<p>ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು</p>.<p><strong>ಟೆಹರಾನ್:</strong> ಪಶ್ಚಿಮ ಏಷ್ಯಾದಲ್ಲಿ ಕದನ ವಿರಾಮ ಹಾಗೂ ಸಂಘರ್ಷ ಶಮನಕ್ಕೆ ಸಂಬಂಧಿಸಿದಂತೆ ಮಾತುಕತೆ ಅಂತಿಮ ಹಂತದಲ್ಲಿರುವಂತೆಯೇ ಇರಾನ್ನ ಕ್ಷಿಪಣಿ ತಾಣಗಳು ಹಾಗೂ ಹೊರ್ಮುಜ್ ಜಲಸಂಧಿಯ ಸಮೀಪದಲ್ಲಿ ಬೋಟ್ಗಳನ್ನು ಗುರಿಯಾಗಿಸಿ ಅಮೆರಿಕದ ಪಡೆಗಳು ದಾಳಿ ನಡೆಸಿವೆ.</p>.ಕದನ ವಿರಾಮದ ನಡುವೆ ಇರಾನ್ ಮೇಲೆ ದಾಳಿ ನಡೆಸಿದ ಅಮೆರಿಕ.<p><strong>ಬೆಂಗಳೂರು: </strong>ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆಯ ಕುರಿತು ಆಡಳಿತಾರೂಢ ಕಾಂಗ್ರೆಸ್ನಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ. ಈ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆ ಪಕ್ಷದ ವರಿಷ್ಠರು ದೆಹಲಿಗೆ ಕರೆಯಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲದ ಅಲೆ ಎಬ್ಬಿಸಿದೆ. </p>.ದೆಹಲಿಗೆ ಸಿಎಂ, ಡಿಸಿಎಂ: ಕುತೂಹಲ ಮೂಡಿಸಿದ ‘ಕೈ’ ಕಮಾಂಡ್ ನಡೆ.<p><strong>ಬೆಂಗಳೂರು:</strong> ತುರ್ತು ಸೇವೆ ಒದಗಿಸುವ ಸರ್ಕಾರಿ ಸ್ವಾಮ್ಯದ ದೇಶದ ಮೊದಲ ‘108 ಆರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ಸಿಸಿಸಿ)’ ಕಾರ್ಯಾರಂಭ ಮಾಡಿದೆ. 2008ರಿಂದ ಖಾಸಗಿ ಸಹಭಾಗಿತ್ವದಲ್ಲಿದ್ದ ಈ ಸೇವೆ ಇನ್ನು ಮುಂದೆ ಸರ್ಕಾರದ ಸುರ್ಪದಿಯಲ್ಲಿ ನಡೆಯಲಿದೆ.</p>.ಸರ್ಕಾರದ ಸುಪರ್ದಿಗೆ 108 ಆಂಬುಲೆನ್ಸ್ ಸೇವೆ.<p><strong>ಬೆಂಗಳೂರು:</strong> ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಗೆಳತಿ ಪವಿತ್ರಾಗೌಡ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯು ಜೂನ್ 1ರಿಂದ ಬೇರೊಂದು ಕೋರ್ಟ್ನಲ್ಲಿ ನಡೆಯಲಿದೆ.</p>.ರೇಣುಕಸ್ವಾಮಿ ಕೊಲೆ ಪ್ರಕರಣ: ಜೂನ್ 1ರಿಂದ ದರ್ಶನ್ ವಿಚಾರಣೆಯ ಕೋರ್ಟ್ ಬದಲು.<p><strong>ನವದೆಹಲಿ:</strong> ಪೆಟ್ರೋಲ್ ದರವನ್ನು ಲೀಟರಿಗೆ ₹2.61 ಹಾಗೂ ಡೀಸೆಲ್ ದರವನ್ನು ₹2.71ರಷ್ಟು ಹೆಚ್ಚು ಮಾಡಲಾಗಿದ್ದು, ಪರಿಷ್ಕೃತ ದರ ಸೋಮವಾರದಿಂದ ಜಾರಿಗೆ ಬಂದಿದೆ.</p>.ಪೆಟ್ರೋಲ್, ಡೀಸೆಲ್ ಮತ್ತೆ ತುಟ್ಟಿ: ಮೇ 15ರ ಬಳಿಕ 4 ಬಾರಿ ಏರಿಕೆ.<p><strong>ನವದೆಹಲಿ:</strong> ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್ಜಿ) ದರವನ್ನು ಪ್ರತಿ ಕೆ.ಜಿಗೆ ಮತ್ತೆ ₹2 ಹೆಚ್ಚಿಸಲಾಗಿದೆ. ಪರಿಷ್ಕೃತ ದರವು ಮಂಗಳವಾರದಿಂದಲೇ ಜಾರಿಗೆ ಬಂದಿದೆ.</p><p>ಇದರೊಂದಿಗೆ ಎರಡು ವಾರದೊಳಗೆ ನಾಲ್ಕನೇ ಸಲ ಸಿಎನ್ಜಿ ದರದಲ್ಲಿ ಹೆಚ್ಚಳವಾಗಿದ್ದು, ಕಳೆದ 11 ದಿನಗಳಲ್ಲಿ ₹6ರಷ್ಟು ಜಾಸ್ತಿ ಆದಂತಾಗಿದೆ.</p>.ಸಿಎನ್ಜಿ ದರ ಕೆ.ಜಿಗೆ ಮತ್ತೆ ₹2 ಏರಿಕೆ: ಎರಡು ವಾರದೊಳಗೆ ಸರಿಸುಮಾರು ₹6 ಹೆಚ್ಚಳ.<p><strong>ಬೆಂಗಳೂರು</strong>: ಸಾರಿಗೆ ನೌಕರರ ಸಂಘಟನೆಗಳು ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿಗಳ ನಡುವೆ ಸೋಮವಾರ ನಡೆದ ರಾಜಿ ಸಂಧಾನ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಜೂನ್ 10ಕ್ಕೆ ಮತ್ತೆ ಸಭೆ ನಡೆಯಲಿದೆ.</p>.ಸಾರಿಗೆ ನೌಕರರ ಮುಷ್ಕರ: ರಾಜಿ ಸಂಧಾನ ಜೂನ್ 10ಕ್ಕೆ ಮುಂದೂಡಿಕೆ.<p><strong>ಬೆಂಗಳೂರು:</strong> ಹಣಕಾಸು ಇಲಾಖೆಯ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ರಾಜ್ಯ ಸರ್ಕಾರವು ₹39,437 ಕೋಟಿ ವೆಚ್ಚದ ಘನತ್ಯಾಜ್ಯ ನಿರ್ವಹಣೆಯ ಎರಡು ಬೃಹತ್ ಗುತ್ತಿಗೆಗಳಿಗೆ ಅನುಮೋದನೆ ನೀಡಿದೆ.</p>.₹39,437 ಕೋಟಿ ವೆಚ್ಚದ ತ್ಯಾಜ್ಯ ಗುತ್ತಿಗೆಗೆ ರಾಜ್ಯ ಸರ್ಕಾರ ಅಸ್ತು.<p><strong>ನವದೆಹಲಿ</strong>: ಭಾರತದಲ್ಲಿ 78 ದಿನಗಳಿಗೆ ಬೇಕಾಗುವಷ್ಟು ಕಚ್ಚಾತೈಲ ದಾಸ್ತಾನು ಹೊಂದಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸಂಸದೀಯ ಸಮಿತಿಗೆ ಮಾಹಿತಿ ನೀಡಿದ್ದಾರೆ.</p>.ಇರಾನ್ ಯುದ್ಧ: ಭಾರತದಲ್ಲಿ 78 ದಿನಕ್ಕೆ ಬೇಕಾಗುವಷ್ಟು ಕಚ್ಚಾತೈಲ ದಾಸ್ತಾನು.<p><strong>ಧರ್ಮಶಾಲಾ:</strong> ಇಲ್ಲಿನ ರಮಣೀಯ ಕ್ರೀಡಾಂಗಣದ ಸುತ್ತಲಿನ ಹಿಮಾಲಯದ ಪರ್ವತಶ್ರೇಣಿಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗಲೆಲ್ಲ ಅದು ಹೊಂಬಣ್ಣದಿಂದ ಹೊಳೆಯುತ್ತದೆ. ಅಂತಹದ್ದೇ ಬಣ್ಣದ ಟ್ರೋಫಿಯನ್ನು ಎತ್ತಿಹಿಡಿಯುವ ಮೊದಲ ಹೆಜ್ಜೆಯಾಗಿ ಮಂಗಳವಾರ ಇಲ್ಲಿ ನಡೆಯಲಿರುವ ಕ್ವಾಲಿಫಯರ್–1ರಲ್ಲಿ ಗೆದ್ದು ಫೈನಲ್ ತಲುಪಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಹವಣಿಸುತ್ತಿವೆ.</p>.ಮೊದಲ ಕ್ವಾಲಿಫಯರ್: ಆರ್ಸಿಬಿಗೆ ಟೈಟನ್ಸ್ ಬೌಲಿಂಗ್ ಸವಾಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು</p>.<p><strong>ಟೆಹರಾನ್:</strong> ಪಶ್ಚಿಮ ಏಷ್ಯಾದಲ್ಲಿ ಕದನ ವಿರಾಮ ಹಾಗೂ ಸಂಘರ್ಷ ಶಮನಕ್ಕೆ ಸಂಬಂಧಿಸಿದಂತೆ ಮಾತುಕತೆ ಅಂತಿಮ ಹಂತದಲ್ಲಿರುವಂತೆಯೇ ಇರಾನ್ನ ಕ್ಷಿಪಣಿ ತಾಣಗಳು ಹಾಗೂ ಹೊರ್ಮುಜ್ ಜಲಸಂಧಿಯ ಸಮೀಪದಲ್ಲಿ ಬೋಟ್ಗಳನ್ನು ಗುರಿಯಾಗಿಸಿ ಅಮೆರಿಕದ ಪಡೆಗಳು ದಾಳಿ ನಡೆಸಿವೆ.</p>.ಕದನ ವಿರಾಮದ ನಡುವೆ ಇರಾನ್ ಮೇಲೆ ದಾಳಿ ನಡೆಸಿದ ಅಮೆರಿಕ.<p><strong>ಬೆಂಗಳೂರು: </strong>ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆಯ ಕುರಿತು ಆಡಳಿತಾರೂಢ ಕಾಂಗ್ರೆಸ್ನಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ. ಈ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆ ಪಕ್ಷದ ವರಿಷ್ಠರು ದೆಹಲಿಗೆ ಕರೆಯಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲದ ಅಲೆ ಎಬ್ಬಿಸಿದೆ. </p>.ದೆಹಲಿಗೆ ಸಿಎಂ, ಡಿಸಿಎಂ: ಕುತೂಹಲ ಮೂಡಿಸಿದ ‘ಕೈ’ ಕಮಾಂಡ್ ನಡೆ.<p><strong>ಬೆಂಗಳೂರು:</strong> ತುರ್ತು ಸೇವೆ ಒದಗಿಸುವ ಸರ್ಕಾರಿ ಸ್ವಾಮ್ಯದ ದೇಶದ ಮೊದಲ ‘108 ಆರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ಸಿಸಿಸಿ)’ ಕಾರ್ಯಾರಂಭ ಮಾಡಿದೆ. 2008ರಿಂದ ಖಾಸಗಿ ಸಹಭಾಗಿತ್ವದಲ್ಲಿದ್ದ ಈ ಸೇವೆ ಇನ್ನು ಮುಂದೆ ಸರ್ಕಾರದ ಸುರ್ಪದಿಯಲ್ಲಿ ನಡೆಯಲಿದೆ.</p>.ಸರ್ಕಾರದ ಸುಪರ್ದಿಗೆ 108 ಆಂಬುಲೆನ್ಸ್ ಸೇವೆ.<p><strong>ಬೆಂಗಳೂರು:</strong> ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಗೆಳತಿ ಪವಿತ್ರಾಗೌಡ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯು ಜೂನ್ 1ರಿಂದ ಬೇರೊಂದು ಕೋರ್ಟ್ನಲ್ಲಿ ನಡೆಯಲಿದೆ.</p>.ರೇಣುಕಸ್ವಾಮಿ ಕೊಲೆ ಪ್ರಕರಣ: ಜೂನ್ 1ರಿಂದ ದರ್ಶನ್ ವಿಚಾರಣೆಯ ಕೋರ್ಟ್ ಬದಲು.<p><strong>ನವದೆಹಲಿ:</strong> ಪೆಟ್ರೋಲ್ ದರವನ್ನು ಲೀಟರಿಗೆ ₹2.61 ಹಾಗೂ ಡೀಸೆಲ್ ದರವನ್ನು ₹2.71ರಷ್ಟು ಹೆಚ್ಚು ಮಾಡಲಾಗಿದ್ದು, ಪರಿಷ್ಕೃತ ದರ ಸೋಮವಾರದಿಂದ ಜಾರಿಗೆ ಬಂದಿದೆ.</p>.ಪೆಟ್ರೋಲ್, ಡೀಸೆಲ್ ಮತ್ತೆ ತುಟ್ಟಿ: ಮೇ 15ರ ಬಳಿಕ 4 ಬಾರಿ ಏರಿಕೆ.<p><strong>ನವದೆಹಲಿ:</strong> ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್ಜಿ) ದರವನ್ನು ಪ್ರತಿ ಕೆ.ಜಿಗೆ ಮತ್ತೆ ₹2 ಹೆಚ್ಚಿಸಲಾಗಿದೆ. ಪರಿಷ್ಕೃತ ದರವು ಮಂಗಳವಾರದಿಂದಲೇ ಜಾರಿಗೆ ಬಂದಿದೆ.</p><p>ಇದರೊಂದಿಗೆ ಎರಡು ವಾರದೊಳಗೆ ನಾಲ್ಕನೇ ಸಲ ಸಿಎನ್ಜಿ ದರದಲ್ಲಿ ಹೆಚ್ಚಳವಾಗಿದ್ದು, ಕಳೆದ 11 ದಿನಗಳಲ್ಲಿ ₹6ರಷ್ಟು ಜಾಸ್ತಿ ಆದಂತಾಗಿದೆ.</p>.ಸಿಎನ್ಜಿ ದರ ಕೆ.ಜಿಗೆ ಮತ್ತೆ ₹2 ಏರಿಕೆ: ಎರಡು ವಾರದೊಳಗೆ ಸರಿಸುಮಾರು ₹6 ಹೆಚ್ಚಳ.<p><strong>ಬೆಂಗಳೂರು</strong>: ಸಾರಿಗೆ ನೌಕರರ ಸಂಘಟನೆಗಳು ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿಗಳ ನಡುವೆ ಸೋಮವಾರ ನಡೆದ ರಾಜಿ ಸಂಧಾನ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಜೂನ್ 10ಕ್ಕೆ ಮತ್ತೆ ಸಭೆ ನಡೆಯಲಿದೆ.</p>.ಸಾರಿಗೆ ನೌಕರರ ಮುಷ್ಕರ: ರಾಜಿ ಸಂಧಾನ ಜೂನ್ 10ಕ್ಕೆ ಮುಂದೂಡಿಕೆ.<p><strong>ಬೆಂಗಳೂರು:</strong> ಹಣಕಾಸು ಇಲಾಖೆಯ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ರಾಜ್ಯ ಸರ್ಕಾರವು ₹39,437 ಕೋಟಿ ವೆಚ್ಚದ ಘನತ್ಯಾಜ್ಯ ನಿರ್ವಹಣೆಯ ಎರಡು ಬೃಹತ್ ಗುತ್ತಿಗೆಗಳಿಗೆ ಅನುಮೋದನೆ ನೀಡಿದೆ.</p>.₹39,437 ಕೋಟಿ ವೆಚ್ಚದ ತ್ಯಾಜ್ಯ ಗುತ್ತಿಗೆಗೆ ರಾಜ್ಯ ಸರ್ಕಾರ ಅಸ್ತು.<p><strong>ನವದೆಹಲಿ</strong>: ಭಾರತದಲ್ಲಿ 78 ದಿನಗಳಿಗೆ ಬೇಕಾಗುವಷ್ಟು ಕಚ್ಚಾತೈಲ ದಾಸ್ತಾನು ಹೊಂದಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸಂಸದೀಯ ಸಮಿತಿಗೆ ಮಾಹಿತಿ ನೀಡಿದ್ದಾರೆ.</p>.ಇರಾನ್ ಯುದ್ಧ: ಭಾರತದಲ್ಲಿ 78 ದಿನಕ್ಕೆ ಬೇಕಾಗುವಷ್ಟು ಕಚ್ಚಾತೈಲ ದಾಸ್ತಾನು.<p><strong>ಧರ್ಮಶಾಲಾ:</strong> ಇಲ್ಲಿನ ರಮಣೀಯ ಕ್ರೀಡಾಂಗಣದ ಸುತ್ತಲಿನ ಹಿಮಾಲಯದ ಪರ್ವತಶ್ರೇಣಿಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗಲೆಲ್ಲ ಅದು ಹೊಂಬಣ್ಣದಿಂದ ಹೊಳೆಯುತ್ತದೆ. ಅಂತಹದ್ದೇ ಬಣ್ಣದ ಟ್ರೋಫಿಯನ್ನು ಎತ್ತಿಹಿಡಿಯುವ ಮೊದಲ ಹೆಜ್ಜೆಯಾಗಿ ಮಂಗಳವಾರ ಇಲ್ಲಿ ನಡೆಯಲಿರುವ ಕ್ವಾಲಿಫಯರ್–1ರಲ್ಲಿ ಗೆದ್ದು ಫೈನಲ್ ತಲುಪಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಹವಣಿಸುತ್ತಿವೆ.</p>.ಮೊದಲ ಕ್ವಾಲಿಫಯರ್: ಆರ್ಸಿಬಿಗೆ ಟೈಟನ್ಸ್ ಬೌಲಿಂಗ್ ಸವಾಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>