<p><strong>ಲಖನೌ</strong>: ರೈಲ್ವೆ ಮೂಲಸೌಕರ್ಯ ಸೇರಿದಂತೆ ದೇಶದ ಪ್ರಮುಖ ತಾಣಗಳ ಮೇಲೆ ದಾಳಿಗೆ ಯೋಜನೆ ರೂಪಿಸಿದ ಆರೋಪದಲ್ಲಿ ಶಂಕಿತ ಭಯೋತ್ಪಾದನಾ ಜಾಲದ ನಾಲ್ವರನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಶುಕ್ರವಾರ ಬಂಧಿಸಿದೆ.</p>.<p>ಪಾಕಿಸ್ತಾನದ ಹ್ಯಾಂಡ್ಲರ್ಗಳ ಸೂಚನೆಯ ಮೇರೆಗೆ ಕಾರ್ಯಾಚರಿಸುತ್ತಿರುವ ಜಾಲದ ಸದಸ್ಯರನ್ನು ಗುಪ್ತಚರ ಮಾಹಿತಿಯ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p class="bodytext">ಮೀರಠ್ನ ನಿವಾಸಿಗಳಾದ ಸಾಕಿಬ್ ಅಲಿಯಾಸ್ ‘ಡೆವಿಲ್’ (25) ಹಾಗೂ ಅರ್ಬಾಬ್ (20), ಗೌತಮ ಬುದ್ಧ ನಗರದ ನಿವಾಸಿಗಳಾದ ವಿಕಾಸ್ ಗೆಹಲೋತ್ ಅಲಿಯಾಸ್ ರೌನಕ್ (27) ಮತ್ತು ಲೋಕೇಶ್ ಅಲಿಯಾಸ್ ಪಪ್ಲಾ ಪಂಡಿತ್ (19) ಬಂಧಿತರು.</p>.<p class="bodytext">ಸಾಕಿಬ್ ಈ ಜಾಲದ ಪ್ರಮುಖ ಸೂತ್ರಧಾರನಾಗಿದ್ದು, ಟೆಲಿಗ್ರಾಮ್, ಸಿಗ್ನಲ್ ಮತ್ತು ಇನ್ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್ಗಳ ಜತೆ ಸಂಪರ್ಕದಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p class="bodytext">ಆರೋಪಿಗಳು ತಮ್ಮ ಸಹಚರರೊಂದಿಗೆ ಗಾಜಿಯಾಬಾದ್, ಅಲೀಗಢ ಮತ್ತು ಲಖನೌ ಸೇರಿದಂತೆ ವಿವಿಧ ನಗರಗಳಿಗೆ ಭೇಟಿ ನೀಡಿದ್ದರು ಮತ್ತು ದಾಳಿಯ ಸಂಭಾವ್ಯ ಗುರಿಗಳ ವಿಡಿಯೊಗಳು ಹಾಗೂ ಗೂಗಲ್ ಲೊಕೇಷನ್ ವಿವರಗಳನ್ನು ತಮ್ಮ ಹ್ಯಾಂಡ್ಲರ್ಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ರೈಲ್ವೆ ಮೂಲಸೌಕರ್ಯ ಸೇರಿದಂತೆ ದೇಶದ ಪ್ರಮುಖ ತಾಣಗಳ ಮೇಲೆ ದಾಳಿಗೆ ಯೋಜನೆ ರೂಪಿಸಿದ ಆರೋಪದಲ್ಲಿ ಶಂಕಿತ ಭಯೋತ್ಪಾದನಾ ಜಾಲದ ನಾಲ್ವರನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಶುಕ್ರವಾರ ಬಂಧಿಸಿದೆ.</p>.<p>ಪಾಕಿಸ್ತಾನದ ಹ್ಯಾಂಡ್ಲರ್ಗಳ ಸೂಚನೆಯ ಮೇರೆಗೆ ಕಾರ್ಯಾಚರಿಸುತ್ತಿರುವ ಜಾಲದ ಸದಸ್ಯರನ್ನು ಗುಪ್ತಚರ ಮಾಹಿತಿಯ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p class="bodytext">ಮೀರಠ್ನ ನಿವಾಸಿಗಳಾದ ಸಾಕಿಬ್ ಅಲಿಯಾಸ್ ‘ಡೆವಿಲ್’ (25) ಹಾಗೂ ಅರ್ಬಾಬ್ (20), ಗೌತಮ ಬುದ್ಧ ನಗರದ ನಿವಾಸಿಗಳಾದ ವಿಕಾಸ್ ಗೆಹಲೋತ್ ಅಲಿಯಾಸ್ ರೌನಕ್ (27) ಮತ್ತು ಲೋಕೇಶ್ ಅಲಿಯಾಸ್ ಪಪ್ಲಾ ಪಂಡಿತ್ (19) ಬಂಧಿತರು.</p>.<p class="bodytext">ಸಾಕಿಬ್ ಈ ಜಾಲದ ಪ್ರಮುಖ ಸೂತ್ರಧಾರನಾಗಿದ್ದು, ಟೆಲಿಗ್ರಾಮ್, ಸಿಗ್ನಲ್ ಮತ್ತು ಇನ್ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್ಗಳ ಜತೆ ಸಂಪರ್ಕದಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p class="bodytext">ಆರೋಪಿಗಳು ತಮ್ಮ ಸಹಚರರೊಂದಿಗೆ ಗಾಜಿಯಾಬಾದ್, ಅಲೀಗಢ ಮತ್ತು ಲಖನೌ ಸೇರಿದಂತೆ ವಿವಿಧ ನಗರಗಳಿಗೆ ಭೇಟಿ ನೀಡಿದ್ದರು ಮತ್ತು ದಾಳಿಯ ಸಂಭಾವ್ಯ ಗುರಿಗಳ ವಿಡಿಯೊಗಳು ಹಾಗೂ ಗೂಗಲ್ ಲೊಕೇಷನ್ ವಿವರಗಳನ್ನು ತಮ್ಮ ಹ್ಯಾಂಡ್ಲರ್ಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>