<p><strong>ಚೆನ್ನೈ:</strong> ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಪಡಿಸಿ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಮಾರನೇ ದಿನವೇ ಕೇಂದ್ರ ಚುನಾವಣಾ ಆಯೋಗ ಸೋಮವಾರ ತಮಿಳುನಾಡಿನ ನಾಲ್ವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ.</p>.<p>ಕರೂರು, ಈರೋಡ್, ನಾಗಪಟ್ಟಣಂ ಮತ್ತು ವಿರುಧುನಗರ್ ಜಿಲ್ಲೆಗಳ ಎಸ್ಪಿಗಳನ್ನು ವರ್ಗಾಯಿಸಲಾಗಿದೆ. ಕರೂರು ಎಸ್ಪಿ ಜೋಶ್ ತಂಗಯ್ಯ ಅವರ ಸ್ಥಾನಕ್ಕೆ ಹರಿಕೃಷ್ಣನ್ ಪ್ರಸಾದ್, ಈರೋಡ್ ಎಸ್ಪಿ ಎ.ಸುಜಾತ ಬದಲಿಗೆ ಡಿ.ವಿ.ಕಿರಣ್ ಶೃತಿ ಅವರನ್ನು ನಿಯೋಜಿಸಲಾಗಿದೆ.</p>.<p>ನಾಗಪಟ್ಟಣಂ ಎಸ್ಪಿ ಕೆ.ಬಲ್ಲಾ ಅವರ ಸ್ಥಾನಕ್ಕೆ ಸುಜಿತ್ ಕುಮಾರ್, ವಿರುಧುನಗರ ಜಿಲ್ಲೆಯ ಎಸ್ಪಿ ಡಿ.ಕಣ್ಣನ್ ಅವರ ಸ್ಥಾನಕ್ಕೆ ಎನ್.ಶ್ರೀನಾಥ ಅವರನ್ನು ನಿಯೋಜಿಸಲಾಗಿದೆ.</p>.<p>‘ಕರೂರು ಎಸ್ಪಿ ಮತ್ತು ಜಿಲ್ಲಾಧಿಕಾರಿಯನ್ನು ತೆರವು ಮಾಡದೇ ಜಿಲ್ಲೆಯಲ್ಲಿ ಪಾರದರ್ಶಕ ಚುಣಾವಣೆ ಸಾಧ್ಯವಿಲ್ಲ’ ಎಂದು ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಹೇಳಿಕೆ ನೀಡಿದ್ದರು. ಅದಾದ ಕೆಲ ಗಂಟೆಗಳಲ್ಲೇ ಆಯೋಗದ ನಿರ್ದೇಶನ ಹೊರಬಿದ್ದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಪಡಿಸಿ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಮಾರನೇ ದಿನವೇ ಕೇಂದ್ರ ಚುನಾವಣಾ ಆಯೋಗ ಸೋಮವಾರ ತಮಿಳುನಾಡಿನ ನಾಲ್ವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ.</p>.<p>ಕರೂರು, ಈರೋಡ್, ನಾಗಪಟ್ಟಣಂ ಮತ್ತು ವಿರುಧುನಗರ್ ಜಿಲ್ಲೆಗಳ ಎಸ್ಪಿಗಳನ್ನು ವರ್ಗಾಯಿಸಲಾಗಿದೆ. ಕರೂರು ಎಸ್ಪಿ ಜೋಶ್ ತಂಗಯ್ಯ ಅವರ ಸ್ಥಾನಕ್ಕೆ ಹರಿಕೃಷ್ಣನ್ ಪ್ರಸಾದ್, ಈರೋಡ್ ಎಸ್ಪಿ ಎ.ಸುಜಾತ ಬದಲಿಗೆ ಡಿ.ವಿ.ಕಿರಣ್ ಶೃತಿ ಅವರನ್ನು ನಿಯೋಜಿಸಲಾಗಿದೆ.</p>.<p>ನಾಗಪಟ್ಟಣಂ ಎಸ್ಪಿ ಕೆ.ಬಲ್ಲಾ ಅವರ ಸ್ಥಾನಕ್ಕೆ ಸುಜಿತ್ ಕುಮಾರ್, ವಿರುಧುನಗರ ಜಿಲ್ಲೆಯ ಎಸ್ಪಿ ಡಿ.ಕಣ್ಣನ್ ಅವರ ಸ್ಥಾನಕ್ಕೆ ಎನ್.ಶ್ರೀನಾಥ ಅವರನ್ನು ನಿಯೋಜಿಸಲಾಗಿದೆ.</p>.<p>‘ಕರೂರು ಎಸ್ಪಿ ಮತ್ತು ಜಿಲ್ಲಾಧಿಕಾರಿಯನ್ನು ತೆರವು ಮಾಡದೇ ಜಿಲ್ಲೆಯಲ್ಲಿ ಪಾರದರ್ಶಕ ಚುಣಾವಣೆ ಸಾಧ್ಯವಿಲ್ಲ’ ಎಂದು ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಹೇಳಿಕೆ ನೀಡಿದ್ದರು. ಅದಾದ ಕೆಲ ಗಂಟೆಗಳಲ್ಲೇ ಆಯೋಗದ ನಿರ್ದೇಶನ ಹೊರಬಿದ್ದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>