<p><strong>ಕೋಲ್ಕತ್ತ</strong>: ಭಾರತ–ಬಾಂಗ್ಲಾ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಬಿಎಸ್ಎಫ್ಗೆ ಗಡಿಯುದ್ದಕ್ಕೂ 27 ಕಿಲೋಮೀಟರ್ ವ್ಯಾಪ್ತಿಯ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಚಾಲನೆ ನೀಡಿದ್ದಾರೆ.</p><p>ನಬಾನ್ನದಲ್ಲಿ ಬಿಎಸ್ಎಫ್ ಅಧಿಕಾರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧಿಕಾರಿ, ‘ 27 ಕಿಲೋಮೀಟರ್ ವ್ಯಾಪ್ತಿಯ ಭೂಮಿಯನ್ನು ಎರಡು ವಾರಗಳೊಳಗೆ ಬಿಎಸ್ಎಫ್ಗೆ ಹಸ್ತಾಂತರಿಸಲಾಗುವುದು. ಇದು ಭೂಮಿ ಹಸ್ತಾಂತರ ಪ್ರಕ್ರಿಯೆಯ ಆರಂಭವಷ್ಟೇ’ ಎಂದು ಹೇಳಿದ್ದಾರೆ.</p><p>‘ಸಚಿವ ಸಂಪುಟವು ಭೂಮಿ ಹಸ್ತಾಂತರ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, 45 ದಿನಗಳೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಭೂ ಸುಧಾರಣಾ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.</p><p>‘ಭಾರತವು ಬಾಂಗ್ಲಾದೇಶದೊಂದಿಗೆ 4 ಸಾವಿರ ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ. ಅದರಲ್ಲಿ ಸುಮಾರು 2,200 ಕಿಲೋಮೀಟರ್ ಪಶ್ಚಿಮ ಬಂಗಾಳದಲ್ಲಿದೆ. ಸುಮಾರು 1,600 ಕಿಲೋಮೀಟರ್ಗೆ ಈಗಾಗಲೇ ಬೇಲಿ ಹಾಕಲಾಗಿದ್ದು, ಸುಮಾರು 600 ಕಿಲೋಮೀಟರ್ಗೆ ಇನ್ನೂ ಬೇಲಿ ಹಾಕಲಾಗಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.</p><p>‘ಬೇಲಿ ಹಾಕದ ಭಾಗದ ಪೈಕಿ ಸುಮಾರು 555 ಕಿಲೋಮೀಟರ್ ಅಗತ್ಯವಿದ್ದ ಭೂಮಿಯನ್ನು ಮೊದಲೇ ಹಸ್ತಾಂತರಿಸಬಹುದಿತ್ತು. ಆದರೆ, ಹಿಂದಿನ ಸರ್ಕಾರವು ಓಲೈಕೆ ರಾಜಕಾರಣ ಮತ್ತು ವೋಟ್ ಬ್ಯಾಂಕ್ ಲೆಕ್ಕಾಚಾರದಿಂದಾಗಿ ಬಿಎಸ್ಎಫ್ ಕೇಳಿದ್ದ ಭೂಮಿಯನ್ನು ನೀಡದೆ ತಡೆಹಿಡಿದಿತ್ತು’ ಎಂದು ಆರೋಪಿಸಿದ್ದಾರೆ.</p><p>‘ಬೇಲಿ ನಿರ್ಮಾಣ ಮತ್ತು ಗಡಿ ಭದ್ರತೆಗಾಗಿ ಎಲ್ಲಿಯೇ ಭೂಮಿಯ ಅಗತ್ಯವಿದ್ದರೂ, ನಾವು ಅದನ್ನು ಬಿಎಸ್ಎಫ್ಗೆ ಹಸ್ತಾಂತರಿಸುತ್ತೇವೆ’ ಎಂದೂ ಹೇಳಿದ್ದಾರೆ.</p><p>‘ಕಾನೂನು ಮತ್ತು ಸುವ್ಯವಸ್ಥೆ, ಲವ್ ಜಿಹಾದ್, ಬಲವಂತದ ಧರ್ಮ ಮತಾಂತರ ಮತ್ತು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಬಂಧಿತರಾದವರ ಪೈಕಿ ದೊಡ್ಡ ಭಾಗದ ಜನರು ಬಾಂಗ್ಲಾದೇಶದ ನುಸುಳುಕೋರರಾಗಿದ್ದಾರೆ’ ಎಂದು ಇದೇ ವೇಳೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಭಾರತ–ಬಾಂಗ್ಲಾ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಬಿಎಸ್ಎಫ್ಗೆ ಗಡಿಯುದ್ದಕ್ಕೂ 27 ಕಿಲೋಮೀಟರ್ ವ್ಯಾಪ್ತಿಯ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಚಾಲನೆ ನೀಡಿದ್ದಾರೆ.</p><p>ನಬಾನ್ನದಲ್ಲಿ ಬಿಎಸ್ಎಫ್ ಅಧಿಕಾರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧಿಕಾರಿ, ‘ 27 ಕಿಲೋಮೀಟರ್ ವ್ಯಾಪ್ತಿಯ ಭೂಮಿಯನ್ನು ಎರಡು ವಾರಗಳೊಳಗೆ ಬಿಎಸ್ಎಫ್ಗೆ ಹಸ್ತಾಂತರಿಸಲಾಗುವುದು. ಇದು ಭೂಮಿ ಹಸ್ತಾಂತರ ಪ್ರಕ್ರಿಯೆಯ ಆರಂಭವಷ್ಟೇ’ ಎಂದು ಹೇಳಿದ್ದಾರೆ.</p><p>‘ಸಚಿವ ಸಂಪುಟವು ಭೂಮಿ ಹಸ್ತಾಂತರ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, 45 ದಿನಗಳೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಭೂ ಸುಧಾರಣಾ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.</p><p>‘ಭಾರತವು ಬಾಂಗ್ಲಾದೇಶದೊಂದಿಗೆ 4 ಸಾವಿರ ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ. ಅದರಲ್ಲಿ ಸುಮಾರು 2,200 ಕಿಲೋಮೀಟರ್ ಪಶ್ಚಿಮ ಬಂಗಾಳದಲ್ಲಿದೆ. ಸುಮಾರು 1,600 ಕಿಲೋಮೀಟರ್ಗೆ ಈಗಾಗಲೇ ಬೇಲಿ ಹಾಕಲಾಗಿದ್ದು, ಸುಮಾರು 600 ಕಿಲೋಮೀಟರ್ಗೆ ಇನ್ನೂ ಬೇಲಿ ಹಾಕಲಾಗಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.</p><p>‘ಬೇಲಿ ಹಾಕದ ಭಾಗದ ಪೈಕಿ ಸುಮಾರು 555 ಕಿಲೋಮೀಟರ್ ಅಗತ್ಯವಿದ್ದ ಭೂಮಿಯನ್ನು ಮೊದಲೇ ಹಸ್ತಾಂತರಿಸಬಹುದಿತ್ತು. ಆದರೆ, ಹಿಂದಿನ ಸರ್ಕಾರವು ಓಲೈಕೆ ರಾಜಕಾರಣ ಮತ್ತು ವೋಟ್ ಬ್ಯಾಂಕ್ ಲೆಕ್ಕಾಚಾರದಿಂದಾಗಿ ಬಿಎಸ್ಎಫ್ ಕೇಳಿದ್ದ ಭೂಮಿಯನ್ನು ನೀಡದೆ ತಡೆಹಿಡಿದಿತ್ತು’ ಎಂದು ಆರೋಪಿಸಿದ್ದಾರೆ.</p><p>‘ಬೇಲಿ ನಿರ್ಮಾಣ ಮತ್ತು ಗಡಿ ಭದ್ರತೆಗಾಗಿ ಎಲ್ಲಿಯೇ ಭೂಮಿಯ ಅಗತ್ಯವಿದ್ದರೂ, ನಾವು ಅದನ್ನು ಬಿಎಸ್ಎಫ್ಗೆ ಹಸ್ತಾಂತರಿಸುತ್ತೇವೆ’ ಎಂದೂ ಹೇಳಿದ್ದಾರೆ.</p><p>‘ಕಾನೂನು ಮತ್ತು ಸುವ್ಯವಸ್ಥೆ, ಲವ್ ಜಿಹಾದ್, ಬಲವಂತದ ಧರ್ಮ ಮತಾಂತರ ಮತ್ತು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಬಂಧಿತರಾದವರ ಪೈಕಿ ದೊಡ್ಡ ಭಾಗದ ಜನರು ಬಾಂಗ್ಲಾದೇಶದ ನುಸುಳುಕೋರರಾಗಿದ್ದಾರೆ’ ಎಂದು ಇದೇ ವೇಳೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>