<p><strong>ನವದೆಹಲಿ:</strong> ‘ಕಹಾನಿ–2’ ಸಿನಿಮಾದ ನಿರ್ಮಾಪಕ ಸುಜೋಯ್ ಘೋಷ್ ಅವರ ವಿರುದ್ಧ ಜಾರ್ಖಂಡ್ ನ್ಯಾಯಾಲಯದ ಮುಂದೆ ಬಾಕಿ ಇದ್ದ ಕೃತಿಸ್ವಾಮ್ಯ ಉಲ್ಲಂಘನೆ ಆರೋಪ ಕುರಿತ ಪ್ರಕರಣವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.</p>.<p>ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದು ಮಾಡಲು ನಿರಾಕರಿಸಿದ್ದ ಜಾರ್ಖಂಡ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಜೋಯ್ ಘೋಷ್ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅಲೋಕ್ ಅರಾಧೆ ಅವರು ಇದ್ದ ಪೀಠವು ಆದೇಶ ನೀಡಿತು.</p>.<p>ಕಳೆದ ವರ್ಷ ಜುಲೈನಲ್ಲಿ ಈ ಸಂಬಂಧ ಸುಪ್ರೀಂ ಕೋರ್ಟ್, ಜಾರ್ಖಂಡ್ ಸರ್ಕಾರಕ್ಕೆ ನೋಟಿಸ್ ನೀಡಿತ್ತು.</p>.<p>ಉಮೇಶ್ ಪ್ರಸಾದ್ ಮೆಹ್ತಾ ಎಂಬುವರು ದೂರು ನೀಡಿದ್ದರು. ‘ಸಬಕ್’ ಸಿನಿಮಾಗಾಗಿ ನಾನು ಬರೆದಿದ್ದ ಚಿತ್ರಕಥೆಯನ್ನು ಹಝಾರಿಬಾಗ್ ನೋಟರಿಯಲ್ಲಿ ನೋಂದಣಿ ಮಾಡಿಸಿದ್ದೆ. ಘೋಷ್ ಅವರ ಬಳಿ ಶಿಫಾರಸು ಪತ್ರಕ್ಕಾಗಿ ಹೋಗಿದ್ದೆ. ನನ್ನ ಚಿತ್ರಕಥೆಯ ನಕಲು ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದ ಘೋಷ್, ‘ಕಹಾನಿ–2’ ಸಿನಿಮಾಗೆ ಬಳಸಿದ್ದಾರೆ’ ಎಂದು ಆರೋಪಿಸಿದ್ದರು.</p>.<p>‘ಕಹಾನಿ–2’ ಚಿತ್ರವನ್ನು ಹಝಾರಿಬಾಗ್ ಫಿಲ್ಮ್ ಹಬ್ನಲ್ಲಿ ವೀಕ್ಷಿಸಿದ್ದ ಮೆಹ್ತಾ ಅವರು, ‘ನನ್ನ ಚಿತ್ರಕತೆಯನ್ನು ಘೋಷ್ ಕದ್ದಿದ್ದಾರೆ’ ಎಂದು ದೂರು ನೀಡಿದ್ದರು. ಈ ಸಂಬಂಧ ಸಿಜೆಎಂ ನ್ಯಾಯಾಲಯ 2018ರಲ್ಲಿ ಸಮನ್ಸ್ ನೀಡಿತ್ತು. ಇದನ್ನು ಹೈಕೋರ್ಟ್ನಲ್ಲಿ ಘೋಷ್ ಪ್ರಶ್ನಿಸಿದ್ದರು. ವಿಚಾರಣಾ ಪ್ರಕ್ರಿಯೆ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಕಹಾನಿ–2’ ಸಿನಿಮಾದ ನಿರ್ಮಾಪಕ ಸುಜೋಯ್ ಘೋಷ್ ಅವರ ವಿರುದ್ಧ ಜಾರ್ಖಂಡ್ ನ್ಯಾಯಾಲಯದ ಮುಂದೆ ಬಾಕಿ ಇದ್ದ ಕೃತಿಸ್ವಾಮ್ಯ ಉಲ್ಲಂಘನೆ ಆರೋಪ ಕುರಿತ ಪ್ರಕರಣವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.</p>.<p>ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದು ಮಾಡಲು ನಿರಾಕರಿಸಿದ್ದ ಜಾರ್ಖಂಡ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಜೋಯ್ ಘೋಷ್ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅಲೋಕ್ ಅರಾಧೆ ಅವರು ಇದ್ದ ಪೀಠವು ಆದೇಶ ನೀಡಿತು.</p>.<p>ಕಳೆದ ವರ್ಷ ಜುಲೈನಲ್ಲಿ ಈ ಸಂಬಂಧ ಸುಪ್ರೀಂ ಕೋರ್ಟ್, ಜಾರ್ಖಂಡ್ ಸರ್ಕಾರಕ್ಕೆ ನೋಟಿಸ್ ನೀಡಿತ್ತು.</p>.<p>ಉಮೇಶ್ ಪ್ರಸಾದ್ ಮೆಹ್ತಾ ಎಂಬುವರು ದೂರು ನೀಡಿದ್ದರು. ‘ಸಬಕ್’ ಸಿನಿಮಾಗಾಗಿ ನಾನು ಬರೆದಿದ್ದ ಚಿತ್ರಕಥೆಯನ್ನು ಹಝಾರಿಬಾಗ್ ನೋಟರಿಯಲ್ಲಿ ನೋಂದಣಿ ಮಾಡಿಸಿದ್ದೆ. ಘೋಷ್ ಅವರ ಬಳಿ ಶಿಫಾರಸು ಪತ್ರಕ್ಕಾಗಿ ಹೋಗಿದ್ದೆ. ನನ್ನ ಚಿತ್ರಕಥೆಯ ನಕಲು ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದ ಘೋಷ್, ‘ಕಹಾನಿ–2’ ಸಿನಿಮಾಗೆ ಬಳಸಿದ್ದಾರೆ’ ಎಂದು ಆರೋಪಿಸಿದ್ದರು.</p>.<p>‘ಕಹಾನಿ–2’ ಚಿತ್ರವನ್ನು ಹಝಾರಿಬಾಗ್ ಫಿಲ್ಮ್ ಹಬ್ನಲ್ಲಿ ವೀಕ್ಷಿಸಿದ್ದ ಮೆಹ್ತಾ ಅವರು, ‘ನನ್ನ ಚಿತ್ರಕತೆಯನ್ನು ಘೋಷ್ ಕದ್ದಿದ್ದಾರೆ’ ಎಂದು ದೂರು ನೀಡಿದ್ದರು. ಈ ಸಂಬಂಧ ಸಿಜೆಎಂ ನ್ಯಾಯಾಲಯ 2018ರಲ್ಲಿ ಸಮನ್ಸ್ ನೀಡಿತ್ತು. ಇದನ್ನು ಹೈಕೋರ್ಟ್ನಲ್ಲಿ ಘೋಷ್ ಪ್ರಶ್ನಿಸಿದ್ದರು. ವಿಚಾರಣಾ ಪ್ರಕ್ರಿಯೆ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>