<p><strong>ಚೆನ್ನೈ:</strong> ಚೆನ್ನೈ ನಗರವನ್ನೇ ಕೇಂದ್ರೀಕರಿಸಿಕೊಂಡು ರೂಪಿಸಿರುವ ಚುನಾವಣಾ ಪ್ರಣಾಳಿಕೆಯನ್ನು ಡಿಎಂಕೆ ಪಕ್ಷವು ಭಾನುವಾರ ಬಿಡುಗಡೆ ಮಾಡಿದೆ.</p><p>ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಡಿಎಂಕೆ ಪ್ರಧಾನ ಕಚೇರಿಯಲ್ಲಿ ‘ಚೆನ್ನೈ ಸೂಪರ್– 6’ ಹೆಸರಿನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.</p><p>‘ಅಣ್ಣಾ ಅರಿವಲಯಂ’ ಪ್ರಣಾಳಿಕೆಯ ಮೊದಲ ಪ್ರತಿಯನ್ನು ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಸ್ವೀಕರಿಸಿದರು.</p><p>ಪ್ರಣಾಳಿಕೆಯು ಆರು ಅಂಶಗಳಿಂದ ಕೂಡಿದೆ. ವಾಹನ ದಟ್ಟಣೆ ಹಾಗೂ ಪ್ರಯಾಣದ ಸಮಯ ಕಡಿಮೆ ಮಾಡಲಿಕ್ಕಾಗಿ 1 ಸಾವಿರ ಹೊಸ ಮಿನಿ ಬಸ್ ಓಡಿಸಲಾಗುವುದು. ಎಐ ಮೂಲಕ ಸಾರಿಗೆ ಸಂಚಾರದ ನಿರ್ವಹಣೆ ಮಾಡಲಾಗುವುದು ಎಂದಿದೆ.</p><p>ಮಳೆನೀರಿನ ಚರಂಡಿಗಳು, ಪ್ರಮುಖ ರಸ್ತೆ ಯೋಜನೆಗಳು, ವಿಶ್ವದರ್ಜೆಯ ಸೌಲಭ್ಯಗಳು ಆಡಳಿತ ಪಕ್ಷವು ನೀಡಿರುವ ಭರವಸೆಗಳಲ್ಲಿ ಸೇರಿವೆ.</p><p>ಬೀದಿ ನಾಯಿ ಉಪಪಳ ನಿಭಾಯಿಸಲು ಪಶುವೈದ್ಯಕೀಯ ವೈದ್ಯರು ಹಾಗೂ ಕ್ಷೇತ್ರ ಸಿಬ್ಬಂದಿಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸುವುದಾಗಿ ಪಕ್ಷ ಹೇಳಿದೆ.</p><p>ಕೃತಕ ಬುದ್ಧಿಮತ್ತೆ (ಎಐ), ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ತಂತ್ರಜ್ಞಾನದ ವಿಶೇಷ ಕೇಂದ್ರಗಳ ಭರವಸೆಯನ್ನೂ ನೀಡಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಚೆನ್ನೈ ನಗರವನ್ನೇ ಕೇಂದ್ರೀಕರಿಸಿಕೊಂಡು ರೂಪಿಸಿರುವ ಚುನಾವಣಾ ಪ್ರಣಾಳಿಕೆಯನ್ನು ಡಿಎಂಕೆ ಪಕ್ಷವು ಭಾನುವಾರ ಬಿಡುಗಡೆ ಮಾಡಿದೆ.</p><p>ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಡಿಎಂಕೆ ಪ್ರಧಾನ ಕಚೇರಿಯಲ್ಲಿ ‘ಚೆನ್ನೈ ಸೂಪರ್– 6’ ಹೆಸರಿನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.</p><p>‘ಅಣ್ಣಾ ಅರಿವಲಯಂ’ ಪ್ರಣಾಳಿಕೆಯ ಮೊದಲ ಪ್ರತಿಯನ್ನು ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಸ್ವೀಕರಿಸಿದರು.</p><p>ಪ್ರಣಾಳಿಕೆಯು ಆರು ಅಂಶಗಳಿಂದ ಕೂಡಿದೆ. ವಾಹನ ದಟ್ಟಣೆ ಹಾಗೂ ಪ್ರಯಾಣದ ಸಮಯ ಕಡಿಮೆ ಮಾಡಲಿಕ್ಕಾಗಿ 1 ಸಾವಿರ ಹೊಸ ಮಿನಿ ಬಸ್ ಓಡಿಸಲಾಗುವುದು. ಎಐ ಮೂಲಕ ಸಾರಿಗೆ ಸಂಚಾರದ ನಿರ್ವಹಣೆ ಮಾಡಲಾಗುವುದು ಎಂದಿದೆ.</p><p>ಮಳೆನೀರಿನ ಚರಂಡಿಗಳು, ಪ್ರಮುಖ ರಸ್ತೆ ಯೋಜನೆಗಳು, ವಿಶ್ವದರ್ಜೆಯ ಸೌಲಭ್ಯಗಳು ಆಡಳಿತ ಪಕ್ಷವು ನೀಡಿರುವ ಭರವಸೆಗಳಲ್ಲಿ ಸೇರಿವೆ.</p><p>ಬೀದಿ ನಾಯಿ ಉಪಪಳ ನಿಭಾಯಿಸಲು ಪಶುವೈದ್ಯಕೀಯ ವೈದ್ಯರು ಹಾಗೂ ಕ್ಷೇತ್ರ ಸಿಬ್ಬಂದಿಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸುವುದಾಗಿ ಪಕ್ಷ ಹೇಳಿದೆ.</p><p>ಕೃತಕ ಬುದ್ಧಿಮತ್ತೆ (ಎಐ), ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ತಂತ್ರಜ್ಞಾನದ ವಿಶೇಷ ಕೇಂದ್ರಗಳ ಭರವಸೆಯನ್ನೂ ನೀಡಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>