<p><strong>ನವದೆಹಲಿ</strong>: ‘ಮೋದಿ ‘ವಿಶ್ವಗುರು’ ಅಲ್ಲ ಎಂದು ಮುರಳಿ ಮನೋಹರ್ ಜೋಶಿ ಹೇಳಿದರೆ, ಮೋದಿ ಒಬ್ಬ ಅದ್ಭುತ ‘ಇವೆಂಟ್ ಮ್ಯಾನೇಜರ್’ ಎಂದು ಎಲ್.ಕೆ. ಅಡ್ವಾಣಿ ಅವರು ಹೇಳಿದ್ದರು’ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ.</p><p>ಮುರಳಿ ಮನೋಹರ್ ಜೋಶಿ ಅವರ ‘ಭಾರತ ವಿಶ್ವಗುರು ಅಲ್ಲ’ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಮೋದಿ ಅವರ ಕುರಿತಂತೆ ಅಡ್ವಾಣಿ, ವಾಜಪೇಯಿ ಅವರ ಹಳೆಯ ಹೇಳಿಕೆಗಳನ್ನು ಸ್ಮರಿಸಿದ್ದಾರೆ.</p><p>‘2026ರ ಏಪ್ರಿಲ್ 20ರಂದು ಡಾ. ಮುರಳಿ ಮನೋಹರ್ ಜೋಶಿ ಅವರು ಮೋದಿ 'ವಿಶ್ವಗುರು' ಎಂಬ ಪ್ರತಿಪಾದನೆಗಳನ್ನು ತಳ್ಳಿಹಾಕಿದ್ದಾರೆ. ಏಪ್ರಿಲ್ 5, 2014ರಂದು ಎಲ್.ಕೆ. ಅಡ್ವಾಣಿ ಅವರು 'ನರೇಂದ್ರ ಮೋದಿ ನನ್ನ ಶಿಷ್ಯನಲ್ಲ, ಬದಲಾಗಿ ಅವರು ಒಬ್ಬ ಅದ್ಭುತ ಇವೆಂಟ್ ಮ್ಯಾನೇಜರ್' ಎಂದಿದ್ದರು. ಮಾರ್ಚ್ 10, 2002ರಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರಿಗೆ ‘ರಾಜಧರ್ಮ’ ಪಾಲಿಸುವಂತೆ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು’ ಎಂದು ಜೈರಾಮ್ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.</p><p>‘ಬಿಜೆಪಿಯ ಹಿರಿಯ ನಾಯಕರೆಲ್ಲ ಅವರ(ಮೋದಿ) ಬಗ್ಗೆ ಹೀಗೆಯೇ ಯೋಚಿಸುತ್ತಾರೆ’ ಎಂದಿದ್ದಾರೆ.</p><p>ಸೋಮವಾರ ದೆಹಲಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಂಗಸಂಸ್ಥೆಯಾದ ಸಂಸ್ಕೃತ ಭಾರತೀಯ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುರಳಿ ಮನೋಹರ್ ಜೋಶಿ ಅವರು, ಭಾರತವು ಈಗ 'ವಿಶ್ವಗುರು' ಆಗಿ ಉಳಿದಿಲ್ಲ. ಆ ಪದವನ್ನು ಬಳಸಬಾರದು ಎಂದಿದ್ದರು.</p><p>‘ವಿಶ್ವಗುರು ಎಂಬ ಪದ ಬಳಸುವುದರಿಂದ ನಾವು ದೂರ ಇರಬೇಕು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ಸದ್ಯ ನಾವು ವಿಶ್ವಗುರು ಅಲ್ಲ. ನಾವು ವಿಶ್ವಗುರು ಆಗಲು ಪ್ರಯತ್ನಿಸಬೇಕು’ ಎಂದು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಮೋದಿ ‘ವಿಶ್ವಗುರು’ ಅಲ್ಲ ಎಂದು ಮುರಳಿ ಮನೋಹರ್ ಜೋಶಿ ಹೇಳಿದರೆ, ಮೋದಿ ಒಬ್ಬ ಅದ್ಭುತ ‘ಇವೆಂಟ್ ಮ್ಯಾನೇಜರ್’ ಎಂದು ಎಲ್.ಕೆ. ಅಡ್ವಾಣಿ ಅವರು ಹೇಳಿದ್ದರು’ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ.</p><p>ಮುರಳಿ ಮನೋಹರ್ ಜೋಶಿ ಅವರ ‘ಭಾರತ ವಿಶ್ವಗುರು ಅಲ್ಲ’ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಮೋದಿ ಅವರ ಕುರಿತಂತೆ ಅಡ್ವಾಣಿ, ವಾಜಪೇಯಿ ಅವರ ಹಳೆಯ ಹೇಳಿಕೆಗಳನ್ನು ಸ್ಮರಿಸಿದ್ದಾರೆ.</p><p>‘2026ರ ಏಪ್ರಿಲ್ 20ರಂದು ಡಾ. ಮುರಳಿ ಮನೋಹರ್ ಜೋಶಿ ಅವರು ಮೋದಿ 'ವಿಶ್ವಗುರು' ಎಂಬ ಪ್ರತಿಪಾದನೆಗಳನ್ನು ತಳ್ಳಿಹಾಕಿದ್ದಾರೆ. ಏಪ್ರಿಲ್ 5, 2014ರಂದು ಎಲ್.ಕೆ. ಅಡ್ವಾಣಿ ಅವರು 'ನರೇಂದ್ರ ಮೋದಿ ನನ್ನ ಶಿಷ್ಯನಲ್ಲ, ಬದಲಾಗಿ ಅವರು ಒಬ್ಬ ಅದ್ಭುತ ಇವೆಂಟ್ ಮ್ಯಾನೇಜರ್' ಎಂದಿದ್ದರು. ಮಾರ್ಚ್ 10, 2002ರಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರಿಗೆ ‘ರಾಜಧರ್ಮ’ ಪಾಲಿಸುವಂತೆ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು’ ಎಂದು ಜೈರಾಮ್ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.</p><p>‘ಬಿಜೆಪಿಯ ಹಿರಿಯ ನಾಯಕರೆಲ್ಲ ಅವರ(ಮೋದಿ) ಬಗ್ಗೆ ಹೀಗೆಯೇ ಯೋಚಿಸುತ್ತಾರೆ’ ಎಂದಿದ್ದಾರೆ.</p><p>ಸೋಮವಾರ ದೆಹಲಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಂಗಸಂಸ್ಥೆಯಾದ ಸಂಸ್ಕೃತ ಭಾರತೀಯ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುರಳಿ ಮನೋಹರ್ ಜೋಶಿ ಅವರು, ಭಾರತವು ಈಗ 'ವಿಶ್ವಗುರು' ಆಗಿ ಉಳಿದಿಲ್ಲ. ಆ ಪದವನ್ನು ಬಳಸಬಾರದು ಎಂದಿದ್ದರು.</p><p>‘ವಿಶ್ವಗುರು ಎಂಬ ಪದ ಬಳಸುವುದರಿಂದ ನಾವು ದೂರ ಇರಬೇಕು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ಸದ್ಯ ನಾವು ವಿಶ್ವಗುರು ಅಲ್ಲ. ನಾವು ವಿಶ್ವಗುರು ಆಗಲು ಪ್ರಯತ್ನಿಸಬೇಕು’ ಎಂದು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>