<p><strong>ಚೆನೈ:</strong> ‘ಆಲ್ ಇಂಡಿಯಾ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ’(ಎಐಪಿಟಿಎಂಎಂಕೆ) ಪಕ್ಷದ ಸಂಸ್ಥಾಪಕಿ ವಿ.ಕೆ. ಶಶಿಕಲಾ ಅವರು, ಎಸ್. ರಾಮದಾಸ್ ನೇತೃತ್ವದ ಪಿಎಂಕೆ ಬಣದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಶುಕ್ರವಾರ ಘೋಷಿಸಿದರು.</p>.<p>ತಿಂಡಿವನಂ ಬಳಿಯ ತೈಲಪುರಂನಲ್ಲಿರುವ ತೋಟದ ಮನೆಯಲ್ಲಿ ಶಶಿಕಲಾ ಮತ್ತು ರಾಮದಾಸ್ ಜಂಟಿಯಾಗಿ ಮೈತ್ರಿ ಘೋಷಿಸಿದರು.</p>.<p>ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆ ಆಗಲು ಇಬ್ಬರೂ ಯತ್ನಿಸಿದ್ದರು. ಮಾತುಕತೆ ವಿಫಲವಾಗಿತ್ತು. ಆಗಲೇ ಇಬ್ಬರೂ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ವ್ಯಕ್ತವಾಗಿತ್ತು.</p>.<p>ತಮ್ಮ ಪುತ್ರ ಆರ್. ಅನ್ಬುಮಣಿ ಅವರಿಂದ ದೂರ ಇರುವ ರಾಮದಾಸ್ ಅವರು ವಣ್ಣಿಯಾರ್ ಪ್ರಾಬಲ್ಯದ ಉತ್ತರ ತಮಿಳುನಾಡಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.</p>.<p>ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಿಗಳಾಗದಿದ್ದರೂ, ಎಐಎಡಿಎಂಕೆ ಹಾಗೂ ಪಿಎಂಕೆ ಅಭ್ಯರ್ಥಿಗಳಿಗೆ ಬಲವಾದ ಪೆಟ್ಟು ನೀಡಲಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನೈ:</strong> ‘ಆಲ್ ಇಂಡಿಯಾ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ’(ಎಐಪಿಟಿಎಂಎಂಕೆ) ಪಕ್ಷದ ಸಂಸ್ಥಾಪಕಿ ವಿ.ಕೆ. ಶಶಿಕಲಾ ಅವರು, ಎಸ್. ರಾಮದಾಸ್ ನೇತೃತ್ವದ ಪಿಎಂಕೆ ಬಣದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಶುಕ್ರವಾರ ಘೋಷಿಸಿದರು.</p>.<p>ತಿಂಡಿವನಂ ಬಳಿಯ ತೈಲಪುರಂನಲ್ಲಿರುವ ತೋಟದ ಮನೆಯಲ್ಲಿ ಶಶಿಕಲಾ ಮತ್ತು ರಾಮದಾಸ್ ಜಂಟಿಯಾಗಿ ಮೈತ್ರಿ ಘೋಷಿಸಿದರು.</p>.<p>ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆ ಆಗಲು ಇಬ್ಬರೂ ಯತ್ನಿಸಿದ್ದರು. ಮಾತುಕತೆ ವಿಫಲವಾಗಿತ್ತು. ಆಗಲೇ ಇಬ್ಬರೂ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ವ್ಯಕ್ತವಾಗಿತ್ತು.</p>.<p>ತಮ್ಮ ಪುತ್ರ ಆರ್. ಅನ್ಬುಮಣಿ ಅವರಿಂದ ದೂರ ಇರುವ ರಾಮದಾಸ್ ಅವರು ವಣ್ಣಿಯಾರ್ ಪ್ರಾಬಲ್ಯದ ಉತ್ತರ ತಮಿಳುನಾಡಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.</p>.<p>ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಿಗಳಾಗದಿದ್ದರೂ, ಎಐಎಡಿಎಂಕೆ ಹಾಗೂ ಪಿಎಂಕೆ ಅಭ್ಯರ್ಥಿಗಳಿಗೆ ಬಲವಾದ ಪೆಟ್ಟು ನೀಡಲಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>