<p><strong>ಚೆನ್ನೈ:</strong> ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ಅವರು ಗುರುವಾರ ತಮ್ಮ ಸಂಪುಟ ವಿಸ್ತರಿಸಿದ್ದು, 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರಲ್ಲಿ ಟಿವಿಕೆ ಪಕ್ಷದ 21 ಹಾಗೂ ಕಾಂಗ್ರೆಸ್ನ ಇಬ್ಬರು ಶಾಸಕರು ಸೇರಿದ್ದಾರೆ. </p>.<p>ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಹೊಸ ಸಚಿವರಿಗೆ ಅಧಿಕಾರ ಗೋಪ್ಯತೆ ಬೋಧಿಸಿದರು. ಇದರಿಂದ ವಿಜಯ್ ನೇತೃತ್ವದ ಸಂಪುಟದ ಬಲ 33ಕ್ಕೆ (ಸಿ.ಎಂ ಸೇರಿ) ಏರಿಕೆಯಾಯಿತು. </p>.<h2>ಖಾತೆಗಳ ಹಂಚಿಕೆ:</h2>.<p>ಮುಖ್ಯಮಂತ್ರಿ ವಿಜಯ್ ಅವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಅಲ್ಲದೆ ಅವರು ಈ ಮೊದಲು ಸಚಿವರಾಗಿದ್ದವರ ಕೆಲ ಖಾತೆಗಳನ್ನು ಪರಿಷ್ಕರಿಸಿದ್ದಾರೆ. </p>.<p>ವಿಜಯ್ ಅವರು ತಮ್ಮ ಬಳಿ ಸಾರ್ವಜನಿಕ ಆಡಳಿತ, ಗೃಹ, ಬಡತನ ನಿರ್ಮೂಲನೆ, ಯುವಜನ ಕಲ್ಯಾಣ, ಮಕ್ಕಳ ಅಭಿವೃದ್ಧಿ, ನಗರಾಡಳಿತ, ನೀರು ಸರಬರಾಜು ಖಾತೆಗಳನ್ನು ಉಳಿಸಿಕೊಂಡಿದ್ದಾರೆ. </p>.<p>ಸಚಿವ ಎನ್. ಆನಂದ್ ಅವರಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ನೀರಾವರಿ ಖಾತೆಗಳನ್ನು ವಹಿಸಲಾಗಿದೆ. ಆಧವ್ ಅರ್ಜುನ್ ಅವರಿಗೆ ಲೋಕೋಪಯೋಗಿ ಮತ್ತು ಕ್ರೀಡಾ ಅಭಿವೃದ್ಧಿ, ಕೆ.ಜಿ. ಅರುಣ್ ರಾಜ್ ಅವರಿಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ, ಪಿ. ವೆಂಕಟರಮಣನ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.</p>.<h2>ಹಣಕಾಸು ಖಾತೆ ಬದಲು:</h2>.<p>ಈ ಹಿಂದೆ ಹಣಕಾಸು ಖಾತೆ ಹಂಚಿಕೆ ಮಾಡಲಾಗಿದ್ದ ಕೆ.ಎ.ಸೆಂಗೊಟ್ಟೆಯನ್ ಅವರಿಗೆ ಆ ಖಾತೆಯ ಬದಲಿಗೆ ಕಂದಾಯ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಹಣಕಾಸು ಖಾತೆಯನ್ನು ಎನ್. ಮೇರಿ ವಿಲ್ಸನ್ ಅವರಿಗೆ ವಹಿಸಲಾಗಿದೆ. ವಿನೋತ್ ಅವರಿಗೆ ಕೃಷಿ ಇಲಾಖೆ ಹಂಚಿಕೆ ಮಾಡಲಾಗಿದೆ. </p>.<p>ಡಿ. ಲೋಕೇಶ್ ತಮಿಳ್ಸೆಲ್ವನ್ ಅವರಿಗೆ ವಾಣಿಜ್ಯ ತೆರಿಗೆ ಮತ್ತು ನೋಂದಣಿ ಖಾತೆ ಹಂಚಿಕೆ ಮಾಡಲಾಗಿದೆ. ಅವರು ಮಾಜಿ ಸ್ಪೀಕರ್ ಧನಪಾಲ್ ಅವರ ಮಗ. </p>.<p>ಸಚಿವ ಸ್ಥಾನ ಪಡೆದಿರುವ ಕಾಂಗ್ರೆಸ್ ಶಾಸಕರಾದ ಎಸ್. ರಾಜೇಶ್ ಕುಮಾರ್ ಅವರಿಗೆ ಪ್ರವಾಸೋದ್ಯಮ, ಪಿ. ವಿಶ್ವನಾಥನ್ ಅವರಿಗೆ ಶಿಕ್ಷಣ ಖಾತೆ ನೀಡಲಾಗಿದೆ.</p>.<h2>ಎ.ಐ ಸಚಿವಾಲಯ ಸ್ಥಾಪನೆ: </h2>.<p>ತಮಿಳುನಾಡು ಸರ್ಕಾರ ಕೃತಕ ಬುದ್ಧಿಮತ್ತೆಗೆ (ಎ.ಐ) ಮೀಸಲಾದ ಸಚಿವಾಲಯವನ್ನು ಸ್ಥಾಪಿಸಿದ್ದು, ಮೇಲಾಚೇರಿ ಶಾಸಕ ಆರ್. ಕುಮಾರ್ ಅವರಿಗೆ ಎ.ಐ, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಖಾತೆ ಹಂಚಿಕೆ ಮಾಡಿದೆ. ಈ ಮೂಲಕ ಪಕ್ಕದ ಕೇರಳಂ ರಾಜ್ಯದ ಬಳಿಕ ಎ.ಐಗೆ ಪ್ರತ್ಯೇಕ ಸಚಿವಾಲಯ ರಚಿಸಿದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ತಮಿಳುನಾಡು ಪಾತ್ರವಾಗಿದೆ. </p>.<h2>ಸಂಪುಟ ಸೇರಲಿರುವ ಐಯುಎಂಎಲ್:</h2>.<p>ಮುಖ್ಯಮಂತ್ರಿ ವಿಜಯ್ ನೇತೃತ್ವದ ಸಂಪುಟದಲ್ಲಿ ಭಾಗಿ ಆಗುವುದಾಗಿ ಐಯುಎಂಎಲ್ ಪಕ್ಷದ ಮುಖ್ಯಸ್ಥ ಕೆ.ಎಂ. ಖಾದರ್ ಮೊಹಿದೀನ್ ಗುರುವಾರ ಪ್ರಕಟಿಸಿದರು. </p>.<p>ಪಕ್ಷದ ಶಾಸಕ ಎ.ಎಂ. ಷಹಜಹಾನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಶಿಫಾರಸು ಮಾಡಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.</p>.<h2>ರಾಹುಲ್ ಪರ ಘೋಷಣೆ </h2><p><strong>ಚೆನ್ನೈ</strong> : ಕಾಂಗ್ರೆಸ್ ಶಾಸಕ ಎಸ್. ರಾಜೇಶ್ ಕುಮಾರ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಕಾಂಗ್ರೆಸ್ ನಾಯಕರಾದ ಕಾಮರಾಜ್ ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಪರ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ‘ಅದು ನಿಮ್ಮ ಪ್ರಮಾಣವಚನದ ಭಾಗವಲ್ಲ ಪ್ರಮಾಣವಚನದ ಲಿಖಿತ ಪತ್ರಕ್ಕೆ ಬದ್ಧರಾಗಿರಿ’ ಎಂದು ತಿಳಿಸಿದರು. </p> <p> ರಾಜ್ಯಪಾಲರ ಹೇಳಿಕೆ ಬೆನ್ನಲ್ಲೇ ಅಧಿಕಾರಿಯೊಬ್ಬರು ರಾಜೇಶ್ ಅವರ ಬಳಿ ಬಂದು ಮುಂದೆ ಇರಿಸಲಾಗಿರುವ ಲಿಖಿತ ಹೇಳಿಕೆಯನ್ನು ಓದುವಂತೆ ತೋರಿಸಿದರು. ಬಳಿಕ ಅವರು ಪ್ರಮಾಣವಚನ ಪೂರ್ಣಗೊಳಿಸಿದರು. ರಾಜೇಂದ್ರ ಅವರು ಕಿಲ್ಲಿಯೂರ್ ಕ್ಷೇತ್ರದ ಶಾಸಕ. ಮುಸ್ಲಿಮರ ಪ್ರಾತಿನಿಧ್ಯ ಹೆಚ್ಚಿಸಿ– ಎಸ್ಡಿಪಿಐ: ಮುಂಬರುವ ದಿನಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಎಸ್ಡಿಪಿಐ ಗುರುವಾರ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಆಗ್ರಹಿಸಿದೆ. </p> <p>ಟಿವಿಕೆ ನೇತೃತ್ವದ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಕೇವಲ ಒಬ್ಬರಿಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಥಾನಗಳನ್ನು ನೀಡುವಂತೆ ಎಸ್ಡಿಪಿಐ ತಮಿಳುನಾಡು ಘಟಕದ ಅಧ್ಯಕ್ಷ ಮುಹಮ್ಮದ್ ಮುಬಾರಕ್ ಒತ್ತಾಯಿಸಿದ್ದಾರೆ. ಟಿವಿಕೆಯ ಶಾಸಕ ಜೆ. ಮೊಹಮ್ಮದ್ ಫರ್ವಾಸ್ (ಟಿವಿಕೆ) ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು. </p>.<h2>ಮತ್ತೆ ‘ವಂದೇ ಮಾತರಂ’ ವಿವಾದ</h2><p> ಲೋಕಭವನದಲ್ಲಿ ಗುರುವಾರ ನಡೆದ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಹಾಡಿದ ಗೀತೆಗಳ ಪೈಕಿ ‘ತಮಿಳ್ ತಾಯ್ ವಾಜ್ತು’ (ನಾಡಗೀತೆ) ಕೊನೆಯದಾಗಿ ಹಾಡಲಾಯಿತು. ಅದೀಗ ವಿವಾದವಾಗಿದೆ. ಸಮಾರಂಭದಲ್ಲಿ ‘ವಂದೇ ಮಾತರಂ’ ಮತ್ತು ರಾಷ್ಟ್ರಗೀತೆ ಬಳಿಕ ಬಳಿಕ ನಾಡಗೀತೆ ಹಾಡಿದ್ದಕ್ಕೆ ಎಡಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. </p> <p>ವಿಜಯ್ ಅವರು ಮೇ 10ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದಾಗಲೂ ‘ವಂದೇ ಮಾತರಂ’ ‘ಜನ ಗಣ ಮನ’ದ ಬಳಿಕ ಮೂರನೆಯದ್ದಾಗಿ ನಾಡಗೀತೆ ಪ್ರಸ್ತುತಪಡಿಸಲಾಗಿತ್ತು. ಇದೀಗ ಎರಡನೇ ಬಾರಿಯೂ ಹಾಗೆಯೇ ಮಾಡಲಾಗಿದೆ ಎಂದು ಸಿಪಿಐ ರಾಜ್ಯ ಘಟಕದ ಕಾರ್ಯದರ್ಶಿ ಎಂ. ವೀರಪಾಂಡ್ಯನ್ ಹೇಳಿದ್ದಾರೆ. ತಮಿಳುನಾಡಿನ ರಾಜ್ಯಪಾಲರು ನಾಡಗೀತೆಗೆ ಆದ್ಯತೆ ನೀಡಬೇಕು. ಈ ಮೂಲಕ ತಮಿಳು ಜನರ ಭಾವನೆಗಳನ್ನು ಗೌರವಿಸಬೇಕು ಎಂದು ಅವರು ಒತ್ತಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ಅವರು ಗುರುವಾರ ತಮ್ಮ ಸಂಪುಟ ವಿಸ್ತರಿಸಿದ್ದು, 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರಲ್ಲಿ ಟಿವಿಕೆ ಪಕ್ಷದ 21 ಹಾಗೂ ಕಾಂಗ್ರೆಸ್ನ ಇಬ್ಬರು ಶಾಸಕರು ಸೇರಿದ್ದಾರೆ. </p>.<p>ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಹೊಸ ಸಚಿವರಿಗೆ ಅಧಿಕಾರ ಗೋಪ್ಯತೆ ಬೋಧಿಸಿದರು. ಇದರಿಂದ ವಿಜಯ್ ನೇತೃತ್ವದ ಸಂಪುಟದ ಬಲ 33ಕ್ಕೆ (ಸಿ.ಎಂ ಸೇರಿ) ಏರಿಕೆಯಾಯಿತು. </p>.<h2>ಖಾತೆಗಳ ಹಂಚಿಕೆ:</h2>.<p>ಮುಖ್ಯಮಂತ್ರಿ ವಿಜಯ್ ಅವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಅಲ್ಲದೆ ಅವರು ಈ ಮೊದಲು ಸಚಿವರಾಗಿದ್ದವರ ಕೆಲ ಖಾತೆಗಳನ್ನು ಪರಿಷ್ಕರಿಸಿದ್ದಾರೆ. </p>.<p>ವಿಜಯ್ ಅವರು ತಮ್ಮ ಬಳಿ ಸಾರ್ವಜನಿಕ ಆಡಳಿತ, ಗೃಹ, ಬಡತನ ನಿರ್ಮೂಲನೆ, ಯುವಜನ ಕಲ್ಯಾಣ, ಮಕ್ಕಳ ಅಭಿವೃದ್ಧಿ, ನಗರಾಡಳಿತ, ನೀರು ಸರಬರಾಜು ಖಾತೆಗಳನ್ನು ಉಳಿಸಿಕೊಂಡಿದ್ದಾರೆ. </p>.<p>ಸಚಿವ ಎನ್. ಆನಂದ್ ಅವರಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ನೀರಾವರಿ ಖಾತೆಗಳನ್ನು ವಹಿಸಲಾಗಿದೆ. ಆಧವ್ ಅರ್ಜುನ್ ಅವರಿಗೆ ಲೋಕೋಪಯೋಗಿ ಮತ್ತು ಕ್ರೀಡಾ ಅಭಿವೃದ್ಧಿ, ಕೆ.ಜಿ. ಅರುಣ್ ರಾಜ್ ಅವರಿಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ, ಪಿ. ವೆಂಕಟರಮಣನ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.</p>.<h2>ಹಣಕಾಸು ಖಾತೆ ಬದಲು:</h2>.<p>ಈ ಹಿಂದೆ ಹಣಕಾಸು ಖಾತೆ ಹಂಚಿಕೆ ಮಾಡಲಾಗಿದ್ದ ಕೆ.ಎ.ಸೆಂಗೊಟ್ಟೆಯನ್ ಅವರಿಗೆ ಆ ಖಾತೆಯ ಬದಲಿಗೆ ಕಂದಾಯ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಹಣಕಾಸು ಖಾತೆಯನ್ನು ಎನ್. ಮೇರಿ ವಿಲ್ಸನ್ ಅವರಿಗೆ ವಹಿಸಲಾಗಿದೆ. ವಿನೋತ್ ಅವರಿಗೆ ಕೃಷಿ ಇಲಾಖೆ ಹಂಚಿಕೆ ಮಾಡಲಾಗಿದೆ. </p>.<p>ಡಿ. ಲೋಕೇಶ್ ತಮಿಳ್ಸೆಲ್ವನ್ ಅವರಿಗೆ ವಾಣಿಜ್ಯ ತೆರಿಗೆ ಮತ್ತು ನೋಂದಣಿ ಖಾತೆ ಹಂಚಿಕೆ ಮಾಡಲಾಗಿದೆ. ಅವರು ಮಾಜಿ ಸ್ಪೀಕರ್ ಧನಪಾಲ್ ಅವರ ಮಗ. </p>.<p>ಸಚಿವ ಸ್ಥಾನ ಪಡೆದಿರುವ ಕಾಂಗ್ರೆಸ್ ಶಾಸಕರಾದ ಎಸ್. ರಾಜೇಶ್ ಕುಮಾರ್ ಅವರಿಗೆ ಪ್ರವಾಸೋದ್ಯಮ, ಪಿ. ವಿಶ್ವನಾಥನ್ ಅವರಿಗೆ ಶಿಕ್ಷಣ ಖಾತೆ ನೀಡಲಾಗಿದೆ.</p>.<h2>ಎ.ಐ ಸಚಿವಾಲಯ ಸ್ಥಾಪನೆ: </h2>.<p>ತಮಿಳುನಾಡು ಸರ್ಕಾರ ಕೃತಕ ಬುದ್ಧಿಮತ್ತೆಗೆ (ಎ.ಐ) ಮೀಸಲಾದ ಸಚಿವಾಲಯವನ್ನು ಸ್ಥಾಪಿಸಿದ್ದು, ಮೇಲಾಚೇರಿ ಶಾಸಕ ಆರ್. ಕುಮಾರ್ ಅವರಿಗೆ ಎ.ಐ, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಖಾತೆ ಹಂಚಿಕೆ ಮಾಡಿದೆ. ಈ ಮೂಲಕ ಪಕ್ಕದ ಕೇರಳಂ ರಾಜ್ಯದ ಬಳಿಕ ಎ.ಐಗೆ ಪ್ರತ್ಯೇಕ ಸಚಿವಾಲಯ ರಚಿಸಿದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ತಮಿಳುನಾಡು ಪಾತ್ರವಾಗಿದೆ. </p>.<h2>ಸಂಪುಟ ಸೇರಲಿರುವ ಐಯುಎಂಎಲ್:</h2>.<p>ಮುಖ್ಯಮಂತ್ರಿ ವಿಜಯ್ ನೇತೃತ್ವದ ಸಂಪುಟದಲ್ಲಿ ಭಾಗಿ ಆಗುವುದಾಗಿ ಐಯುಎಂಎಲ್ ಪಕ್ಷದ ಮುಖ್ಯಸ್ಥ ಕೆ.ಎಂ. ಖಾದರ್ ಮೊಹಿದೀನ್ ಗುರುವಾರ ಪ್ರಕಟಿಸಿದರು. </p>.<p>ಪಕ್ಷದ ಶಾಸಕ ಎ.ಎಂ. ಷಹಜಹಾನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಶಿಫಾರಸು ಮಾಡಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.</p>.<h2>ರಾಹುಲ್ ಪರ ಘೋಷಣೆ </h2><p><strong>ಚೆನ್ನೈ</strong> : ಕಾಂಗ್ರೆಸ್ ಶಾಸಕ ಎಸ್. ರಾಜೇಶ್ ಕುಮಾರ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಕಾಂಗ್ರೆಸ್ ನಾಯಕರಾದ ಕಾಮರಾಜ್ ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಪರ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ‘ಅದು ನಿಮ್ಮ ಪ್ರಮಾಣವಚನದ ಭಾಗವಲ್ಲ ಪ್ರಮಾಣವಚನದ ಲಿಖಿತ ಪತ್ರಕ್ಕೆ ಬದ್ಧರಾಗಿರಿ’ ಎಂದು ತಿಳಿಸಿದರು. </p> <p> ರಾಜ್ಯಪಾಲರ ಹೇಳಿಕೆ ಬೆನ್ನಲ್ಲೇ ಅಧಿಕಾರಿಯೊಬ್ಬರು ರಾಜೇಶ್ ಅವರ ಬಳಿ ಬಂದು ಮುಂದೆ ಇರಿಸಲಾಗಿರುವ ಲಿಖಿತ ಹೇಳಿಕೆಯನ್ನು ಓದುವಂತೆ ತೋರಿಸಿದರು. ಬಳಿಕ ಅವರು ಪ್ರಮಾಣವಚನ ಪೂರ್ಣಗೊಳಿಸಿದರು. ರಾಜೇಂದ್ರ ಅವರು ಕಿಲ್ಲಿಯೂರ್ ಕ್ಷೇತ್ರದ ಶಾಸಕ. ಮುಸ್ಲಿಮರ ಪ್ರಾತಿನಿಧ್ಯ ಹೆಚ್ಚಿಸಿ– ಎಸ್ಡಿಪಿಐ: ಮುಂಬರುವ ದಿನಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಎಸ್ಡಿಪಿಐ ಗುರುವಾರ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಆಗ್ರಹಿಸಿದೆ. </p> <p>ಟಿವಿಕೆ ನೇತೃತ್ವದ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಕೇವಲ ಒಬ್ಬರಿಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಥಾನಗಳನ್ನು ನೀಡುವಂತೆ ಎಸ್ಡಿಪಿಐ ತಮಿಳುನಾಡು ಘಟಕದ ಅಧ್ಯಕ್ಷ ಮುಹಮ್ಮದ್ ಮುಬಾರಕ್ ಒತ್ತಾಯಿಸಿದ್ದಾರೆ. ಟಿವಿಕೆಯ ಶಾಸಕ ಜೆ. ಮೊಹಮ್ಮದ್ ಫರ್ವಾಸ್ (ಟಿವಿಕೆ) ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು. </p>.<h2>ಮತ್ತೆ ‘ವಂದೇ ಮಾತರಂ’ ವಿವಾದ</h2><p> ಲೋಕಭವನದಲ್ಲಿ ಗುರುವಾರ ನಡೆದ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಹಾಡಿದ ಗೀತೆಗಳ ಪೈಕಿ ‘ತಮಿಳ್ ತಾಯ್ ವಾಜ್ತು’ (ನಾಡಗೀತೆ) ಕೊನೆಯದಾಗಿ ಹಾಡಲಾಯಿತು. ಅದೀಗ ವಿವಾದವಾಗಿದೆ. ಸಮಾರಂಭದಲ್ಲಿ ‘ವಂದೇ ಮಾತರಂ’ ಮತ್ತು ರಾಷ್ಟ್ರಗೀತೆ ಬಳಿಕ ಬಳಿಕ ನಾಡಗೀತೆ ಹಾಡಿದ್ದಕ್ಕೆ ಎಡಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. </p> <p>ವಿಜಯ್ ಅವರು ಮೇ 10ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದಾಗಲೂ ‘ವಂದೇ ಮಾತರಂ’ ‘ಜನ ಗಣ ಮನ’ದ ಬಳಿಕ ಮೂರನೆಯದ್ದಾಗಿ ನಾಡಗೀತೆ ಪ್ರಸ್ತುತಪಡಿಸಲಾಗಿತ್ತು. ಇದೀಗ ಎರಡನೇ ಬಾರಿಯೂ ಹಾಗೆಯೇ ಮಾಡಲಾಗಿದೆ ಎಂದು ಸಿಪಿಐ ರಾಜ್ಯ ಘಟಕದ ಕಾರ್ಯದರ್ಶಿ ಎಂ. ವೀರಪಾಂಡ್ಯನ್ ಹೇಳಿದ್ದಾರೆ. ತಮಿಳುನಾಡಿನ ರಾಜ್ಯಪಾಲರು ನಾಡಗೀತೆಗೆ ಆದ್ಯತೆ ನೀಡಬೇಕು. ಈ ಮೂಲಕ ತಮಿಳು ಜನರ ಭಾವನೆಗಳನ್ನು ಗೌರವಿಸಬೇಕು ಎಂದು ಅವರು ಒತ್ತಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>