<p><strong>ಬೆಂಗಳೂರು:</strong> ಐಶ್ವರ್ಯ ಗೌಡ ಚಿನ್ನಾಭರಣ ವಂಚನೆ ಮಾಡಿದ ಪ್ರಕರಣದಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಹೆಸರು ತಳಕುಹಾಕಿಕೊಂಡಿದೆ ಎಂಬುದನ್ನು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ವತಃ ಪ್ರಸ್ತಾಪಿಸಿದ್ದು, ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.</p>.<p>ಸುದ್ದಿಗಾರರ ಜತೆ ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಐಶ್ವರ್ಯ ಎಂಬ ಮಹಿಳೆ ಚಿನ್ನ ವಂಚಿಸಿದ ಪ್ರಕರಣದಲ್ಲಿ ನನ್ನ ಪತ್ನಿ ಮತ್ತು ಮಗನ ಹೆಸರು ತಳಕು ಹಾಕಿಕೊಂಡಿದೆ. ಅವರು ಪರಸ್ಪರ ಭೇಟಿ ಮಾಡಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ವರದಿಗಳನ್ನು ನೋಡಿದ ನಂತರವೇ ಮಾಹಿತಿ ತರಿಸಿಕೊಂಡು ಪರಿಶೀಲಿಸಿದೆ’ ಎಂದರು.</p>.<p>‘ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಕುಟುಂಬದವರ ಹೆಸರನ್ನು ಎಳೆದು ತರುತ್ತಿದ್ದು, ಷಡ್ಯಂತ್ರ ರೂಪಿಸಿದ್ದಾರೆ. ಯಾರು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಮತ್ತು ಏತಕ್ಕಾಗಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಆದರೆ ಅವರಿಂದ ಏನು ಮಾಡಲೂ ಸಾಧ್ಯವಿಲ್ಲ’ ಎಂದು ಹೇಳಿದರು.</p>.<p>‘ಇದು 2016–2019ರ ನಡುವೆ ನಡೆದ ಪ್ರಕರಣ. ಆ ಹೊತ್ತಿನಲ್ಲಿ ಅನಿತಾ ಮತ್ತು ನಿಖಿಲ್ ಅವರನ್ನು ಆ ಮಹಿಳೆ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಈ ಇಬ್ಬರನ್ನು ಐಶ್ವರ್ಯ ಎಲ್ಲಿ ಮತ್ತು ಯಾವಾಗ ಭೇಟಿ ಮಾಡಿದರು ಎಂಬುದು ಗೊತ್ತಿದ್ದರೆ ಅದನ್ನು ಬಹಿರಂಗಪಡಿಸಲಿ. ಅಸಲಿಗೆ ನಮ್ಮ ಮನೆಯವರಿಗೆ ಐಶ್ವರ್ಯ ಮುಖವೇ ಗೊತ್ತಿಲ್ಲ’ ಎಂದರು.</p>.<p>‘ಆ ಮಹಿಳೆಯಿಂದ ವಂಚನೆಗೆ ಒಳಗಾದವರು ಈಗ ದೂರು ನೀಡಿದ್ದಾರೆ. 2016ರಲ್ಲಿ ನಡೆದ ವಂಚನೆಗೆ 2024ರಲ್ಲಿ ದೂರು ನೀಡಿರುವುದು ಸಹಜವೆಂಬಂತೆ ಕಾಣುತ್ತಿಲ್ಲ. ಮೊದಲೇ ದೂರು ಕೊಡಬಹುದಿತ್ತಲ್ಲವೇ? 2018ರಲ್ಲಿ ನಾನೇ ಮುಖ್ಯಮಂತ್ರಿಯಾಗಿದ್ದೆ. ಆಗಲೂ ದೂರು ನೀಡಬಹುದಿತ್ತು. ಆದರೆ ದುರುದ್ದೇಶದಿಂದ ಈಗ ಯಾರು ದೂರು ಕೊಡಿಸಿದ್ದಾರೆ ಎಂಬುದು ಗೊತ್ತಾಗಿದೆ’ ಎಂದು ಹೇಳಿದರು.</p>.<p>‘ನಾನು ₹50 ಕೋಟಿ ಕೇಳಿದೆ ಎಂದು ನನ್ನ ಮೇಲೂ ದೂರು ನೀಡಿದ್ದರು. ಈಗ ಕುಟುಂಬದವರನ್ನು ಎಳೆದು ತರುತ್ತಿದ್ದಾರೆ. ಸಂಕ್ರಾಂತಿ ಕಳೆಯಲಿ. ಈ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತೇನೆ’ ಎಂದರು.</p>.<div><blockquote>ನಿಖಿಲ್ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿಗೂ ಐಶ್ವರ್ಯ ಗೌಡಗೂ ಪರಿಚಯ ಇದೆ ಎಂದು ಸುದ್ದಿ ಮಾಡಿಸುತ್ತಿದ್ದಾರೆ. ಇದು ಸರಿಯಲ್ಲ </blockquote><span class="attribution">ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಐಶ್ವರ್ಯ ಗೌಡ ಚಿನ್ನಾಭರಣ ವಂಚನೆ ಮಾಡಿದ ಪ್ರಕರಣದಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಹೆಸರು ತಳಕುಹಾಕಿಕೊಂಡಿದೆ ಎಂಬುದನ್ನು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ವತಃ ಪ್ರಸ್ತಾಪಿಸಿದ್ದು, ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.</p>.<p>ಸುದ್ದಿಗಾರರ ಜತೆ ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಐಶ್ವರ್ಯ ಎಂಬ ಮಹಿಳೆ ಚಿನ್ನ ವಂಚಿಸಿದ ಪ್ರಕರಣದಲ್ಲಿ ನನ್ನ ಪತ್ನಿ ಮತ್ತು ಮಗನ ಹೆಸರು ತಳಕು ಹಾಕಿಕೊಂಡಿದೆ. ಅವರು ಪರಸ್ಪರ ಭೇಟಿ ಮಾಡಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ವರದಿಗಳನ್ನು ನೋಡಿದ ನಂತರವೇ ಮಾಹಿತಿ ತರಿಸಿಕೊಂಡು ಪರಿಶೀಲಿಸಿದೆ’ ಎಂದರು.</p>.<p>‘ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಕುಟುಂಬದವರ ಹೆಸರನ್ನು ಎಳೆದು ತರುತ್ತಿದ್ದು, ಷಡ್ಯಂತ್ರ ರೂಪಿಸಿದ್ದಾರೆ. ಯಾರು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಮತ್ತು ಏತಕ್ಕಾಗಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಆದರೆ ಅವರಿಂದ ಏನು ಮಾಡಲೂ ಸಾಧ್ಯವಿಲ್ಲ’ ಎಂದು ಹೇಳಿದರು.</p>.<p>‘ಇದು 2016–2019ರ ನಡುವೆ ನಡೆದ ಪ್ರಕರಣ. ಆ ಹೊತ್ತಿನಲ್ಲಿ ಅನಿತಾ ಮತ್ತು ನಿಖಿಲ್ ಅವರನ್ನು ಆ ಮಹಿಳೆ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಈ ಇಬ್ಬರನ್ನು ಐಶ್ವರ್ಯ ಎಲ್ಲಿ ಮತ್ತು ಯಾವಾಗ ಭೇಟಿ ಮಾಡಿದರು ಎಂಬುದು ಗೊತ್ತಿದ್ದರೆ ಅದನ್ನು ಬಹಿರಂಗಪಡಿಸಲಿ. ಅಸಲಿಗೆ ನಮ್ಮ ಮನೆಯವರಿಗೆ ಐಶ್ವರ್ಯ ಮುಖವೇ ಗೊತ್ತಿಲ್ಲ’ ಎಂದರು.</p>.<p>‘ಆ ಮಹಿಳೆಯಿಂದ ವಂಚನೆಗೆ ಒಳಗಾದವರು ಈಗ ದೂರು ನೀಡಿದ್ದಾರೆ. 2016ರಲ್ಲಿ ನಡೆದ ವಂಚನೆಗೆ 2024ರಲ್ಲಿ ದೂರು ನೀಡಿರುವುದು ಸಹಜವೆಂಬಂತೆ ಕಾಣುತ್ತಿಲ್ಲ. ಮೊದಲೇ ದೂರು ಕೊಡಬಹುದಿತ್ತಲ್ಲವೇ? 2018ರಲ್ಲಿ ನಾನೇ ಮುಖ್ಯಮಂತ್ರಿಯಾಗಿದ್ದೆ. ಆಗಲೂ ದೂರು ನೀಡಬಹುದಿತ್ತು. ಆದರೆ ದುರುದ್ದೇಶದಿಂದ ಈಗ ಯಾರು ದೂರು ಕೊಡಿಸಿದ್ದಾರೆ ಎಂಬುದು ಗೊತ್ತಾಗಿದೆ’ ಎಂದು ಹೇಳಿದರು.</p>.<p>‘ನಾನು ₹50 ಕೋಟಿ ಕೇಳಿದೆ ಎಂದು ನನ್ನ ಮೇಲೂ ದೂರು ನೀಡಿದ್ದರು. ಈಗ ಕುಟುಂಬದವರನ್ನು ಎಳೆದು ತರುತ್ತಿದ್ದಾರೆ. ಸಂಕ್ರಾಂತಿ ಕಳೆಯಲಿ. ಈ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತೇನೆ’ ಎಂದರು.</p>.<div><blockquote>ನಿಖಿಲ್ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿಗೂ ಐಶ್ವರ್ಯ ಗೌಡಗೂ ಪರಿಚಯ ಇದೆ ಎಂದು ಸುದ್ದಿ ಮಾಡಿಸುತ್ತಿದ್ದಾರೆ. ಇದು ಸರಿಯಲ್ಲ </blockquote><span class="attribution">ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>