ಒಂದು ಸಾಲಿನಲ್ಲಿ
ಪಶ್ಚಿಮ ಬಂಗಾಳ ಸರ್ಕಾರ ಜಾರಿಗೆ ತಂದ ಹೊಸ ಗೋ ಹತ್ಯೆ ನಿಯಂತ್ರಣ ಮಾರ್ಗಸೂಚಿಗಳು ಧಾರ್ಮಿಕ ಮತ್ತು ವ್ಯಾಪಾರಿ ಸಮುದಾಯಗಳಲ್ಲಿ ಭಿನ್ನ ಪ್ರತಿಕ್ರಿಯೆ ಮತ್ತು ಆತಂಕಕ್ಕೆ ಕಾರಣವಾಗಿವೆ.

ಬಕ್ರಿದ್ ಸಂದರ್ಭದಲ್ಲಿ ಹಸುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿಗೆ ಮಾರಾಟ ಮಾಡುವವರು ಹಿಂದೂ ಸಹೋದರರೇ ಎಂಬುದು ದುರದೃಷ್ಟಕರ ಸಂಗತಿ. ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಗೋ ಹತ್ಯೆ ನಿಲ್ಲಿಸಿದರೆ, ಮಾರಾಟ ಮಾಡುವವರಿಗೆ ತೊಂದರೆ ಎದುರಾಗಬಹುದು.– ಮೌಲಾನಾ ಶಫೀಕ್ ಖಾಸ್ಮಿ, ಕೋಲ್ಕತ್ತದ ನಖೋಡಾ ಮಸೀದಿಯ ಇಮಾಮ್
ನಿಯಮಗಳನ್ನು ಸಡಿಲಿಸುವ ಕುರಿತು ಆಲೋಚಿಸಬಹುದು. ಆದರೆ, ಬಹುಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ನಡೆಯಲು ಸಾಧ್ಯವಿಲ್ಲ. ಹೆಚ್ಚಿನ ಭಾರತೀಯರು ಹಸುವನ್ನು ಮಾತೆ ಎಂದು ಪರಿಗಣಿಸುತ್ತಾರೆ. ಹಸುಗಳನ್ನು ಪೂಜಿಸುವ ಕೋಟ್ಯಂತರ ಜನರಿದ್ದಾರೆ.– ದೇವಜಿತ್ ಸರ್ಕಾರ್, ಪಶ್ಚಿಮ ಬಂಗಾಳ ಬಿಜೆಪಿ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.