<p><strong>ಹೈದರಾಬಾದ್</strong>: ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಖಚಿತಪಡಿಸುವ ಗುರಿ ಹೊಂದಿರುವ 'ತೆಲಂಗಾಣ ನೌಕರರ ಹೊಣೆಗಾರಿಕೆ ಮತ್ತು ಪೋಷಕರ ಬೆಂಬಲ ಮೇಲ್ವಿಚಾರಣೆ ಮಸೂದೆ 2026' ಅನ್ನು ತೆಲಂಗಾಣ ವಿಧಾನಸಭೆ ಭಾನುವಾರ ಅಂಗೀಕರಿಸಿದೆ.</p><p>ದೇಶವು ಈಗಾಗಲೇ ಹಿರಿಯ ನಾಗರಿಕರಿಗಾಗಿ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ಅನ್ನು ಹೊಂದಿದೆ. ಅದನ್ನು ಮೀರಿ ಈ ಕಾಯ್ದೆ ಭದ್ರತೆ ಒದಗಿಸುತ್ತದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ.</p><p>ಹೊಸ ಮಸೂದೆಯು ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಮತ್ತು ಖಾಸಗಿ ಉದ್ಯೋಗಿಗೂ ಅನ್ವಯಿಸುತ್ತದೆ ಎಂದಿದ್ದಾರೆ.</p><p>ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಮತ್ತು ಖಾಸಗಿ ಉದ್ಯೋಗಿಗಳು ತಮ್ಮ ವೃದ್ಧ ಪೋಷಕರನ್ನು ನೋಡಿಕೊಳ್ಳಬೇಕೆಂದು ಮಸೂದೆಯು ಹೇಳುತ್ತದೆ. ಮಸೂದೆಯನ್ನು ಪಾಲಿಸುವಲ್ಲಿ ವಿಫಲವಾದರೆ ಅವರ ವೇತನದ ಶೇ 15 ರಷ್ಟು ಅಥವಾ ₹10,000 ಅನ್ನು ಕಡಿತಗೊಳಿಸಿ ಪೋಷಕರಿಗೆ ಪಾವತಿಸಲಾಗುತ್ತದೆ.</p><p>ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರೆಡ್ಡಿ, ಉದ್ಯಮಿ ವಿಜಯಪತ್ ಸಿಂಘಾನಿಯಾ ಅವರ ಪ್ರಕರಣವನ್ನು ಉಲ್ಲೇಖಿಸಿದರು. ಸಿಂಘಾನಿಯಾ ತಮ್ಮ ಎಲ್ಲ ಆಸ್ತಿಯನ್ನು ಮಗನಿಗೆ ನೀಡಿದ್ದರು. ಬಳಿಕ, ಮಗನೇ ತಂದೆಯನ್ನು ಹೊರಹಾಕಿದ್ದ ಎಂದು ಹೇಳಿದರು.</p><p>‘ರಾಜ್ಯ ಸರ್ಕಾರವು ಸಾಮಾಜಿಕ ಜವಾಬ್ದಾರಿಯಾಗಿ ಈ ಮಸೂದೆಯನ್ನು ತಂದಿದೆ. ಇದು ಬೇರೆ ಯಾವುದೋ ಮಸೂದೆಯಂತಲ್ಲ. ಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುತ್ತದೆ. ಯಾರಾದರೂ ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ ಕಾನೂನಿನ ವ್ಯಾಪ್ತಿಯಲ್ಲಿ ಅವರಿಗೆ ನ್ಯಾಯ ಒದಗಿಸುತ್ತದೆ’ ಎಂದಿದ್ದಾರೆ.</p><p>ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳನ್ನು ತಿದ್ದುವುದು ಸಮಾಜದ ಜವಾಬ್ದಾರಿಯಾಗಿದೆ. ಅಂತಹ ಕಾನೂನನ್ನು ರಾಜ್ಯ ಸರ್ಕಾರ ಮಾಡಬೇಕಾಗಿ ಬಂದಿದ್ದು ದುರಾದೃಷ್ಟಕರ. ಪೋಷಕರನ್ನು ನಿರ್ಲಕ್ಷಿಸುವವರಿಗೆ ಸಾಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂದು ರೆಡ್ಡಿ ಹೇಳಿದ್ದಾರೆ.</p><p>ಪೋಷಕರಿಲ್ಲದೇ ಜೀವನವೇ ಇಲ್ಲ. ಅವರನ್ನು ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಚಿವೆ ಕೊಂಡ ಸುರೇಖಾ ಹೇಳಿದ್ದಾರೆ. </p><p>‘ಮಕ್ಕಳಿಗೆ ಜವಾಬ್ದಾರಿಗಳನ್ನು ನೆನಪಿಸುವ ಅವಶ್ಯಕತೆ ಇದೆ. ಸಮಾಜವು ವೃದ್ಧರ ಬಗ್ಗೆ ತನ್ನ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಇಂತಹ ಮಸೂದೆ ತಂದಿದ್ದಕ್ಕಾಗಿ ಮುಖ್ಯಮಂತ್ರಿಯವರನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ’ಎಂದೂ ಅವರು ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಖಚಿತಪಡಿಸುವ ಗುರಿ ಹೊಂದಿರುವ 'ತೆಲಂಗಾಣ ನೌಕರರ ಹೊಣೆಗಾರಿಕೆ ಮತ್ತು ಪೋಷಕರ ಬೆಂಬಲ ಮೇಲ್ವಿಚಾರಣೆ ಮಸೂದೆ 2026' ಅನ್ನು ತೆಲಂಗಾಣ ವಿಧಾನಸಭೆ ಭಾನುವಾರ ಅಂಗೀಕರಿಸಿದೆ.</p><p>ದೇಶವು ಈಗಾಗಲೇ ಹಿರಿಯ ನಾಗರಿಕರಿಗಾಗಿ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ಅನ್ನು ಹೊಂದಿದೆ. ಅದನ್ನು ಮೀರಿ ಈ ಕಾಯ್ದೆ ಭದ್ರತೆ ಒದಗಿಸುತ್ತದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ.</p><p>ಹೊಸ ಮಸೂದೆಯು ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಮತ್ತು ಖಾಸಗಿ ಉದ್ಯೋಗಿಗೂ ಅನ್ವಯಿಸುತ್ತದೆ ಎಂದಿದ್ದಾರೆ.</p><p>ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಮತ್ತು ಖಾಸಗಿ ಉದ್ಯೋಗಿಗಳು ತಮ್ಮ ವೃದ್ಧ ಪೋಷಕರನ್ನು ನೋಡಿಕೊಳ್ಳಬೇಕೆಂದು ಮಸೂದೆಯು ಹೇಳುತ್ತದೆ. ಮಸೂದೆಯನ್ನು ಪಾಲಿಸುವಲ್ಲಿ ವಿಫಲವಾದರೆ ಅವರ ವೇತನದ ಶೇ 15 ರಷ್ಟು ಅಥವಾ ₹10,000 ಅನ್ನು ಕಡಿತಗೊಳಿಸಿ ಪೋಷಕರಿಗೆ ಪಾವತಿಸಲಾಗುತ್ತದೆ.</p><p>ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರೆಡ್ಡಿ, ಉದ್ಯಮಿ ವಿಜಯಪತ್ ಸಿಂಘಾನಿಯಾ ಅವರ ಪ್ರಕರಣವನ್ನು ಉಲ್ಲೇಖಿಸಿದರು. ಸಿಂಘಾನಿಯಾ ತಮ್ಮ ಎಲ್ಲ ಆಸ್ತಿಯನ್ನು ಮಗನಿಗೆ ನೀಡಿದ್ದರು. ಬಳಿಕ, ಮಗನೇ ತಂದೆಯನ್ನು ಹೊರಹಾಕಿದ್ದ ಎಂದು ಹೇಳಿದರು.</p><p>‘ರಾಜ್ಯ ಸರ್ಕಾರವು ಸಾಮಾಜಿಕ ಜವಾಬ್ದಾರಿಯಾಗಿ ಈ ಮಸೂದೆಯನ್ನು ತಂದಿದೆ. ಇದು ಬೇರೆ ಯಾವುದೋ ಮಸೂದೆಯಂತಲ್ಲ. ಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುತ್ತದೆ. ಯಾರಾದರೂ ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ ಕಾನೂನಿನ ವ್ಯಾಪ್ತಿಯಲ್ಲಿ ಅವರಿಗೆ ನ್ಯಾಯ ಒದಗಿಸುತ್ತದೆ’ ಎಂದಿದ್ದಾರೆ.</p><p>ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳನ್ನು ತಿದ್ದುವುದು ಸಮಾಜದ ಜವಾಬ್ದಾರಿಯಾಗಿದೆ. ಅಂತಹ ಕಾನೂನನ್ನು ರಾಜ್ಯ ಸರ್ಕಾರ ಮಾಡಬೇಕಾಗಿ ಬಂದಿದ್ದು ದುರಾದೃಷ್ಟಕರ. ಪೋಷಕರನ್ನು ನಿರ್ಲಕ್ಷಿಸುವವರಿಗೆ ಸಾಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂದು ರೆಡ್ಡಿ ಹೇಳಿದ್ದಾರೆ.</p><p>ಪೋಷಕರಿಲ್ಲದೇ ಜೀವನವೇ ಇಲ್ಲ. ಅವರನ್ನು ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಚಿವೆ ಕೊಂಡ ಸುರೇಖಾ ಹೇಳಿದ್ದಾರೆ. </p><p>‘ಮಕ್ಕಳಿಗೆ ಜವಾಬ್ದಾರಿಗಳನ್ನು ನೆನಪಿಸುವ ಅವಶ್ಯಕತೆ ಇದೆ. ಸಮಾಜವು ವೃದ್ಧರ ಬಗ್ಗೆ ತನ್ನ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಇಂತಹ ಮಸೂದೆ ತಂದಿದ್ದಕ್ಕಾಗಿ ಮುಖ್ಯಮಂತ್ರಿಯವರನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ’ಎಂದೂ ಅವರು ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>