<p><strong>ನವದೆಹಲಿ:</strong> ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜನಪ್ರಿಯತೆ ಹೆಚ್ಚುತ್ತಿರುವ ಮಧ್ಯೆ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) 'ಇಂಡಿಯನ್ ಯೂತ್ ಕಾಕ್ರೋಚ್' (ಭಾರತೀಯ ಯುವ ಜಿರಳೆಗಳು) ಎಂಬ ಅಭಿಯಾನವನ್ನು ಮಂಗಳವಾರ ಪ್ರಾರಂಭಿಸಿದೆ.</p><p>ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಯುವಕರ ಪ್ರತಿರೋಧವನ್ನು ತೀವ್ರಗೊಳಿಸಲು ರಾಷ್ಟ್ರವ್ಯಾಪಿ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ.</p>.ಉಪೇಂದ್ರ ಮನೆಯಲ್ಲಿ ಸಂಭ್ರಮ: ನಟ ನಿರಂಜನ್ ನಿಶ್ಚಿತಾರ್ಥ ಚಿತ್ರಗಳು ಇಲ್ಲಿವೆ.ಕೆಂಪುಕೋಟೆ ಕಾರು ಬಾಂಬ್ ಸ್ಫೋಟ: ರಾಸಾಯನಿಕ ಖರೀದಿಸಲು ನಕಲಿ ಗುರುತಿನ ಚೀಟಿ ಬಳಕೆ. <p>ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯಿಂದ ಪ್ರೇರಿತಗೊಂಡು ಯೂತ್ ಕಾಂಗ್ರೆಸ್ ಈ ಹೆಜ್ಜೆ ಇಟ್ಟಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ನ್ಯಾಯಾಲಯದ ವಿಚಾರಣೆಯೊಂದರ ಸಂದರ್ಭದಲ್ಲಿ ಆಡಿದ ಮಾತುಗಳೇ ಈ ಅಭಿಯಾನಕ್ಕೆ ಕಿಡಿ ಹೊತ್ತಿಸಿದವು. ನಿರುದ್ಯೋಗಿ ಯುವಕರನ್ನು 'ಜಿರಳೆಗಳು‘ ಎಂದು ಸಿಜೆಐ ಕರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.</p><p>ಅಭಿಜೀತ್ ದೀಪ್ಕೆ ಎಂಬುವವರು ಆನ್ಲೈನ್ನಲ್ಲಿ ಈ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಅಭಿಯಾನವನ್ನು ಹುಟ್ಟಿ ಹಾಕಿದರು. ಇದೀಗ ಯೂತ್ ಕಾಂಗ್ರೆಸ್ ಇದನ್ನು ಅಧಿಕೃತ ರಾಜಕೀಯ ಚಳವಳಿಯನ್ನಾಗಿ ಪರಿವರ್ತಿಸಿದೆ.</p>.CBSE | ಪಾವತಿ ವ್ಯವಸ್ಥೆ ಸುಧಾರಿಸಿ: ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಪ್ರಧಾನ್.150 ನಾಡ ಕಚೇರಿಗಳಿಗೆ ಹೊಸ ಕಟ್ಟಡ: ಕಂದಾಯ ಇಲಾಖೆ ಸಮ್ಮತಿ. <h3><strong>ಅಭಿಯಾನದ ಪ್ರಮುಖ ಮುಖ್ಯಾಂಶಗಳು</strong></h3><p> ಯೂತ್ ಕಾಂಗ್ರೆಸ್ ಉಸ್ತುವಾರಿ ಮನೀಶ್ ಶರ್ಮಾ ಮತ್ತು ಅಧ್ಯಕ್ಷ ಉದಯ್ ಭಾನು ಚಿಬ್ ನೇತೃತ್ವದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.</p><p>ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಒತ್ತಾಯಿಸಿದೆ.</p><p>ಈ ಅಭಿಯಾನದಲ್ಲಿ ದೇಶದ ಯುವಕರು ಭಾಗವಹಿಸಲು ಮತ್ತು ನೋಂದಾಯಿಸಿಕೊಳ್ಳಲು ಪ್ರತ್ಯೇಕ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಆರಂಭಿಸಲಾಗಿದೆ.</p>.ನಾರ್ವೆ ಚೆಸ್ ಟೂರ್ನಿ: ಪ್ರಜ್ಞಾನಂದ, ಗುಕೇಶ್ಗೆ ‘ಆರ್ಮ್ಗೆಡನ್’ ಗೆಲುವು.ಬೆಂಗಳೂರು: ಸಂಬಳ ನೀಡಿಲ್ಲವೆಂದು ಚಿನ್ನದ ಗಟ್ಟಿ ಕಳ್ಳತನ, 9 ಮಂದಿ ಸೆರೆ . <h3><strong>ನಾಯಕರ ಪ್ರತಿಕ್ರಿಯೆ</strong></h3><p>ದೇಶದಲ್ಲಿ ಉದ್ಯೋಗ, ನ್ಯಾಯ ಮತ್ತು ಉತ್ತರದಾಯಿತ್ವವನ್ನು ಕೇಳುವ ಯುವಕರು ಸರ್ಕಾರದ ಕಣ್ಣಿಗೆ ಜಿರಳೆಗಳಂತೆ ಕಂಡರೆ, ನಾವು ಆ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇವೆ. ಎಫ್ಐಆರ್, ಜೈಲು ಶಿಕ್ಷೆ ಅಥವಾ ಬೆದರಿಕೆಗಳಿಗೆ ಹೆದರದೆ ಅನ್ಯಾಯದ ವಿರುದ್ಧ ಹೋರಾಡುವ ಯುವ ಭಾರತದ ಪ್ರತೀಕವೇ ಈ 'ಇಂಡಿಯನ್ ಯೂತ್ ಕಾಕ್ರೋಚಸ್' ಎಂದು ಯೂತ್ ಕಾಂಗ್ರೆಸ್ ಉಸ್ತುವಾರಿ ಮನೀಶ್ ಶರ್ಮಾ ಹೇಳಿದ್ದಾರೆ.</p><p>ಹಕ್ಕಿಗಾಗಿ ಧ್ವನಿ ಎತ್ತುವ ಯುವಕರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಜೈಲಿಗೆ ದೂಡಿ ಅವರ ಧ್ವನಿಯನ್ನು ಅಡಗಿಸಲಾಗುತ್ತಿದೆ. ಆದರೆ ಯೂತ್ ಕಾಂಗ್ರೆಸ್ ಇಂತಹ ಯಾವುದೇ ದಮನಕಾರಿ ನೀತಿಗಳಿಗೆ ಹೆದರುವುದಿಲ್ಲ. ಈ ಹೋರಾಟ ಸಾಮಾಜಿಕ ಜಾಲತಾಣಗಳ ಜೊತೆಗೆ ಬೀದಿಗಿಳಿದು ಪ್ರತಿಭಟನೆ ಮುಂದುವರಿಯಲಿದೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜನಪ್ರಿಯತೆ ಹೆಚ್ಚುತ್ತಿರುವ ಮಧ್ಯೆ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) 'ಇಂಡಿಯನ್ ಯೂತ್ ಕಾಕ್ರೋಚ್' (ಭಾರತೀಯ ಯುವ ಜಿರಳೆಗಳು) ಎಂಬ ಅಭಿಯಾನವನ್ನು ಮಂಗಳವಾರ ಪ್ರಾರಂಭಿಸಿದೆ.</p><p>ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಯುವಕರ ಪ್ರತಿರೋಧವನ್ನು ತೀವ್ರಗೊಳಿಸಲು ರಾಷ್ಟ್ರವ್ಯಾಪಿ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ.</p>.ಉಪೇಂದ್ರ ಮನೆಯಲ್ಲಿ ಸಂಭ್ರಮ: ನಟ ನಿರಂಜನ್ ನಿಶ್ಚಿತಾರ್ಥ ಚಿತ್ರಗಳು ಇಲ್ಲಿವೆ.ಕೆಂಪುಕೋಟೆ ಕಾರು ಬಾಂಬ್ ಸ್ಫೋಟ: ರಾಸಾಯನಿಕ ಖರೀದಿಸಲು ನಕಲಿ ಗುರುತಿನ ಚೀಟಿ ಬಳಕೆ. <p>ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯಿಂದ ಪ್ರೇರಿತಗೊಂಡು ಯೂತ್ ಕಾಂಗ್ರೆಸ್ ಈ ಹೆಜ್ಜೆ ಇಟ್ಟಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ನ್ಯಾಯಾಲಯದ ವಿಚಾರಣೆಯೊಂದರ ಸಂದರ್ಭದಲ್ಲಿ ಆಡಿದ ಮಾತುಗಳೇ ಈ ಅಭಿಯಾನಕ್ಕೆ ಕಿಡಿ ಹೊತ್ತಿಸಿದವು. ನಿರುದ್ಯೋಗಿ ಯುವಕರನ್ನು 'ಜಿರಳೆಗಳು‘ ಎಂದು ಸಿಜೆಐ ಕರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.</p><p>ಅಭಿಜೀತ್ ದೀಪ್ಕೆ ಎಂಬುವವರು ಆನ್ಲೈನ್ನಲ್ಲಿ ಈ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಅಭಿಯಾನವನ್ನು ಹುಟ್ಟಿ ಹಾಕಿದರು. ಇದೀಗ ಯೂತ್ ಕಾಂಗ್ರೆಸ್ ಇದನ್ನು ಅಧಿಕೃತ ರಾಜಕೀಯ ಚಳವಳಿಯನ್ನಾಗಿ ಪರಿವರ್ತಿಸಿದೆ.</p>.CBSE | ಪಾವತಿ ವ್ಯವಸ್ಥೆ ಸುಧಾರಿಸಿ: ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಪ್ರಧಾನ್.150 ನಾಡ ಕಚೇರಿಗಳಿಗೆ ಹೊಸ ಕಟ್ಟಡ: ಕಂದಾಯ ಇಲಾಖೆ ಸಮ್ಮತಿ. <h3><strong>ಅಭಿಯಾನದ ಪ್ರಮುಖ ಮುಖ್ಯಾಂಶಗಳು</strong></h3><p> ಯೂತ್ ಕಾಂಗ್ರೆಸ್ ಉಸ್ತುವಾರಿ ಮನೀಶ್ ಶರ್ಮಾ ಮತ್ತು ಅಧ್ಯಕ್ಷ ಉದಯ್ ಭಾನು ಚಿಬ್ ನೇತೃತ್ವದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.</p><p>ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಒತ್ತಾಯಿಸಿದೆ.</p><p>ಈ ಅಭಿಯಾನದಲ್ಲಿ ದೇಶದ ಯುವಕರು ಭಾಗವಹಿಸಲು ಮತ್ತು ನೋಂದಾಯಿಸಿಕೊಳ್ಳಲು ಪ್ರತ್ಯೇಕ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಆರಂಭಿಸಲಾಗಿದೆ.</p>.ನಾರ್ವೆ ಚೆಸ್ ಟೂರ್ನಿ: ಪ್ರಜ್ಞಾನಂದ, ಗುಕೇಶ್ಗೆ ‘ಆರ್ಮ್ಗೆಡನ್’ ಗೆಲುವು.ಬೆಂಗಳೂರು: ಸಂಬಳ ನೀಡಿಲ್ಲವೆಂದು ಚಿನ್ನದ ಗಟ್ಟಿ ಕಳ್ಳತನ, 9 ಮಂದಿ ಸೆರೆ . <h3><strong>ನಾಯಕರ ಪ್ರತಿಕ್ರಿಯೆ</strong></h3><p>ದೇಶದಲ್ಲಿ ಉದ್ಯೋಗ, ನ್ಯಾಯ ಮತ್ತು ಉತ್ತರದಾಯಿತ್ವವನ್ನು ಕೇಳುವ ಯುವಕರು ಸರ್ಕಾರದ ಕಣ್ಣಿಗೆ ಜಿರಳೆಗಳಂತೆ ಕಂಡರೆ, ನಾವು ಆ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇವೆ. ಎಫ್ಐಆರ್, ಜೈಲು ಶಿಕ್ಷೆ ಅಥವಾ ಬೆದರಿಕೆಗಳಿಗೆ ಹೆದರದೆ ಅನ್ಯಾಯದ ವಿರುದ್ಧ ಹೋರಾಡುವ ಯುವ ಭಾರತದ ಪ್ರತೀಕವೇ ಈ 'ಇಂಡಿಯನ್ ಯೂತ್ ಕಾಕ್ರೋಚಸ್' ಎಂದು ಯೂತ್ ಕಾಂಗ್ರೆಸ್ ಉಸ್ತುವಾರಿ ಮನೀಶ್ ಶರ್ಮಾ ಹೇಳಿದ್ದಾರೆ.</p><p>ಹಕ್ಕಿಗಾಗಿ ಧ್ವನಿ ಎತ್ತುವ ಯುವಕರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಜೈಲಿಗೆ ದೂಡಿ ಅವರ ಧ್ವನಿಯನ್ನು ಅಡಗಿಸಲಾಗುತ್ತಿದೆ. ಆದರೆ ಯೂತ್ ಕಾಂಗ್ರೆಸ್ ಇಂತಹ ಯಾವುದೇ ದಮನಕಾರಿ ನೀತಿಗಳಿಗೆ ಹೆದರುವುದಿಲ್ಲ. ಈ ಹೋರಾಟ ಸಾಮಾಜಿಕ ಜಾಲತಾಣಗಳ ಜೊತೆಗೆ ಬೀದಿಗಿಳಿದು ಪ್ರತಿಭಟನೆ ಮುಂದುವರಿಯಲಿದೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>