<p><strong>ಚೆನ್ನೈ</strong>: ಟಿವಿಕೆ ಮುಖ್ಯಸ್ಥ, ನಟ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಣವಚನ ಸ್ವೀಕರಿಸಿದ ಸಮಾರಂಭದಲ್ಲಿ ವಂದೇ ಮಾತರಂ ಹಾಡಿದ ಬಳಿಕ ನಾಡಗೀತೆ ‘ತಮಿಳ್ ತಾಯ್ ವಾಳ್ತು’ ಅನ್ನು ಹಾಡಿದ್ದಕ್ಕೆ ಟಿವಿಕೆ ಮಿತ್ರ ಪಕ್ಷ ಸಿಪಿಐ ಆಕ್ಷೇಪ ವ್ಯಕ್ತಪಡಿಸಿದೆ.</p><p>ಸರ್ಕಾರಿ ಸಮಾರಂಭಗಳ ಶಿಷ್ಟಾಚಾರದಲ್ಲಿ ನಾಡಗೀತೆಗೆ ಪ್ರಮುಖ ಸ್ಥಾನ ನೀಡಬೇಕು ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡ್ಯನ್ ಒತ್ತಾಯಿಸಿದ್ದಾರೆ.</p><p>ಜೋಸೆಫ್ ಸಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ 'ವಂದೇ ಮಾತರಂ' ಅನ್ನು ಮೊದಲು, ನಂತರ ರಾಷ್ಟ್ರಗೀತೆ 'ಜನ ಗಣ ಮನ' ಮತ್ತು ನಾಡ ಗೀತೆ‘ತಮಿಳ್ ತಾಯ್ ವಾಳ್ತು’ ಅನ್ನು ಮೂರನೇ ಸ್ಥಾನದಲ್ಲಿ ಹಾಡಿಸಲಾಯಿತು. ಸಮಾರಂಭದಲ್ಲಿ ನಾಡಗೀತೆಗೆ ಮೂರನೇ ಸ್ಥಾನ ನೀಡಲಾಯಿತು. 'ವಂದೇ ಮಾತರಂ' ಮತ್ತು ರಾಷ್ಟ್ರಗೀತೆಗೆ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ,</p><p>ತಮಿಳುನಾಡಿನಲ್ಲಿ ಸರ್ಕಾರಿ ಸಮಾರಂಭಗಳು ಸಾಂಪ್ರದಾಯಿಕವಾಗಿ ನಾಡಗೀತೆಯೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಕೊನೆಗೊಳ್ಳುತ್ತವೆ ಎಂದು ಅವರು ಗಮನ ಹೇಳಿದರು.</p><p> 'ವಂದೇ ಮಾತರಂ' ಗೀತೆಯು ನಿರ್ದಿಷ್ಟ ಪಂಥದ ಧಾರ್ಮಿಕ ಪಾತ್ರವನ್ನು ಹೊಂದಿರುವುದರಿಂದ ಅದನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲೇ ರಾಷ್ಟ್ರಗೀತೆಯಾಗಿ ಪರಿಗಣಿಸಿರಲಿಲ್ಲ ಎಂದು ವೀರಪಾಂಡ್ಯನ್ ಹೇಳಿದ್ದಾರೆ.</p><p>‘ಲೋಕ ಭವನದ ನಿರ್ದೇಶನದ ಅಡಿಯಲ್ಲಿ ತಮಿಳುನಾಡು ಸರ್ಕಾರ ಆಯೋಜಿಸಿದ ಪ್ರಮಾಣವಚನ ಸಮಾರಂಭದ ಕಾರ್ಯಸೂಚಿಯಲ್ಲಿ ನಾಡಗೀತೆಯನ್ನು ಮೂರನೇ ಸ್ಥಾನದಲ್ಲಿ ಇರಿಸಿ, 'ವಂದೇ ಮಾತರಂ' ಗೆ ಪ್ರಥಮ ಸ್ಥಾನ ನೀಡಿದ ನಿರ್ಧಾರವು ಸಂಪ್ರದಾಯದ ಉಲ್ಲಂಘನೆಯಾಗಿದೆ’ಎಂದು ಅವರು ಆರೋಪಿಸಿದ್ದಾರೆ.</p><p>ಈ ತಪ್ಪಿಗೆ ಕಾರಣರಾದ ಬಗ್ಗೆ ತಮಿಳುನಾಡು ಸರ್ಕಾರ ಜನರಿಗೆ ವಿವರಣೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.</p> .‘ವಂದೇ ಮಾತರಂ’ ಹಾಡಲೇಬೇಕು ಎಂಬ ಕಡ್ಡಾಯವಿಲ್ಲ: ಸುಪ್ರೀಂ ಕೋರ್ಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಟಿವಿಕೆ ಮುಖ್ಯಸ್ಥ, ನಟ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಣವಚನ ಸ್ವೀಕರಿಸಿದ ಸಮಾರಂಭದಲ್ಲಿ ವಂದೇ ಮಾತರಂ ಹಾಡಿದ ಬಳಿಕ ನಾಡಗೀತೆ ‘ತಮಿಳ್ ತಾಯ್ ವಾಳ್ತು’ ಅನ್ನು ಹಾಡಿದ್ದಕ್ಕೆ ಟಿವಿಕೆ ಮಿತ್ರ ಪಕ್ಷ ಸಿಪಿಐ ಆಕ್ಷೇಪ ವ್ಯಕ್ತಪಡಿಸಿದೆ.</p><p>ಸರ್ಕಾರಿ ಸಮಾರಂಭಗಳ ಶಿಷ್ಟಾಚಾರದಲ್ಲಿ ನಾಡಗೀತೆಗೆ ಪ್ರಮುಖ ಸ್ಥಾನ ನೀಡಬೇಕು ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡ್ಯನ್ ಒತ್ತಾಯಿಸಿದ್ದಾರೆ.</p><p>ಜೋಸೆಫ್ ಸಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ 'ವಂದೇ ಮಾತರಂ' ಅನ್ನು ಮೊದಲು, ನಂತರ ರಾಷ್ಟ್ರಗೀತೆ 'ಜನ ಗಣ ಮನ' ಮತ್ತು ನಾಡ ಗೀತೆ‘ತಮಿಳ್ ತಾಯ್ ವಾಳ್ತು’ ಅನ್ನು ಮೂರನೇ ಸ್ಥಾನದಲ್ಲಿ ಹಾಡಿಸಲಾಯಿತು. ಸಮಾರಂಭದಲ್ಲಿ ನಾಡಗೀತೆಗೆ ಮೂರನೇ ಸ್ಥಾನ ನೀಡಲಾಯಿತು. 'ವಂದೇ ಮಾತರಂ' ಮತ್ತು ರಾಷ್ಟ್ರಗೀತೆಗೆ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ,</p><p>ತಮಿಳುನಾಡಿನಲ್ಲಿ ಸರ್ಕಾರಿ ಸಮಾರಂಭಗಳು ಸಾಂಪ್ರದಾಯಿಕವಾಗಿ ನಾಡಗೀತೆಯೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಕೊನೆಗೊಳ್ಳುತ್ತವೆ ಎಂದು ಅವರು ಗಮನ ಹೇಳಿದರು.</p><p> 'ವಂದೇ ಮಾತರಂ' ಗೀತೆಯು ನಿರ್ದಿಷ್ಟ ಪಂಥದ ಧಾರ್ಮಿಕ ಪಾತ್ರವನ್ನು ಹೊಂದಿರುವುದರಿಂದ ಅದನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲೇ ರಾಷ್ಟ್ರಗೀತೆಯಾಗಿ ಪರಿಗಣಿಸಿರಲಿಲ್ಲ ಎಂದು ವೀರಪಾಂಡ್ಯನ್ ಹೇಳಿದ್ದಾರೆ.</p><p>‘ಲೋಕ ಭವನದ ನಿರ್ದೇಶನದ ಅಡಿಯಲ್ಲಿ ತಮಿಳುನಾಡು ಸರ್ಕಾರ ಆಯೋಜಿಸಿದ ಪ್ರಮಾಣವಚನ ಸಮಾರಂಭದ ಕಾರ್ಯಸೂಚಿಯಲ್ಲಿ ನಾಡಗೀತೆಯನ್ನು ಮೂರನೇ ಸ್ಥಾನದಲ್ಲಿ ಇರಿಸಿ, 'ವಂದೇ ಮಾತರಂ' ಗೆ ಪ್ರಥಮ ಸ್ಥಾನ ನೀಡಿದ ನಿರ್ಧಾರವು ಸಂಪ್ರದಾಯದ ಉಲ್ಲಂಘನೆಯಾಗಿದೆ’ಎಂದು ಅವರು ಆರೋಪಿಸಿದ್ದಾರೆ.</p><p>ಈ ತಪ್ಪಿಗೆ ಕಾರಣರಾದ ಬಗ್ಗೆ ತಮಿಳುನಾಡು ಸರ್ಕಾರ ಜನರಿಗೆ ವಿವರಣೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.</p> .‘ವಂದೇ ಮಾತರಂ’ ಹಾಡಲೇಬೇಕು ಎಂಬ ಕಡ್ಡಾಯವಿಲ್ಲ: ಸುಪ್ರೀಂ ಕೋರ್ಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>