<p>ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>ಅಮೆರಿಕದ ವಾಯುಪಡೆಗೆ ಸೇರಿದ ಮತ್ತೊಂದು ವಿಮಾನವು ಪತನಗೊಂಡಿದೆ ಎಂದು ವರದಿಯಾಗಿದೆ. ಆದರೆ, ಇದರಲ್ಲಿ ಇರಾನ್ನ ಪಾತ್ರವಿದೆಯೇ ಎಂಬ ಬಗ್ಗೆ ಖಚಿತತೆಯಿಲ್ಲ.</p><p>ಶುಕ್ರವಾರ ಅಮೆರಿಕದ ಬಲಿಷ್ಠ ಎಫ್–15 ಫೈಟರ್ ಜೆಟ್ ವಿಮಾನವನ್ನು ಇರಾನ್ನ ರೆವಲ್ಯೂಷನರಿ ಗಾರ್ಡ್ ಹೊಡೆದುರುಳಿಸಿದೆ. ಇದರ ಬೆನ್ನಲ್ಲೇ ಮತ್ತೊಂದು ವಿಮಾನ ಪತನಗೊಂಡಿರುವ ಬಗ್ಗೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.</p>.ಎಫ್-15 ಬೆನ್ನಲ್ಲೇ ಅಮೆರಿಕದ ಮತ್ತೊಂದು ವಿಮಾನ ಇರಾನ್ನಲ್ಲಿ ಪತನ.<p>ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ನಂತರ ವಿವಿಧ ಸಂಘಟನೆಗಳ ನಡುವೆ ಆರಂಭವಾದ ಪರ–ವಿರೋಧ ವಾಗ್ವಾದ, ಹೋರಾಟ ಈಗ ಲೋಕಭವನನ್ನೂ ತಲುಪಿದೆ. ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ಬರೆಯುವ ಮಕ್ಕಳ ಫಲಿತಾಂಶ ಪ್ರಕಟಿಸುವಾಗ ಅಂಕಗಳ ಬದಲು ಗ್ರೇಡ್ ನೀಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ವಿಶೇಷ ಕಾರ್ಯದರ್ಶಿ ಆರ್.ಪ್ರಭು ಶಂಕರ್ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. </p>.ಹಿಂದಿಗೆ ಅಂಕ ಬದಲು ಗ್ರೇಡ್: ನಿರ್ಧಾರ ಮರುಪರಿಶೀಲಿಸಲು ಸರ್ಕಾರಕ್ಕೆ ಲೋಕಭವನ ಸಲಹೆ.<p>ಪಶ್ಚಿಮ ಏಷ್ಯಾ ಬಿಕ್ಕಟ್ಟು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಸೃಷ್ಟಿಸಿರುವ ನಡುವೆಯೇ ಭಾರತಕ್ಕೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ರಫ್ತು ಹೆಚ್ಚಿಸುವ ಆಫರ್ ಅನ್ನು ರಷ್ಯಾ ನೀಡಿದೆ.</p><p>ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮ್ಯಾಂಟುರೋವ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಢೋಬಾಲ್ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ನಡುವಿನ ಸಭೆಯಲ್ಲಿ ಇಂಧನ ಸಹಕಾರದ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆದಿದೆ ಎಂದು ರಷ್ಯಾ ಪ್ರಕಟಣೆ ತಿಳಿಸಿದೆ.</p>.ಭಾರತಕ್ಕೆ ಕಚ್ಚಾ ತೈಲ, ಎಲ್ಎನ್ಜಿ ರಫ್ತು ಹೆಚ್ಚಳದ ಆಫರ್ ನೀಡಿದ ರಷ್ಯಾ.<p>‘ಎಆರ್ಐ ಸಂಸ್ಥೆಯನ್ನು ಮಂಡ್ಯಕ್ಕೆ ತರಬೇಕು ಎಂಬುದು ಬಹುದಿನದ ಕನಸು. ನನ್ನ ಇಲಾಖೆಯಿಂದ ತಾಂತ್ರಿಕವಾಗಿ ಎಲ್ಲಾ ಕೆಲಸ ಪೂರ್ಣಗೊಳಿಸಲಾಗಿದೆ. ಆದರೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ಆ ಕೆಲಸ ಎಲ್ಲಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಬೇಕು’ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.</p>.25 ಸಾವಿರ ಜನರಿಗೆ ಉದ್ಯೋಗ: ಎಚ್.ಡಿ.ಕುಮಾರಸ್ವಾಮಿ ಭರವಸೆ.<p>ಅಫ್ಗಾನಿಸ್ತಾನದ ಉತ್ತರ, ಪೂರ್ವ ಭಾಗ ಹಾಗೂ ಪಾಕಿಸ್ತಾನದ ಪಶ್ಚಿಮ ಭಾಗಗಳಲ್ಲಿ ಶುಕ್ರವಾರ ರಾತ್ರಿ ಭೂಕಂಪ ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಭಾರತ ದದೆಹಲಿ, ಜಮ್ಮು ಮತ್ತು ಕಾಶ್ಮೀರ,<br>ಪಂಜಾಬ್ ಮತ್ತು ಹರಿಯಾಣ ಸೇರಿ ಹಲವೆಡೆ ರಾತ್ರಿ 9.45ರ ಸುಮಾರಿಗೆ ಕೆಲ ಸೆಕೆಂಡ್ಗಳ ವರೆಗೆ ಭೂಮಿ ಕಂಪಿಸಿದೆ.</p>.ಅಫ್ಗಾನಿಸ್ತಾನದಲ್ಲಿ ಪ್ರಬಲ ಭೂಕಂಪ: ಎಂಟು ಮಂದಿ ಸಾವು– ಉತ್ತರ ಭಾರತದಲ್ಲೂ ಕಂಪನ.<p>ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ಗಗನಯಾನಿಗಳನ್ನು ಕಳುಹಿಸಲು ಮುಂದಾಗಿರುವ ನಾಸಾ, ತನ್ನ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಕ್ರಮ ‘ಆರ್ಟೆಮಿಸ್–2’ರ ರಾಕೆಟ್ ಅನ್ನು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.</p>.ಚಂದ್ರನತ್ತ ಹೊರಟ ‘ಅರ್ಟೆಮಿಸ್–2’: 50 ವರ್ಷಗಳ ಬಳಿಕ ನಾಸಾ ಕೈಗೊಂಡ ಯೋಜನೆ.<p>ಇಂಧನ ಪೂರೈಕೆ ಸೇರಿದಂತೆ ದೇಶದ ಶೇ 95ರಷ್ಟು ವ್ಯಾಪಾರವು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಬಿಕ್ಕಟ್ಟಿನ ಸಂದರ್ಭದಲ್ಲಿ, ತೈಲ ಟ್ಯಾಂಕರ್ ಹಾಗೂ ಸರಕು ಸಾಗಣೆಗೆ ರಕ್ಷಣೆ ನೀಡುವಲ್ಲಿ ಭಾರತೀಯ ನೌಕಾಪಡೆಯು ಮಹತ್ವದ ಪಾತ್ರ ವಹಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಕ್ರವಾರ ಹೇಳಿದರು. </p>.ಸರಕು ಸಾಗಣೆಗೆ ನೌಕಾಪಡೆ ರಕ್ಷಣೆ: ಸಚಿವ ರಾಜನಾಥ ಸಿಂಗ್ .<p>ನಟರಾಗಿ ಗುರುತಿಸಿಕೊಂಡಿದ್ದ ಪೂರ್ಣಚಂದ್ರ ಮೈಸೂರು ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದಾರೆ. ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಗೊಂಡಿದ್ದು, ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು, ನಾಗಭೂಷಣ, ವಿನಯಾ ಪ್ರಕಾಶ್, ಡಾಲಿ ಧನಂಜಯ, ಗುರುದತ್ ಜೊತೆಗೆ ಹಲವು ಜನಪ್ರಿಯ ಹಾಸ್ಯ ನಟರು ಇದ್ದಾರೆ.</p>.ಡಾಲಿ ಗೆಳೆಯರ ‘ಮದರ್ ಪ್ರಾಮಿಸ್’: ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ.<p>ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಎಲ್ಪಿಜಿ ಸಿಲಿಂಡರ್ಗಳ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯಲ್ಲಿ ಅವುಗಳ ಮಾರಾಟದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.</p>.ಎಲ್ಪಿಜಿ ಅಕ್ರಮ ದಾಸ್ತಾನು ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಸೂಚನೆ.<p>ಐಪಿಎಲ್ ಸೀಸನ್ 19ರ 7ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಪ್ರಿಯಾಂಶ್ ಆರ್ಯ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡವು ಸಿಎಸ್ಕೆ ವಿರುದ್ಧ ಸುಲಭ ಗೆಲವು ದಾಖಲಿಸಿತು.</p>.PBKS vs CSK | ಅಯ್ಯರ್, ಆರ್ಯ ಆಟಕ್ಕೆ ಒಲಿದ ಗೆಲುವು: ತವರಿನಲ್ಲೂ ಸೋಲು ಕಂಡ CSK.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>ಅಮೆರಿಕದ ವಾಯುಪಡೆಗೆ ಸೇರಿದ ಮತ್ತೊಂದು ವಿಮಾನವು ಪತನಗೊಂಡಿದೆ ಎಂದು ವರದಿಯಾಗಿದೆ. ಆದರೆ, ಇದರಲ್ಲಿ ಇರಾನ್ನ ಪಾತ್ರವಿದೆಯೇ ಎಂಬ ಬಗ್ಗೆ ಖಚಿತತೆಯಿಲ್ಲ.</p><p>ಶುಕ್ರವಾರ ಅಮೆರಿಕದ ಬಲಿಷ್ಠ ಎಫ್–15 ಫೈಟರ್ ಜೆಟ್ ವಿಮಾನವನ್ನು ಇರಾನ್ನ ರೆವಲ್ಯೂಷನರಿ ಗಾರ್ಡ್ ಹೊಡೆದುರುಳಿಸಿದೆ. ಇದರ ಬೆನ್ನಲ್ಲೇ ಮತ್ತೊಂದು ವಿಮಾನ ಪತನಗೊಂಡಿರುವ ಬಗ್ಗೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.</p>.ಎಫ್-15 ಬೆನ್ನಲ್ಲೇ ಅಮೆರಿಕದ ಮತ್ತೊಂದು ವಿಮಾನ ಇರಾನ್ನಲ್ಲಿ ಪತನ.<p>ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ನಂತರ ವಿವಿಧ ಸಂಘಟನೆಗಳ ನಡುವೆ ಆರಂಭವಾದ ಪರ–ವಿರೋಧ ವಾಗ್ವಾದ, ಹೋರಾಟ ಈಗ ಲೋಕಭವನನ್ನೂ ತಲುಪಿದೆ. ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ಬರೆಯುವ ಮಕ್ಕಳ ಫಲಿತಾಂಶ ಪ್ರಕಟಿಸುವಾಗ ಅಂಕಗಳ ಬದಲು ಗ್ರೇಡ್ ನೀಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ವಿಶೇಷ ಕಾರ್ಯದರ್ಶಿ ಆರ್.ಪ್ರಭು ಶಂಕರ್ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. </p>.ಹಿಂದಿಗೆ ಅಂಕ ಬದಲು ಗ್ರೇಡ್: ನಿರ್ಧಾರ ಮರುಪರಿಶೀಲಿಸಲು ಸರ್ಕಾರಕ್ಕೆ ಲೋಕಭವನ ಸಲಹೆ.<p>ಪಶ್ಚಿಮ ಏಷ್ಯಾ ಬಿಕ್ಕಟ್ಟು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಸೃಷ್ಟಿಸಿರುವ ನಡುವೆಯೇ ಭಾರತಕ್ಕೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ರಫ್ತು ಹೆಚ್ಚಿಸುವ ಆಫರ್ ಅನ್ನು ರಷ್ಯಾ ನೀಡಿದೆ.</p><p>ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮ್ಯಾಂಟುರೋವ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಢೋಬಾಲ್ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ನಡುವಿನ ಸಭೆಯಲ್ಲಿ ಇಂಧನ ಸಹಕಾರದ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆದಿದೆ ಎಂದು ರಷ್ಯಾ ಪ್ರಕಟಣೆ ತಿಳಿಸಿದೆ.</p>.ಭಾರತಕ್ಕೆ ಕಚ್ಚಾ ತೈಲ, ಎಲ್ಎನ್ಜಿ ರಫ್ತು ಹೆಚ್ಚಳದ ಆಫರ್ ನೀಡಿದ ರಷ್ಯಾ.<p>‘ಎಆರ್ಐ ಸಂಸ್ಥೆಯನ್ನು ಮಂಡ್ಯಕ್ಕೆ ತರಬೇಕು ಎಂಬುದು ಬಹುದಿನದ ಕನಸು. ನನ್ನ ಇಲಾಖೆಯಿಂದ ತಾಂತ್ರಿಕವಾಗಿ ಎಲ್ಲಾ ಕೆಲಸ ಪೂರ್ಣಗೊಳಿಸಲಾಗಿದೆ. ಆದರೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ಆ ಕೆಲಸ ಎಲ್ಲಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಬೇಕು’ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.</p>.25 ಸಾವಿರ ಜನರಿಗೆ ಉದ್ಯೋಗ: ಎಚ್.ಡಿ.ಕುಮಾರಸ್ವಾಮಿ ಭರವಸೆ.<p>ಅಫ್ಗಾನಿಸ್ತಾನದ ಉತ್ತರ, ಪೂರ್ವ ಭಾಗ ಹಾಗೂ ಪಾಕಿಸ್ತಾನದ ಪಶ್ಚಿಮ ಭಾಗಗಳಲ್ಲಿ ಶುಕ್ರವಾರ ರಾತ್ರಿ ಭೂಕಂಪ ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಭಾರತ ದದೆಹಲಿ, ಜಮ್ಮು ಮತ್ತು ಕಾಶ್ಮೀರ,<br>ಪಂಜಾಬ್ ಮತ್ತು ಹರಿಯಾಣ ಸೇರಿ ಹಲವೆಡೆ ರಾತ್ರಿ 9.45ರ ಸುಮಾರಿಗೆ ಕೆಲ ಸೆಕೆಂಡ್ಗಳ ವರೆಗೆ ಭೂಮಿ ಕಂಪಿಸಿದೆ.</p>.ಅಫ್ಗಾನಿಸ್ತಾನದಲ್ಲಿ ಪ್ರಬಲ ಭೂಕಂಪ: ಎಂಟು ಮಂದಿ ಸಾವು– ಉತ್ತರ ಭಾರತದಲ್ಲೂ ಕಂಪನ.<p>ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ಗಗನಯಾನಿಗಳನ್ನು ಕಳುಹಿಸಲು ಮುಂದಾಗಿರುವ ನಾಸಾ, ತನ್ನ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಕ್ರಮ ‘ಆರ್ಟೆಮಿಸ್–2’ರ ರಾಕೆಟ್ ಅನ್ನು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.</p>.ಚಂದ್ರನತ್ತ ಹೊರಟ ‘ಅರ್ಟೆಮಿಸ್–2’: 50 ವರ್ಷಗಳ ಬಳಿಕ ನಾಸಾ ಕೈಗೊಂಡ ಯೋಜನೆ.<p>ಇಂಧನ ಪೂರೈಕೆ ಸೇರಿದಂತೆ ದೇಶದ ಶೇ 95ರಷ್ಟು ವ್ಯಾಪಾರವು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಬಿಕ್ಕಟ್ಟಿನ ಸಂದರ್ಭದಲ್ಲಿ, ತೈಲ ಟ್ಯಾಂಕರ್ ಹಾಗೂ ಸರಕು ಸಾಗಣೆಗೆ ರಕ್ಷಣೆ ನೀಡುವಲ್ಲಿ ಭಾರತೀಯ ನೌಕಾಪಡೆಯು ಮಹತ್ವದ ಪಾತ್ರ ವಹಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಕ್ರವಾರ ಹೇಳಿದರು. </p>.ಸರಕು ಸಾಗಣೆಗೆ ನೌಕಾಪಡೆ ರಕ್ಷಣೆ: ಸಚಿವ ರಾಜನಾಥ ಸಿಂಗ್ .<p>ನಟರಾಗಿ ಗುರುತಿಸಿಕೊಂಡಿದ್ದ ಪೂರ್ಣಚಂದ್ರ ಮೈಸೂರು ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದಾರೆ. ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಗೊಂಡಿದ್ದು, ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು, ನಾಗಭೂಷಣ, ವಿನಯಾ ಪ್ರಕಾಶ್, ಡಾಲಿ ಧನಂಜಯ, ಗುರುದತ್ ಜೊತೆಗೆ ಹಲವು ಜನಪ್ರಿಯ ಹಾಸ್ಯ ನಟರು ಇದ್ದಾರೆ.</p>.ಡಾಲಿ ಗೆಳೆಯರ ‘ಮದರ್ ಪ್ರಾಮಿಸ್’: ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ.<p>ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಎಲ್ಪಿಜಿ ಸಿಲಿಂಡರ್ಗಳ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯಲ್ಲಿ ಅವುಗಳ ಮಾರಾಟದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.</p>.ಎಲ್ಪಿಜಿ ಅಕ್ರಮ ದಾಸ್ತಾನು ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಸೂಚನೆ.<p>ಐಪಿಎಲ್ ಸೀಸನ್ 19ರ 7ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಪ್ರಿಯಾಂಶ್ ಆರ್ಯ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡವು ಸಿಎಸ್ಕೆ ವಿರುದ್ಧ ಸುಲಭ ಗೆಲವು ದಾಖಲಿಸಿತು.</p>.PBKS vs CSK | ಅಯ್ಯರ್, ಆರ್ಯ ಆಟಕ್ಕೆ ಒಲಿದ ಗೆಲುವು: ತವರಿನಲ್ಲೂ ಸೋಲು ಕಂಡ CSK.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>