<p><strong>ಮೀರತ್: ನ</strong>ಕಲಿ ದಾಖಲೆಗಳ ಮೂಲಕ ಭಾರತೀಯ ಸೇನೆಗೆ ನೇಮಕಾತಿ ಮಾಡಿಸುವುದಾಗಿ ವಂಚನೆ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ನ ಸದಸ್ಯನೊಬ್ಬನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯ ಪಡೆ(ಎಸ್ಟಿಎಫ್) ಬಂಧಿಸಿದೆ.</p>.<p>‘ಆರೋಪಿ ರಾಹುಲ್ ಕುಮಾರ್ನನ್ನು ಸದಾರ್ ಬಜಾರ್ನ ಮೀರತ್ ಕಂಟ್ಮೋನೆಂಟ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>‘ಭಾರತೀಯ ಸೇನೆಯ ನಕಲಿ ಪ್ರವೇಶ ಪತ್ರಿಕೆಯ ಐದು ಪ್ರತಿಗಳು, ಅಗ್ನಿವೀರರ ನಕಲಿ ಆಯ್ಕೆ ಪಟ್ಟಿ, ಎರಡು ಮೊಬೈಲ್ ಮತ್ತು ಒಂದು ಕಾರು ಅನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.</p>.<p>ಬಾಗ್ಪತ್ನ ಕುಮಾರ್ ಎಂಬಾತ, ನೇಮಕಾತಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೃಹತ್ ಮೊತ್ತದ ಹಣ ಗಳಿಸಿರುವ ಬಗ್ಗೆ ಸಿಕ್ಕಿದ ಮಾಹಿತಿ ಆಧಾರದಲ್ಲಿ ಎಸ್ಟಿಎಫ್ ತನಿಖೆ ಆರಂಭಿಸಿತ್ತು.</p>.<p>‘ಬಿಹಾರದ ರಾಜ್ ಪಟೇಲ್ ಹಾಗೂ ಹರಿಯಾಣದ ಸುಮಿತ್ ಮತ್ತು ಸೋಂಬಿರ್ ಅವರನ್ನು ಒಳಗೊಂಡ ಜಾಲದ ಭಾಗವಾಗಿರುವುದಾಗಿ ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.</p>.<p>ಈ ಜಾಲದಲ್ಲಿ ಇದ್ದವರು ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಆಕಾಂಕ್ಷಿಗಳಿಂದ ಹಣ ಪಡೆದುಕೊಳ್ಳುತ್ತಿದ್ದರು. ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೀರತ್: ನ</strong>ಕಲಿ ದಾಖಲೆಗಳ ಮೂಲಕ ಭಾರತೀಯ ಸೇನೆಗೆ ನೇಮಕಾತಿ ಮಾಡಿಸುವುದಾಗಿ ವಂಚನೆ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ನ ಸದಸ್ಯನೊಬ್ಬನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯ ಪಡೆ(ಎಸ್ಟಿಎಫ್) ಬಂಧಿಸಿದೆ.</p>.<p>‘ಆರೋಪಿ ರಾಹುಲ್ ಕುಮಾರ್ನನ್ನು ಸದಾರ್ ಬಜಾರ್ನ ಮೀರತ್ ಕಂಟ್ಮೋನೆಂಟ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>‘ಭಾರತೀಯ ಸೇನೆಯ ನಕಲಿ ಪ್ರವೇಶ ಪತ್ರಿಕೆಯ ಐದು ಪ್ರತಿಗಳು, ಅಗ್ನಿವೀರರ ನಕಲಿ ಆಯ್ಕೆ ಪಟ್ಟಿ, ಎರಡು ಮೊಬೈಲ್ ಮತ್ತು ಒಂದು ಕಾರು ಅನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.</p>.<p>ಬಾಗ್ಪತ್ನ ಕುಮಾರ್ ಎಂಬಾತ, ನೇಮಕಾತಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೃಹತ್ ಮೊತ್ತದ ಹಣ ಗಳಿಸಿರುವ ಬಗ್ಗೆ ಸಿಕ್ಕಿದ ಮಾಹಿತಿ ಆಧಾರದಲ್ಲಿ ಎಸ್ಟಿಎಫ್ ತನಿಖೆ ಆರಂಭಿಸಿತ್ತು.</p>.<p>‘ಬಿಹಾರದ ರಾಜ್ ಪಟೇಲ್ ಹಾಗೂ ಹರಿಯಾಣದ ಸುಮಿತ್ ಮತ್ತು ಸೋಂಬಿರ್ ಅವರನ್ನು ಒಳಗೊಂಡ ಜಾಲದ ಭಾಗವಾಗಿರುವುದಾಗಿ ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.</p>.<p>ಈ ಜಾಲದಲ್ಲಿ ಇದ್ದವರು ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಆಕಾಂಕ್ಷಿಗಳಿಂದ ಹಣ ಪಡೆದುಕೊಳ್ಳುತ್ತಿದ್ದರು. ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>