<p>ಬೆಂಗಳೂರು: ‘ಡಿಜಿಪಿ ರಾಮಚಂದ್ರ ರಾವ್ ಅವರ ಅಮಾನತು ಆದೇಶ ಹಿಂದಕ್ಕೆ ಪಡೆದುದರಲ್ಲಿ ತಪ್ಪೇನಿಲ್ಲ. ಇದು ಸರಿ–ತಪ್ಪಿನ ವಿಚಾರವೂ ಅಲ್ಲ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.</p>.<p>ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ರಾಮಚಂದ್ರರಾವ್ ಈ ತಿಂಗಳ ಕೊನೆಯಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಅವರ ಪಿಂಚಣಿ ಮತ್ತು ಇತರ ಭತ್ಯೆಗಳು ಇತ್ಯರ್ಥವಾಗಬೇಕಿದೆ ಎಂದು ತಿಳಿಸಿದರು.</p>.<p>‘ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ರಾಮಚಂದ್ರರಾವ್ ಅವರು ಮನವಿಯೊಂದನ್ನು ಸಲ್ಲಿಸಿದ್ದರು. ತಮ್ಮ ವಿರುದ್ಧದ ತನಿಖೆಗೆ ಸಹಕರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಅವರ ಅನುಮತಿಯೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಮಾನತು ಆದೇಶ ಹಿಂದಕ್ಕೆ ಪಡೆದಿದೆ’ ಎಂದು ಹೇಳಿದರು.</p>.<p>ವಾಣಿಜ್ಯ ಲಾಭಕ್ಕಾಗಿ ಪಂದ್ಯ ಸ್ಥಳಾಂತರ: ‘ಐಪಿಎಲ್ ಪಂದ್ಯಾವಳಿ ಅಹಮದಾಬಾದ್ಗೆ ಸ್ಥಳಾಂತರ ಗೊಳ್ಳಲು ವಾಣಿಜ್ಯ ಲಾಭದ ಕಾರಣಗಳು ಇರಬಹುದು. ಕ್ರೀಡಾಂಗಣದ ಭದ್ರತೆ ವಿಚಾರವಾಗಿ ಯಾವುದೇ ಆಕ್ಷೇಪಣೆಗಳಿಲ್ಲ. ಈವರೆಗೂ ನಡೆದಿರುವ ಐದು ಪಂದ್ಯಗಳಿಗೂ ಭದ್ರತೆ ಸೇರಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ’ ಎಂದು ಪರಮೇಶ್ವರ ತಿಳಿಸಿದರು.</p>.<p>ಬೆಂಗಳೂರಿನ ಕ್ರೀಡಾಂಗಣದಲ್ಲಿ 33,000 ಆಸನಗಳಿವೆ. ಈ ಪೈಕಿ ವಿವಿಐಪಿ, ಪ್ರಾಯೋಜಕತ್ವ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಆಟಗಾರರ ಕುಟುಂಬದವರಿಗೆ ಸೇರಿ ಸುಮಾರು 7,000ದಿಂದ 8,000 ಟಿಕೆಟ್ ಉಚಿತವಾಗಿ ಕೊಡಬೇಕಾಗುತ್ತದೆ. ಉಳಿಯುವುದು 25,000 ಟಿಕೆಟ್ಗಳು ಮಾತ್ರ. ಇದರಿಂದ ಲಾಭ ಆಗುವುದಿಲ್ಲ. ಅಹಮದಾಬಾದ್ ಕ್ರೀಡಾಂಗಣದಲ್ಲಿ 1 ಲಕ್ಷ ಆಸನಗಳಿವೆ. ಅಲ್ಲಿ ನಡೆದರೆ ಲಾಭದಾಯಕ ಎಂಬ ಕಾರಣಕ್ಕೆ ಸ್ಥಳಾಂತರ ಮಾಡುತ್ತಿದೆ ಎಂಬ ಮಾಹಿತಿ ಬಂದಿದೆ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-51-1154578292</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಡಿಜಿಪಿ ರಾಮಚಂದ್ರ ರಾವ್ ಅವರ ಅಮಾನತು ಆದೇಶ ಹಿಂದಕ್ಕೆ ಪಡೆದುದರಲ್ಲಿ ತಪ್ಪೇನಿಲ್ಲ. ಇದು ಸರಿ–ತಪ್ಪಿನ ವಿಚಾರವೂ ಅಲ್ಲ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.</p>.<p>ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ರಾಮಚಂದ್ರರಾವ್ ಈ ತಿಂಗಳ ಕೊನೆಯಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಅವರ ಪಿಂಚಣಿ ಮತ್ತು ಇತರ ಭತ್ಯೆಗಳು ಇತ್ಯರ್ಥವಾಗಬೇಕಿದೆ ಎಂದು ತಿಳಿಸಿದರು.</p>.<p>‘ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ರಾಮಚಂದ್ರರಾವ್ ಅವರು ಮನವಿಯೊಂದನ್ನು ಸಲ್ಲಿಸಿದ್ದರು. ತಮ್ಮ ವಿರುದ್ಧದ ತನಿಖೆಗೆ ಸಹಕರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಅವರ ಅನುಮತಿಯೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಮಾನತು ಆದೇಶ ಹಿಂದಕ್ಕೆ ಪಡೆದಿದೆ’ ಎಂದು ಹೇಳಿದರು.</p>.<p>ವಾಣಿಜ್ಯ ಲಾಭಕ್ಕಾಗಿ ಪಂದ್ಯ ಸ್ಥಳಾಂತರ: ‘ಐಪಿಎಲ್ ಪಂದ್ಯಾವಳಿ ಅಹಮದಾಬಾದ್ಗೆ ಸ್ಥಳಾಂತರ ಗೊಳ್ಳಲು ವಾಣಿಜ್ಯ ಲಾಭದ ಕಾರಣಗಳು ಇರಬಹುದು. ಕ್ರೀಡಾಂಗಣದ ಭದ್ರತೆ ವಿಚಾರವಾಗಿ ಯಾವುದೇ ಆಕ್ಷೇಪಣೆಗಳಿಲ್ಲ. ಈವರೆಗೂ ನಡೆದಿರುವ ಐದು ಪಂದ್ಯಗಳಿಗೂ ಭದ್ರತೆ ಸೇರಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ’ ಎಂದು ಪರಮೇಶ್ವರ ತಿಳಿಸಿದರು.</p>.<p>ಬೆಂಗಳೂರಿನ ಕ್ರೀಡಾಂಗಣದಲ್ಲಿ 33,000 ಆಸನಗಳಿವೆ. ಈ ಪೈಕಿ ವಿವಿಐಪಿ, ಪ್ರಾಯೋಜಕತ್ವ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಆಟಗಾರರ ಕುಟುಂಬದವರಿಗೆ ಸೇರಿ ಸುಮಾರು 7,000ದಿಂದ 8,000 ಟಿಕೆಟ್ ಉಚಿತವಾಗಿ ಕೊಡಬೇಕಾಗುತ್ತದೆ. ಉಳಿಯುವುದು 25,000 ಟಿಕೆಟ್ಗಳು ಮಾತ್ರ. ಇದರಿಂದ ಲಾಭ ಆಗುವುದಿಲ್ಲ. ಅಹಮದಾಬಾದ್ ಕ್ರೀಡಾಂಗಣದಲ್ಲಿ 1 ಲಕ್ಷ ಆಸನಗಳಿವೆ. ಅಲ್ಲಿ ನಡೆದರೆ ಲಾಭದಾಯಕ ಎಂಬ ಕಾರಣಕ್ಕೆ ಸ್ಥಳಾಂತರ ಮಾಡುತ್ತಿದೆ ಎಂಬ ಮಾಹಿತಿ ಬಂದಿದೆ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-51-1154578292</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>