<p><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇದೆ. ಈ ನಡುವೆ ಚುನಾವಣಾ ಆಯೋಗದಿಂದ ನಿಯೋಜನೆಗೊಂಡಿರುವ ಉತ್ತರ ಪ್ರದೇಶ ಕೇಡರ್ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ವಾಗ್ದಾಳಿ ನಡೆಸಿದ್ದಾರೆ.</p><p>ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಅವರ ಬೆಂಬಲಿಗರು ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸುತ್ತಿದ್ದಾರೆ. ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ದೂರು ಚುನಾವಣಾ ಆಯೋಗಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ, ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿರುವ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಸೋಮವಾರ ತಡರಾತ್ರಿ ಅಭ್ಯರ್ಥಿಯ ನಿವಾಸ ಹಾಗೂ ಕಚೇರಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದರು.</p>.ಮಹಾರಾಷ್ಟ್ರದಲ್ಲಿ ಪಹಲ್ಗಾಮ್ ಮಾದರಿ ದಾಳಿ: ಧರ್ಮ ಕೇಳಿ ಭದ್ರತಾ ಸಿಬ್ಬಂದಿಗೆ ಇರಿತ.ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಫಿಕ್ಸ್–ಇಕ್ಬಾಲ್ ಹುಸೇನ್. <p><strong>ಸಿನಿಮಾ ಶೈಲಿಯಲ್ಲಿ ಸವಾಲು</strong></p><p>ಉತ್ತರ ಪ್ರದೇಶದಲ್ಲಿ 'ಸಿಂಗಂ' ಎಂದೇ ಖ್ಯಾತರಾಗಿರುವ ಅಜಯ್ ಪಾಲ್ ಶರ್ಮಾ ಅವರ ಭೇಟಿಗೆ ಆಕ್ರೋಶ ವ್ಯಕ್ತಪಡಿಸಿದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್, ಸಿನಿಮಾ ಶೈಲಿಯಲ್ಲಿಯೇ ತಿರುಗೇಟು ನೀಡಿದ್ದಾರೆ.</p><p>'ಇದು ಬಂಗಾಳ. ಅವರು ಒಂದು ವೇಳೆ 'ಸಿಂಗಂ' ಆಗಿದ್ದರೆ, ನಾನು 'ಪುಷ್ಪ'. ಉತ್ತರ ಪ್ರದೇಶದಿಂದ ಬಂದಿರುವ ಬಿಜೆಪಿ ನೇಮಿತ ಪೊಲೀಸ್ ಅಧಿಕಾರಿಗಳ ಯಾವುದೇ ಬೆದರಿಕೆ ಇಲ್ಲಿ ನಡೆಯುವುದಿಲ್ಲ' ಎಂದು ಅವರು ಗುಡುಗಿದ್ದಾರೆ.</p><p><strong>ಟಿಎಂಸಿ ನಾಯಕರ ಆಕ್ರೋಶ</strong></p><p>ಈ ಬೆಳವಣಿಗೆಯನ್ನು ಪಶ್ಚಿಮ ಬಂಗಾಳದ ಸಚಿವರು ಮತ್ತು ಹಿರಿಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.</p><p>ಮಾಧ್ಯಮಗಳು ಇವರನ್ನು 'ಎನ್ಕೌಂಟರ್ ಸ್ಪೆಷಲಿಸ್ಟ್' ಎನ್ನುತ್ತವೆ. ರಾತ್ರಿ ವೇಳೆ ಮನೆಗೆ ನುಗ್ಗಿ ಬೆದರಿಕೆ ಹಾಕಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಶಾಂತಿ ಕದಡಲು ಇವರನ್ನು ಕರೆತರಲಾಗಿದೆಯೇ? ಎಂದು ಚಂದ್ರೀಮಾ ಭಟ್ಟಾಚಾರ್ಯ ಪ್ರಶ್ನಿಸಿದ್ದಾರೆ.</p><p>ವೀಕ್ಷಕರು ತಟಸ್ಥವಾಗಿರಬೇಕು. ಸಂವಿಧಾನದ ಮಿತಿ ಮೀರಿ ಒಂದು ಪಕ್ಷವನ್ನು ಗುರಿಪಡಿಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಅರೂಪ್ ಬಿಸ್ವಾಸ್ ಎಚ್ಚರಿಸಿದ್ದಾರೆ.</p>.8 ಸಾವಿರ ಕಾನ್ಸ್ಟೆಬಲ್ ನೇಮಕಕ್ಕೆ ವಾರದಲ್ಲಿ ಅಧಿಸೂಚನೆ–ಸಚಿವ ಡಾ.ಜಿ.ಪರಮೇಶ್ವರ.ನನಗೂ ಸಚಿವ ಸ್ಥಾನ ಬೇಕು–ಶಾಸಕ ರಾಘವೇಂದ್ರ ಹಿಟ್ನಾಳ. <p>ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಅಜಯ್ ಪಾಲ್ ಶರ್ಮಾ ಪಬ್ವೊಂದರಲ್ಲಿ ನೃತ್ಯ ಮಾಡುತ್ತಿರುವ ಹಳೆಯ ವಿಡಿಯೋವನ್ನು ಹಂಚಿಕೊಂಡು, ನಿಮ್ಮ ಪೊಲೀಸ್ ಕೌಶಲಗಳು ನಿಮ್ಮ ನೃತ್ಯಕ್ಕಿಂತ ಉತ್ತಮವಾಗಿರಲಿ ಎಂದು ಆಶಿಸುವುದಾಗಿ ವ್ಯಂಗ್ಯವಾಡಿದ್ದಾರೆ.</p><p>ಮತದಾನದ ವೇಳೆ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಜಯ್ ಪಾಲ್ ಶರ್ಮಾ ಸೇರಿದಂತೆ 95 ವೀಕ್ಷಕರನ್ನು ಆಯೋಗ ನಿಯೋಜಿಸಿದೆ. ಮತದಾರರಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.</p>.ದೆಹಲಿಯ ಜಾಮಿಯಾ ವಿವಿಯಲ್ಲಿ RSS ಕಾರ್ಯಕ್ರಮ: ವಿದ್ಯಾರ್ಥಿಗಳ ಪ್ರತಿಭಟನೆ.ಮಚ್ಚು ಬೇಡ… ಮಾತೇ ಸಾಕು; ಮಚ್ ಲಕ್ಷ್ಮೀ ರೀಷ್ಮಾ ನಾಣಯ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇದೆ. ಈ ನಡುವೆ ಚುನಾವಣಾ ಆಯೋಗದಿಂದ ನಿಯೋಜನೆಗೊಂಡಿರುವ ಉತ್ತರ ಪ್ರದೇಶ ಕೇಡರ್ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ವಾಗ್ದಾಳಿ ನಡೆಸಿದ್ದಾರೆ.</p><p>ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಅವರ ಬೆಂಬಲಿಗರು ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸುತ್ತಿದ್ದಾರೆ. ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ದೂರು ಚುನಾವಣಾ ಆಯೋಗಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ, ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿರುವ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಸೋಮವಾರ ತಡರಾತ್ರಿ ಅಭ್ಯರ್ಥಿಯ ನಿವಾಸ ಹಾಗೂ ಕಚೇರಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದರು.</p>.ಮಹಾರಾಷ್ಟ್ರದಲ್ಲಿ ಪಹಲ್ಗಾಮ್ ಮಾದರಿ ದಾಳಿ: ಧರ್ಮ ಕೇಳಿ ಭದ್ರತಾ ಸಿಬ್ಬಂದಿಗೆ ಇರಿತ.ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಫಿಕ್ಸ್–ಇಕ್ಬಾಲ್ ಹುಸೇನ್. <p><strong>ಸಿನಿಮಾ ಶೈಲಿಯಲ್ಲಿ ಸವಾಲು</strong></p><p>ಉತ್ತರ ಪ್ರದೇಶದಲ್ಲಿ 'ಸಿಂಗಂ' ಎಂದೇ ಖ್ಯಾತರಾಗಿರುವ ಅಜಯ್ ಪಾಲ್ ಶರ್ಮಾ ಅವರ ಭೇಟಿಗೆ ಆಕ್ರೋಶ ವ್ಯಕ್ತಪಡಿಸಿದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್, ಸಿನಿಮಾ ಶೈಲಿಯಲ್ಲಿಯೇ ತಿರುಗೇಟು ನೀಡಿದ್ದಾರೆ.</p><p>'ಇದು ಬಂಗಾಳ. ಅವರು ಒಂದು ವೇಳೆ 'ಸಿಂಗಂ' ಆಗಿದ್ದರೆ, ನಾನು 'ಪುಷ್ಪ'. ಉತ್ತರ ಪ್ರದೇಶದಿಂದ ಬಂದಿರುವ ಬಿಜೆಪಿ ನೇಮಿತ ಪೊಲೀಸ್ ಅಧಿಕಾರಿಗಳ ಯಾವುದೇ ಬೆದರಿಕೆ ಇಲ್ಲಿ ನಡೆಯುವುದಿಲ್ಲ' ಎಂದು ಅವರು ಗುಡುಗಿದ್ದಾರೆ.</p><p><strong>ಟಿಎಂಸಿ ನಾಯಕರ ಆಕ್ರೋಶ</strong></p><p>ಈ ಬೆಳವಣಿಗೆಯನ್ನು ಪಶ್ಚಿಮ ಬಂಗಾಳದ ಸಚಿವರು ಮತ್ತು ಹಿರಿಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.</p><p>ಮಾಧ್ಯಮಗಳು ಇವರನ್ನು 'ಎನ್ಕೌಂಟರ್ ಸ್ಪೆಷಲಿಸ್ಟ್' ಎನ್ನುತ್ತವೆ. ರಾತ್ರಿ ವೇಳೆ ಮನೆಗೆ ನುಗ್ಗಿ ಬೆದರಿಕೆ ಹಾಕಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಶಾಂತಿ ಕದಡಲು ಇವರನ್ನು ಕರೆತರಲಾಗಿದೆಯೇ? ಎಂದು ಚಂದ್ರೀಮಾ ಭಟ್ಟಾಚಾರ್ಯ ಪ್ರಶ್ನಿಸಿದ್ದಾರೆ.</p><p>ವೀಕ್ಷಕರು ತಟಸ್ಥವಾಗಿರಬೇಕು. ಸಂವಿಧಾನದ ಮಿತಿ ಮೀರಿ ಒಂದು ಪಕ್ಷವನ್ನು ಗುರಿಪಡಿಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಅರೂಪ್ ಬಿಸ್ವಾಸ್ ಎಚ್ಚರಿಸಿದ್ದಾರೆ.</p>.8 ಸಾವಿರ ಕಾನ್ಸ್ಟೆಬಲ್ ನೇಮಕಕ್ಕೆ ವಾರದಲ್ಲಿ ಅಧಿಸೂಚನೆ–ಸಚಿವ ಡಾ.ಜಿ.ಪರಮೇಶ್ವರ.ನನಗೂ ಸಚಿವ ಸ್ಥಾನ ಬೇಕು–ಶಾಸಕ ರಾಘವೇಂದ್ರ ಹಿಟ್ನಾಳ. <p>ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಅಜಯ್ ಪಾಲ್ ಶರ್ಮಾ ಪಬ್ವೊಂದರಲ್ಲಿ ನೃತ್ಯ ಮಾಡುತ್ತಿರುವ ಹಳೆಯ ವಿಡಿಯೋವನ್ನು ಹಂಚಿಕೊಂಡು, ನಿಮ್ಮ ಪೊಲೀಸ್ ಕೌಶಲಗಳು ನಿಮ್ಮ ನೃತ್ಯಕ್ಕಿಂತ ಉತ್ತಮವಾಗಿರಲಿ ಎಂದು ಆಶಿಸುವುದಾಗಿ ವ್ಯಂಗ್ಯವಾಡಿದ್ದಾರೆ.</p><p>ಮತದಾನದ ವೇಳೆ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಜಯ್ ಪಾಲ್ ಶರ್ಮಾ ಸೇರಿದಂತೆ 95 ವೀಕ್ಷಕರನ್ನು ಆಯೋಗ ನಿಯೋಜಿಸಿದೆ. ಮತದಾರರಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.</p>.ದೆಹಲಿಯ ಜಾಮಿಯಾ ವಿವಿಯಲ್ಲಿ RSS ಕಾರ್ಯಕ್ರಮ: ವಿದ್ಯಾರ್ಥಿಗಳ ಪ್ರತಿಭಟನೆ.ಮಚ್ಚು ಬೇಡ… ಮಾತೇ ಸಾಕು; ಮಚ್ ಲಕ್ಷ್ಮೀ ರೀಷ್ಮಾ ನಾಣಯ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>