ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಂಡಿ ಕಳವು: ಸಿಐಡಿ ತನಿಖೆ ಆರಂಭ

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ
Last Updated 24 ಮೇ 2014, 19:30 IST
ಅಕ್ಷರ ಗಾತ್ರ

ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಸ್ಥಾನದಲ್ಲಿ 2012ರ ಆಗಸ್ಟ್‌ 24 ರಂದು ನಡೆದಿದ್ದ ಹುಂಡಿ ಕಳ್ಳತನ ಪ್ರಕ­ರ­ಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ.

ಸಿಐಡಿ ಇನ್‌ಸ್ಪೆಕ್ಟರ್ ಪ್ರಭುಶಂಕರ ನೇತೃತ್ವದ ತಂಡ ಗೋಕರ್ಣಕ್ಕೆ ಬಂದಿದ್ದು ತನಿಖೆ ಪ್ರಾರಂಭವಾಗಿದೆ. ಪ್ರಕರಣದ ತನಿಖೆಯನ್ನು ಹಿಂದೆ ಕುಮಟಾ ಇನ್‌­ಪೆಕ್ಟರ್‌ ಕೆ.ಶ್ರೀಕಾಂತ್‌ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು. ರಾತ್ರಿ ವೇಳೆ ದೇವಾಲಯದ ಹೊರಗಿನ ಯಾವುದೇ ಬೀಗ ಮುರಿ­ಯದೇ ಒಳ ನುಗ್ಗಿದ್ದ ಕಳ್ಳರು, ಒಳಗಿನ ಬಾಗಿಲಿನ ಕಬ್ಬಿಣದ ಸರಳನ್ನು ಬಾಗಿಸಿ ಹುಂಡಿ ಕಳ್ಳತನ ನಡೆಸಿದ್ದರು. ಅದರಲ್ಲೂ ಸಾವಿರ, ಐನೂರು ರೂಪಾಯಿ ನೋಟು­ಗಳನ್ನೇ ಬೇರ್ಪಡಿಸಿ ಒಯ್ದಿದ್ದರು. ಹೊರ­ಗಡೆ ದೇವಸ್ಥಾನದ ಸೆಕ್ಯುರಿಟಿ ­ಗಾರ್ಡ್ ಇದ್ದರು.

ದೇವಾ­ಲಯದ ಪಕ್ಕದಲ್ಲೇ ಪೊಲೀಸ್ ಉಪ-­ಠಾಣೆ ಇದ್ದರೂ ಕಳ್ಳತನ ನಡೆ­ದಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ಇತ್ತಾದರೂ ಗುಡುಗು ಸಿಡಿಲಿನ ಕಾರಣದಿಂದ ಅಂದು ರಾತ್ರಿ 9.30ಕ್ಕೆ ಬಂದ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT