<p><strong>ಬೆಂಗಳೂರು</strong>: ‘ಬಲಗೈ ಸಮುದಾಯದಲ್ಲಿ ಎಷ್ಟು ಜನರಿದ್ದಾರೆ ಎಂಬುದನ್ನು ಕಂಡುಕೊಳ್ಳಲು 12 ಜಿಲ್ಲೆಗಳನ್ನಷ್ಟೇ ಆಯ್ಕೆ ಮಾಡಿಕೊಂಡು ನಾವೇ ಗಣತಿ ಮಾಡುವ ಇರಾದೆ ಇದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಹೇಳಿದರು.</p>.<p>ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟವು ನಗರ ದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಒಳಮೀಸಲಾತಿ ಕುರಿತ ಕಾರ್ಯಾಗಾರ ದಲ್ಲಿ ಮಾತನಾಡಿದ ಅವರು, ‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಲಗೈ ಒಕ್ಕೂಟ ದಿಂದಲೇ ಜನಗಣತಿ ಮಾಡಬೇಕು ಎಂಬ ಕನಸಿದ್ದರೂ ನಮಗೆ ಆರ್ಥಿಕ ಬೆಂಬಲವಿಲ್ಲ. ಹಾಗಾಗಿ, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳನ್ನಷ್ಟನ್ನೇ ಆಯ್ಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ’ ಎಂದರು.</p>.<p>2011ರ ಜನಗಣತಿಯಲ್ಲಿ ಬಲಗೈ ಸಮುದಾಯದ ಜನಸಂಖ್ಯೆಯು ಸುಮಾರು 31 ಲಕ್ಷ ಇತ್ತು. 14 ವರ್ಷಗಳ ನಂತರ ಎಲ್ಲ ಸಮುದಾಯಗಳ ಜನಸಂಖ್ಯೆ ಹೆಚ್ಚಾಯಿತು. ಆದರೆ, ಬಲಗೈ ಸಮುದಾಯದ ಜನಸಂಖ್ಯೆ 30 ಲಕ್ಷ ಎಂದು ನ್ಯಾ. ನಾಗಮೋಹನದಾಸ್ ಆಯೋಗದ ವರದಿಯಲ್ಲಿದೆ. ಇದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.</p>.<p>ಕಳೆದ ತಿಂಗಳು ಬೃಹತ್ ಸಮಾವೇಶ ಮಾಡಿದ ಬಳಿಕ ಒಳಮೀಸಲಾತಿ ಜಾರಿ ಯಾಗುವುದು ಸದ್ಯಕ್ಕೆ ನಿಂತಿದೆ. ಆದರೆ, ಇಷ್ಟಕ್ಕೆ ಸಮಾಧಾನ ಪಡುವಂತಿಲ್ಲ. ಶೇ 50ರಷ್ಟು ಜನರನ್ನಷ್ಟೇ ಸಮೀಕ್ಷೆ ಮಾಡಿರುವ ಆಯೋಗದ ವರದಿಯನ್ನು ತಿರಸ್ಕರಿಸುವವರೆಗೆ ಹೋರಾಟ ನಡೆಸಬೇಕು ಎಂದು ಹೇಳಿದರು.</p>.<p>ಒಂದು ಕುಟುಂಬದಲ್ಲಿ ಸರಾಸರಿ ಐದು ಜನ ಇರುತ್ತಾರೆ ಎಂದು ಅಂಕಿ ಅಂಶ ಹೇಳುತ್ತದೆ. ಆದರೆ, ಬಲಗೈ ಸಮುದಾಯದಲ್ಲಿ ಸರಾಸರಿ 2.5 ಎಂದು ನಾಗಮೋಹನದಾಸ್ ಆಯೋಗದ ವರದಿಯಲ್ಲಿದೆ. ಬಲಗೈ ಸಮುದಾಯದೊಳಗೆ ಬರುವ ಅನೇಕ ಜಾತಿಗಳನ್ನು ಬೇರೆ ಸಮುದಾಯ ಗಳೊಂದಿಗೆ ತೋರಿಸಲಾಗಿದೆ. ಇದು ಬಲಗೈ ಸಮುದಾಯದ ಸಂಖ್ಯೆಯನ್ನು ಕಡಿಮೆ ಮಾಡುವ ಹುನ್ನಾರ ಎಂದು ಆರೋಪಿಸಿದರು.</p>.<p>ಬಲಗೈಯವರನ್ನೆಲ್ಲ ಒಂದೇ ಕಡೆ ಸೇರಿಸಬೇಕು. ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂದು ಗುರುತಿಸಿಕೊಂಡವರ ಮೂಲ ಜಾತಿ ಪತ್ತೆ ಹಚ್ಚಿ, ಅದರಲ್ಲಿ ಎಡಗೈ ಯಾರು, ಬಲಗೈ ಯಾರು ಎಂಬುದನ್ನು ಗುರುತಿಸಿ ಆಯಾ ಗುಂಪಿಗೆ ಸೇರಿಸಬೇಕು. ಈ ಬಾರಿ ಕೇಂದ್ರ ಸರ್ಕಾರ ನಡೆಸುವ ಜನಗಣತಿ ಮತ್ತು ಜಾತಿ ಗಣತಿಯ ಸಂದರ್ಭದಲ್ಲಿ ಎಲ್ಲರೂ ಪಾಲ್ಗೊಂಡು ನೈಜ ಜಾತಿ ನಮೂದಿಸ ಬೇಕು ಎಂದು ಸಲಹೆ ನೀಡಿದರು.</p>.<p>ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಮೈಸೂರಿನ ಜ್ಞಾನ ಸ್ವರೂಪ ಸ್ವಾಮೀಜಿ, ಸಮುದಾಯದ ಮುಖಂಡರಾದ ಡಿ.ಜಿ. ಸಾಗರ್, ಚಂದ್ರಶೇಖರಯ್ಯ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಬಲಗೈ ಸಮುದಾಯದಲ್ಲಿ ಎಷ್ಟು ಜನರಿದ್ದಾರೆ ಎಂಬುದನ್ನು ಕಂಡುಕೊಳ್ಳಲು 12 ಜಿಲ್ಲೆಗಳನ್ನಷ್ಟೇ ಆಯ್ಕೆ ಮಾಡಿಕೊಂಡು ನಾವೇ ಗಣತಿ ಮಾಡುವ ಇರಾದೆ ಇದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಹೇಳಿದರು.</p>.<p>ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟವು ನಗರ ದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಒಳಮೀಸಲಾತಿ ಕುರಿತ ಕಾರ್ಯಾಗಾರ ದಲ್ಲಿ ಮಾತನಾಡಿದ ಅವರು, ‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಲಗೈ ಒಕ್ಕೂಟ ದಿಂದಲೇ ಜನಗಣತಿ ಮಾಡಬೇಕು ಎಂಬ ಕನಸಿದ್ದರೂ ನಮಗೆ ಆರ್ಥಿಕ ಬೆಂಬಲವಿಲ್ಲ. ಹಾಗಾಗಿ, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳನ್ನಷ್ಟನ್ನೇ ಆಯ್ಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ’ ಎಂದರು.</p>.<p>2011ರ ಜನಗಣತಿಯಲ್ಲಿ ಬಲಗೈ ಸಮುದಾಯದ ಜನಸಂಖ್ಯೆಯು ಸುಮಾರು 31 ಲಕ್ಷ ಇತ್ತು. 14 ವರ್ಷಗಳ ನಂತರ ಎಲ್ಲ ಸಮುದಾಯಗಳ ಜನಸಂಖ್ಯೆ ಹೆಚ್ಚಾಯಿತು. ಆದರೆ, ಬಲಗೈ ಸಮುದಾಯದ ಜನಸಂಖ್ಯೆ 30 ಲಕ್ಷ ಎಂದು ನ್ಯಾ. ನಾಗಮೋಹನದಾಸ್ ಆಯೋಗದ ವರದಿಯಲ್ಲಿದೆ. ಇದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.</p>.<p>ಕಳೆದ ತಿಂಗಳು ಬೃಹತ್ ಸಮಾವೇಶ ಮಾಡಿದ ಬಳಿಕ ಒಳಮೀಸಲಾತಿ ಜಾರಿ ಯಾಗುವುದು ಸದ್ಯಕ್ಕೆ ನಿಂತಿದೆ. ಆದರೆ, ಇಷ್ಟಕ್ಕೆ ಸಮಾಧಾನ ಪಡುವಂತಿಲ್ಲ. ಶೇ 50ರಷ್ಟು ಜನರನ್ನಷ್ಟೇ ಸಮೀಕ್ಷೆ ಮಾಡಿರುವ ಆಯೋಗದ ವರದಿಯನ್ನು ತಿರಸ್ಕರಿಸುವವರೆಗೆ ಹೋರಾಟ ನಡೆಸಬೇಕು ಎಂದು ಹೇಳಿದರು.</p>.<p>ಒಂದು ಕುಟುಂಬದಲ್ಲಿ ಸರಾಸರಿ ಐದು ಜನ ಇರುತ್ತಾರೆ ಎಂದು ಅಂಕಿ ಅಂಶ ಹೇಳುತ್ತದೆ. ಆದರೆ, ಬಲಗೈ ಸಮುದಾಯದಲ್ಲಿ ಸರಾಸರಿ 2.5 ಎಂದು ನಾಗಮೋಹನದಾಸ್ ಆಯೋಗದ ವರದಿಯಲ್ಲಿದೆ. ಬಲಗೈ ಸಮುದಾಯದೊಳಗೆ ಬರುವ ಅನೇಕ ಜಾತಿಗಳನ್ನು ಬೇರೆ ಸಮುದಾಯ ಗಳೊಂದಿಗೆ ತೋರಿಸಲಾಗಿದೆ. ಇದು ಬಲಗೈ ಸಮುದಾಯದ ಸಂಖ್ಯೆಯನ್ನು ಕಡಿಮೆ ಮಾಡುವ ಹುನ್ನಾರ ಎಂದು ಆರೋಪಿಸಿದರು.</p>.<p>ಬಲಗೈಯವರನ್ನೆಲ್ಲ ಒಂದೇ ಕಡೆ ಸೇರಿಸಬೇಕು. ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂದು ಗುರುತಿಸಿಕೊಂಡವರ ಮೂಲ ಜಾತಿ ಪತ್ತೆ ಹಚ್ಚಿ, ಅದರಲ್ಲಿ ಎಡಗೈ ಯಾರು, ಬಲಗೈ ಯಾರು ಎಂಬುದನ್ನು ಗುರುತಿಸಿ ಆಯಾ ಗುಂಪಿಗೆ ಸೇರಿಸಬೇಕು. ಈ ಬಾರಿ ಕೇಂದ್ರ ಸರ್ಕಾರ ನಡೆಸುವ ಜನಗಣತಿ ಮತ್ತು ಜಾತಿ ಗಣತಿಯ ಸಂದರ್ಭದಲ್ಲಿ ಎಲ್ಲರೂ ಪಾಲ್ಗೊಂಡು ನೈಜ ಜಾತಿ ನಮೂದಿಸ ಬೇಕು ಎಂದು ಸಲಹೆ ನೀಡಿದರು.</p>.<p>ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಮೈಸೂರಿನ ಜ್ಞಾನ ಸ್ವರೂಪ ಸ್ವಾಮೀಜಿ, ಸಮುದಾಯದ ಮುಖಂಡರಾದ ಡಿ.ಜಿ. ಸಾಗರ್, ಚಂದ್ರಶೇಖರಯ್ಯ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>