<p>ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಸ್ಥಾಪಿಸಿದ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ವಂತರಾ, ಗುಜರಾತ್ನ ಜಾಮ್ನಗರದಲ್ಲಿ 'ವನ್ಯಜೀವಿ ವಿಶ್ವವಿದ್ಯಾಲಯ' ಪ್ರಾರಂಭಿಸುವುದಾಗಿ ಶುಕ್ರವಾರ ಘೋಷಿಸಿದೆ.</p>.<p>ಇದು ವನ್ಯಜೀವಿ ಸಂರಕ್ಷಣೆ ಮತ್ತು ಪಶುವೈದ್ಯಕೀಯ ವಿಜ್ಞಾನಕ್ಕೆ ಮೀಸಲಾಗಿರುವ ವಿಶ್ವದ ಮೊದಲ ವಿಶ್ವವಿದ್ಯಾಲಯವಾಗಲಿದೆ. ಇದು ವನ್ಯಜೀವಿಗಳ ಆರೈಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಉನ್ನತ ಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡಲಿದೆ.</p>.<p>ಈ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವುದು, ಪ್ರಪಂಚದಾದ್ಯಂತದ ಯುವಜನರನ್ನು ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡಲು ಮತ್ತು ಅವುಗಳ ಸೇವೆ ಮಾಡಲು ಆಕರ್ಷಿಸುವುದು ಇದರ ಉದ್ದೇಶವಾಗಿದೆ. </p>.<h2>ಪ್ರಮುಖ ಉದ್ದೇಶಗಳು: </h2><p>ಪಶುವೈದ್ಯಕೀಯ ಔಷಧ, ವನ್ಯಜೀವಿಗಳ ಸಂರಕ್ಷಣೆ ಮತ್ತು ಆರೈಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯದ ನಾಯಕರನ್ನು ರೂಪಿಸುವುದು ಈ ಸಂಸ್ಥೆಯ ಗುರಿಯಾಗಿದೆ.</p>.<p>ಇದರ ಪಠ್ಯಕ್ರಮವನ್ನು ಪ್ರಾಚೀನ ಭಾರತದ ಶಿಕ್ಷಣ ಪದ್ದತಿಯನ್ನು ಬಳಸಿಕೊಂಡು, ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಮಾದರಿಯನ್ನು ರಚಿಸಲಾಗುತ್ತದೆ.</p>.<p>ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅನಂತ್ ಅಂಬಾನಿ, ಕರುಣೆ, ಜ್ಞಾನ ಮತ್ತು ಕೌಶಲ್ಯದಿಂದ ಜೀವಿಗಳಿಗೆ ಸೇವೆ ಸಲ್ಲಿಸಲು ನಾವು ಹೇಗೆ ಸಿದ್ಧರಾಗುತ್ತೇವೆ ಎಂಬುವುದು ಮುಖ್ಯ. ಸಂಕಷ್ಟದಲ್ಲಿರುವ ಪ್ರಾಣಿಗಳನ್ನು ನೋಡಿ, ಅವುಗಳ ಆರೈಕೆಗೆ ಹೆಚ್ಚಿನ ಸೌಲಭ್ಯ ಅಗತ್ಯವಿದೆ ಎಂದು ಮನಗಂಡ ನಂತರ ಈ 'ವಂತಾರಾ ವಿಶ್ವವಿದ್ಯಾಲಯ'ಕ್ಕೆ ರೂಪ ನೀಡಲಾಗಿದೆ. </p>.<p>ಪ್ರಾಚೀನ ನಳಂದಾ ವಿಶ್ವವಿದ್ಯಾಲಯದ ತತ್ವಗಳು ಮತ್ತು 'ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ' (ಅಂದರೆ ಎಲ್ಲಾ ದಿಕ್ಕುಗಳಿಂದಲೂ ಉದಾತ್ತ ಆಲೋಚನೆಗಳು ನಮಗೆ ಬರಲಿ) ಎಂಬ ಧ್ಯೇಯವಾಕ್ಯದಿಂದ ಸ್ಫೂರ್ತಿ ಪಡೆದು, ಪ್ರತಿ ಜೀವಿಯನ್ನು ರಕ್ಷಿಸಲು ಬದ್ಧವಾಗಿ ಮತ್ತು ಹೊಸ ಪೀಳಿಗೆಯನ್ನು ಪೋಷಿಸಲು ಈ ವಿಶ್ವವಿದ್ಯಾಲಯ ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.</p>.<p>ಶಿಲಾನ್ಯಾಸ ಸಮಾರಂಭದಲ್ಲಿ ಶಿಕ್ಷಣ ತಜ್ಞರು, ವಿಜ್ಞಾನಿಗಳು ಸೇರಿದಮತೆ ಪ್ರಮುಖರು ಪಾಲ್ಗೊಂಡಿದ್ದರು.</p>.<h2> ಪ್ರಮುಖ ಲಕ್ಷಣಗಳು</h2><ul><li><p><strong>ಪರಿಸರ ಸ್ನೇಹಿ ಅಡಿಪಾಯ:</strong> ಭಾರತದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗಗಳ ವಿವಿಧ ಕಾಡುಗಳು, ಜೌಗು ಪ್ರದೇಶಗಳು, ಹುಲ್ಲುಗಾವಲುಗಳು ಮತ್ತು ಹಿಮಾಲಯದ ಎತ್ತರದ ಪ್ರದೇಶಗಳಿಂದ ಮಣ್ಣು, ನೀರು ಮತ್ತು ಕಲ್ಲುಗಳನ್ನು ಸಂಗ್ರಹಿಸಿ ಅಡಿಪಾಯ ಹಾಕುವ ಮೂಲಕ ದೇಶದ ನೈಸರ್ಗಿಕ ಪರಂಪರೆಯನ್ನು ಗೌರವಿಸಲಾಗಿದೆ.</p></li></ul><ul><li><p><strong>ಪ್ರಾಯೋಗಿಕ ಶಿಕ್ಷಣ:</strong> ಪ್ರಾಣಿಗಳನ್ನು ರಕ್ಷಿಸುವಾಗ ಪಡೆದ ಅನುಭವವನ್ನು ಈ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಅಳವಡಿಸಲಾಗುತ್ತದೆ. ಕೇವಲ ಪುಸ್ತಕದ ಜ್ಞಾನವಲ್ಲದೆ, ಪ್ರಾಯೋಗಿಕ ತರಬೇತಿಗೂ ಇಲ್ಲಿ ಆದ್ಯತೆ ನೀಡಲಾಗುತ್ತದೆ.</p></li></ul><ul><li><p><strong>ವಿವಿಧ ಕೋರ್ಸ್ಗಳು: ಇ</strong>ಲ್ಲಿ ಪದವಿ, ಸ್ನಾತಕೋತ್ತರ ಮತ್ತು ಫೆಲೋಶಿಪ್ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಇರಲಿವೆ.</p></li></ul><p> * ವನ್ಯಜೀವಿಗಳ ಶಸ್ತ್ರಚಿಕಿತ್ಸೆ ಮತ್ತು ಔಷಧ </p><p> * ಪ್ರಾಣಿಗಳ ಪೋಷಣೆ ಮತ್ತು ನಡವಳಿಕೆಯ ವಿಜ್ಞಾನ</p><p> * ತಳಿಶಾಸ್ತ್ರ (Genetics) ಮತ್ತು ಸಂರಕ್ಷಣಾ ನೀತಿಗಳು</p><p> * ವನ್ಯಜೀವಿಗಳಿಗಾಗಿ ನೈಸರ್ಗಿಕ ಪರಿಸರ ವಿನ್ಯಾಸ (Animal care environment design)</p><ul><li><p> <strong>ವಿದ್ಯಾರ್ಥಿವೇತನ:</strong> ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ವಿಶೇಷ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಸುಧಾರಿತ ಕ್ಲಿನಿಕಲ್ ಮೂಲಸೌಕರ್ಯ ಮತ್ತು ವಸತಿ ಸೌಲಭ್ಯವಿರುವ ಕ್ಯಾಂಪಸ್ ಅನ್ನು ಇದು ಹೊಂದಿರಲಿದೆ. </p></li></ul> .<div><div class="bigfact-title">ವಿಶೇಷ ಘೋಷಣೆ</div><div class="bigfact-description">ಸಮಾರಂಭದಲ್ಲಿ 'ವಂತಾರಾ ಯೂನಿವರ್ಸಿಟಿ ಫೌಂಡಿಂಗ್ ಫೆಲೋಸ್' ಮತ್ತು 'ಎವ್ರಿ ಲೈಫ್ ಮ್ಯಾಟರ್ಸ್' (ಪ್ರತಿ ಜೀವಿಯೂ ಮುಖ್ಯ) ಎಂಬ ವಿದ್ಯಾರ್ಥಿವೇತನವನ್ನು ಘೋಷಿಸಲಾಯಿತು. ಜ್ಞಾನವು ಕೇವಲ ಪ್ರಗತಿಗಾಗಿ ಮಾತ್ರವಲ್ಲದೆ, ಜೀವಸಂಕುಲದ ರಕ್ಷಣೆಗಾಗಿಯೂ ಬಳಕೆಯಾಗಬೇಕು ಎಂಬುದು ಇದರ ಆಶಯವಾಗಿದೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಸ್ಥಾಪಿಸಿದ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ವಂತರಾ, ಗುಜರಾತ್ನ ಜಾಮ್ನಗರದಲ್ಲಿ 'ವನ್ಯಜೀವಿ ವಿಶ್ವವಿದ್ಯಾಲಯ' ಪ್ರಾರಂಭಿಸುವುದಾಗಿ ಶುಕ್ರವಾರ ಘೋಷಿಸಿದೆ.</p>.<p>ಇದು ವನ್ಯಜೀವಿ ಸಂರಕ್ಷಣೆ ಮತ್ತು ಪಶುವೈದ್ಯಕೀಯ ವಿಜ್ಞಾನಕ್ಕೆ ಮೀಸಲಾಗಿರುವ ವಿಶ್ವದ ಮೊದಲ ವಿಶ್ವವಿದ್ಯಾಲಯವಾಗಲಿದೆ. ಇದು ವನ್ಯಜೀವಿಗಳ ಆರೈಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಉನ್ನತ ಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡಲಿದೆ.</p>.<p>ಈ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವುದು, ಪ್ರಪಂಚದಾದ್ಯಂತದ ಯುವಜನರನ್ನು ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡಲು ಮತ್ತು ಅವುಗಳ ಸೇವೆ ಮಾಡಲು ಆಕರ್ಷಿಸುವುದು ಇದರ ಉದ್ದೇಶವಾಗಿದೆ. </p>.<h2>ಪ್ರಮುಖ ಉದ್ದೇಶಗಳು: </h2><p>ಪಶುವೈದ್ಯಕೀಯ ಔಷಧ, ವನ್ಯಜೀವಿಗಳ ಸಂರಕ್ಷಣೆ ಮತ್ತು ಆರೈಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯದ ನಾಯಕರನ್ನು ರೂಪಿಸುವುದು ಈ ಸಂಸ್ಥೆಯ ಗುರಿಯಾಗಿದೆ.</p>.<p>ಇದರ ಪಠ್ಯಕ್ರಮವನ್ನು ಪ್ರಾಚೀನ ಭಾರತದ ಶಿಕ್ಷಣ ಪದ್ದತಿಯನ್ನು ಬಳಸಿಕೊಂಡು, ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಮಾದರಿಯನ್ನು ರಚಿಸಲಾಗುತ್ತದೆ.</p>.<p>ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅನಂತ್ ಅಂಬಾನಿ, ಕರುಣೆ, ಜ್ಞಾನ ಮತ್ತು ಕೌಶಲ್ಯದಿಂದ ಜೀವಿಗಳಿಗೆ ಸೇವೆ ಸಲ್ಲಿಸಲು ನಾವು ಹೇಗೆ ಸಿದ್ಧರಾಗುತ್ತೇವೆ ಎಂಬುವುದು ಮುಖ್ಯ. ಸಂಕಷ್ಟದಲ್ಲಿರುವ ಪ್ರಾಣಿಗಳನ್ನು ನೋಡಿ, ಅವುಗಳ ಆರೈಕೆಗೆ ಹೆಚ್ಚಿನ ಸೌಲಭ್ಯ ಅಗತ್ಯವಿದೆ ಎಂದು ಮನಗಂಡ ನಂತರ ಈ 'ವಂತಾರಾ ವಿಶ್ವವಿದ್ಯಾಲಯ'ಕ್ಕೆ ರೂಪ ನೀಡಲಾಗಿದೆ. </p>.<p>ಪ್ರಾಚೀನ ನಳಂದಾ ವಿಶ್ವವಿದ್ಯಾಲಯದ ತತ್ವಗಳು ಮತ್ತು 'ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ' (ಅಂದರೆ ಎಲ್ಲಾ ದಿಕ್ಕುಗಳಿಂದಲೂ ಉದಾತ್ತ ಆಲೋಚನೆಗಳು ನಮಗೆ ಬರಲಿ) ಎಂಬ ಧ್ಯೇಯವಾಕ್ಯದಿಂದ ಸ್ಫೂರ್ತಿ ಪಡೆದು, ಪ್ರತಿ ಜೀವಿಯನ್ನು ರಕ್ಷಿಸಲು ಬದ್ಧವಾಗಿ ಮತ್ತು ಹೊಸ ಪೀಳಿಗೆಯನ್ನು ಪೋಷಿಸಲು ಈ ವಿಶ್ವವಿದ್ಯಾಲಯ ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.</p>.<p>ಶಿಲಾನ್ಯಾಸ ಸಮಾರಂಭದಲ್ಲಿ ಶಿಕ್ಷಣ ತಜ್ಞರು, ವಿಜ್ಞಾನಿಗಳು ಸೇರಿದಮತೆ ಪ್ರಮುಖರು ಪಾಲ್ಗೊಂಡಿದ್ದರು.</p>.<h2> ಪ್ರಮುಖ ಲಕ್ಷಣಗಳು</h2><ul><li><p><strong>ಪರಿಸರ ಸ್ನೇಹಿ ಅಡಿಪಾಯ:</strong> ಭಾರತದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗಗಳ ವಿವಿಧ ಕಾಡುಗಳು, ಜೌಗು ಪ್ರದೇಶಗಳು, ಹುಲ್ಲುಗಾವಲುಗಳು ಮತ್ತು ಹಿಮಾಲಯದ ಎತ್ತರದ ಪ್ರದೇಶಗಳಿಂದ ಮಣ್ಣು, ನೀರು ಮತ್ತು ಕಲ್ಲುಗಳನ್ನು ಸಂಗ್ರಹಿಸಿ ಅಡಿಪಾಯ ಹಾಕುವ ಮೂಲಕ ದೇಶದ ನೈಸರ್ಗಿಕ ಪರಂಪರೆಯನ್ನು ಗೌರವಿಸಲಾಗಿದೆ.</p></li></ul><ul><li><p><strong>ಪ್ರಾಯೋಗಿಕ ಶಿಕ್ಷಣ:</strong> ಪ್ರಾಣಿಗಳನ್ನು ರಕ್ಷಿಸುವಾಗ ಪಡೆದ ಅನುಭವವನ್ನು ಈ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಅಳವಡಿಸಲಾಗುತ್ತದೆ. ಕೇವಲ ಪುಸ್ತಕದ ಜ್ಞಾನವಲ್ಲದೆ, ಪ್ರಾಯೋಗಿಕ ತರಬೇತಿಗೂ ಇಲ್ಲಿ ಆದ್ಯತೆ ನೀಡಲಾಗುತ್ತದೆ.</p></li></ul><ul><li><p><strong>ವಿವಿಧ ಕೋರ್ಸ್ಗಳು: ಇ</strong>ಲ್ಲಿ ಪದವಿ, ಸ್ನಾತಕೋತ್ತರ ಮತ್ತು ಫೆಲೋಶಿಪ್ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಇರಲಿವೆ.</p></li></ul><p> * ವನ್ಯಜೀವಿಗಳ ಶಸ್ತ್ರಚಿಕಿತ್ಸೆ ಮತ್ತು ಔಷಧ </p><p> * ಪ್ರಾಣಿಗಳ ಪೋಷಣೆ ಮತ್ತು ನಡವಳಿಕೆಯ ವಿಜ್ಞಾನ</p><p> * ತಳಿಶಾಸ್ತ್ರ (Genetics) ಮತ್ತು ಸಂರಕ್ಷಣಾ ನೀತಿಗಳು</p><p> * ವನ್ಯಜೀವಿಗಳಿಗಾಗಿ ನೈಸರ್ಗಿಕ ಪರಿಸರ ವಿನ್ಯಾಸ (Animal care environment design)</p><ul><li><p> <strong>ವಿದ್ಯಾರ್ಥಿವೇತನ:</strong> ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ವಿಶೇಷ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಸುಧಾರಿತ ಕ್ಲಿನಿಕಲ್ ಮೂಲಸೌಕರ್ಯ ಮತ್ತು ವಸತಿ ಸೌಲಭ್ಯವಿರುವ ಕ್ಯಾಂಪಸ್ ಅನ್ನು ಇದು ಹೊಂದಿರಲಿದೆ. </p></li></ul> .<div><div class="bigfact-title">ವಿಶೇಷ ಘೋಷಣೆ</div><div class="bigfact-description">ಸಮಾರಂಭದಲ್ಲಿ 'ವಂತಾರಾ ಯೂನಿವರ್ಸಿಟಿ ಫೌಂಡಿಂಗ್ ಫೆಲೋಸ್' ಮತ್ತು 'ಎವ್ರಿ ಲೈಫ್ ಮ್ಯಾಟರ್ಸ್' (ಪ್ರತಿ ಜೀವಿಯೂ ಮುಖ್ಯ) ಎಂಬ ವಿದ್ಯಾರ್ಥಿವೇತನವನ್ನು ಘೋಷಿಸಲಾಯಿತು. ಜ್ಞಾನವು ಕೇವಲ ಪ್ರಗತಿಗಾಗಿ ಮಾತ್ರವಲ್ಲದೆ, ಜೀವಸಂಕುಲದ ರಕ್ಷಣೆಗಾಗಿಯೂ ಬಳಕೆಯಾಗಬೇಕು ಎಂಬುದು ಇದರ ಆಶಯವಾಗಿದೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>