ಮಂಗಳವಾರ, 9 ಜೂನ್ 2026
×
ADVERTISEMENT

ಆಕ್ರಮಣಕಾರಿ ನಾಯಿಗಳನ್ನು ಕೊಲ್ಲಬಹುದು: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Published : 20 ಮೇ 2026, 0:15 IST
Last Updated : 20 ಮೇ 2026, 0:15 IST
ADVERTISEMENT
ಫಾಲೋ ಮಾಡಿ
Comments
ಸಂವಿಧಾನದ ಪರಿಚ್ಛೇದ 21ರ ಅನುಸಾರ ಜನರಿಗೆ ಒದಗಿಸಲಾಗಿರುವ ಜೀವಿಸುವ ಹಕ್ಕಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಭಯವಿಲ್ಲದೆ ಮುಕ್ತವಾಗಿ ಸಂಚರಿಸುವುದು ಕೂಡ ಒಳಗೊಂಡಿದೆ. ಇದು ದೈಹಿಕ ಹಲ್ಲೆ, ನಾಯಿ ದಾಳಿಯಂತಹ ಪ್ರಾಣಕ್ಕೆ ಹಾನಿ ತರುವಂತಹ ದಾಳಿಯ ನಿರಂತರ ಭಯವಿಲ್ಲದೆ ಮುಕ್ತವಾಗಿ ಸಂಚರಿಸುವುದನ್ನು ಕೂಡ ಒಳಗೊಂಡಿದೆ.
ನ್ಯಾಯಮೂರ್ತಿ ಸಂದೀಪ್‌ ಮೆಹ್ತಾ (ತೀರ್ಪು ಪ್ರಕಟಿಸುತ್ತಾ)
ದೀರ್ಘಕಾಲದ ನಿಷ್ಕ್ರೀಯತೆ ಸಮಸ್ಯೆಗೆ ಕಾರಣ
ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಬಿಸಿ ನಿಯಮಗಳನ್ನು ಆರಂಭದಿಂದಲೇ ಶಿಸ್ತಿನಿಂದ ಜಾರಿಗೊಳಿಸಿದ್ದಲ್ಲಿ, ಸಕಾಲಿಕ ಮತ್ತು ಹಂತಹಂತದ ಸಂತಾನಶಕ್ತಿ ಹರಣ ಪ್ರಕ್ರಿಯೆ, ಲಸಿಕೆ ನೀಡುವಿಕೆ ಮತ್ತು ಸೂಕ್ತ ಸಾಂಸ್ಥಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದಲ್ಲಿ, ಇಂದು ಪರಿಸ್ಥಿತಿ ಇಷ್ಟೊಂದು ಗಂಭೀರವಾಗುತ್ತಿರಲಿಲ್ಲ. ದೀರ್ಘಕಾಲದ ನಿಷ್ಕ್ರೀಯತೆ ಮತ್ತು ಎಬಿಸಿ ನಿಯಮಗಳ ಪರಿಣಾಮಕಾರಿ ಜಾರಿಗೆ ಬದ್ಧತೆಯ ಕೊರತೆಯು ಸಮಸ್ಯೆ ಬಿಗಡಾಯಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ಈಗ ಇದು ತುರ್ತು ಮತ್ತು ವ್ಯವಸ್ಥಿತ ಮಧ್ಯಪ್ರವೇಶಿಸುವಿಕೆಯ ಅಗತ್ಯವನ್ನು ಸೃಷ್ಟಿಸಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT