<p><strong>ಚೆನ್ನೈ:</strong> ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೇವಲ ಎಂಟು ದಿನಗಳು ಬಾಕಿ ಇರುವಂತೆಯೇ ಪ್ರಚಾರ ಕಣ ರಂಗೇರಿದೆ.</p><p>ಆದರೆ ಟಿವಿಕೆ ಪಕ್ಷದ ನಾಯಕ ವಿಜಯ್ ಅವರು ತಮ್ಮ ಹಲವು ಪ್ರಚಾರ ಸಭೆಗಳನ್ನು ದಿಢೀರ್ ರದ್ದುಗೊಳಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.</p><p>ವಿಜಯ್ ಚುನಾವಣೆ ರ್ಯಾಲಿಗಳು ರದ್ದಾಗುತ್ತಿರುವುದನ್ನು ಆಡಳಿತರೂಢ ಡಿಎಂಕೆ ಲೇವಡಿ ಮಾಡಿದ್ದು ಇದು ಟಿಎಂಕೆಯ ವರ್ಕ್ ಫ್ರಮ್ ಹೋಮ್ ಪ್ರಚಾರ ಎಂದು ಅಣಕವಾಡಿದೆ. </p><p>ಮಾರ್ಚ್ 15ರಂದು ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಆಯೋಗದಿಂದ ಅನುಮತಿ ಸಿಕ್ಕಿದ್ದರೂ ವಿಜಯ್ ಹಲವು ಕಾರ್ಯಕ್ರಮಗಳನ್ನು ಕೈಬಿಟ್ಟಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣಗಳನ್ನು ಟಿವಿಕೆ ಬಹಿರಂಗಪಡಿಸಿಲ್ಲ.</p><p>ಕಳೆದ ವರ್ಷ ಕರೂರ್ನಲ್ಲಿ ನಡೆದ ವಿಜಯ್ ಅವರ ಸಾರ್ವಜನಿಕ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ್ದರು. ಈ ದುರಂತದ ನಂತರ ವಿಜಯ್ ಸಾರ್ವಜನಿಕ ಸಭೆಗಳ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುತ್ತಿದ್ದಾರೆ ಎನ್ನಲಾಗಿದೆ.</p><p>ವಿಲ್ಲಿವಾಕ್ಕಂ, ತಿರುವಳ್ಳೂರು, ಚೆನ್ನೈನ ಟಿ.ನಗರದಲ್ಲಿ ನಡೆಯಬೇಕಿದ್ದ ಚುನಾವಣೆ ರ್ಯಾಲಿಗಳನ್ನು ರದ್ದು ಪಡಿಸಲಾಗಿದೆ. ನಾಳೆ ಮತ್ತು ನಾಡಿದ್ದು ಕನ್ಯಾಕುಮಾರಿ, ಪುದೈಕೊಟ್ಟೈನಲ್ಲಿ ನಡೆಯಬೇಕಿದ್ದ ಸಭೆಗಳು ನಡೆಯುವುದು ಅನುಮಾನ ಎನ್ನಲಾಗಿದೆ.</p><p>ಸಭೆಗಳು ರದ್ದಾಗುತ್ತಿರುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ ಎಂದು ಟಿವಿಕೆ ಪಕ್ಷದ ಮೂಲಗಳು ಹೇಳಿವೆ. ಆದಾಗ್ಯೂ ನನ್ನ ಹಾಗೂ ಪಕ್ಷದ ಅಭ್ಯರ್ಥಿಗಳನ್ನು ಬೇರೆಯಾಗಿ ನೋಡಬೇಡಿ ಎಂದು ವಿಜಯ್ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.</p><p>ವಿಜಯ್ ಅಲಭ್ಯತೆಯಿಂದ ಕೆಲ ಅಭ್ಯರ್ಥಿಗಳು ಹೊಸ ಹಾದಿ ಹಿಡಿದಿದ್ದಾರೆ. ತಿರುವೇರುಂಬೂರ್ ಅಭ್ಯರ್ಥಿ ವಿಜಯ್ ಅವರ ಕಟೌಟ್ ಬಳಸಿ ಪ್ರಚಾರ ಮಾಡುತ್ತಿದ್ದರೆ, ಕೊಳತ್ತೂರು ಅಭ್ಯರ್ಥಿ ವಿಜಯ್ ಅವರಂತೆ ಕಾಣುವ ವ್ಯಕ್ತಿಯನ್ನು ಕರೆಸಿ ಮತಯಾಚನೆ ಮಾಡುತ್ತಿದ್ದಾರೆ.</p><p>ಏಪ್ರಿಲ್ 23ರಂದು ಮತದಾನ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೇವಲ ಎಂಟು ದಿನಗಳು ಬಾಕಿ ಇರುವಂತೆಯೇ ಪ್ರಚಾರ ಕಣ ರಂಗೇರಿದೆ.</p><p>ಆದರೆ ಟಿವಿಕೆ ಪಕ್ಷದ ನಾಯಕ ವಿಜಯ್ ಅವರು ತಮ್ಮ ಹಲವು ಪ್ರಚಾರ ಸಭೆಗಳನ್ನು ದಿಢೀರ್ ರದ್ದುಗೊಳಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.</p><p>ವಿಜಯ್ ಚುನಾವಣೆ ರ್ಯಾಲಿಗಳು ರದ್ದಾಗುತ್ತಿರುವುದನ್ನು ಆಡಳಿತರೂಢ ಡಿಎಂಕೆ ಲೇವಡಿ ಮಾಡಿದ್ದು ಇದು ಟಿಎಂಕೆಯ ವರ್ಕ್ ಫ್ರಮ್ ಹೋಮ್ ಪ್ರಚಾರ ಎಂದು ಅಣಕವಾಡಿದೆ. </p><p>ಮಾರ್ಚ್ 15ರಂದು ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಆಯೋಗದಿಂದ ಅನುಮತಿ ಸಿಕ್ಕಿದ್ದರೂ ವಿಜಯ್ ಹಲವು ಕಾರ್ಯಕ್ರಮಗಳನ್ನು ಕೈಬಿಟ್ಟಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣಗಳನ್ನು ಟಿವಿಕೆ ಬಹಿರಂಗಪಡಿಸಿಲ್ಲ.</p><p>ಕಳೆದ ವರ್ಷ ಕರೂರ್ನಲ್ಲಿ ನಡೆದ ವಿಜಯ್ ಅವರ ಸಾರ್ವಜನಿಕ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ್ದರು. ಈ ದುರಂತದ ನಂತರ ವಿಜಯ್ ಸಾರ್ವಜನಿಕ ಸಭೆಗಳ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುತ್ತಿದ್ದಾರೆ ಎನ್ನಲಾಗಿದೆ.</p><p>ವಿಲ್ಲಿವಾಕ್ಕಂ, ತಿರುವಳ್ಳೂರು, ಚೆನ್ನೈನ ಟಿ.ನಗರದಲ್ಲಿ ನಡೆಯಬೇಕಿದ್ದ ಚುನಾವಣೆ ರ್ಯಾಲಿಗಳನ್ನು ರದ್ದು ಪಡಿಸಲಾಗಿದೆ. ನಾಳೆ ಮತ್ತು ನಾಡಿದ್ದು ಕನ್ಯಾಕುಮಾರಿ, ಪುದೈಕೊಟ್ಟೈನಲ್ಲಿ ನಡೆಯಬೇಕಿದ್ದ ಸಭೆಗಳು ನಡೆಯುವುದು ಅನುಮಾನ ಎನ್ನಲಾಗಿದೆ.</p><p>ಸಭೆಗಳು ರದ್ದಾಗುತ್ತಿರುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ ಎಂದು ಟಿವಿಕೆ ಪಕ್ಷದ ಮೂಲಗಳು ಹೇಳಿವೆ. ಆದಾಗ್ಯೂ ನನ್ನ ಹಾಗೂ ಪಕ್ಷದ ಅಭ್ಯರ್ಥಿಗಳನ್ನು ಬೇರೆಯಾಗಿ ನೋಡಬೇಡಿ ಎಂದು ವಿಜಯ್ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.</p><p>ವಿಜಯ್ ಅಲಭ್ಯತೆಯಿಂದ ಕೆಲ ಅಭ್ಯರ್ಥಿಗಳು ಹೊಸ ಹಾದಿ ಹಿಡಿದಿದ್ದಾರೆ. ತಿರುವೇರುಂಬೂರ್ ಅಭ್ಯರ್ಥಿ ವಿಜಯ್ ಅವರ ಕಟೌಟ್ ಬಳಸಿ ಪ್ರಚಾರ ಮಾಡುತ್ತಿದ್ದರೆ, ಕೊಳತ್ತೂರು ಅಭ್ಯರ್ಥಿ ವಿಜಯ್ ಅವರಂತೆ ಕಾಣುವ ವ್ಯಕ್ತಿಯನ್ನು ಕರೆಸಿ ಮತಯಾಚನೆ ಮಾಡುತ್ತಿದ್ದಾರೆ.</p><p>ಏಪ್ರಿಲ್ 23ರಂದು ಮತದಾನ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>