<p><strong>ಕೋಲ್ಕತ್ತ:</strong> ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ ರಂಗೇರಿದೆ. ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಹಾಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ವರಿಷ್ಠ ಸುವೇಂದು ಅಧಿಕಾರಿ ಸ್ಪರ್ಧಿಸುತ್ತಿದ್ದು, ಟಿಎಂಸಿಯಿಂದ ತಾವೇ ಅಭ್ಯರ್ಥಿಯಾಗುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ಹಣಾಹಣಿಗೆ ಅಖಾಡಕ್ಕಿಳಿದಿದ್ದಾರೆ.</p><p>ಇದರೊಂದಿಗೆ ಬಿಜೆಪಿಯ ಜಾತಿ ಲೆಕ್ಕಾಚಾರದ ಜೊತೆಗೆ ಭವಾನಿಪುರ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಇಡೀ ರಾಷ್ಟ್ರದ ಗಮನ ಸೆಳೆದಿದೆ. </p>.ಪಶ್ಚಿಮ ಬಂಗಾಳ ಚುನಾವಣೆ| ಭವಾನಿಪುರ–ನಂದಿಗ್ರಾಮ: 10 ಹೈಪ್ರೋಫೈಲ್ ಕ್ಷೇತ್ರಗಳಿವು .ಅಮಿತ್ ಶಾ ಎಸಗಿರುವ ಕೃತ್ಯಗಳಿಗೆ ಆರೋಪಪಟ್ಟಿ ದಾಖಲಿಸಬೇಕು: ಮಮತಾ ಬ್ಯಾನರ್ಜಿ .<p>ಮಮತಾ ಅವರು ದೀರ್ಘಕಾಲದಿಂದ ಹಿಡಿದಿಟ್ಟಿರುವ ಭವಾನಿಪುರ ಭದ್ರಕೋಟೆಗೆ ಬಿಜೆಪಿಯ ಸುವೇಂದು ಅಧಿಕಾರಿ ಎಂಟ್ರಿ ಕೊಡುವುದರಿಂದ ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದ್ದು, ರಾಜ್ಯದ ಪಾಲಿಗೆ 'ಎಕ್ಸ್' ಫಾಕ್ಟರ್ ಎನಿಸಿದೆ. </p><p>ದಕ್ಷಿಣ ಕೋಲ್ಕತ್ತದಲ್ಲಿ ತನ್ನ ಭದ್ರಕೋಟೆ ಉಳಿಸಿಕೊಳ್ಳಲು ತೃಣಮೂಲ ಕಾಂಗ್ರೆಸ್ ಯತ್ನಿಸುತ್ತಿದ್ದು, ಈ ಎಲ್ಲ ಯತ್ನಗಳನ್ನು ವಿಫಲಗೊಳಿಸಲು ಬಿಜೆಪಿ ಪಣತೊಟ್ಟಿದೆ. </p><p>ಪ್ರಸ್ತುತ ಪೈಪೋಟಿಯು 2021ರ ವಿಧಾನಸಭಾ ಚುನಾವಣೆಯಲ್ಲಿ ಬ್ಯಾನರ್ಜಿ ಹಾಗೂ ಅಧಿಕಾರಿ ನಡುವಣ ಹೋರಾಟವನ್ನು ನೆನಪಿಸುತ್ತದೆ. ಅಂದು ಮಮತಾ ಅವರು ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಅವರ ಸವಾಲನ್ನು ಎದುರಿಸಿದ್ದರು. </p><p>ಆದರೆ ಸುವೇಂದು ಅವರ ತವರಿನಲ್ಲಿ ಮಮತಾ ಕೇವಲ 1,956 ಮತಗಳ ಅಂತರರಿಂದ ಪರಾಭವಗೊಂಡಿದ್ದರು. ಮತ್ತೊಂದೆಡೆ ಬಿಜೆಪಿ ಮಣಿಸಿದ್ದ ಟಿಎಂಸಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತ್ತು. </p><p>ಬಳಿಕ ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಗೆಲುವು ದಾಖಲಿಸಿದ್ದರು. ಐದು ವರ್ಷಗಳ ಬಳಿಕ ಈಗ ರಾಜಕೀಯ ಚಿತ್ರಣ ಬದಲಾಗಿದ್ದರೂ ಫಲಿತಾಂಶವೂ ಬದಲಾಗುವುದೇ ಎಂದು ಕಾದು ನೋಡಬೇಕಿದೆ. </p><p>ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಳಿಕ ಚುನಾವಣೆ ನಡೆಯುತ್ತಿರುವುದರಿಂದ ರಾಜಕೀಯ ವಲಯಗಳಲ್ಲಿ ಹೆಚ್ಚಿನ ಕುತೂಹಲ ಮನೆ ಮಾಡಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ ರಂಗೇರಿದೆ. ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಹಾಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ವರಿಷ್ಠ ಸುವೇಂದು ಅಧಿಕಾರಿ ಸ್ಪರ್ಧಿಸುತ್ತಿದ್ದು, ಟಿಎಂಸಿಯಿಂದ ತಾವೇ ಅಭ್ಯರ್ಥಿಯಾಗುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ಹಣಾಹಣಿಗೆ ಅಖಾಡಕ್ಕಿಳಿದಿದ್ದಾರೆ.</p><p>ಇದರೊಂದಿಗೆ ಬಿಜೆಪಿಯ ಜಾತಿ ಲೆಕ್ಕಾಚಾರದ ಜೊತೆಗೆ ಭವಾನಿಪುರ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಇಡೀ ರಾಷ್ಟ್ರದ ಗಮನ ಸೆಳೆದಿದೆ. </p>.ಪಶ್ಚಿಮ ಬಂಗಾಳ ಚುನಾವಣೆ| ಭವಾನಿಪುರ–ನಂದಿಗ್ರಾಮ: 10 ಹೈಪ್ರೋಫೈಲ್ ಕ್ಷೇತ್ರಗಳಿವು .ಅಮಿತ್ ಶಾ ಎಸಗಿರುವ ಕೃತ್ಯಗಳಿಗೆ ಆರೋಪಪಟ್ಟಿ ದಾಖಲಿಸಬೇಕು: ಮಮತಾ ಬ್ಯಾನರ್ಜಿ .<p>ಮಮತಾ ಅವರು ದೀರ್ಘಕಾಲದಿಂದ ಹಿಡಿದಿಟ್ಟಿರುವ ಭವಾನಿಪುರ ಭದ್ರಕೋಟೆಗೆ ಬಿಜೆಪಿಯ ಸುವೇಂದು ಅಧಿಕಾರಿ ಎಂಟ್ರಿ ಕೊಡುವುದರಿಂದ ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದ್ದು, ರಾಜ್ಯದ ಪಾಲಿಗೆ 'ಎಕ್ಸ್' ಫಾಕ್ಟರ್ ಎನಿಸಿದೆ. </p><p>ದಕ್ಷಿಣ ಕೋಲ್ಕತ್ತದಲ್ಲಿ ತನ್ನ ಭದ್ರಕೋಟೆ ಉಳಿಸಿಕೊಳ್ಳಲು ತೃಣಮೂಲ ಕಾಂಗ್ರೆಸ್ ಯತ್ನಿಸುತ್ತಿದ್ದು, ಈ ಎಲ್ಲ ಯತ್ನಗಳನ್ನು ವಿಫಲಗೊಳಿಸಲು ಬಿಜೆಪಿ ಪಣತೊಟ್ಟಿದೆ. </p><p>ಪ್ರಸ್ತುತ ಪೈಪೋಟಿಯು 2021ರ ವಿಧಾನಸಭಾ ಚುನಾವಣೆಯಲ್ಲಿ ಬ್ಯಾನರ್ಜಿ ಹಾಗೂ ಅಧಿಕಾರಿ ನಡುವಣ ಹೋರಾಟವನ್ನು ನೆನಪಿಸುತ್ತದೆ. ಅಂದು ಮಮತಾ ಅವರು ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಅವರ ಸವಾಲನ್ನು ಎದುರಿಸಿದ್ದರು. </p><p>ಆದರೆ ಸುವೇಂದು ಅವರ ತವರಿನಲ್ಲಿ ಮಮತಾ ಕೇವಲ 1,956 ಮತಗಳ ಅಂತರರಿಂದ ಪರಾಭವಗೊಂಡಿದ್ದರು. ಮತ್ತೊಂದೆಡೆ ಬಿಜೆಪಿ ಮಣಿಸಿದ್ದ ಟಿಎಂಸಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತ್ತು. </p><p>ಬಳಿಕ ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಗೆಲುವು ದಾಖಲಿಸಿದ್ದರು. ಐದು ವರ್ಷಗಳ ಬಳಿಕ ಈಗ ರಾಜಕೀಯ ಚಿತ್ರಣ ಬದಲಾಗಿದ್ದರೂ ಫಲಿತಾಂಶವೂ ಬದಲಾಗುವುದೇ ಎಂದು ಕಾದು ನೋಡಬೇಕಿದೆ. </p><p>ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಳಿಕ ಚುನಾವಣೆ ನಡೆಯುತ್ತಿರುವುದರಿಂದ ರಾಜಕೀಯ ವಲಯಗಳಲ್ಲಿ ಹೆಚ್ಚಿನ ಕುತೂಹಲ ಮನೆ ಮಾಡಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>