ರಾಜೀನಾಮೆ ಪ್ರಕಟಿಸಿದ ನಂತರ ಮೊದಲ ಬಾರಿಗೆ ನರೀಮನ್ ಪಾಯಿಂಟ್ನಲ್ಲಿರುವ ಯಶವಂತರಾವ್ ಚವಾಣ್ ಸಂಭಾಂಗಣದಲ್ಲಿ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಗುರುವಾರ ಮಾತನಾಡಿರುವ ಪವಾರ್, ಪಕ್ಷದ ಭವಿಷ್ಯ ಮತ್ತು ಹೊಸ ನಾಯಕತ್ವಕ್ಕಾಗಿ ರಾಜೀನಾಮೆ ಪ್ರಕಟಿಸಿದ್ದಾಗಿ ಸ್ಪಷ್ಟಪಡಿಸಿರುವ ಜತೆಗೆ, ಸಮಿತಿಯು ಸಭೆ ಸೇರಿ ಚರ್ಚಿಸಲಿದೆ ಎಂದೂ ಹೇಳಿದರು. ‘ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಗೌರವಿಸುವೆ. ಮುಂದಿನ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವೆ’ ಎಂದೂ ಹೇಳಿದರು.
‘ರಾಜೀನಾಮೆ ಹಿಂಪಡೆಯಲು ಒತ್ತಡ ಹೆಚ್ಚುತ್ತಿದ್ದರೂ ಪವಾರ್ ಅವರು ತಮ್ಮ ನಿರ್ಧಾರದಿಂದ ಹಿಂದೆಸರಿಯುವಂತೆ ತೋರದಿರುವುದು ತಿಳಿದುಬಂದಿದೆ. ಆದರೆ, ಮುಂದಿನ ಚುನಾವಣೆಯವರೆಗೆ ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿದೆ’ ಎಂದು ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಹೇಳಿದ್ದಾರೆ.