<p>ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಕ್ರೀಡೆ ಸೇರಿದಂತೆ ಈ ದಿನದ 10 ಪ್ರಮುಖ ಸುದ್ದಿಗಳು ಇಲ್ಲಿವೆ....</p>.<p>ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಪ್ರಕರಣದ ಅಪರಾಧಿ, 15ನೇ ಆರೋಪಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಇಂದು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.</p>.ಯೋಗೀಶಗೌಡ ಕೊಲೆ ಕೇಸ್ನಲ್ಲಿ ಅಪರಾಧಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ .<p> ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ, ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿದಂತೆ 16 ಜನ ತಪ್ಪಿತಸ್ಥರಿಗೆ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.</p>.ಯೋಗೀಶಗೌಡ ಕೊಲೆ: ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ 7 ವರ್ಷ ಜೈಲು ಶಿಕ್ಷೆ.<p>ದೇಶದ ನಂಬರ್ 1 ಟೆಕ್ ಕಂಪನಿ ಎನಿಸಿಕೊಂಡಿರುವ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸ್)ನ ನಾಸಿಕ್ ಘಟಕದಲ್ಲಿ ಬಲವಂತದ ಧಾರ್ಮಿಕ ಮತಾಂತರದ ಆರೋಪ ಎದುರಿಸುತ್ತಿರುವ ಎಚ್ಆರ್ ನಿಧಾ ಖಾನ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.</p>.ನಾಸಿಕ್ TCS: ತಲೆಮರೆಸಿಕೊಂಡಿರುವ ನಿಧಾ ಖಾನ್ ಜಾಮೀನಿಗೆ ಅರ್ಜಿ.<p>ತೆಲಂಗಾಣದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 89 ಸಾವಿರ ಮಕ್ಕಳು ದಿನಕೂಲಿ ಕೆಲಸಗಳಲ್ಲಿ ತೊಡಗಿದ್ದಾರೆ ಎಂಬುದು 2024–25ರಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿದ ಜಾತಿ ಸಮೀಕ್ಷೆಯಿಂದ ಬಹಿರಂಗವಾಗಿದೆ.</p>.ತೆಲಂಗಾಣದ 89 ಸಾವಿರ ಮಕ್ಕಳು ದಿನಕೂಲಿಯಲ್ಲಿ ಭಾಗಿ: ಜಾತಿ ಸಮೀಕ್ಷೆಯಿಂದ ಬಹಿರಂಗ.<p>ವೇತನ ಆಯೋಗದ ಶಿಫಾರಸಿನ ಮೇಲೆ, ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ವೇತನ ಹಾಗೂ ಪಿಂಚಣಿ ಹೆಚ್ಚಳ ಮಾಡಲು ನಿರ್ಧರಿಸಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು 8ನೇ ವೇತನ ಆಯೋಗವನ್ನು ಕಳೆದ ವರ್ಷ ರಚನೆ ಮಾಡಿದ್ದರು. ನೌಕರರ ವಿವಿಧ ಸಂಘಟನೆಗಳು ವೇತನ, ಭತ್ಯೆ ಹೆಚ್ಚಳ ಹಾಗೂ ಒಟ್ಟಾರೆ ವೇತನ ಸಂರಚನೆಯ ಬದಲಾವಣೆಗಾಗಿ ಆಯೋಗಕ್ಕೆ ಮನವಿ ಸಲ್ಲಿಸಿದ್ದವು.</p>.8ನೇ ವೇತನ ಆಯೋಗ: ಮೂಲ ವೇತನ ಸಂರಚನೆಯಲ್ಲಿ ಬದಲಾವಣೆ.<p>ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸುವ ‘ಮಹಿಳಾ ಮೀಸಲಾತಿ ಕಾಯ್ದೆ–2023’ ಏಪ್ರಿಲ್ 16ರಿಂದಲೇ ಜಾರಿಯಾಗಿದೆ. ಪ್ರಸ್ತುತ ಸಂಸತ್ನಲ್ಲಿ ಚರ್ಚಿಸಲಾಗುತ್ತಿರುವ ತಿದ್ದುಪಡಿಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಕಾಯ್ದೆ ಜಾರಿ ಮಾಡಲಾಗಿದೆ.</p>.ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ: ನಿನ್ನೆಯಿಂದಲೇ ಕಾನೂನು ಜಾರಿ!.<p>ಪಶ್ಚಿಮ ಏಷ್ಯಾ ಸಂಘರ್ಷವು ಇಂಧನ, ಕೃಷಿ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೊರ್ಮುಜ್ ಜಲಸಂಧಿಗೆ ಇರಾನ್ ದಿಗ್ಬಂಧನ ಹಾಕಿದ್ದರಿಂದ ಜಗತ್ತಿನಾದ್ಯಂತ ಹಲವು ಸಮಸ್ಯೆಗಳು ತಲೆದೋರಿವೆ. ಇಂಧನ ಸಮಸ್ಯೆಯಿಂದ ಕೆಲ ತಿಂಡಿ–ಪದಾರ್ಥಗಳು ಹೋಟೆಲ್ ಮೆನುಯಿಂದ ಮಾಯವಾದರೆ, ರಸಗೊಬ್ಬರ ಅಲಭ್ಯತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ.</p>.ಒಂದು ಯುದ್ಧ, ಹತ್ತಾರು ಪರಿಣಾಮ: ಜನರ ಜೀವನವನ್ನೇ ಬದಲಿಸಿದ ಪಶ್ಚಿಮ ಏಷ್ಯಾ ಸಂಘರ್ಷ.<p>18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಅಜೇಯ 93 ರನ್ ಗಳಿಸಿ ಡೆಲ್ಲಿ ತಂಡವನ್ನು ಗೆಲ್ಲಿಸಿದ ಬಳಿಕ ಕನ್ನಡಿಗ ಕೆ.ಎಲ್. ರಾಹುಲ್ ಮಾಡಿದ ಸಂಭ್ರಮಾಚರಣೆಯನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.</p>.IPL 2026 | ತವರು ಮಗ vs ತವರು ತಂಡ: ನಾನಾ–ನೀನಾ ಕಾಳಗದಲ್ಲಿ ಮೇಲುಗೈ ಯಾರಿಗೆ?.<p>2026ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ನಡುವೆ ಜರ್ಮನಿಯ ಸಾಮಾಜಿಕ ಜಾಲತಾಣದ ಪ್ರಭಾವಿ (Social Media Influencer) ಒಬ್ಬರ ಫೋಟೊಗೆ ವಿರಾಟ್ ಅವರು ಲೈಕ್ ಮಾಡಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.</p>.ಜರ್ಮನಿಯ ಸುಂದರ ಯುವತಿ ಫೋಟೊಗೆ ಲೈಕ್ ಒತ್ತಿದ ವಿರಾಟ್ ಕೊಹ್ಲಿ?.<p>ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಕೆಲ ತಿಂಗಳುಗಳ ಹಿಂದೆ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾದರು. 39 ವರ್ಷದ ಸಮಂತಾ ಅವರು ಫಿಟ್ ಹಾಗೂ ಯಂಗ್ ಆಗಿ ಕಾಣಲು ಅವರ ಜೀವನ ಶೈಲಿಯೇ ಕಾರಣ ಎಂದು ಅವರೇ ಹೇಳಿಕೊಂಡಿದ್ದಾರೆ.</p>.ಈ 8 ಸೂತ್ರಗಳನ್ನು ಪಾಲಿಸಿದರೆ, ಸಮಂತಾ ಅವರಂತೆ ನೀವು ಫಿಟ್ ಆಗಿ ಇರಬಹದು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಕ್ರೀಡೆ ಸೇರಿದಂತೆ ಈ ದಿನದ 10 ಪ್ರಮುಖ ಸುದ್ದಿಗಳು ಇಲ್ಲಿವೆ....</p>.<p>ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಪ್ರಕರಣದ ಅಪರಾಧಿ, 15ನೇ ಆರೋಪಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಇಂದು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.</p>.ಯೋಗೀಶಗೌಡ ಕೊಲೆ ಕೇಸ್ನಲ್ಲಿ ಅಪರಾಧಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ .<p> ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ, ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿದಂತೆ 16 ಜನ ತಪ್ಪಿತಸ್ಥರಿಗೆ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.</p>.ಯೋಗೀಶಗೌಡ ಕೊಲೆ: ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ 7 ವರ್ಷ ಜೈಲು ಶಿಕ್ಷೆ.<p>ದೇಶದ ನಂಬರ್ 1 ಟೆಕ್ ಕಂಪನಿ ಎನಿಸಿಕೊಂಡಿರುವ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸ್)ನ ನಾಸಿಕ್ ಘಟಕದಲ್ಲಿ ಬಲವಂತದ ಧಾರ್ಮಿಕ ಮತಾಂತರದ ಆರೋಪ ಎದುರಿಸುತ್ತಿರುವ ಎಚ್ಆರ್ ನಿಧಾ ಖಾನ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.</p>.ನಾಸಿಕ್ TCS: ತಲೆಮರೆಸಿಕೊಂಡಿರುವ ನಿಧಾ ಖಾನ್ ಜಾಮೀನಿಗೆ ಅರ್ಜಿ.<p>ತೆಲಂಗಾಣದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 89 ಸಾವಿರ ಮಕ್ಕಳು ದಿನಕೂಲಿ ಕೆಲಸಗಳಲ್ಲಿ ತೊಡಗಿದ್ದಾರೆ ಎಂಬುದು 2024–25ರಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿದ ಜಾತಿ ಸಮೀಕ್ಷೆಯಿಂದ ಬಹಿರಂಗವಾಗಿದೆ.</p>.ತೆಲಂಗಾಣದ 89 ಸಾವಿರ ಮಕ್ಕಳು ದಿನಕೂಲಿಯಲ್ಲಿ ಭಾಗಿ: ಜಾತಿ ಸಮೀಕ್ಷೆಯಿಂದ ಬಹಿರಂಗ.<p>ವೇತನ ಆಯೋಗದ ಶಿಫಾರಸಿನ ಮೇಲೆ, ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ವೇತನ ಹಾಗೂ ಪಿಂಚಣಿ ಹೆಚ್ಚಳ ಮಾಡಲು ನಿರ್ಧರಿಸಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು 8ನೇ ವೇತನ ಆಯೋಗವನ್ನು ಕಳೆದ ವರ್ಷ ರಚನೆ ಮಾಡಿದ್ದರು. ನೌಕರರ ವಿವಿಧ ಸಂಘಟನೆಗಳು ವೇತನ, ಭತ್ಯೆ ಹೆಚ್ಚಳ ಹಾಗೂ ಒಟ್ಟಾರೆ ವೇತನ ಸಂರಚನೆಯ ಬದಲಾವಣೆಗಾಗಿ ಆಯೋಗಕ್ಕೆ ಮನವಿ ಸಲ್ಲಿಸಿದ್ದವು.</p>.8ನೇ ವೇತನ ಆಯೋಗ: ಮೂಲ ವೇತನ ಸಂರಚನೆಯಲ್ಲಿ ಬದಲಾವಣೆ.<p>ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸುವ ‘ಮಹಿಳಾ ಮೀಸಲಾತಿ ಕಾಯ್ದೆ–2023’ ಏಪ್ರಿಲ್ 16ರಿಂದಲೇ ಜಾರಿಯಾಗಿದೆ. ಪ್ರಸ್ತುತ ಸಂಸತ್ನಲ್ಲಿ ಚರ್ಚಿಸಲಾಗುತ್ತಿರುವ ತಿದ್ದುಪಡಿಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಕಾಯ್ದೆ ಜಾರಿ ಮಾಡಲಾಗಿದೆ.</p>.ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ: ನಿನ್ನೆಯಿಂದಲೇ ಕಾನೂನು ಜಾರಿ!.<p>ಪಶ್ಚಿಮ ಏಷ್ಯಾ ಸಂಘರ್ಷವು ಇಂಧನ, ಕೃಷಿ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೊರ್ಮುಜ್ ಜಲಸಂಧಿಗೆ ಇರಾನ್ ದಿಗ್ಬಂಧನ ಹಾಕಿದ್ದರಿಂದ ಜಗತ್ತಿನಾದ್ಯಂತ ಹಲವು ಸಮಸ್ಯೆಗಳು ತಲೆದೋರಿವೆ. ಇಂಧನ ಸಮಸ್ಯೆಯಿಂದ ಕೆಲ ತಿಂಡಿ–ಪದಾರ್ಥಗಳು ಹೋಟೆಲ್ ಮೆನುಯಿಂದ ಮಾಯವಾದರೆ, ರಸಗೊಬ್ಬರ ಅಲಭ್ಯತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ.</p>.ಒಂದು ಯುದ್ಧ, ಹತ್ತಾರು ಪರಿಣಾಮ: ಜನರ ಜೀವನವನ್ನೇ ಬದಲಿಸಿದ ಪಶ್ಚಿಮ ಏಷ್ಯಾ ಸಂಘರ್ಷ.<p>18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಅಜೇಯ 93 ರನ್ ಗಳಿಸಿ ಡೆಲ್ಲಿ ತಂಡವನ್ನು ಗೆಲ್ಲಿಸಿದ ಬಳಿಕ ಕನ್ನಡಿಗ ಕೆ.ಎಲ್. ರಾಹುಲ್ ಮಾಡಿದ ಸಂಭ್ರಮಾಚರಣೆಯನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.</p>.IPL 2026 | ತವರು ಮಗ vs ತವರು ತಂಡ: ನಾನಾ–ನೀನಾ ಕಾಳಗದಲ್ಲಿ ಮೇಲುಗೈ ಯಾರಿಗೆ?.<p>2026ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ನಡುವೆ ಜರ್ಮನಿಯ ಸಾಮಾಜಿಕ ಜಾಲತಾಣದ ಪ್ರಭಾವಿ (Social Media Influencer) ಒಬ್ಬರ ಫೋಟೊಗೆ ವಿರಾಟ್ ಅವರು ಲೈಕ್ ಮಾಡಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.</p>.ಜರ್ಮನಿಯ ಸುಂದರ ಯುವತಿ ಫೋಟೊಗೆ ಲೈಕ್ ಒತ್ತಿದ ವಿರಾಟ್ ಕೊಹ್ಲಿ?.<p>ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಕೆಲ ತಿಂಗಳುಗಳ ಹಿಂದೆ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾದರು. 39 ವರ್ಷದ ಸಮಂತಾ ಅವರು ಫಿಟ್ ಹಾಗೂ ಯಂಗ್ ಆಗಿ ಕಾಣಲು ಅವರ ಜೀವನ ಶೈಲಿಯೇ ಕಾರಣ ಎಂದು ಅವರೇ ಹೇಳಿಕೊಂಡಿದ್ದಾರೆ.</p>.ಈ 8 ಸೂತ್ರಗಳನ್ನು ಪಾಲಿಸಿದರೆ, ಸಮಂತಾ ಅವರಂತೆ ನೀವು ಫಿಟ್ ಆಗಿ ಇರಬಹದು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>