<p><strong>ಬೆಂಗಳೂರು</strong>: ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಆರಂಭಿಕ ಕೆಲ ಸುತ್ತುಗಳಲ್ಲಿ ಡಿಎಂಕೆ, ಎಐಎಡಿಎಂಕೆ ಜೊತೆ ಟಿವಿಕೆಯೂ ಸಮಬಲದಲ್ಲಿ ಮುನ್ನಡೆಯನ್ನು ತೋರುತ್ತಿರುವುದು ಕಂಡು ಬರುತ್ತಿದೆ.</p><p>ನಟ ವಿಜಯ್ ಅವರ ಟಿವಿಕೆ ಪಕ್ಷ ಎಲ್ಲ 234 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.</p><p>ತಮಿಳುನಾಡಿನಲ್ಲಿ ಟಿವಿಕೆ ಮಿಂಚುತ್ತಿರುವ ಹಿನ್ನೆಲೆಯಲ್ಲಿ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಚೆನ್ನೈನ ನೀಲಾಂಕರೈ ಬಳಿಯ ನಿವಾಸಕ್ಕೆ ರಾಧನ್ ಪಂಡಿತ್ ಎನ್ನುವ ಜ್ಯೋತಿಷಿ ದೌಡಾಯಿಸಿದ್ದಾರೆ. ಅದು ಕೈಯಲ್ಲಿ ದೊಡ್ಡ ಹೂಗುಚ್ಚ ಹಿಡಿದು!</p><p>ದಳಪತಿ ವಿಜಯ್ ಅವರು ರಾಧನ್ ಪಂಡಿತ್ ಅವರ ಜ್ಯೋತಿಷ್ಯದಲ್ಲಿ ನಂಬಿಕೆ ಹೊಂದಿದ್ದಾರೆ ಎನ್ನಲಾಗಿದೆ.</p><p>ಮತದಾನಕ್ಕೂ ಮುನ್ನವೇ ಈ ಸಾರಿ ತಮಿಳುನಾಡಿನಲ್ಲಿ ಟಿವಿಕೆ ಅಧಿಕಾರಕ್ಕೇರಲಿದೆ ಎಂದು ಜ್ಯೋತಿಷಿ ರಾಧನ್ ಪಂಡಿತ್ ಭವಿಷ್ಯ ನುಡಿದಿದ್ದರು ಎಂದು ವರದಿಗಳು ತಿಳಿಸಿವೆ.</p><p>ಸದ್ಯ ನೂರು ಸ್ಥಾನಗಳ ಸನಿಹ ಟಿವಿಕೆ ಮುನ್ನೆಯನ್ನು ಕಾಯ್ದುಕೊಂಡು ಎಲ್ಲರ ಅಚ್ಚರಿಗೆ ಕಾರಣವಾಗಿದೆ.</p>.ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರಕ್ಕಿಳಿದ ವಿಜಯ್ ಕಟೌಟ್.ತಮಿಳುನಾಡು ಚುನಾವಣೆ: ಸ್ಟ್ರಾಂಗ್ ರೂಂಗಳ ಮೇಲೆ ನಿಗಾ ವಹಿಸಿ–ಅಭ್ಯರ್ಥಿಗಳಿಗೆ ವಿಜಯ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಆರಂಭಿಕ ಕೆಲ ಸುತ್ತುಗಳಲ್ಲಿ ಡಿಎಂಕೆ, ಎಐಎಡಿಎಂಕೆ ಜೊತೆ ಟಿವಿಕೆಯೂ ಸಮಬಲದಲ್ಲಿ ಮುನ್ನಡೆಯನ್ನು ತೋರುತ್ತಿರುವುದು ಕಂಡು ಬರುತ್ತಿದೆ.</p><p>ನಟ ವಿಜಯ್ ಅವರ ಟಿವಿಕೆ ಪಕ್ಷ ಎಲ್ಲ 234 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.</p><p>ತಮಿಳುನಾಡಿನಲ್ಲಿ ಟಿವಿಕೆ ಮಿಂಚುತ್ತಿರುವ ಹಿನ್ನೆಲೆಯಲ್ಲಿ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಚೆನ್ನೈನ ನೀಲಾಂಕರೈ ಬಳಿಯ ನಿವಾಸಕ್ಕೆ ರಾಧನ್ ಪಂಡಿತ್ ಎನ್ನುವ ಜ್ಯೋತಿಷಿ ದೌಡಾಯಿಸಿದ್ದಾರೆ. ಅದು ಕೈಯಲ್ಲಿ ದೊಡ್ಡ ಹೂಗುಚ್ಚ ಹಿಡಿದು!</p><p>ದಳಪತಿ ವಿಜಯ್ ಅವರು ರಾಧನ್ ಪಂಡಿತ್ ಅವರ ಜ್ಯೋತಿಷ್ಯದಲ್ಲಿ ನಂಬಿಕೆ ಹೊಂದಿದ್ದಾರೆ ಎನ್ನಲಾಗಿದೆ.</p><p>ಮತದಾನಕ್ಕೂ ಮುನ್ನವೇ ಈ ಸಾರಿ ತಮಿಳುನಾಡಿನಲ್ಲಿ ಟಿವಿಕೆ ಅಧಿಕಾರಕ್ಕೇರಲಿದೆ ಎಂದು ಜ್ಯೋತಿಷಿ ರಾಧನ್ ಪಂಡಿತ್ ಭವಿಷ್ಯ ನುಡಿದಿದ್ದರು ಎಂದು ವರದಿಗಳು ತಿಳಿಸಿವೆ.</p><p>ಸದ್ಯ ನೂರು ಸ್ಥಾನಗಳ ಸನಿಹ ಟಿವಿಕೆ ಮುನ್ನೆಯನ್ನು ಕಾಯ್ದುಕೊಂಡು ಎಲ್ಲರ ಅಚ್ಚರಿಗೆ ಕಾರಣವಾಗಿದೆ.</p>.ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರಕ್ಕಿಳಿದ ವಿಜಯ್ ಕಟೌಟ್.ತಮಿಳುನಾಡು ಚುನಾವಣೆ: ಸ್ಟ್ರಾಂಗ್ ರೂಂಗಳ ಮೇಲೆ ನಿಗಾ ವಹಿಸಿ–ಅಭ್ಯರ್ಥಿಗಳಿಗೆ ವಿಜಯ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>