<p>ಇರಾನ್ ಯುದ್ಧ, ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆ ಆತಂಕ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p><strong>ವಾಷಿಂಗ್ಟನ್</strong>: ಹಾರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಸ್ಥಗಿತಗೊಳಿಸಿದರೆ ಇರಾನ್ಗೆ ವಿನಾಶದ ದಿನಗಳು ಎದುರಾಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.</p>.ಇರಾನ್ಗೆ ವಿನಾಶದ ದಿನಗಳು ಎದುರಾಗಲಿವೆ: ಟ್ರಂಪ್ ಎಚ್ಚರಿಕೆ.<p><strong>ವಾಷಿಂಗ್ಟನ್</strong>: ತೈಲ ಸಾಗಣೆಗೆ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಗೆ ತಡೆ ಹಾಕುವ ಮೂಲಕ ಇರಾನ್ ತೈಲ ಸರಬರಾಜನ್ನು ನಿಲ್ಲಿಸಿದರೆ ಅಮೆರಿಕವು ಇರಾನ್ ಮೇಲೆ ಇನ್ನಷ್ಟು ಕಠಿಣ ದಾಳಿ ನಡೆಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.</p>.ತೈಲ ಸಾಗಣೆಗೆ ಅಡ್ಡಿಪಡಿಸಿದರೆ ಇರಾನ್ ಮೇಲೆ 20 ಪಟ್ಟು ಹೆಚ್ಚು ದಾಳಿ: ಟ್ರಂಪ್.<p><strong>ಪುಣೆ:</strong> ‘ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತ ಸಂಬಂಧ ಲಿಯರ್ಜೆಟ್ ವಿಮಾನದ ಪೈಲಟ್ ಮೇಲೆ ಆರೋಪ ಹೊರಿಸಲು ವಿಎಸ್ಆರ್ ವೆಂಚರ್ಸ್ ಮಾಲೀಕ ವಿ.ಕೆ.ಸಿಂಗ್ ಪ್ರಯತ್ನಿಸುತ್ತಿದ್ದಾರೆಯೇ’ ಎಂದು ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಪ್ರಶ್ನಿಸಿದ್ದಾರೆ</p>.ಬಾರಾಮತಿ ವಿಮಾನ ದುರಂತ: ಪೈಲಟ್ ಮೇಲೆ ಆರೋಪ ಹೊರಿಸಲು VK ಸಿಂಗ್ ಯತ್ನ; ರೋಹಿತ್.<p><strong>ದುಬೈ</strong>: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಪರಿಸ್ಥಿತಿ ಉಂಟಾಗಿದ್ದು, ಕಳೆದ ಮೂರು ದಿನಗಳಲ್ಲಿ ದೋಹಾದಲ್ಲಿ ಸಿಲುಕಿದ್ದ 1,000ಕ್ಕೂ ಹೆಚ್ಚು ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ: ದೋಹಾದಿಂದ 1000ಕ್ಕೂ ಹೆಚ್ಚು ಭಾರತೀಯರು ವಾಪಸ್.<p>ಬೆಂಗಳೂರು: ರಾಜ್ಯದ ಬೇರೆ ಬೇರೆ ಕಾರಾಗೃಹಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಕಾರಾಗೃಹದಲ್ಲಿ ಸುಧಾರಣೆ ತರಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಸೋಮವಾರ ಪ್ರಕಟಿಸಿದೆ.</p>.ಕಾರಾಗೃಹ ಕೈದಿಗಳ ಭೇಟಿಗೆ ಹೊಸ ನಿಯಮ ಜಾರಿ .<p><strong>ಬೆಂಗಳೂರು:</strong> ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಕೆಲ ಹೋಟೆಲ್ಗಳನ್ನು ಮಂಗಳವಾರದಿಂದ (ಮಾ.10) ಬಂದ್ ಆಗುವ ಸಾಧ್ಯತೆ ಇದೆ.</p>.ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಸರಬರಾಜು ಸ್ಥಗಿತ: ಇಂದಿನಿಂದ ಹೋಟೆಲ್ ಬಂದ್.<p>ಬೆಂಗಳೂರು: ಕರ್ನಾಟಕ ಆಡಳಿತ ಸೇವೆಯಿಂದ (ಕೆಎಎಸ್) ಪದೋನ್ನತಿ ಪಡೆದಿದ್ದ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿಗಳು ತಾವಿರುವ ಹುದ್ದೆ ಬದಲಾಗಬಹುದು ಎನ್ನುವ ಆತಂಕದಿಂದ, ಉತ್ತರಾಖಂಡದ ಮಸೂರಿಯಲ್ಲಿ ನಡೆಯುತ್ತಿರುವ ತರಬೇತಿಗೆ ಗೈರಾಗಿದ್ದಾರೆ. </p>.ಹುದ್ದೆ ಕೈತಪ್ಪುವ ಭಯದಿಂದ ತರಬೇತಿಗೆ ಚಕ್ಕರ್ ಹೊಡೆದ ಐಎಎಸ್ ಅಧಿಕಾರಿಗಳು!.<p>ಇರಾನ್ ಮೇಲೆ ಅಮೆರಿಕ–ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಜಾಗತಿಕ ಇಂಧನ ಪೂರೈಕೆಯನ್ನು ಬೆಂಬಲಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧ ಎಂದು ಜಿ7 ರಾಷ್ಟ್ರಗಳು ಸೋಮವಾರ ಘೋಷಿಸಿವೆ.</p>.ದಾಸ್ತಾನು ಇರುವ ತೈಲ ಮಾರುಕಟ್ಟೆಗೆ: ಜಿ7 ರಾಷ್ಟ್ರಗಳ ನಡುವೆ ಮೂಡದ ಒಮ್ಮತ.<p><strong>ಟೆಹರಾನ್:</strong> ಇರಾನ್ನ ನೂತನ ಪರಮೋಚ್ಚ ನಾಯಕರನ್ನಾಗಿ ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.</p>.ಇರಾನ್ ನೂತನ ಪರಮೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಾಬಾ ನೇಮಕ.<p><strong>ಬೆಂಗಳೂರು</strong>: 1 ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಪ್ರೌಢಶಾಲಾ ಹಂತದಲ್ಲೇ ಕೌಶಲ ತರಬೇತಿ ಕಡ್ಡಾಯಗೊಳಿಸಲಾಗುತ್ತಿದೆ’ ಎಂದು ಮಧು ಬಂಗಾರಪ್ಪ ಹೇಳಿದರು.</p>.1 ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಸಚಿವ ಮಧು ಬಂಗಾರಪ್ಪ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇರಾನ್ ಯುದ್ಧ, ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆ ಆತಂಕ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p><strong>ವಾಷಿಂಗ್ಟನ್</strong>: ಹಾರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಸ್ಥಗಿತಗೊಳಿಸಿದರೆ ಇರಾನ್ಗೆ ವಿನಾಶದ ದಿನಗಳು ಎದುರಾಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.</p>.ಇರಾನ್ಗೆ ವಿನಾಶದ ದಿನಗಳು ಎದುರಾಗಲಿವೆ: ಟ್ರಂಪ್ ಎಚ್ಚರಿಕೆ.<p><strong>ವಾಷಿಂಗ್ಟನ್</strong>: ತೈಲ ಸಾಗಣೆಗೆ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಗೆ ತಡೆ ಹಾಕುವ ಮೂಲಕ ಇರಾನ್ ತೈಲ ಸರಬರಾಜನ್ನು ನಿಲ್ಲಿಸಿದರೆ ಅಮೆರಿಕವು ಇರಾನ್ ಮೇಲೆ ಇನ್ನಷ್ಟು ಕಠಿಣ ದಾಳಿ ನಡೆಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.</p>.ತೈಲ ಸಾಗಣೆಗೆ ಅಡ್ಡಿಪಡಿಸಿದರೆ ಇರಾನ್ ಮೇಲೆ 20 ಪಟ್ಟು ಹೆಚ್ಚು ದಾಳಿ: ಟ್ರಂಪ್.<p><strong>ಪುಣೆ:</strong> ‘ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತ ಸಂಬಂಧ ಲಿಯರ್ಜೆಟ್ ವಿಮಾನದ ಪೈಲಟ್ ಮೇಲೆ ಆರೋಪ ಹೊರಿಸಲು ವಿಎಸ್ಆರ್ ವೆಂಚರ್ಸ್ ಮಾಲೀಕ ವಿ.ಕೆ.ಸಿಂಗ್ ಪ್ರಯತ್ನಿಸುತ್ತಿದ್ದಾರೆಯೇ’ ಎಂದು ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಪ್ರಶ್ನಿಸಿದ್ದಾರೆ</p>.ಬಾರಾಮತಿ ವಿಮಾನ ದುರಂತ: ಪೈಲಟ್ ಮೇಲೆ ಆರೋಪ ಹೊರಿಸಲು VK ಸಿಂಗ್ ಯತ್ನ; ರೋಹಿತ್.<p><strong>ದುಬೈ</strong>: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಪರಿಸ್ಥಿತಿ ಉಂಟಾಗಿದ್ದು, ಕಳೆದ ಮೂರು ದಿನಗಳಲ್ಲಿ ದೋಹಾದಲ್ಲಿ ಸಿಲುಕಿದ್ದ 1,000ಕ್ಕೂ ಹೆಚ್ಚು ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ: ದೋಹಾದಿಂದ 1000ಕ್ಕೂ ಹೆಚ್ಚು ಭಾರತೀಯರು ವಾಪಸ್.<p>ಬೆಂಗಳೂರು: ರಾಜ್ಯದ ಬೇರೆ ಬೇರೆ ಕಾರಾಗೃಹಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಕಾರಾಗೃಹದಲ್ಲಿ ಸುಧಾರಣೆ ತರಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಸೋಮವಾರ ಪ್ರಕಟಿಸಿದೆ.</p>.ಕಾರಾಗೃಹ ಕೈದಿಗಳ ಭೇಟಿಗೆ ಹೊಸ ನಿಯಮ ಜಾರಿ .<p><strong>ಬೆಂಗಳೂರು:</strong> ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಕೆಲ ಹೋಟೆಲ್ಗಳನ್ನು ಮಂಗಳವಾರದಿಂದ (ಮಾ.10) ಬಂದ್ ಆಗುವ ಸಾಧ್ಯತೆ ಇದೆ.</p>.ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಸರಬರಾಜು ಸ್ಥಗಿತ: ಇಂದಿನಿಂದ ಹೋಟೆಲ್ ಬಂದ್.<p>ಬೆಂಗಳೂರು: ಕರ್ನಾಟಕ ಆಡಳಿತ ಸೇವೆಯಿಂದ (ಕೆಎಎಸ್) ಪದೋನ್ನತಿ ಪಡೆದಿದ್ದ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿಗಳು ತಾವಿರುವ ಹುದ್ದೆ ಬದಲಾಗಬಹುದು ಎನ್ನುವ ಆತಂಕದಿಂದ, ಉತ್ತರಾಖಂಡದ ಮಸೂರಿಯಲ್ಲಿ ನಡೆಯುತ್ತಿರುವ ತರಬೇತಿಗೆ ಗೈರಾಗಿದ್ದಾರೆ. </p>.ಹುದ್ದೆ ಕೈತಪ್ಪುವ ಭಯದಿಂದ ತರಬೇತಿಗೆ ಚಕ್ಕರ್ ಹೊಡೆದ ಐಎಎಸ್ ಅಧಿಕಾರಿಗಳು!.<p>ಇರಾನ್ ಮೇಲೆ ಅಮೆರಿಕ–ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಜಾಗತಿಕ ಇಂಧನ ಪೂರೈಕೆಯನ್ನು ಬೆಂಬಲಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧ ಎಂದು ಜಿ7 ರಾಷ್ಟ್ರಗಳು ಸೋಮವಾರ ಘೋಷಿಸಿವೆ.</p>.ದಾಸ್ತಾನು ಇರುವ ತೈಲ ಮಾರುಕಟ್ಟೆಗೆ: ಜಿ7 ರಾಷ್ಟ್ರಗಳ ನಡುವೆ ಮೂಡದ ಒಮ್ಮತ.<p><strong>ಟೆಹರಾನ್:</strong> ಇರಾನ್ನ ನೂತನ ಪರಮೋಚ್ಚ ನಾಯಕರನ್ನಾಗಿ ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.</p>.ಇರಾನ್ ನೂತನ ಪರಮೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಾಬಾ ನೇಮಕ.<p><strong>ಬೆಂಗಳೂರು</strong>: 1 ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಪ್ರೌಢಶಾಲಾ ಹಂತದಲ್ಲೇ ಕೌಶಲ ತರಬೇತಿ ಕಡ್ಡಾಯಗೊಳಿಸಲಾಗುತ್ತಿದೆ’ ಎಂದು ಮಧು ಬಂಗಾರಪ್ಪ ಹೇಳಿದರು.</p>.1 ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಸಚಿವ ಮಧು ಬಂಗಾರಪ್ಪ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>