<p>ಬೆಂಗಳೂರು: ಶಾಸಕಾಂಗ ಪಕ್ಷದ ಸಭೆಯ ನಂತರ ವಿಧಾನಸೌಧದಿಂದ ಡಿ.ಕೆ.ಶಿವಕುಮಾರ್ ಅವರು ಹೊರಬಂದಾಗ ಅವರ ಬೆಂಬಲಿಗರು ಘೋಷಣೆ ಕೂಗುತ್ತಾ, ಅವರ ಕಾಲಿಗೆ ಬೀಳಲು ಮುಂದಾದರು. ಈ ವೇಳೆ ಭಾರಿ ನೂಕುನುಗ್ಗಲು ಉಂಟಾಯಿತು. ಬೆಂಬಲಿಗರನ್ನು ತಡೆಯುವ ಭದ್ರತಾ ಸಿಬ್ಬಂದಿ ಯತ್ನ ವಿಫಲವಾಯಿತು.</p>.<p>ಬೆಂಬಲಿಗರು ಮತ್ತು ಅಭಿಮಾನಿಗಳು ತಮ್ಮತ್ತ ನುಗ್ಗಿದ್ದರಿಂದ ತುಸು ವಿಚಲಿತರಾದಂತೆ ಕಂಡ ಶಿವಕುಮಾರ್ ಅವರು, ನಿಧಾನಗತಿಯಲ್ಲೇ ತಮ್ಮ ಕಾರಿನತ್ತ ತೆರಳಿದರು. ಈ ವೇಳೆ ಅವರ ಜತೆಗಿದ್ದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಶಿವಕುಮಾರ್ ಅವರ ಅಭಿಮಾನಿಗಳು ತಳ್ಳಾಡಿದರು. ಒಂದು ಹಂತದಲ್ಲಿ ಶಿವಕುಮಾರ್ ಅವರು ಕಾರು ಮತ್ತು ತಮ್ಮ ಅಭಿಮಾನಿಗಳ ಮಧ್ಯೆ ಸಿಲುಕಿದರು. ಅವರ ಬೆಂಬಲಿಗರ ಹರ್ಷೋದ್ಗಾರ ಜೋರಾಗುತ್ತಲೇ ಇತ್ತು.</p>.<p>ಆಗ ಶಿವಕುಮಾರ್ ಅವರು ಹಿಂತಿರುಗಿ ವಿಧಾನಸೌಧದ ಕಾರಿಡಾರ್ನ ಗೇಟಿನತ್ತ ನೋಟ ನೆಟ್ಟರು. ನೂಕು ನುಗ್ಗಲು, ಹರ್ಷೋದ್ಗಾರಗಳಿಗೆ ಪ್ರತಿಕ್ರಿಯಿಸದೆ ತದೇಕಚಿತ್ತರಾಗಿ ನೋಡುತ್ತಲಿದ್ದರು. ಆ ವೇಳೆಗೆ ಸಿದ್ದರಾಮಯ್ಯ ಅವರು ಬಂದರು. ಶಿವಕುಮಾರ್ ಅವರ ಅಭಿಮಾನಿಗಳು ಆಗ ಸಿದ್ದರಾಮಯ್ಯ ಪರವಾಗಿಯೂ ಘೋಷಣೆ ಕೂಗಿದರು. ಕೆಲವರು ಪಾದಮುಟ್ಟಿ ನಮಸ್ಕರಿಸಿದರು. ನೂಕುನುಗ್ಗಲು ವಿಪರೀತವಾಗಿ ಇದ್ದ ಕಾರಣ ಸಿದ್ದರಾಮಯ್ಯ ಅವರು ಅಲ್ಲಿಯೇ ಕೆಲಕ್ಷಣ ನಿಂತರು.</p>.<p>ಸಿದ್ದರಾಮಯ್ಯ ಅವರು ಮೆಟ್ಟಿಲಿಳಿದು ಕಾರಿನವರೆಗೆ ಬರುವವರೆಗೂ ಶಿವಕುಮಾರ್ ಅಲ್ಲಿಯೇ ನಿಂತಿದ್ದರು. ನಂತರ ಸಿದ್ದರಾಮಯ್ಯ ಅವರನ್ನು ತಾವೇ ಕರೆದುಕೊಂಡು ಬಂದು, ಕಾರಿನ ಮುಂಬದಿಯ ಸೀಟಿನಲ್ಲಿ ಕೂರಿಸಿದರು. ತಾವು ಹಿಂಭಾಗದ ಸೀಟಿನಲ್ಲಿ ಕೂತರು. ಅದೇ ಕಾರಿನಲ್ಲಿ ಲೋಕಭವನದತ್ತ ಹೊರಟರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-51-651578861</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಶಾಸಕಾಂಗ ಪಕ್ಷದ ಸಭೆಯ ನಂತರ ವಿಧಾನಸೌಧದಿಂದ ಡಿ.ಕೆ.ಶಿವಕುಮಾರ್ ಅವರು ಹೊರಬಂದಾಗ ಅವರ ಬೆಂಬಲಿಗರು ಘೋಷಣೆ ಕೂಗುತ್ತಾ, ಅವರ ಕಾಲಿಗೆ ಬೀಳಲು ಮುಂದಾದರು. ಈ ವೇಳೆ ಭಾರಿ ನೂಕುನುಗ್ಗಲು ಉಂಟಾಯಿತು. ಬೆಂಬಲಿಗರನ್ನು ತಡೆಯುವ ಭದ್ರತಾ ಸಿಬ್ಬಂದಿ ಯತ್ನ ವಿಫಲವಾಯಿತು.</p>.<p>ಬೆಂಬಲಿಗರು ಮತ್ತು ಅಭಿಮಾನಿಗಳು ತಮ್ಮತ್ತ ನುಗ್ಗಿದ್ದರಿಂದ ತುಸು ವಿಚಲಿತರಾದಂತೆ ಕಂಡ ಶಿವಕುಮಾರ್ ಅವರು, ನಿಧಾನಗತಿಯಲ್ಲೇ ತಮ್ಮ ಕಾರಿನತ್ತ ತೆರಳಿದರು. ಈ ವೇಳೆ ಅವರ ಜತೆಗಿದ್ದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಶಿವಕುಮಾರ್ ಅವರ ಅಭಿಮಾನಿಗಳು ತಳ್ಳಾಡಿದರು. ಒಂದು ಹಂತದಲ್ಲಿ ಶಿವಕುಮಾರ್ ಅವರು ಕಾರು ಮತ್ತು ತಮ್ಮ ಅಭಿಮಾನಿಗಳ ಮಧ್ಯೆ ಸಿಲುಕಿದರು. ಅವರ ಬೆಂಬಲಿಗರ ಹರ್ಷೋದ್ಗಾರ ಜೋರಾಗುತ್ತಲೇ ಇತ್ತು.</p>.<p>ಆಗ ಶಿವಕುಮಾರ್ ಅವರು ಹಿಂತಿರುಗಿ ವಿಧಾನಸೌಧದ ಕಾರಿಡಾರ್ನ ಗೇಟಿನತ್ತ ನೋಟ ನೆಟ್ಟರು. ನೂಕು ನುಗ್ಗಲು, ಹರ್ಷೋದ್ಗಾರಗಳಿಗೆ ಪ್ರತಿಕ್ರಿಯಿಸದೆ ತದೇಕಚಿತ್ತರಾಗಿ ನೋಡುತ್ತಲಿದ್ದರು. ಆ ವೇಳೆಗೆ ಸಿದ್ದರಾಮಯ್ಯ ಅವರು ಬಂದರು. ಶಿವಕುಮಾರ್ ಅವರ ಅಭಿಮಾನಿಗಳು ಆಗ ಸಿದ್ದರಾಮಯ್ಯ ಪರವಾಗಿಯೂ ಘೋಷಣೆ ಕೂಗಿದರು. ಕೆಲವರು ಪಾದಮುಟ್ಟಿ ನಮಸ್ಕರಿಸಿದರು. ನೂಕುನುಗ್ಗಲು ವಿಪರೀತವಾಗಿ ಇದ್ದ ಕಾರಣ ಸಿದ್ದರಾಮಯ್ಯ ಅವರು ಅಲ್ಲಿಯೇ ಕೆಲಕ್ಷಣ ನಿಂತರು.</p>.<p>ಸಿದ್ದರಾಮಯ್ಯ ಅವರು ಮೆಟ್ಟಿಲಿಳಿದು ಕಾರಿನವರೆಗೆ ಬರುವವರೆಗೂ ಶಿವಕುಮಾರ್ ಅಲ್ಲಿಯೇ ನಿಂತಿದ್ದರು. ನಂತರ ಸಿದ್ದರಾಮಯ್ಯ ಅವರನ್ನು ತಾವೇ ಕರೆದುಕೊಂಡು ಬಂದು, ಕಾರಿನ ಮುಂಬದಿಯ ಸೀಟಿನಲ್ಲಿ ಕೂರಿಸಿದರು. ತಾವು ಹಿಂಭಾಗದ ಸೀಟಿನಲ್ಲಿ ಕೂತರು. ಅದೇ ಕಾರಿನಲ್ಲಿ ಲೋಕಭವನದತ್ತ ಹೊರಟರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-51-651578861</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>