<p><strong>ಮಲಪ್ಪುರಂ:</strong> ಹೋಟೆಲ್ವೊಂದರ ಪ್ರಚಾರಕ್ಕಾಗಿ ಮಾಂಸಾಹಾರಿ ಖಾದ್ಯದ ಜೊತೆಗೆ ಶ್ರೀಕೃಷ್ಣನ ಚಿತ್ರವನ್ನೊಳಗೊಂಡ ‘ವಿಷು’ ಹಬ್ಬದ ಪೋಸ್ಟರ್ ಹಂಚಿಕೊಂಡ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.</p>.ಜಾಗತಿಕ ಗಮನ ಸೆಳೆದ ಕೇರಳ, ಅಸ್ಸಾಂ, ಪುದುಚೆರಿ ಚುನಾವಣೆ: ಚುನಾವಣಾ ಆಯೋಗ.<p>ವಲಂಬೂರು ಮೂಲದ ಹೋಟೆಲ್ ಒಂದು ‘ಕುಝಿ ಮಂದಿ’ ಎನ್ನುವ ಅರೇಬಿಯನ್ ಮಾಂಸಾಹಾರಿ ಖಾದ್ಯದ ಜೊತೆಗೆ ಶ್ರೀಕೃಷ್ಣನ ಚಿತ್ರವನ್ನು ಪ್ರಕಟಿಸಿತ್ತು.</p><p>ಶನಿವಾರ ವಿಷಯ ಗೊತ್ತಾಗಿದ್ದು, ಕೂಡಲೇ ‘ಯಮಾಮ ಶವಾಯ’ ಹೋಟೆಲ್ನ ಮಾಲೀಕರು ಮತ್ತು ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p><p>ಅವರನ್ನು ಮಂಕಡ ಪೊಲೀಸ್ ಠಾಣೆಗೆ ಕರೆಸಿ, ಬಂಧಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ಕಾಸರಗೋಡಿನಲ್ಲಿ ಕನ್ನಡ ಬಳಕೆ: ಪರಿಶೀಲನೆ ನಡೆಸಿ ಎಂದ ಕೇರಳ ಹೈಕೋರ್ಟ್.<p>ಬಂಧಿತರನ್ನು ಹೋಟೆಲ್ ಮಾಲೀಕರಾದ ಮುಸ್ತಫಾ ಕುಂದುವಾಯಿಲ್ ಮತ್ತು ಶಾಹುಲ್ ಹಮೀದ್ ಹಾಗೂ ಸಾಮಾಜಿಕ ಜಾಲತಾಣ ಖಾತೆ ನಿರ್ವಹಿಸುತ್ತಿದ್ದ ಮುಹಮ್ಮದ್ ಶಾಹಿನ್ ಎಂದು ಗುರುತಿಸಲಾಗಿದೆ.</p><p>ಏಪ್ರಿಲ್ 14 ರಂದು ಹಂಚಿಕೊಳ್ಳಲಾದ ಈ ವಿವಾದಾತ್ಮಕ ಪೋಸ್ಟರ್ನಲ್ಲಿ, ಶ್ರೀಕೃಷ್ಣನ ಚಿತ್ರದೊಂದಿಗೆ 'ಕುಝಿ ಮಂದಿ' ಖಾದ್ಯದ ಚಿತ್ರವಿತ್ತು. ಇದಲ್ಲೆ ಆಕ್ಷೇಪ ವ್ಯಕ್ತವಾಗಿದ್ದು, ಏಪ್ರಿಲ್ 17 ರಂದು ಪೋಸ್ಟರ್ ಅನ್ನು ಅಳಿಸಿ ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ದಂಗೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಅಡಿಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.</p>.ಪ್ರಧಾನಿ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಅಹಂಕಾರಿಗಳು: ರಾಹುಲ್ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲಪ್ಪುರಂ:</strong> ಹೋಟೆಲ್ವೊಂದರ ಪ್ರಚಾರಕ್ಕಾಗಿ ಮಾಂಸಾಹಾರಿ ಖಾದ್ಯದ ಜೊತೆಗೆ ಶ್ರೀಕೃಷ್ಣನ ಚಿತ್ರವನ್ನೊಳಗೊಂಡ ‘ವಿಷು’ ಹಬ್ಬದ ಪೋಸ್ಟರ್ ಹಂಚಿಕೊಂಡ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.</p>.ಜಾಗತಿಕ ಗಮನ ಸೆಳೆದ ಕೇರಳ, ಅಸ್ಸಾಂ, ಪುದುಚೆರಿ ಚುನಾವಣೆ: ಚುನಾವಣಾ ಆಯೋಗ.<p>ವಲಂಬೂರು ಮೂಲದ ಹೋಟೆಲ್ ಒಂದು ‘ಕುಝಿ ಮಂದಿ’ ಎನ್ನುವ ಅರೇಬಿಯನ್ ಮಾಂಸಾಹಾರಿ ಖಾದ್ಯದ ಜೊತೆಗೆ ಶ್ರೀಕೃಷ್ಣನ ಚಿತ್ರವನ್ನು ಪ್ರಕಟಿಸಿತ್ತು.</p><p>ಶನಿವಾರ ವಿಷಯ ಗೊತ್ತಾಗಿದ್ದು, ಕೂಡಲೇ ‘ಯಮಾಮ ಶವಾಯ’ ಹೋಟೆಲ್ನ ಮಾಲೀಕರು ಮತ್ತು ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p><p>ಅವರನ್ನು ಮಂಕಡ ಪೊಲೀಸ್ ಠಾಣೆಗೆ ಕರೆಸಿ, ಬಂಧಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ಕಾಸರಗೋಡಿನಲ್ಲಿ ಕನ್ನಡ ಬಳಕೆ: ಪರಿಶೀಲನೆ ನಡೆಸಿ ಎಂದ ಕೇರಳ ಹೈಕೋರ್ಟ್.<p>ಬಂಧಿತರನ್ನು ಹೋಟೆಲ್ ಮಾಲೀಕರಾದ ಮುಸ್ತಫಾ ಕುಂದುವಾಯಿಲ್ ಮತ್ತು ಶಾಹುಲ್ ಹಮೀದ್ ಹಾಗೂ ಸಾಮಾಜಿಕ ಜಾಲತಾಣ ಖಾತೆ ನಿರ್ವಹಿಸುತ್ತಿದ್ದ ಮುಹಮ್ಮದ್ ಶಾಹಿನ್ ಎಂದು ಗುರುತಿಸಲಾಗಿದೆ.</p><p>ಏಪ್ರಿಲ್ 14 ರಂದು ಹಂಚಿಕೊಳ್ಳಲಾದ ಈ ವಿವಾದಾತ್ಮಕ ಪೋಸ್ಟರ್ನಲ್ಲಿ, ಶ್ರೀಕೃಷ್ಣನ ಚಿತ್ರದೊಂದಿಗೆ 'ಕುಝಿ ಮಂದಿ' ಖಾದ್ಯದ ಚಿತ್ರವಿತ್ತು. ಇದಲ್ಲೆ ಆಕ್ಷೇಪ ವ್ಯಕ್ತವಾಗಿದ್ದು, ಏಪ್ರಿಲ್ 17 ರಂದು ಪೋಸ್ಟರ್ ಅನ್ನು ಅಳಿಸಿ ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ದಂಗೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಅಡಿಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.</p>.ಪ್ರಧಾನಿ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಅಹಂಕಾರಿಗಳು: ರಾಹುಲ್ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>