ಡಿಎಂಕೆ ವಕ್ತಾರರಾದ ರಾಜೀವ್ ಗಾಂಧಿ ಅವರು, ‘ಅನ್ಯ ರಾಜ್ಯಗಳಲ್ಲಿ ತಮಿಳು ನಾಡಗೀತೆಯನ್ನು ಹಾಡುವ ಅಗತ್ಯವಿಲ್ಲ. ಆದರೆ, ವೋಟು ಗಳಿಕೆಗಾಗಿ ಅಣ್ಣಾಮಲೈ ಅವರು ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ. ‘ತಮಿಳು ನಾಡಗೀತೆ ಹಾಡಿಸಲು ತೀರ್ಮಾನಿಸಿದ ಮೇಲೆ ಅದನ್ನು ಅರ್ಧದಲ್ಲಿ ನಿಲ್ಲಿಸದಂತೆ ಕ್ರಮವಹಿಸಬೇಕಿತ್ತು’ ಎಂದು ಪ್ರತಿಕ್ರಿಯಿಸಿದ್ದಾರೆ.