<p><strong>ಬಳ್ಳಾರಿ:</strong> ಆನ್ಲೈನ್ನಲ್ಲಿ ಮೂಲಭೂತವಾದದ ಪ್ರಸರಣೆ, ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಳ್ಳಾರಿ ನಗರದ ಅಬ್ದುಲ್ ಸಲಾಮ್ (36) ಎಂಬಾತನನ್ನು ಆಂಧ್ರ ಪ್ರದೇಶ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿ ಕರೆದೊಯ್ದಿದ್ದಾರೆ.</p>.<p>ಅಬ್ದುಲ್ ಸಲಾಮ್ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಬ್ದುಲ್ ಕಲಾಂ ಬೀದಿಯ ನಿವಾಸಿ ಎಂದು ಗೊತ್ತಾಗಿದೆ.</p>.<p>ಸಲಾಮ್ ಕುರಿತ ಖಚಿತ ಮಾಹಿತಿ ಆಧರಿಸಿ ಬಳ್ಳಾರಿಗೆ ಬಂದಿದ್ದ ಆಂಧ್ರ ಪೊಲೀಸರು, ಆತನನ್ನು ಹಿಂಬಾಲಿಸಿ ಬಂದು, ನಗರದ ಧಾರದ ಮಿಲ್ ಬಳಿ ಬಂಧಿಸಿರುವುದು ಖಚಿತವಾಗಿದೆ. ಬಳಿಕ ಸ್ಥಳೀಯ ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ ನೆರವಿನೊಂದಿಗೆ ಸಲಾಮ್ ಮನೆಯಲ್ಲಿ ಪಂಚನಾಮೆ ನಡೆಸಿ, ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆಂಧ್ರಕ್ಕೆ ಕರೆದೊಯ್ದಲಾಗಿದೆ ಎಂದು ತಿಳಿದು ಬಂದಿದೆ.</p>.<p>ಪ್ರಕರಣದ ಹಿನ್ನೆಲೆ: ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಕೆಲ ಮಂದಿ ಉಗ್ರವಾದ ಹರಡುತ್ತಿರುವ ಬಗ್ಗೆ ಮತ್ತು ಅವರಿಗೆ ಭಯೋತ್ಪದನಾ ಸಂಘಟನೆಗಳ ನಂಟು ಇರುವ ಬಗ್ಗೆ ಮಾರ್ಚ್ 22ರಂದು ವಿಜಯವಾಡ ಸೆಕೆಂಡ್ ಟೌನ್ ಠಾಣೆಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದ್ದು, ಅದನ್ನು ಆಧರಿಸಿ ಮಾರ್ಚ್ 23ರಂದು ಎಫ್ಐಆರ್ ದಾಖಲಿಸಿ ಕೆಲ ಮಂದಿಯ ವಿರುದ್ಧ ಶೋಧನಾ ವಾರೆಂಟ್ ಪಡೆದು ಕಾರ್ಯಾಚರಣೆ ನಡೆಸಲಾಗಿತ್ತು.</p>.<p>ಈ ವೇಳೆ, ವಿಜಯವಾಡದ ವಿಂಚ್ಪೇಟ್ ಎಂಬಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ರೆಹಮತುಲ್ಲಾ ಷರೀಫ್ (23) ಎಂಬಾತ ಸಿಕ್ಕಿಬಿದ್ದಿದ್ದಾನೆ. ಸಾಮಾಜಿಕ ಮಾಧ್ಯಮಗಳ ಮೂಲಕ ತಾನು ಮೂಲಭೂತವಾದಿ ಸಿದ್ಧಾಂತ ಮತ್ತು ಎಕ್ಯುಐಎಸ್ ಮತ್ತು ಐಎಸ್ಐಎಸ್ ಸಂಘಟನೆಗಳ ವಿಚಾರಧಾರೆಗಳಿಗೆ ಪ್ರೇರಿತನಾಗಿರುವುದಾಗಿಯೂ, ಜಿಹಾದಿಯಾಗಲು ಇಚ್ಛೆ ಹೊಂದಿರುವುದಾಗಿ, ಭಾರತದಲ್ಲಿ ಖಿಲಾಫತ್ ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿಯೂ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಇದಲ್ಲದೇ, ದೇಶಾದ್ಯಂತ ಹಲವಾರು ವ್ಯಕ್ತಿಗಳೊಂದಿಗೆ ಆತ ಸಂಪರ್ಕ ಹೊಂದಿದ್ದ. ಅವರಲ್ಲಿ, ಬಳ್ಳಾರಿಯ ಅಬ್ದುಲ್ ಸಲಾಮ್ ಕೂಡ ಒಬ್ಬನಾಗಿದ್ದ ಎಂದು ಗೊತ್ತಾಗಿದೆ.</p>.<p>ಅಬ್ದುಲ್ ಸಲಾಮ್ ತೀವ್ರವಾದಿ ವಿಷಯವನ್ನು ಹಂಚಿಕೊಳ್ಳುವ ಮತ್ತು ಜಿಹಾದಿ ಪರಿಕಲ್ಪನೆಗಳನ್ನು ಪ್ರಚಾರ ಮಾಡುವ ಗುಂಪಿನ ಭಾಗವಾಗಿದ್ದ ಎಂದು ಗೊತ್ತಾಗಿದೆ. ಬಳ್ಳಾರಿಯ ಅಬ್ದುಲ್ ಸಲಾಮ್ನೊಂದಿಗೆ ಸಂಪರ್ಕ ಹೊಂದುವಂತೆ ವಿಜಯವಾಡದ ಮೊಹಮದ್ ರೆಹಮತುಲ್ಲಾ ಷರೀಫ್ಗೆ ವಿದೇಶಿ ಉಗ್ರ ಅಲ್-ಹಕೀಮ್ ಶುಕೂರ್ ಎಂಬಾತ ಸೂಚನೆ ನೀಡಿದ್ದ ಎಂದು ವಿಜಯವಾಡ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ ಈ ಜಾಲವು ವಿದೇಶಿ ಉಗ್ರರೊಂದಿಗೆ ಸಂಪರ್ಕವನ್ನು ಹೊಂದಿರುವುದನ್ನು ಪೊಲೀಸ್ ಎಫ್ಐಆರ್ ಹೇಳುತ್ತಿದೆ. ಯುವಕರನ್ನು ಉಗ್ರಗಾಮಿ ಚಟುವಟಿಕೆಗಳ ಕಡೆಗೆ ಸೆಳೆಯುವಲ್ಲಿ ಅಲ್ ಹಕೀಮ್ ಶಕೂರ್ ಮತ್ತು ಆತ ತಿಳಿಸಿದ ಇನ್ನಿತರ ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.</p>.<p><strong>‘ಆನ್ಲೈನ್ ವೇದಿಕೆ ಪರಿಶೀಲನೆ ಅಗತ್ಯ’</strong></p><p>‘ಯುವಕರಲ್ಲಿ ಮೂಲಭೂತವಾದವನ್ನು ಉತ್ತೇಜಿಸುವಲ್ಲಿನ ಸಾಮಾಜಿಕ ಮಾಧ್ಯಮದ ಪಾತ್ರವನ್ನು ಈ ಪ್ರಕರಣ ಎತ್ತಿ ತೋರಿಸುತ್ತಿದೆ. ಆನ್ಲೈನ್ ವೇದಿಕೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸುವ, ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಈ ಪ್ರಕರಣ ಹೇಳುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. </p><p>ಇದಕ್ಕೂ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಶಂಕಿತನ ಜಾಡು ಹಿಡಿದು ಬಳ್ಳಾರಿಗೆ ಬಂದ ರಾಷ್ಟ್ರೀಯ ತನಿಖಾ ದಳ ವ್ಯಕ್ತಿಯೊಬ್ಬನನ್ನು ಬಂಧಿಸಿ ಕರೆದೊಯ್ದಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಆನ್ಲೈನ್ನಲ್ಲಿ ಮೂಲಭೂತವಾದದ ಪ್ರಸರಣೆ, ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಳ್ಳಾರಿ ನಗರದ ಅಬ್ದುಲ್ ಸಲಾಮ್ (36) ಎಂಬಾತನನ್ನು ಆಂಧ್ರ ಪ್ರದೇಶ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿ ಕರೆದೊಯ್ದಿದ್ದಾರೆ.</p>.<p>ಅಬ್ದುಲ್ ಸಲಾಮ್ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಬ್ದುಲ್ ಕಲಾಂ ಬೀದಿಯ ನಿವಾಸಿ ಎಂದು ಗೊತ್ತಾಗಿದೆ.</p>.<p>ಸಲಾಮ್ ಕುರಿತ ಖಚಿತ ಮಾಹಿತಿ ಆಧರಿಸಿ ಬಳ್ಳಾರಿಗೆ ಬಂದಿದ್ದ ಆಂಧ್ರ ಪೊಲೀಸರು, ಆತನನ್ನು ಹಿಂಬಾಲಿಸಿ ಬಂದು, ನಗರದ ಧಾರದ ಮಿಲ್ ಬಳಿ ಬಂಧಿಸಿರುವುದು ಖಚಿತವಾಗಿದೆ. ಬಳಿಕ ಸ್ಥಳೀಯ ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ ನೆರವಿನೊಂದಿಗೆ ಸಲಾಮ್ ಮನೆಯಲ್ಲಿ ಪಂಚನಾಮೆ ನಡೆಸಿ, ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆಂಧ್ರಕ್ಕೆ ಕರೆದೊಯ್ದಲಾಗಿದೆ ಎಂದು ತಿಳಿದು ಬಂದಿದೆ.</p>.<p>ಪ್ರಕರಣದ ಹಿನ್ನೆಲೆ: ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಕೆಲ ಮಂದಿ ಉಗ್ರವಾದ ಹರಡುತ್ತಿರುವ ಬಗ್ಗೆ ಮತ್ತು ಅವರಿಗೆ ಭಯೋತ್ಪದನಾ ಸಂಘಟನೆಗಳ ನಂಟು ಇರುವ ಬಗ್ಗೆ ಮಾರ್ಚ್ 22ರಂದು ವಿಜಯವಾಡ ಸೆಕೆಂಡ್ ಟೌನ್ ಠಾಣೆಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದ್ದು, ಅದನ್ನು ಆಧರಿಸಿ ಮಾರ್ಚ್ 23ರಂದು ಎಫ್ಐಆರ್ ದಾಖಲಿಸಿ ಕೆಲ ಮಂದಿಯ ವಿರುದ್ಧ ಶೋಧನಾ ವಾರೆಂಟ್ ಪಡೆದು ಕಾರ್ಯಾಚರಣೆ ನಡೆಸಲಾಗಿತ್ತು.</p>.<p>ಈ ವೇಳೆ, ವಿಜಯವಾಡದ ವಿಂಚ್ಪೇಟ್ ಎಂಬಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ರೆಹಮತುಲ್ಲಾ ಷರೀಫ್ (23) ಎಂಬಾತ ಸಿಕ್ಕಿಬಿದ್ದಿದ್ದಾನೆ. ಸಾಮಾಜಿಕ ಮಾಧ್ಯಮಗಳ ಮೂಲಕ ತಾನು ಮೂಲಭೂತವಾದಿ ಸಿದ್ಧಾಂತ ಮತ್ತು ಎಕ್ಯುಐಎಸ್ ಮತ್ತು ಐಎಸ್ಐಎಸ್ ಸಂಘಟನೆಗಳ ವಿಚಾರಧಾರೆಗಳಿಗೆ ಪ್ರೇರಿತನಾಗಿರುವುದಾಗಿಯೂ, ಜಿಹಾದಿಯಾಗಲು ಇಚ್ಛೆ ಹೊಂದಿರುವುದಾಗಿ, ಭಾರತದಲ್ಲಿ ಖಿಲಾಫತ್ ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿಯೂ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಇದಲ್ಲದೇ, ದೇಶಾದ್ಯಂತ ಹಲವಾರು ವ್ಯಕ್ತಿಗಳೊಂದಿಗೆ ಆತ ಸಂಪರ್ಕ ಹೊಂದಿದ್ದ. ಅವರಲ್ಲಿ, ಬಳ್ಳಾರಿಯ ಅಬ್ದುಲ್ ಸಲಾಮ್ ಕೂಡ ಒಬ್ಬನಾಗಿದ್ದ ಎಂದು ಗೊತ್ತಾಗಿದೆ.</p>.<p>ಅಬ್ದುಲ್ ಸಲಾಮ್ ತೀವ್ರವಾದಿ ವಿಷಯವನ್ನು ಹಂಚಿಕೊಳ್ಳುವ ಮತ್ತು ಜಿಹಾದಿ ಪರಿಕಲ್ಪನೆಗಳನ್ನು ಪ್ರಚಾರ ಮಾಡುವ ಗುಂಪಿನ ಭಾಗವಾಗಿದ್ದ ಎಂದು ಗೊತ್ತಾಗಿದೆ. ಬಳ್ಳಾರಿಯ ಅಬ್ದುಲ್ ಸಲಾಮ್ನೊಂದಿಗೆ ಸಂಪರ್ಕ ಹೊಂದುವಂತೆ ವಿಜಯವಾಡದ ಮೊಹಮದ್ ರೆಹಮತುಲ್ಲಾ ಷರೀಫ್ಗೆ ವಿದೇಶಿ ಉಗ್ರ ಅಲ್-ಹಕೀಮ್ ಶುಕೂರ್ ಎಂಬಾತ ಸೂಚನೆ ನೀಡಿದ್ದ ಎಂದು ವಿಜಯವಾಡ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ ಈ ಜಾಲವು ವಿದೇಶಿ ಉಗ್ರರೊಂದಿಗೆ ಸಂಪರ್ಕವನ್ನು ಹೊಂದಿರುವುದನ್ನು ಪೊಲೀಸ್ ಎಫ್ಐಆರ್ ಹೇಳುತ್ತಿದೆ. ಯುವಕರನ್ನು ಉಗ್ರಗಾಮಿ ಚಟುವಟಿಕೆಗಳ ಕಡೆಗೆ ಸೆಳೆಯುವಲ್ಲಿ ಅಲ್ ಹಕೀಮ್ ಶಕೂರ್ ಮತ್ತು ಆತ ತಿಳಿಸಿದ ಇನ್ನಿತರ ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.</p>.<p><strong>‘ಆನ್ಲೈನ್ ವೇದಿಕೆ ಪರಿಶೀಲನೆ ಅಗತ್ಯ’</strong></p><p>‘ಯುವಕರಲ್ಲಿ ಮೂಲಭೂತವಾದವನ್ನು ಉತ್ತೇಜಿಸುವಲ್ಲಿನ ಸಾಮಾಜಿಕ ಮಾಧ್ಯಮದ ಪಾತ್ರವನ್ನು ಈ ಪ್ರಕರಣ ಎತ್ತಿ ತೋರಿಸುತ್ತಿದೆ. ಆನ್ಲೈನ್ ವೇದಿಕೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸುವ, ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಈ ಪ್ರಕರಣ ಹೇಳುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. </p><p>ಇದಕ್ಕೂ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಶಂಕಿತನ ಜಾಡು ಹಿಡಿದು ಬಳ್ಳಾರಿಗೆ ಬಂದ ರಾಷ್ಟ್ರೀಯ ತನಿಖಾ ದಳ ವ್ಯಕ್ತಿಯೊಬ್ಬನನ್ನು ಬಂಧಿಸಿ ಕರೆದೊಯ್ದಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>