಣ ನಾನು ಆ ಪಕ್ಷದ ಸದಸ್ಯನಾಗಿಲ್ಲ ಎಂದು ನಗುತ್ತಾ ಹೇಳಿದ ಅವರು, ನಾನು ನನ್ನನ್ನು ಗೌರವಾನ್ವಿತ ಜಿರಳೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. </p><p>ಇದೊಂದು ಅಹಿಂಸಾತ್ಮಕ ಆಂದೋಲನವಾಗಿದ್ದು, ಈ ಅಭಿಯಾನದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಈ ರೀತಿಯ ಅಭಿಯಾನಗಳು ಭಾರತವನ್ನು ವಿಶ್ವಗುರು ಮಾಡುತ್ತವೆ ಎಂದು ಹೇಳಿದ್ದಾರೆ.</p><p>ಸರ್ಕಾರವು ಯುವಕರ ಧ್ವನಿಯನ್ನು ಕೇಳಿಸಿಕೊಳ್ಳಬೇಕು, ಅದು ಬಿಟ್ಟು ಅವರ ಅಭಿಪ್ರಾಯಗಳನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಇದನ್ನು ಬೆದರಿಕೆ ಎಂದು ಪರಿಗಣಿಸುವುದಕ್ಕಿಂತ ಪ್ರಜಾಸತ್ತಾತ್ಮಕ ಪ್ರತಿಕ್ರಿಯೆಯ ರೀತಿ ನೋಡಬೇಕಾಗಿದೆ ಎಂದು ಹೇಳಿದ್ದಾರೆ. </p><p>ಇದೊಂದು ವ್ಯಂಗ್ಯಾತ್ಮಕ ಚಳುವಳಿಯಾಗಿದ್ದು, ಪತ್ರಿಕೆಗಳಲ್ಲಿ ಕಾರ್ಟೂನಿಸ್ಟ್ಗಳು ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಪ್ರಧಾನಿಯ ವ್ಯಂಗ್ಯಚಿತ್ರ ಮಾಡಿದಕ್ಕಾಗಿ ವ್ಯಂಗ್ಯಚಿತ್ರಕಾರನಿಗೆ ನೀವು ಗುಂಡು ಹೊಡೆಯಲು ಆಗುವುದಿಲ್ಲ. ಅದೇ ರೀತಿ, ಇದನ್ನೂ ಯುವಜನರ ಪ್ರತಿಕ್ರಿಯೆಯಾಗಿ ಪರಿಗಣಿಸಿ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>