<p>ಬೆಂಗಳೂರು ಮಹಾನಗರವು ಕೋಟ್ಯಂತರ ಜನರಿಗೆ ಬದುಕು ಕೊಟ್ಟಿದೆ. ಆಶ್ರಯ ಅರಸಿ ಇಲ್ಲಿಗೆ ಬರುವ ಅನೇಕರು ಜೀವನ ಕಟ್ಟಿಕೊಂಡಿದ್ದಾರೆ. ದಿನಕ್ಕೆ ಕೋಟಿ ಲೆಕ್ಕದಲ್ಲಿ ದುಡಿಯುವವರಿಂದ ಹಿಡಿದು ದಿನದ ಲೆಕ್ಕದಲ್ಲಿ ದುಡಿದು ತಿನ್ನುವವರಿಗೂ ಈ ನಗರ ನೆಲೆ ಕಲ್ಪಿಸಿದೆ. ಇಂತಹ ನಗರವು ಮೌಂಟ್ ಎವರೆಸ್ಟ್ನ ತವರಾಗಿರುವ ನೇಪಾಳ ದೇಶವನ್ನು ಮುನ್ನಡೆಸಲು ಸಜ್ಜಾಗಿರುವ ವ್ಯಕ್ತಿ ಒಬ್ಬರಿಗೂ ಆಶ್ರಯ ನೀಡಿದೆ. </p><p>ಹೌದು, ನೇಪಾಳದಲ್ಲಿ ವಿದ್ಯಾರ್ಥಿಗಳ ದಂಗೆಯ ಬಳಿಕ, ಪ್ರಧಾನಿಯಾಗಿದ್ದ ಕೆ.ಪಿ. ಓಲಿ ಅವರು ರಾಜೀನಾಮೆ ಸಲ್ಲಿಸಿ ಕೆಳಗಿಳಿದರು. ಬಳಿಕ ನಡೆದ ನೇಪಾಳ ಚುನಾವಣೆಯಲ್ಲಿ ಬಾಲೇಂದ್ರ ಶಾ ಅಥವಾ ಬಾಲೆನ್ ಶಾ ಅವರು ಝಾಪಾ-5 ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಮಾತ್ರವಲ್ಲ, ಇವರೇ ನೇಪಾಳದ ಮುಂದಿನ ಪ್ರಧಾನಿಯಾಗಬೇಕು ಎಂಬ ಅಭಿಯಾನ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಆರಂಭವಾಗಿದೆ. </p><p>35 ವರ್ಷದ ಬಾಲೆನ್ ಶಾ ಅವರು 2016 ರಿಂದ 2018ರ ಅವಧಿಯಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಈ ವೇಳೆ, ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಎಂದು ಅವರ ಜೊತೆಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. </p><p>ಬಾಲೆನ್ ಶಾ ಅವರು ಕನ್ನಡದ ಸಿನಿಮಾಗಳಿಂದ ಪ್ರಭಾವಿಯತರಾಗಿದ್ದರು. ಅದರಲ್ಲೂ ವಿಶೇಷವಾಗಿ, ದಿವಂತಗ ನಟ ಪುನೀತ್ ರಾಜಕುಮಾರ್ ಅವರ ಸಿನಿಮಾಗಳ ಅಪ್ಪಟ ಅಭಿಮಾನಿಯಾಗಿದ್ದರು ಎಂದು ಅವರ ಒಡನಾಡಿಗಳು ತಿಳಿಸಿದ್ದಾರೆ.</p><p>2026ರ ಜನವರಿವರೆಗೆ ಕಾಠ್ಮಂಡುವಿನ 15ನೇ ಮೇಯರ್ ಆಗಿ ಸೇವೆ ಸಲ್ಲಿಸಿದ್ದ ಇವರು, ತಮ್ಮ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ ವಿರೋಧಿ ಮತ್ತು ಅಕ್ರಮ ನಿರ್ಮಾಣಗಳ ತೆರವು ಕಾರ್ಯಾಚರಣೆಗಳ ಮೂಲಕ ಜನಪ್ರಿಯತೆ ಗಳಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಝಾಪಾ-5 ಕ್ಷೇತ್ರದಿಂದ ಜಯಗಳಿಸಿದ್ದಾರೆ.</p>.<p><strong>ಶಾ ಅವರ ಬೆಂಗಳೂರು ಸಂಪರ್ಕ ಆರಂಭವಾಗಿದ್ದು ಹೇಗೆ?</strong></p><p>ಬಾಲೆನ್ ಶಾ ಅವರಿಗೆ ಕರ್ನಾಟಕದ ನಂಟು ಆರಂಭವಾಗಿದ್ದು ಅವರ ಕುಟುಂಬದಿಂದ. ಶಾ ಅವರ ಸಹೋದರಿ ಸುಜಾತ ಅವರು ಕಾರವಾರ ಸಮೀಪದ ಸೆಜೆಕಾನ್ ಗ್ರಾಮದ ನಿವಾಸಿ ಹರೀಶ್ ಕುಮಾರ್ ಸೆಜೆಕಾನ್ ಎಂಬುವವರನ್ನು ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಗಾಗಿ, ಶಾ ಅವರಿಗೆ ಬೆಂಗಳೂರಿನ ನಂಟು ಬೆಳೆಯಿತು. ಸಹೋದರಿ ಬೆಂಗಳೂರಿನಲ್ಲಿ ಇರುವುದರಿಂದ ಅವರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡರು.</p><p>ಬಾಲೆನ್ ಶಾ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಸಹೋದರಿ ಸುಜಾತ ‘ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಅವನು ನನ್ನ ಹೆಮ್ಮೆಯ ಕಿರಿಯ ಸಹೋದರ, ಆತ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಜಗತ್ತಿಗೆ ತಾನೇನು ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಸದಾ ಹಂಬಲಿಸುತ್ತಿರುತ್ತಾನೆ’ ಎಂದು ಹೇಳಿದ್ದಾರೆ. </p><p>ಸುಜಾತ ಅವರು ಕಲಾವಿದೆಯಾಗಿದ್ದಾರೆ. ಅವರ ಪತಿ ಹರೀಶ್ ಕುಮಾರ್ ಸೆಜೆಕನ್ ಅವರು ಉದ್ಯಮಿಯಾಗಿದ್ದಾರೆ.</p><p>ಶಾ ಅವರ ಸಾಧನೆಯು ಬೆಂಗಳೂರಿನಲ್ಲಿ ನೆಲೆಸಿರುವ ನೇಪಾಳಿ ಕುಟುಂಬಗಳ ಸಂತಸಕ್ಕೆ ಕಾರಣವಾಗಿದೆ. ಬೆಂಗಳೂರು ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ನೇಪಾಳಿಗಳು ವಾಸಿಸುತ್ತಿದ್ದಾರೆಂದು ಅಂದಾಜಿಸಲಾಗಿದೆ. ಅವರಲ್ಲಿ ಅನೇಕರು ಭದ್ರತಾ ಸಿಬ್ಬಂದಿ ಮತ್ತು ಸೇವಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಇನ್ನೂ ಅನೇಕರು ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಅನೇಕ ನೇಪಾಳಿಗಳು ನೇಪಾಳದ ಪಶ್ಚಿಮ ಭಾಗಗಳಿಂದ ಬಂದವರಾಗಿದ್ದಾರೆ.</p><p>ಇತ್ತೀಚೆಗೆ ಚುನಾವಣೆಯಲ್ಲಿ ಮತ ಚಲಾಯಿಸಲೆಂದು ನಗರದಿಂದ ಸುಮಾರು 10,000 ನೇಪಾಳಿಗಳು ತಮ್ಮ ಮನೆಗೆ ಹಿಂದಿರುಗಿದ್ದಾರೆ ಎಂದು ಸಮುದಾಯದ ಸದಸ್ಯರು ಅಂದಾಜಿಸಿದ್ದಾರೆ.</p><p>32 ವರ್ಷದ ನಿಕೇಶ್ ಭಂಡಾರಿ ಎಂಬುವವರು ಮಾತನಾಡಿ, ‘ನೇಪಾಳ ಚುನಾವಣೆಯಲ್ಲಿ ಬಾಲೆನ್ ಶಾ ಅವರು ಯುವ ಪೀಳಿಗೆಯನ್ನು ಪ್ರತಿನಿಧಿಸಿದ್ದಾರೆ. ಯುವ ಮತದಾರರು ಶಾ ಅವರು ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ. ನನ್ನ ಮನೆಯಲ್ಲಿ ಕೂಡ ಅನೇಕರು ಹಳೆ ತಲೆಮಾರಿನ ರಾಜಕಾರಣಿಗಳನ್ನು ಬೆಂಬಲಿಸುತ್ತಾರೆ. ಆದರೆ, ಯುವ ಪೀಳಿಗೆಗೆ ಬಾಲೆನ್ಗೆ ಭರವಸೆಯಾಗಿದ್ದಾರೆ’ ಎಂದಿದ್ದಾರೆ.</p><p>ಮುಂದುವರೆದು, ‘ನಾವು ರಾತ್ರೋರಾತ್ರಿ ಬದಲಾವಣೆಯಾಗುತ್ತದೆ ಎಂದು ನಿರೀಕ್ಷಿಸುವುದಿಲ್ಲ. ಆದರೆ ನಮಗೆ ಭರವಸೆ ಇದೆ. ನಮಗೆ ಉತ್ತಮ ಶಿಕ್ಷಣ, ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳು ದೊರೆತರೆ ನೇಪಾಳದಿಂದ ಬೇರೆ ದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆ ಆಗಲಿದೆ’ ಎಂದು ಭಂಡಾರಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು ಮಹಾನಗರವು ಕೋಟ್ಯಂತರ ಜನರಿಗೆ ಬದುಕು ಕೊಟ್ಟಿದೆ. ಆಶ್ರಯ ಅರಸಿ ಇಲ್ಲಿಗೆ ಬರುವ ಅನೇಕರು ಜೀವನ ಕಟ್ಟಿಕೊಂಡಿದ್ದಾರೆ. ದಿನಕ್ಕೆ ಕೋಟಿ ಲೆಕ್ಕದಲ್ಲಿ ದುಡಿಯುವವರಿಂದ ಹಿಡಿದು ದಿನದ ಲೆಕ್ಕದಲ್ಲಿ ದುಡಿದು ತಿನ್ನುವವರಿಗೂ ಈ ನಗರ ನೆಲೆ ಕಲ್ಪಿಸಿದೆ. ಇಂತಹ ನಗರವು ಮೌಂಟ್ ಎವರೆಸ್ಟ್ನ ತವರಾಗಿರುವ ನೇಪಾಳ ದೇಶವನ್ನು ಮುನ್ನಡೆಸಲು ಸಜ್ಜಾಗಿರುವ ವ್ಯಕ್ತಿ ಒಬ್ಬರಿಗೂ ಆಶ್ರಯ ನೀಡಿದೆ. </p><p>ಹೌದು, ನೇಪಾಳದಲ್ಲಿ ವಿದ್ಯಾರ್ಥಿಗಳ ದಂಗೆಯ ಬಳಿಕ, ಪ್ರಧಾನಿಯಾಗಿದ್ದ ಕೆ.ಪಿ. ಓಲಿ ಅವರು ರಾಜೀನಾಮೆ ಸಲ್ಲಿಸಿ ಕೆಳಗಿಳಿದರು. ಬಳಿಕ ನಡೆದ ನೇಪಾಳ ಚುನಾವಣೆಯಲ್ಲಿ ಬಾಲೇಂದ್ರ ಶಾ ಅಥವಾ ಬಾಲೆನ್ ಶಾ ಅವರು ಝಾಪಾ-5 ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಮಾತ್ರವಲ್ಲ, ಇವರೇ ನೇಪಾಳದ ಮುಂದಿನ ಪ್ರಧಾನಿಯಾಗಬೇಕು ಎಂಬ ಅಭಿಯಾನ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಆರಂಭವಾಗಿದೆ. </p><p>35 ವರ್ಷದ ಬಾಲೆನ್ ಶಾ ಅವರು 2016 ರಿಂದ 2018ರ ಅವಧಿಯಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಈ ವೇಳೆ, ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಎಂದು ಅವರ ಜೊತೆಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. </p><p>ಬಾಲೆನ್ ಶಾ ಅವರು ಕನ್ನಡದ ಸಿನಿಮಾಗಳಿಂದ ಪ್ರಭಾವಿಯತರಾಗಿದ್ದರು. ಅದರಲ್ಲೂ ವಿಶೇಷವಾಗಿ, ದಿವಂತಗ ನಟ ಪುನೀತ್ ರಾಜಕುಮಾರ್ ಅವರ ಸಿನಿಮಾಗಳ ಅಪ್ಪಟ ಅಭಿಮಾನಿಯಾಗಿದ್ದರು ಎಂದು ಅವರ ಒಡನಾಡಿಗಳು ತಿಳಿಸಿದ್ದಾರೆ.</p><p>2026ರ ಜನವರಿವರೆಗೆ ಕಾಠ್ಮಂಡುವಿನ 15ನೇ ಮೇಯರ್ ಆಗಿ ಸೇವೆ ಸಲ್ಲಿಸಿದ್ದ ಇವರು, ತಮ್ಮ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ ವಿರೋಧಿ ಮತ್ತು ಅಕ್ರಮ ನಿರ್ಮಾಣಗಳ ತೆರವು ಕಾರ್ಯಾಚರಣೆಗಳ ಮೂಲಕ ಜನಪ್ರಿಯತೆ ಗಳಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಝಾಪಾ-5 ಕ್ಷೇತ್ರದಿಂದ ಜಯಗಳಿಸಿದ್ದಾರೆ.</p>.<p><strong>ಶಾ ಅವರ ಬೆಂಗಳೂರು ಸಂಪರ್ಕ ಆರಂಭವಾಗಿದ್ದು ಹೇಗೆ?</strong></p><p>ಬಾಲೆನ್ ಶಾ ಅವರಿಗೆ ಕರ್ನಾಟಕದ ನಂಟು ಆರಂಭವಾಗಿದ್ದು ಅವರ ಕುಟುಂಬದಿಂದ. ಶಾ ಅವರ ಸಹೋದರಿ ಸುಜಾತ ಅವರು ಕಾರವಾರ ಸಮೀಪದ ಸೆಜೆಕಾನ್ ಗ್ರಾಮದ ನಿವಾಸಿ ಹರೀಶ್ ಕುಮಾರ್ ಸೆಜೆಕಾನ್ ಎಂಬುವವರನ್ನು ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಗಾಗಿ, ಶಾ ಅವರಿಗೆ ಬೆಂಗಳೂರಿನ ನಂಟು ಬೆಳೆಯಿತು. ಸಹೋದರಿ ಬೆಂಗಳೂರಿನಲ್ಲಿ ಇರುವುದರಿಂದ ಅವರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡರು.</p><p>ಬಾಲೆನ್ ಶಾ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಸಹೋದರಿ ಸುಜಾತ ‘ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಅವನು ನನ್ನ ಹೆಮ್ಮೆಯ ಕಿರಿಯ ಸಹೋದರ, ಆತ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಜಗತ್ತಿಗೆ ತಾನೇನು ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಸದಾ ಹಂಬಲಿಸುತ್ತಿರುತ್ತಾನೆ’ ಎಂದು ಹೇಳಿದ್ದಾರೆ. </p><p>ಸುಜಾತ ಅವರು ಕಲಾವಿದೆಯಾಗಿದ್ದಾರೆ. ಅವರ ಪತಿ ಹರೀಶ್ ಕುಮಾರ್ ಸೆಜೆಕನ್ ಅವರು ಉದ್ಯಮಿಯಾಗಿದ್ದಾರೆ.</p><p>ಶಾ ಅವರ ಸಾಧನೆಯು ಬೆಂಗಳೂರಿನಲ್ಲಿ ನೆಲೆಸಿರುವ ನೇಪಾಳಿ ಕುಟುಂಬಗಳ ಸಂತಸಕ್ಕೆ ಕಾರಣವಾಗಿದೆ. ಬೆಂಗಳೂರು ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ನೇಪಾಳಿಗಳು ವಾಸಿಸುತ್ತಿದ್ದಾರೆಂದು ಅಂದಾಜಿಸಲಾಗಿದೆ. ಅವರಲ್ಲಿ ಅನೇಕರು ಭದ್ರತಾ ಸಿಬ್ಬಂದಿ ಮತ್ತು ಸೇವಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಇನ್ನೂ ಅನೇಕರು ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಅನೇಕ ನೇಪಾಳಿಗಳು ನೇಪಾಳದ ಪಶ್ಚಿಮ ಭಾಗಗಳಿಂದ ಬಂದವರಾಗಿದ್ದಾರೆ.</p><p>ಇತ್ತೀಚೆಗೆ ಚುನಾವಣೆಯಲ್ಲಿ ಮತ ಚಲಾಯಿಸಲೆಂದು ನಗರದಿಂದ ಸುಮಾರು 10,000 ನೇಪಾಳಿಗಳು ತಮ್ಮ ಮನೆಗೆ ಹಿಂದಿರುಗಿದ್ದಾರೆ ಎಂದು ಸಮುದಾಯದ ಸದಸ್ಯರು ಅಂದಾಜಿಸಿದ್ದಾರೆ.</p><p>32 ವರ್ಷದ ನಿಕೇಶ್ ಭಂಡಾರಿ ಎಂಬುವವರು ಮಾತನಾಡಿ, ‘ನೇಪಾಳ ಚುನಾವಣೆಯಲ್ಲಿ ಬಾಲೆನ್ ಶಾ ಅವರು ಯುವ ಪೀಳಿಗೆಯನ್ನು ಪ್ರತಿನಿಧಿಸಿದ್ದಾರೆ. ಯುವ ಮತದಾರರು ಶಾ ಅವರು ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ. ನನ್ನ ಮನೆಯಲ್ಲಿ ಕೂಡ ಅನೇಕರು ಹಳೆ ತಲೆಮಾರಿನ ರಾಜಕಾರಣಿಗಳನ್ನು ಬೆಂಬಲಿಸುತ್ತಾರೆ. ಆದರೆ, ಯುವ ಪೀಳಿಗೆಗೆ ಬಾಲೆನ್ಗೆ ಭರವಸೆಯಾಗಿದ್ದಾರೆ’ ಎಂದಿದ್ದಾರೆ.</p><p>ಮುಂದುವರೆದು, ‘ನಾವು ರಾತ್ರೋರಾತ್ರಿ ಬದಲಾವಣೆಯಾಗುತ್ತದೆ ಎಂದು ನಿರೀಕ್ಷಿಸುವುದಿಲ್ಲ. ಆದರೆ ನಮಗೆ ಭರವಸೆ ಇದೆ. ನಮಗೆ ಉತ್ತಮ ಶಿಕ್ಷಣ, ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳು ದೊರೆತರೆ ನೇಪಾಳದಿಂದ ಬೇರೆ ದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆ ಆಗಲಿದೆ’ ಎಂದು ಭಂಡಾರಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>