<p><strong>ಹೈದರಾಬಾದ್:</strong> ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಸಮ್ಮತಿಸಿವೆ. ಇದರಿಂದಾಗಿ ಕಳೆದ 40 ದಿನಗಳಿಂದ ನಡೆಯುತ್ತಿದ್ದ ಯುದ್ಧದಿಂದ ನಲುಗಿದ್ದ ಪಶ್ಚಿಮ ಏಷ್ಯಾ ಸೇರಿ ವಿಶ್ವವೇ ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.</p><p>ಕದನ ವಿರಾಮ ಘೋಷಣೆಯಾಗಿರುವುದು ಆಂಧ್ರಪ್ರದೇಶದ ರಾಯಲಸೀಮ ಭಾಗದ ಸಾವಿರಾರು ಬಾಳೆ ಬೆಳೆಗಾರರ ಮುಖದಲ್ಲಿ ತುಸು ತಡವಾಗಿ ಮಂದಹಾಸ ಮೂಡಿದಂತಾಗಿದೆ. </p><p>ಇರಾನ್, ಇರಾಕ್, ಯುಎಇ, ಬಹ್ರೇನ್ ಮತ್ತು ಒಮನ್ ಮಾರುಕಟ್ಟೆಗಳಿಗೆ ‘ರೋಬಸ್ಟಾ ಗ್ರಾಂಡ್ ನೈನ್’ (G9) ತಳಿಯ ಬಾಳೆಯನ್ನು ಪೂರೈಸುತ್ತಿದ್ದ ರೈತರಿಗೆ ಈ ಬಾರಿ ಹೆಚ್ಚು ನಷ್ಟ ಉಂಟಾಗಿದೆ. ರಫ್ತು ವಹಿವಾಟು ಉತ್ತುಂಗದಲ್ಲಿರಬೇಕಾದ ಸಮಯದಲ್ಲೇ ಯುದ್ಧ ತೀವ್ರಗೊಂಡು ಹಡಗು ಸಂಚಾರ ಮಾರ್ಗಗಳು ಬಂದ್ ಆಗಿದ್ದರಿಂದ ವ್ಯಾಪಾರ ಸಂಪೂರ್ಣ ಕುಸಿದಿತ್ತು. </p><p>ಅನಂತಪುರ ಮತ್ತು ಕಡಪ ಜಿಲ್ಲೆಗಳ ರೈತರು ವರ್ಷಕ್ಕೆ ಮೂರು ಬಾರಿ ಬಾಳೆ ಬೆಳೆಯುತ್ತಾರೆಯಾದರೂ, ಡಿಸೆಂಬರ್ 15ರಿಂದ ಮಾರ್ಚ್ ಅಂತ್ಯದವರೆಗೆ ಬರುವ ಬೆಳೆ ರಫ್ತಿಗೆ ಅತ್ಯಂತ ಸೂಕ್ತವಾದುದು. ಕಳೆದ ವರ್ಷ ರಾಯಲಸೀಮ ಭಾಗದಿಂದ ಅರಬ್ ರಾಷ್ಟ್ರಗಳಿಗೆ ಒಂದು ಲಕ್ಷ ಟನ್ ಬಾಳೆ ರಫ್ತಾಗಿತ್ತು.</p><p>ಆಂಧ್ರದ ಅನಂತಪುರ ಮತ್ತು ಕಡಪ ಜಿಲ್ಲೆಗಳಿಂದ ಬಾಳೆಹಣ್ಣನ್ನು ಲಾರಿಗಳ ಮೂಲಕ ಮುಂಬೈ ಬಂದರಿಗೆ ಸಾಗಿಸಲಾಗುತ್ತದೆ. ಅಲ್ಲಿಂದ ಹಡಗಿನ ಮೂಲಕ ಅರಬ್ ರಾಷ್ಟ್ರಗಳಿಗೆ ತಲುಪಲು 3 ದಿನಗಳು ಬೇಕಾಗುತ್ತದೆ. ಬಿಕ್ಕಟ್ಟು ಆರಂಭವಾಗುವ ಮೊದಲು ರಾಯಲಸೀಮ ಭಾಗದಿಂದ ಪ್ರತಿದಿನ 500ರಿಂದ 600 ಟನ್ ಬಾಳೆಹಣ್ಣು ರಫ್ತಾಗುತ್ತಿತ್ತು.</p><p>ಡಿಸೆಂಬರ್ನಿಂದ ಫೆಬ್ರುವರಿವರೆಗೆ ಉತ್ತರ ಭಾರತದ ಮಾರುಕಟ್ಟೆಗಳಲ್ಲಿ ಚಳಿಯ ಕಾರಣ ಬಾಳೆಹಣ್ಣು ಬಣ್ಣ ಬದಲಾಯಿಸುತ್ತದೆ, ಹಾಗಾಗಿ ಅವು ರಫ್ತಿಗೆ ಯೋಗ್ಯವಾಗಿರುವುದಿಲ್ಲ. ಆದರೆ, ನಮ್ಮ ಭಾಗದ ಹಣ್ಣುಗಳು ಬಣ್ಣ ಬದಲಾಗುವುದಿಲ್ಲ. ಈ ಬಾರಿ ರಫ್ತು ಚಟುವಟಿಕೆಗಳು ನಿಂತುಹೋದ ಕಾರಣ ನಾವು ತೀವ್ರ ನಷ್ಟ ಅನುಭವಿಸಿದ್ದೇವೆ ಎನ್ನುತ್ತಾರೆ ಅನಂತಪುರ ಜಿಲ್ಲೆಯ ಪ್ರಸನ್ನಾಯಪಲ್ಲಿಯ ರೈತ ಶಿವಶಂಕರ್ ರೆಡ್ಡಿ.</p><p>‘ಈ ಹಿಂದೆ ಪ್ರತಿ ಟನ್ ಬಾಳೆಗೆ ₹20,000ರಿಂದ ₹25,000 ಸಿಗುತ್ತಿತ್ತು. ಈಗ ಕೇವಲ ₹5,000ರಿಂದ ₹8,000 ಸಿಗುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಹಣ್ಣುಗಳ ಪೂರೈಕೆ ಹೆಚ್ಚಾದ ಕಾರಣ ಬೆಲೆ ಕೆ.ಜಿಗೆ ₹5 ರಿಂದ ₹6ಕ್ಕೆ ಕುಸಿದಿದೆ ಎಂದು ಸಾಫ್ಟ್ವೇರ್ ಎಂಜಿನಿಯರ್ ಕೆಲಸ ಬಿಟ್ಟು ಕೃಷಿ ಮಾಡುತ್ತಿರುವ ಜಯಸಿಂಹ ಅಳಲು ತೊಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಸಮ್ಮತಿಸಿವೆ. ಇದರಿಂದಾಗಿ ಕಳೆದ 40 ದಿನಗಳಿಂದ ನಡೆಯುತ್ತಿದ್ದ ಯುದ್ಧದಿಂದ ನಲುಗಿದ್ದ ಪಶ್ಚಿಮ ಏಷ್ಯಾ ಸೇರಿ ವಿಶ್ವವೇ ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.</p><p>ಕದನ ವಿರಾಮ ಘೋಷಣೆಯಾಗಿರುವುದು ಆಂಧ್ರಪ್ರದೇಶದ ರಾಯಲಸೀಮ ಭಾಗದ ಸಾವಿರಾರು ಬಾಳೆ ಬೆಳೆಗಾರರ ಮುಖದಲ್ಲಿ ತುಸು ತಡವಾಗಿ ಮಂದಹಾಸ ಮೂಡಿದಂತಾಗಿದೆ. </p><p>ಇರಾನ್, ಇರಾಕ್, ಯುಎಇ, ಬಹ್ರೇನ್ ಮತ್ತು ಒಮನ್ ಮಾರುಕಟ್ಟೆಗಳಿಗೆ ‘ರೋಬಸ್ಟಾ ಗ್ರಾಂಡ್ ನೈನ್’ (G9) ತಳಿಯ ಬಾಳೆಯನ್ನು ಪೂರೈಸುತ್ತಿದ್ದ ರೈತರಿಗೆ ಈ ಬಾರಿ ಹೆಚ್ಚು ನಷ್ಟ ಉಂಟಾಗಿದೆ. ರಫ್ತು ವಹಿವಾಟು ಉತ್ತುಂಗದಲ್ಲಿರಬೇಕಾದ ಸಮಯದಲ್ಲೇ ಯುದ್ಧ ತೀವ್ರಗೊಂಡು ಹಡಗು ಸಂಚಾರ ಮಾರ್ಗಗಳು ಬಂದ್ ಆಗಿದ್ದರಿಂದ ವ್ಯಾಪಾರ ಸಂಪೂರ್ಣ ಕುಸಿದಿತ್ತು. </p><p>ಅನಂತಪುರ ಮತ್ತು ಕಡಪ ಜಿಲ್ಲೆಗಳ ರೈತರು ವರ್ಷಕ್ಕೆ ಮೂರು ಬಾರಿ ಬಾಳೆ ಬೆಳೆಯುತ್ತಾರೆಯಾದರೂ, ಡಿಸೆಂಬರ್ 15ರಿಂದ ಮಾರ್ಚ್ ಅಂತ್ಯದವರೆಗೆ ಬರುವ ಬೆಳೆ ರಫ್ತಿಗೆ ಅತ್ಯಂತ ಸೂಕ್ತವಾದುದು. ಕಳೆದ ವರ್ಷ ರಾಯಲಸೀಮ ಭಾಗದಿಂದ ಅರಬ್ ರಾಷ್ಟ್ರಗಳಿಗೆ ಒಂದು ಲಕ್ಷ ಟನ್ ಬಾಳೆ ರಫ್ತಾಗಿತ್ತು.</p><p>ಆಂಧ್ರದ ಅನಂತಪುರ ಮತ್ತು ಕಡಪ ಜಿಲ್ಲೆಗಳಿಂದ ಬಾಳೆಹಣ್ಣನ್ನು ಲಾರಿಗಳ ಮೂಲಕ ಮುಂಬೈ ಬಂದರಿಗೆ ಸಾಗಿಸಲಾಗುತ್ತದೆ. ಅಲ್ಲಿಂದ ಹಡಗಿನ ಮೂಲಕ ಅರಬ್ ರಾಷ್ಟ್ರಗಳಿಗೆ ತಲುಪಲು 3 ದಿನಗಳು ಬೇಕಾಗುತ್ತದೆ. ಬಿಕ್ಕಟ್ಟು ಆರಂಭವಾಗುವ ಮೊದಲು ರಾಯಲಸೀಮ ಭಾಗದಿಂದ ಪ್ರತಿದಿನ 500ರಿಂದ 600 ಟನ್ ಬಾಳೆಹಣ್ಣು ರಫ್ತಾಗುತ್ತಿತ್ತು.</p><p>ಡಿಸೆಂಬರ್ನಿಂದ ಫೆಬ್ರುವರಿವರೆಗೆ ಉತ್ತರ ಭಾರತದ ಮಾರುಕಟ್ಟೆಗಳಲ್ಲಿ ಚಳಿಯ ಕಾರಣ ಬಾಳೆಹಣ್ಣು ಬಣ್ಣ ಬದಲಾಯಿಸುತ್ತದೆ, ಹಾಗಾಗಿ ಅವು ರಫ್ತಿಗೆ ಯೋಗ್ಯವಾಗಿರುವುದಿಲ್ಲ. ಆದರೆ, ನಮ್ಮ ಭಾಗದ ಹಣ್ಣುಗಳು ಬಣ್ಣ ಬದಲಾಗುವುದಿಲ್ಲ. ಈ ಬಾರಿ ರಫ್ತು ಚಟುವಟಿಕೆಗಳು ನಿಂತುಹೋದ ಕಾರಣ ನಾವು ತೀವ್ರ ನಷ್ಟ ಅನುಭವಿಸಿದ್ದೇವೆ ಎನ್ನುತ್ತಾರೆ ಅನಂತಪುರ ಜಿಲ್ಲೆಯ ಪ್ರಸನ್ನಾಯಪಲ್ಲಿಯ ರೈತ ಶಿವಶಂಕರ್ ರೆಡ್ಡಿ.</p><p>‘ಈ ಹಿಂದೆ ಪ್ರತಿ ಟನ್ ಬಾಳೆಗೆ ₹20,000ರಿಂದ ₹25,000 ಸಿಗುತ್ತಿತ್ತು. ಈಗ ಕೇವಲ ₹5,000ರಿಂದ ₹8,000 ಸಿಗುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಹಣ್ಣುಗಳ ಪೂರೈಕೆ ಹೆಚ್ಚಾದ ಕಾರಣ ಬೆಲೆ ಕೆ.ಜಿಗೆ ₹5 ರಿಂದ ₹6ಕ್ಕೆ ಕುಸಿದಿದೆ ಎಂದು ಸಾಫ್ಟ್ವೇರ್ ಎಂಜಿನಿಯರ್ ಕೆಲಸ ಬಿಟ್ಟು ಕೃಷಿ ಮಾಡುತ್ತಿರುವ ಜಯಸಿಂಹ ಅಳಲು ತೊಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>