<p><strong>ಹೈದರಾಬಾದ್:</strong> ಆಂಧ್ರ ಪ್ರದೇಶದ ಆಡಳಿತಾರೂಢ ‘ತೆಲುಗು ದೇಶಂ ಪಕ್ಷವು’ 2029ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಪಕ್ಷದಿಂದ ಶೇ 33ರಷ್ಟು ಟಿಕೆಟ್ ಮೀಸಲಿರಿಸುವುದಾಗಿ ಹೇಳಿದೆ.</p><p>ಟಿಡಿಪಿಯ ವಾರ್ಷಿಕ ಮಹಾ ಅಧಿವೇಶನ 2026ರ ಮಹಾನಾಡು ಕಾರ್ಯಕ್ರಮದ ಮೊದಲ ದಿನವೇ ಈ ಮಹತ್ವದ ಘೋಷಣೆ ಮಾಡಲಾಗಿದೆ. ಈ ಬಾರಿಯ ಸಮಾವೇಶವನ್ನು ‘ಸ್ತ್ರೀ ಶಕ್ತಿ’ ಎಂಬ ವಿಷಯದ ಅಡಿಯಲ್ಲಿ ಆಯೋಜಿಸಲಾಗಿದೆ. </p><p>ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಹಲವು ಅಡೆತಡೆಗಳು ಎದುರಾಗುತ್ತಿರುವ ಈ ಸಂದರ್ಭದಲ್ಲಿ, ಟಿಡಿಪಿಯ ಈ ನಡೆ ಭಾರತೀಯ ರಾಜಕೀಯದಲ್ಲಿ ಮಹಿಳಾ ನೇತೃತ್ವದ ನಾಯಕತ್ವ ಮತ್ತು ಲಿಂಗ ಸಮಾನತೆಗೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.</p><p>‘ಭಾರತೀಯ ರಾಜಕೀಯದ ಮುಂದಿನ ಯುಗ ಮಹಿಳೆಯರಿಗೆ ಸೇರಿದ್ದು ಎಂದು ನಾನು ದೃಢವಾಗಿ ನಂಬುತ್ತೇನೆ. ಎನ್ಡಿಎ ಸರ್ಕಾರ ಈಗಾಗಲೇ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಮಹಿಳೆಯರು ಕೇವಲ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಿ ಉಳಿಯದೆ, ಆಡಳಿತ ಮತ್ತು ರಾಜಕೀಯದಲ್ಲಿ ಸಕ್ರಿಯ ನಿರ್ಧಾರ ಕೈಗೊಳ್ಳುವ ನಾಯಕರಾಗಬೇಕು’ ಎಂದು ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ನಾರಾ ಲೋಕೇಶ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಆಂಧ್ರ ಪ್ರದೇಶದ ಆಡಳಿತಾರೂಢ ‘ತೆಲುಗು ದೇಶಂ ಪಕ್ಷವು’ 2029ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಪಕ್ಷದಿಂದ ಶೇ 33ರಷ್ಟು ಟಿಕೆಟ್ ಮೀಸಲಿರಿಸುವುದಾಗಿ ಹೇಳಿದೆ.</p><p>ಟಿಡಿಪಿಯ ವಾರ್ಷಿಕ ಮಹಾ ಅಧಿವೇಶನ 2026ರ ಮಹಾನಾಡು ಕಾರ್ಯಕ್ರಮದ ಮೊದಲ ದಿನವೇ ಈ ಮಹತ್ವದ ಘೋಷಣೆ ಮಾಡಲಾಗಿದೆ. ಈ ಬಾರಿಯ ಸಮಾವೇಶವನ್ನು ‘ಸ್ತ್ರೀ ಶಕ್ತಿ’ ಎಂಬ ವಿಷಯದ ಅಡಿಯಲ್ಲಿ ಆಯೋಜಿಸಲಾಗಿದೆ. </p><p>ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಹಲವು ಅಡೆತಡೆಗಳು ಎದುರಾಗುತ್ತಿರುವ ಈ ಸಂದರ್ಭದಲ್ಲಿ, ಟಿಡಿಪಿಯ ಈ ನಡೆ ಭಾರತೀಯ ರಾಜಕೀಯದಲ್ಲಿ ಮಹಿಳಾ ನೇತೃತ್ವದ ನಾಯಕತ್ವ ಮತ್ತು ಲಿಂಗ ಸಮಾನತೆಗೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.</p><p>‘ಭಾರತೀಯ ರಾಜಕೀಯದ ಮುಂದಿನ ಯುಗ ಮಹಿಳೆಯರಿಗೆ ಸೇರಿದ್ದು ಎಂದು ನಾನು ದೃಢವಾಗಿ ನಂಬುತ್ತೇನೆ. ಎನ್ಡಿಎ ಸರ್ಕಾರ ಈಗಾಗಲೇ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಮಹಿಳೆಯರು ಕೇವಲ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಿ ಉಳಿಯದೆ, ಆಡಳಿತ ಮತ್ತು ರಾಜಕೀಯದಲ್ಲಿ ಸಕ್ರಿಯ ನಿರ್ಧಾರ ಕೈಗೊಳ್ಳುವ ನಾಯಕರಾಗಬೇಕು’ ಎಂದು ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ನಾರಾ ಲೋಕೇಶ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>