<p><strong>ಗುವಾಹಟಿ:</strong> ಮಣಿಪುರದ ಉಖರಲ್ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನವೊಂದರ ಮೇಲೆ ಕುಕಿ ಸಮುದಾಯದ ಶಂಕಿತ ಭಯೋತ್ಪಾದಕರು ಶನಿವಾರ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನಾಗಾ ಸಮುದಾಯಕ್ಕೆ ಸೇರಿದ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.</p>.<p>ನಾಗಾ ಸಮುದಾಯ ಬಾಹುಳ್ಯದ ಉಖರಲ್ ಜಿಲ್ಲೆಗೆ ಶಾಂತಿ ಯೋಜನೆಯ ಭಾಗವಾಗಿ ಮುಖ್ಯಮಂತ್ರಿ ವೈ.ಖೇಮಚಂದ್ ಸಿಂಗ್ ಅವರು ಶುಕ್ರವಾರವಷ್ಟೇ ಪ್ರವಾಸ ಕೈಗೊಂಡಿದ್ದರು. ಮರು ದಿನವೇ ಈ ಘಟನೆ ನಡೆದಿದೆ.</p>.<p>ಕಳೆದೊಂದು ತಿಂಗಳಿಂದ ಕುಕಿ ಮತ್ತು ನಾಗಾ ಸಮುದಾಯದ ನಡುವಿನ ಸಂಘರ್ಷ ತೀವ್ರಗೊಂಡಿರುವ ಕಾರಣ ಎನ್ಎಚ್–202 ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ರಕ್ಷಣೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಸಿಂಗ್ ಶುಕ್ರವಾರ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. </p>.<p>ದಾಳಿ ನಡೆಸಿರುವುದು ಕುಕಿ ಸಮುದಾಯದ ಸಂಘಟನೆಗಳೇ ಎಂಬ ಶಂಕೆ ವ್ಯಕ್ತವಾಗುತ್ತಿದ್ದಂತೆಯೇ ಕುಕಿ ಜೊ ಸಮಿತಿ (ಕೆಝೆಡ್ಸಿ) ಆರೋಪಗಳನ್ನು ತಿರಸ್ಕರಿಸಿದೆ. ಯಾವುದೇ ಸಾಕ್ಷಿ– ಆಧಾರಗಳಿಲ್ಲದೇ ಆರೋಪ ಮಾಡುವುದು ಸಲ್ಲದು ಎಂದೂ ಸಮುದಾಯ ಹೇಳಿದೆ.</p>.<p>ಏಪ್ರಿಲ್ 7ರಂದು ಮೈತೇಯಿ ಬಾಹುಳ್ಯದ ವಿಷ್ಣುಪುರ ಜಿಲ್ಲೆಯಲ್ಲಿ ಬಿಎಸ್ಎಫ್ ಯೋಧರೊಬ್ಬರ ಇಬ್ಬರು ಮಕ್ಕಳನ್ನು ಹತ್ಯೆ ಮಾಡಲಾಗಿತ್ತು. ಕುಕಿ ಸಮುದಾಯದ ಭಯೋತ್ಪಾದಕರೇ ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಿ ಮೈತೇಯಿ ಮಹಿಳಾ ಸಂಘಟನೆಯೊಂದು ಪ್ರತಿಭಟನೆ ನಡೆಸುತ್ತಿದೆ. ಇದೀಗ ಆ ಸಂಘಟನೆಯು ಪ್ರತಿಭಟನೆಯ ಭಾಗವಾಗಿ ಮುಂದಿನ 5 ದಿನ ಮಣಿಪುರದಾದ್ಯಂತ ಸಂಪೂರ್ಣ ಬಂದ್ಗೆ ಕರೆ ನೀಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ:</strong> ಮಣಿಪುರದ ಉಖರಲ್ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನವೊಂದರ ಮೇಲೆ ಕುಕಿ ಸಮುದಾಯದ ಶಂಕಿತ ಭಯೋತ್ಪಾದಕರು ಶನಿವಾರ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನಾಗಾ ಸಮುದಾಯಕ್ಕೆ ಸೇರಿದ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.</p>.<p>ನಾಗಾ ಸಮುದಾಯ ಬಾಹುಳ್ಯದ ಉಖರಲ್ ಜಿಲ್ಲೆಗೆ ಶಾಂತಿ ಯೋಜನೆಯ ಭಾಗವಾಗಿ ಮುಖ್ಯಮಂತ್ರಿ ವೈ.ಖೇಮಚಂದ್ ಸಿಂಗ್ ಅವರು ಶುಕ್ರವಾರವಷ್ಟೇ ಪ್ರವಾಸ ಕೈಗೊಂಡಿದ್ದರು. ಮರು ದಿನವೇ ಈ ಘಟನೆ ನಡೆದಿದೆ.</p>.<p>ಕಳೆದೊಂದು ತಿಂಗಳಿಂದ ಕುಕಿ ಮತ್ತು ನಾಗಾ ಸಮುದಾಯದ ನಡುವಿನ ಸಂಘರ್ಷ ತೀವ್ರಗೊಂಡಿರುವ ಕಾರಣ ಎನ್ಎಚ್–202 ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ರಕ್ಷಣೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಸಿಂಗ್ ಶುಕ್ರವಾರ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. </p>.<p>ದಾಳಿ ನಡೆಸಿರುವುದು ಕುಕಿ ಸಮುದಾಯದ ಸಂಘಟನೆಗಳೇ ಎಂಬ ಶಂಕೆ ವ್ಯಕ್ತವಾಗುತ್ತಿದ್ದಂತೆಯೇ ಕುಕಿ ಜೊ ಸಮಿತಿ (ಕೆಝೆಡ್ಸಿ) ಆರೋಪಗಳನ್ನು ತಿರಸ್ಕರಿಸಿದೆ. ಯಾವುದೇ ಸಾಕ್ಷಿ– ಆಧಾರಗಳಿಲ್ಲದೇ ಆರೋಪ ಮಾಡುವುದು ಸಲ್ಲದು ಎಂದೂ ಸಮುದಾಯ ಹೇಳಿದೆ.</p>.<p>ಏಪ್ರಿಲ್ 7ರಂದು ಮೈತೇಯಿ ಬಾಹುಳ್ಯದ ವಿಷ್ಣುಪುರ ಜಿಲ್ಲೆಯಲ್ಲಿ ಬಿಎಸ್ಎಫ್ ಯೋಧರೊಬ್ಬರ ಇಬ್ಬರು ಮಕ್ಕಳನ್ನು ಹತ್ಯೆ ಮಾಡಲಾಗಿತ್ತು. ಕುಕಿ ಸಮುದಾಯದ ಭಯೋತ್ಪಾದಕರೇ ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಿ ಮೈತೇಯಿ ಮಹಿಳಾ ಸಂಘಟನೆಯೊಂದು ಪ್ರತಿಭಟನೆ ನಡೆಸುತ್ತಿದೆ. ಇದೀಗ ಆ ಸಂಘಟನೆಯು ಪ್ರತಿಭಟನೆಯ ಭಾಗವಾಗಿ ಮುಂದಿನ 5 ದಿನ ಮಣಿಪುರದಾದ್ಯಂತ ಸಂಪೂರ್ಣ ಬಂದ್ಗೆ ಕರೆ ನೀಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>