<p><strong>ನವದೆಹಲಿ:</strong> ಅನುಮತಿ ಪಡೆಯದೆ ಮಿಜೋರಾಂ ರಾಜ್ಯ ಪ್ರವೇಶಿಸಿದ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಉಕ್ರೇನ್ನ ಆರು ಪ್ರಜೆಗಳನ್ನು ವಶಕ್ಕೆ ತೆಗೆದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಉಕ್ರೇನ್, ಮಂಗಳವಾರ ಭಾರತದ ಎದರು ತನ್ನ ಪ್ರತಿಭಟನೆ ದಾಖಲಿಸಿದೆ.</p>.<p>ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಅಲೆಕ್ಸಾಂಡರ್ ಪೊಲಿಶ್ಚುಕ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಅವರನ್ನು ಭೇಟಿಯಾಗಿ ಪ್ರತಿಭಟನೆ ದಾಖಲಿಸಿದರು.</p>.<p class="bodytext">‘ಭಾರತದ ಅಧಿಕಾರಿಗಳ ವಶದಲ್ಲಿರುವ ಉಕ್ರೇನ್ ಪ್ರಜೆಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಾಗೂ ಅವರಿಗೆ ಉಕ್ರೇನ್ ರಾಯಭಾರ ಕಚೇರಿಯ ನೆರವು ಪಡೆಯಲು ಅವಕಾಶ ನೀಡುವಂತೆ ಪೊಲಿಶ್ಚುಕ್ ಕೋರಿದ್ದಾರೆ’ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ಮಂಗಳವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.</p>.<p class="bodytext">ಕಾನೂನುಬಾಹಿರ ಚಟುವಟಿಕೆಗಳ ಆರೋಪದ ಮೇಲೆ ಉಕ್ರೇನ್ನ ಆರು ಪ್ರಜೆಗಳು ಮತ್ತು ಅಮೆರಿಕದ ಒಬ್ಬ ಪ್ರಜೆಯನ್ನು ಭಾರತದ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.</p>.<p>ಅಮೆರಿಕದ ಪ್ರಜೆಯನ್ನು ವಶಕ್ಕೆ ಪಡೆದಿರುವುದರ ಬಗ್ಗೆ ಕೇಳಿದಾಗ, ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ವಕ್ತಾರರು, ‘ಅಂತಹ ಬೆಳವಣಿಗೆ ನಮ್ಮ ಗಮನಕ್ಕೆ ಬಂದಿದೆ. ಗೌಪ್ಯತೆಯ ಕಾರಣಗಳಿಗಾಗಿ, ಅಮೆರಿಕದ ನಾಗರಿಕರನ್ನು ಒಳಗೊಂಡ ಪ್ರಕರಣಗಳ ಬಗ್ಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.</p>.<p>ವಿದೇಶಿ ಪ್ರಜೆಗಳು ಮಿಜೋರಾಂಗೆ ಏಕೆ ಬಂದಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಪ್ರಕರಣದ ಬಗ್ಗೆ ಭಾರತದ ಅಧಿಕಾರಿಗಳು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.</p>.<p>‘ಉಕ್ರೇನ್ನ ಪ್ರಜೆಗಳು ಮಿಜೋರಾಂಗೆ ಅನಧಿಕೃತವಾಗಿ ಪ್ರವೇಶಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ವಿದೇಶಿ ಪ್ರಜೆಗಳು ಮಿಜೋರಾಂ ಪ್ರವೇಶಿಸಲು ವಿಶೇಷ ಪರವಾನಗಿಯ ಅಗತ್ಯವಿದೆ’ ಎಂದು ಉಕ್ರೇನ್ನ ಪ್ರಕಟಣೆ ತಿಳಿಸಿದೆ.</p>.<p>‘ಈ ಪ್ರಕರಣವು ಭಾರತ ಮತ್ತು ಮ್ಯಾನ್ಮಾರ್ ಗಡಿಯನ್ನು ಅಕ್ರಮವಾಗಿ ದಾಟಿದ ಆರೋಪಕ್ಕೂ ಸಂಬಂಧಿಸಿದೆ’ ಎಂದು ಅದು ಹೇಳಿದೆ.</p>.<p>‘ಉಕ್ರೇನ್ ನಾಗರಿಕರು ಭಾರತ ಅಥವಾ ಮ್ಯಾನ್ಮಾರ್ ನೆಲದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಗಳು ಇಲ್ಲ’ ಎಂದು ಪೊಲಿಶ್ಚುಕ್ ಅವರು ಸಿಬಿ ಜಾರ್ಜ್ ಅವರಿಗೆ ನೀಡಿದ ಪತ್ರದಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅನುಮತಿ ಪಡೆಯದೆ ಮಿಜೋರಾಂ ರಾಜ್ಯ ಪ್ರವೇಶಿಸಿದ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಉಕ್ರೇನ್ನ ಆರು ಪ್ರಜೆಗಳನ್ನು ವಶಕ್ಕೆ ತೆಗೆದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಉಕ್ರೇನ್, ಮಂಗಳವಾರ ಭಾರತದ ಎದರು ತನ್ನ ಪ್ರತಿಭಟನೆ ದಾಖಲಿಸಿದೆ.</p>.<p>ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಅಲೆಕ್ಸಾಂಡರ್ ಪೊಲಿಶ್ಚುಕ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಅವರನ್ನು ಭೇಟಿಯಾಗಿ ಪ್ರತಿಭಟನೆ ದಾಖಲಿಸಿದರು.</p>.<p class="bodytext">‘ಭಾರತದ ಅಧಿಕಾರಿಗಳ ವಶದಲ್ಲಿರುವ ಉಕ್ರೇನ್ ಪ್ರಜೆಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಾಗೂ ಅವರಿಗೆ ಉಕ್ರೇನ್ ರಾಯಭಾರ ಕಚೇರಿಯ ನೆರವು ಪಡೆಯಲು ಅವಕಾಶ ನೀಡುವಂತೆ ಪೊಲಿಶ್ಚುಕ್ ಕೋರಿದ್ದಾರೆ’ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ಮಂಗಳವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.</p>.<p class="bodytext">ಕಾನೂನುಬಾಹಿರ ಚಟುವಟಿಕೆಗಳ ಆರೋಪದ ಮೇಲೆ ಉಕ್ರೇನ್ನ ಆರು ಪ್ರಜೆಗಳು ಮತ್ತು ಅಮೆರಿಕದ ಒಬ್ಬ ಪ್ರಜೆಯನ್ನು ಭಾರತದ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.</p>.<p>ಅಮೆರಿಕದ ಪ್ರಜೆಯನ್ನು ವಶಕ್ಕೆ ಪಡೆದಿರುವುದರ ಬಗ್ಗೆ ಕೇಳಿದಾಗ, ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ವಕ್ತಾರರು, ‘ಅಂತಹ ಬೆಳವಣಿಗೆ ನಮ್ಮ ಗಮನಕ್ಕೆ ಬಂದಿದೆ. ಗೌಪ್ಯತೆಯ ಕಾರಣಗಳಿಗಾಗಿ, ಅಮೆರಿಕದ ನಾಗರಿಕರನ್ನು ಒಳಗೊಂಡ ಪ್ರಕರಣಗಳ ಬಗ್ಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.</p>.<p>ವಿದೇಶಿ ಪ್ರಜೆಗಳು ಮಿಜೋರಾಂಗೆ ಏಕೆ ಬಂದಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಪ್ರಕರಣದ ಬಗ್ಗೆ ಭಾರತದ ಅಧಿಕಾರಿಗಳು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.</p>.<p>‘ಉಕ್ರೇನ್ನ ಪ್ರಜೆಗಳು ಮಿಜೋರಾಂಗೆ ಅನಧಿಕೃತವಾಗಿ ಪ್ರವೇಶಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ವಿದೇಶಿ ಪ್ರಜೆಗಳು ಮಿಜೋರಾಂ ಪ್ರವೇಶಿಸಲು ವಿಶೇಷ ಪರವಾನಗಿಯ ಅಗತ್ಯವಿದೆ’ ಎಂದು ಉಕ್ರೇನ್ನ ಪ್ರಕಟಣೆ ತಿಳಿಸಿದೆ.</p>.<p>‘ಈ ಪ್ರಕರಣವು ಭಾರತ ಮತ್ತು ಮ್ಯಾನ್ಮಾರ್ ಗಡಿಯನ್ನು ಅಕ್ರಮವಾಗಿ ದಾಟಿದ ಆರೋಪಕ್ಕೂ ಸಂಬಂಧಿಸಿದೆ’ ಎಂದು ಅದು ಹೇಳಿದೆ.</p>.<p>‘ಉಕ್ರೇನ್ ನಾಗರಿಕರು ಭಾರತ ಅಥವಾ ಮ್ಯಾನ್ಮಾರ್ ನೆಲದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಗಳು ಇಲ್ಲ’ ಎಂದು ಪೊಲಿಶ್ಚುಕ್ ಅವರು ಸಿಬಿ ಜಾರ್ಜ್ ಅವರಿಗೆ ನೀಡಿದ ಪತ್ರದಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>