<p>ನವದೆಹಲಿ(ಪಿಟಿಐ): ‘ಶಾಸನಸಭೆಗಳಲ್ಲಿ ಮೀಸಲಾತಿ ಒದಗಿಸುವ ಮೂಲಕ ದೇಶದ ಮಹಿಳೆಯರಿಗೆ ‘ನ್ಯಾಯ’ವೆಂಬ ಉಡುಗೊರೆ ನೀಡುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಮಹಿಳಾ ಮೀಸಲಾತಿ ಅನುಷ್ಠಾನವನ್ನು ಕ್ಷೇತ್ರಗಳ ಮರುವಿಂಗಡಣೆಯೊಂದಿಗೆ ತಳುಕು ಹಾಕಲಾಗಿದೆ. ಹೀಗಾಗಿ, ಮೋದಿಯವರು ಈ ಉಡುಗೊರೆಯನ್ನು ಮುಳ್ಳುತಂತಿಯೊಳಗೆ ಸುತ್ತಿ ಕೊಡುತ್ತಿದ್ದಾರೆ’ ಎಂದು ಕಾಂಗ್ರೆಸ್ನ ಶಶಿ ತರೂರ್ ಶುಕ್ರವಾರ ಕುಟುಕಿದ್ದಾರೆ.</p>.<p>ಲೋಕಸಭೆಯಲ್ಲಿ ಮಂಡನೆಯಾದ ಮೂರು ಮಸೂದೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,‘ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಯು ‘ರಾಜಕೀಯ ಅಮಾನ್ಯೀಕರಣ’ವೇ ಆಗಿದೆ’ ಎಂದು ಟೀಕಿಸಿದರು.</p>.<p>‘ಕ್ಷೇತ್ರಗಳ ಮರುವಿಂಗಡಣೆ ಕಾರ್ಯವನ್ನು ಮುಂದೂಡಬೇಕು. ಇಂತಹ ಕ್ರಮಗಳ ಮೂಲಕ ‘ಹೊಸ ಭಾರತ’ದತ್ತ ಕೈಗೊಳ್ಳುವ ನಮ್ಮ ಪಯಣವು ಭಾರತವನ್ನು ಅಸಂಘಟಿತ ರಾಷ್ಟ್ರವನ್ನಾಗಿಸಬಾರದು’ ಎಂದು ಪ್ರತಿಪಾದಿಸಿದರು.</p>.<p>‘ಕ್ಷೇತ್ರಗಳ ಮರುವಿಗಂಡಣೆ ಅನೇಕ ವಿಚಾರಗಳನ್ನು ಒಳಗೊಂಡಿದೆ. ಈ ಕುರಿತು ಎಲ್ಲ ರಾಜ್ಯಗಳು, ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಸೇರಿ ಎಲ್ಲ ಭಾಗೀದಾರರೊಂದಿಗೆ ವ್ಯಾಪಕ ಸಮಾಲೋಚನೆ ಅಗತ್ಯ. ಈ ವಿಚಾರದಲ್ಲಿ ಅವಸರ ಸಲ್ಲ’ ಎಂದರು.</p>.<p>‘ಕ್ಷೇತ್ರಗಳ ಮರುವಿಂಗಡಣೆ ಎಲ್ಲ ರಾಜ್ಯಗಳ ಹಿತಾಸಕ್ತಿಗಳನ್ನು ರಕ್ಷಿಸುವಂತಿರಬೇಕು. ಇದಕ್ಕಾಗಿ ಜಂಟಿ ಸಂಸದೀಯ ಸಮಿತಿ ರಚನೆ, ಮಸೂದೆಯ ಕ್ರಮಬದ್ಧ ಪರಿಶೀಲನೆ ಸೇರಿ ಎಲ್ಲ ಕಾರ್ಯವಿಧಾನಗಳನ್ನು ಅನುಸರಿಸಬೇಕು’ ಎಂದೂ ತರೂರ್ ಆಗ್ರಹಿಸಿದರು.</p>.<h2>‘ದೇವಿ ಕಾಳಿಯ ಬಣ್ಣ ಕಪ್ಪು...’</h2><p>ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ತಮಿಳುನಾಡಿನಲ್ಲಿ ಡಿಎಂಕೆ ಕೈಗೊಂಡಿದ್ದ ಪ್ರತಿಭಟನೆ ಕುರಿತು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಕ್ಷದ ಸದಸ್ಯೆ, ಸಂಸದೆ ಕನಿಮೊಳಿ ಅವರು ತಿರುಗೇಟು ನೀಡಿದ ಪ್ರಸಂಗ ಲೋಕಸಭೆಯಲ್ಲಿ ಶುಕ್ರವಾರ ನಡೆಯಿತು.</p><p>ಮಹಿಳಾ ಮೀಸಲಾತಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಡಿಎಂಕೆ ನಡೆಸಿದ್ದ ಪ್ರತಿಭಟನೆ ಪ್ರಸ್ತಾಪಿಸಿದ ಮೋದಿ,‘ಯಾವುದೇ ಒಳ್ಳೆಯ ಕೆಲಸ ಆರಂಭಿಸುವ ಮುನ್ನ ದೃಷ್ಟಿ ಬೊಟ್ಟು (ಕಾಲಾ ಟೀಕಾ) ಇಡುವ ಸಂಪ್ರದಾಯ ಇದೆ. ಡಿಎಂಕೆ ಮುಖಂಡರು ಹಾಗೂ ಕಾರ್ಯಕರ್ತರು ಕಪ್ಪುಬಟ್ಟೆ ಧರಿಸಿ ಪ್ರತಿಭಟಿಸಿದ್ದಾರೆ. ಇದು ಮಹಿಳಾ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಕೆಟ್ಟ ದೃಷ್ಟಿ ತಾಗದಂತೆ ಮಾಡಲಿದೆ’ ಎಂದು ವಿಪಕ್ಷಗಳಿಗೆ ತಿವಿದಿದ್ದರು.</p><p>ಮಸೂದೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕನಿಮೊಳಿ, ‘ದೇವಿ ಕಾಳಿಯ ಬಣ್ಣವೂ ಕಪ್ಪು. ಹಿಂದುತ್ವವನ್ನು ಸಮರ್ಥಿಸುವ ನಾಯಕರಿಗೆ ದೇವಿ ಕಾಳಿಯ ನೆನಪಿಲ್ಲ ಎಂಬುದು ಆಶ್ಚರ್ಯ ತರುತ್ತದೆ’ ಎಂದು ತಿರುಗೇಟು ನೀಡಿದರು.</p><p>‘ಡಿಎಂಕೆಯ ಬೌದ್ಧಿಕ ನಾಯಕ ಪೆರಿಯಾರ್ ಅವರ ಬಣ್ಣವೂ ಕಪ್ಪು. ಅವರು ನ್ಯಾಯ ಸಿಗುವವರೆಗೆ ಹೋರಾಡುವುದನ್ನು ನಮಗೆ ಕಲಿಸಿದ್ದಾರೆ. ಈ ವಿಚಾರವಾಗಿ ತಮಿಳುನಾಡು ಕೊನೆಯವರೆಗೂ ಹೋರಾಡಲಿದೆ’ ಎಂದು ಗುಡುಗಿದರು.</p>.<div><blockquote>ಕ್ಷೇತ್ರಗಳ ಮರುವಿಂಗಡಣೆ ಕುರಿತ ಯಾವುದೇ ಪ್ರಯತ್ನವು ಹಲವು ತೊಡಕುಗಳಿಂದ ತುಂಬಿರಲಿದ್ದು, ಅದು ದೇಶದ ಒಕ್ಕೂಟ ವ್ಯವಸ್ಥೆಯನ್ನು ಹಾಳುವ ಮಾಡುವ ಅಪಾಯವಿದೆ</blockquote><span class="attribution"> ಶಶಿ ತರೂರ್, ಕಾಂಗ್ರೆಸ್ ಸಂಸದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ(ಪಿಟಿಐ): ‘ಶಾಸನಸಭೆಗಳಲ್ಲಿ ಮೀಸಲಾತಿ ಒದಗಿಸುವ ಮೂಲಕ ದೇಶದ ಮಹಿಳೆಯರಿಗೆ ‘ನ್ಯಾಯ’ವೆಂಬ ಉಡುಗೊರೆ ನೀಡುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಮಹಿಳಾ ಮೀಸಲಾತಿ ಅನುಷ್ಠಾನವನ್ನು ಕ್ಷೇತ್ರಗಳ ಮರುವಿಂಗಡಣೆಯೊಂದಿಗೆ ತಳುಕು ಹಾಕಲಾಗಿದೆ. ಹೀಗಾಗಿ, ಮೋದಿಯವರು ಈ ಉಡುಗೊರೆಯನ್ನು ಮುಳ್ಳುತಂತಿಯೊಳಗೆ ಸುತ್ತಿ ಕೊಡುತ್ತಿದ್ದಾರೆ’ ಎಂದು ಕಾಂಗ್ರೆಸ್ನ ಶಶಿ ತರೂರ್ ಶುಕ್ರವಾರ ಕುಟುಕಿದ್ದಾರೆ.</p>.<p>ಲೋಕಸಭೆಯಲ್ಲಿ ಮಂಡನೆಯಾದ ಮೂರು ಮಸೂದೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,‘ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಯು ‘ರಾಜಕೀಯ ಅಮಾನ್ಯೀಕರಣ’ವೇ ಆಗಿದೆ’ ಎಂದು ಟೀಕಿಸಿದರು.</p>.<p>‘ಕ್ಷೇತ್ರಗಳ ಮರುವಿಂಗಡಣೆ ಕಾರ್ಯವನ್ನು ಮುಂದೂಡಬೇಕು. ಇಂತಹ ಕ್ರಮಗಳ ಮೂಲಕ ‘ಹೊಸ ಭಾರತ’ದತ್ತ ಕೈಗೊಳ್ಳುವ ನಮ್ಮ ಪಯಣವು ಭಾರತವನ್ನು ಅಸಂಘಟಿತ ರಾಷ್ಟ್ರವನ್ನಾಗಿಸಬಾರದು’ ಎಂದು ಪ್ರತಿಪಾದಿಸಿದರು.</p>.<p>‘ಕ್ಷೇತ್ರಗಳ ಮರುವಿಗಂಡಣೆ ಅನೇಕ ವಿಚಾರಗಳನ್ನು ಒಳಗೊಂಡಿದೆ. ಈ ಕುರಿತು ಎಲ್ಲ ರಾಜ್ಯಗಳು, ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಸೇರಿ ಎಲ್ಲ ಭಾಗೀದಾರರೊಂದಿಗೆ ವ್ಯಾಪಕ ಸಮಾಲೋಚನೆ ಅಗತ್ಯ. ಈ ವಿಚಾರದಲ್ಲಿ ಅವಸರ ಸಲ್ಲ’ ಎಂದರು.</p>.<p>‘ಕ್ಷೇತ್ರಗಳ ಮರುವಿಂಗಡಣೆ ಎಲ್ಲ ರಾಜ್ಯಗಳ ಹಿತಾಸಕ್ತಿಗಳನ್ನು ರಕ್ಷಿಸುವಂತಿರಬೇಕು. ಇದಕ್ಕಾಗಿ ಜಂಟಿ ಸಂಸದೀಯ ಸಮಿತಿ ರಚನೆ, ಮಸೂದೆಯ ಕ್ರಮಬದ್ಧ ಪರಿಶೀಲನೆ ಸೇರಿ ಎಲ್ಲ ಕಾರ್ಯವಿಧಾನಗಳನ್ನು ಅನುಸರಿಸಬೇಕು’ ಎಂದೂ ತರೂರ್ ಆಗ್ರಹಿಸಿದರು.</p>.<h2>‘ದೇವಿ ಕಾಳಿಯ ಬಣ್ಣ ಕಪ್ಪು...’</h2><p>ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ತಮಿಳುನಾಡಿನಲ್ಲಿ ಡಿಎಂಕೆ ಕೈಗೊಂಡಿದ್ದ ಪ್ರತಿಭಟನೆ ಕುರಿತು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಕ್ಷದ ಸದಸ್ಯೆ, ಸಂಸದೆ ಕನಿಮೊಳಿ ಅವರು ತಿರುಗೇಟು ನೀಡಿದ ಪ್ರಸಂಗ ಲೋಕಸಭೆಯಲ್ಲಿ ಶುಕ್ರವಾರ ನಡೆಯಿತು.</p><p>ಮಹಿಳಾ ಮೀಸಲಾತಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಡಿಎಂಕೆ ನಡೆಸಿದ್ದ ಪ್ರತಿಭಟನೆ ಪ್ರಸ್ತಾಪಿಸಿದ ಮೋದಿ,‘ಯಾವುದೇ ಒಳ್ಳೆಯ ಕೆಲಸ ಆರಂಭಿಸುವ ಮುನ್ನ ದೃಷ್ಟಿ ಬೊಟ್ಟು (ಕಾಲಾ ಟೀಕಾ) ಇಡುವ ಸಂಪ್ರದಾಯ ಇದೆ. ಡಿಎಂಕೆ ಮುಖಂಡರು ಹಾಗೂ ಕಾರ್ಯಕರ್ತರು ಕಪ್ಪುಬಟ್ಟೆ ಧರಿಸಿ ಪ್ರತಿಭಟಿಸಿದ್ದಾರೆ. ಇದು ಮಹಿಳಾ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಕೆಟ್ಟ ದೃಷ್ಟಿ ತಾಗದಂತೆ ಮಾಡಲಿದೆ’ ಎಂದು ವಿಪಕ್ಷಗಳಿಗೆ ತಿವಿದಿದ್ದರು.</p><p>ಮಸೂದೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕನಿಮೊಳಿ, ‘ದೇವಿ ಕಾಳಿಯ ಬಣ್ಣವೂ ಕಪ್ಪು. ಹಿಂದುತ್ವವನ್ನು ಸಮರ್ಥಿಸುವ ನಾಯಕರಿಗೆ ದೇವಿ ಕಾಳಿಯ ನೆನಪಿಲ್ಲ ಎಂಬುದು ಆಶ್ಚರ್ಯ ತರುತ್ತದೆ’ ಎಂದು ತಿರುಗೇಟು ನೀಡಿದರು.</p><p>‘ಡಿಎಂಕೆಯ ಬೌದ್ಧಿಕ ನಾಯಕ ಪೆರಿಯಾರ್ ಅವರ ಬಣ್ಣವೂ ಕಪ್ಪು. ಅವರು ನ್ಯಾಯ ಸಿಗುವವರೆಗೆ ಹೋರಾಡುವುದನ್ನು ನಮಗೆ ಕಲಿಸಿದ್ದಾರೆ. ಈ ವಿಚಾರವಾಗಿ ತಮಿಳುನಾಡು ಕೊನೆಯವರೆಗೂ ಹೋರಾಡಲಿದೆ’ ಎಂದು ಗುಡುಗಿದರು.</p>.<div><blockquote>ಕ್ಷೇತ್ರಗಳ ಮರುವಿಂಗಡಣೆ ಕುರಿತ ಯಾವುದೇ ಪ್ರಯತ್ನವು ಹಲವು ತೊಡಕುಗಳಿಂದ ತುಂಬಿರಲಿದ್ದು, ಅದು ದೇಶದ ಒಕ್ಕೂಟ ವ್ಯವಸ್ಥೆಯನ್ನು ಹಾಳುವ ಮಾಡುವ ಅಪಾಯವಿದೆ</blockquote><span class="attribution"> ಶಶಿ ತರೂರ್, ಕಾಂಗ್ರೆಸ್ ಸಂಸದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>