<p><strong>ಬೆಂಗಳೂರು:</strong> ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳಿಗೆ ಕಡಿವಾಣ ಹಾಕಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಆನ್ಲೈನ್ ಆಧಾರಿತ ನಿಗಾ ವ್ಯವಸ್ಥೆ ಜಾರಿ ಮಾಡಿದೆ.</p>.<p>ಗುರುವಾರ ಈ ವ್ಯವಸ್ಥೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.</p>.<p>‘ಪೂರೈಕೆಯಾದ ಔಷಧಗಳ ಮೇಲೆ ನಿಯಂತ್ರಣ ಸಾಧಿಸಲು ದೇಶದಲ್ಲೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಪರಿಚಯಿಸಲಾಗಿದೆ. ಇದಕ್ಕಾಗಿ, ಪ್ರತ್ಯೇಕ ಪೋರ್ಟಲ್ ರೂಪಿಸಲಾಗಿದೆ. ಗುಣಮಟ್ಟ ಇರದ ಔಷಧಗಳ ನಿಗದಿತ ಬ್ಯಾಚ್ಗಳನ್ನು ಮಾರುಕಟ್ಟೆಯಿಂದ ಕೂಡಲೇ ಹಿಂಪಡೆಯಲು ಇದು ಸಹಕಾರಿಯಾಗಲಿದೆ. ಈ ಹಿಂದೆ ಹೀಗೆ ಮಾಡುವುದು ಕಷ್ಟವಾಗಿತ್ತು’ ಎಂದು ದಿನೇಶ್ ಹೇಳಿದರು.</p>.<p>‘ಪ್ರಮಾಣಿತ ಗುಣಮಟ್ಟ ಇರದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಕ್ರಮ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಕಳೆದ ವರ್ಷವೇ ಪತ್ರ ಬರೆಯಲಾಗಿತ್ತು. ಅವರು ಕ್ರಮ ಕೈಗೊಂಡಿಲ್ಲದ ಕಾರಣ ನಮ್ಮ ಹಂತದಲ್ಲಿ ಹೊಸ ವ್ಯವಸ್ಥೆ ರೂಪಿಸಿದ್ದೇವೆ. ಕಳೆದ ವರ್ಷ ಔಷಧ ಆಡಳಿತ ಇಲಾಖೆಯಿಂದ ಇ-ಸಹಿ ಸೌಲಭ್ಯ ಜಾರಿಗೆ ತರಲಾಗಿದ್ದು, ಇದರಿಂದ ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳ ನಿಗದಿತ ಬ್ಯಾಚ್ನ ಮಾಹಿತಿ ಪಡೆಯಲು ಸಾಧ್ಯವಾಯಿತು. ಪರಿಣಾಮ ₹1.85 ಕೋಟಿ ಮೌಲ್ಯದ ಔಷಧ ಹಿಂಪಡೆಯಲಾಗಿದೆ’ ಎಂದರು.</p>.<p>‘ಪ್ರಮಾಣಿತ ಗುಣಮಟ್ಟ ಹೊಂದಿರದಿದ್ದಲ್ಲಿ ಪೋರ್ಟಲ್ನಲ್ಲಿ ಆ ಬಗ್ಗೆ ಸೂಕ್ತ ಕಾರಣ ಸಹಿತ ಮಾಹಿತಿ ನಮೂದಿಸಲಾಗುವುದು. ಆ ಸಂದೇಶ ಎಲ್ಲ ಸಗಟು ವ್ಯಾಪಾರಿಗಳಿಗೆ ರವಾನೆ ಯಾಗಲಿದ್ದು, ಅವರು ಮುಂದೆ ಅದನ್ನು ಮಾರಾಟ ಮಾಡಲು ಸಾಧ್ಯ ವಾಗುವುದಿಲ್ಲ’ ಎಂದು ವಿವರಿಸಿದರು.</p>.<p>‘ನಮ್ಮಲ್ಲಿರುವ ಸುಮಾರು 15 ಸಾವಿರ ಔಷಧ ಸಗಟು ವರ್ತಕರ ಮಾಹಿತಿಯನ್ನು ಈ ಪೋರ್ಟಲ್ನಲ್ಲಿ ಅಳವಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ 45 ಸಾವಿರ ಚಿಲ್ಲರೆ ಔಷಧ ವರ್ತಕರಿದ್ದು, ಅವರ ಮಾಹಿತಿಯನ್ನು ಪೋರ್ಟಲ್ನಲ್ಲಿ ಅಳವಡಿಸಲಾಗುವುದು’ ಎಂದರು.</p>.<p>ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.</p>.<p><strong>‘ಮಾದಕ ಔಷಧಗಳ ದುರ್ಬಳಕೆಗೆ ಕಡಿವಾಣ’</strong></p><p>‘ನೂತನ ಪೋರ್ಟಲ್ ನೆರವಿನಿಂದ ಮಾದಕ ಔಷಧಗಳ ದುರ್ಬಳಕೆಗೂ ಕಡಿವಾಣ ಹಾಕಲಾಗುವುದು. ಈ ಮೊದಲು ಔಷಧ ವ್ಯಾಪಾರಿಗಳು ವೈದ್ಯರು ನೀಡಿದ ಔಷಧದ ಚೀಟಿ ಅನುಸಾರ ವೈದ್ಯರ ಹಾಗೂ ರೋಗಿಯ ಮಾಹಿತಿ ಮಾತ್ರ ದಾಖಲು ಮಾಡಿಕೊಳ್ಳುತ್ತಿದ್ದರು. ಔಷಧ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮಾತ್ರ ಆ ಔಷಧಗಳ ಮಾರಾಟ ಹಾಗೂ ಪ್ರಮಾಣದ ಮಾಹಿತಿ ಲಭ್ಯವಾ ಗುತ್ತಿತ್ತು. ನೂತನ ವ್ಯವಸ್ಥೆಯಡಿ ಔಷಧ ವ್ಯಾಪಾರಿಗಳು ರೋಗಿಯ ಹಾಗೂ ವೈದ್ಯರ ಹೆಸರು, ಔಷಧ ಚೀಟಿಯ ವಿವರ ಹಾಗೂ ಪ್ರಮಾಣ ವನ್ನು ದಾಖಲಿಸಬೇಕು’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.</p><p>‘ಈ ವ್ಯವಸ್ಥೆಯಿಂದ ಯಾವುದಾದರೂ ಒಬ್ಬ ವೈದ್ಯ ಮಾದಕ ಔಷಧಕ್ಕೆ ಶಿಫಾರಸು ಮಾಡುತ್ತಿದ್ದರೆ ಅಥವಾ ರೋಗಿ ಅಧಿಕ ಪ್ರಮಾಣದಲ್ಲಿ ಪಡೆಯುತ್ತಿದ್ದರೆ ಗೊತ್ತಾಗಲಿದೆ. ಇದರಿಂದ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದರು.</p>.<p><strong>‘ಜನೌಷಧ ಮಳಿಗೆ ಮೇಲೆ ಕ್ರಮ’</strong></p><p>‘ರಾಜ್ಯದಲ್ಲಿ 1,321 ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಔಷಧ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನಡೆಸಲಾದ ವಿಶೇಷ ಅಭಿಯಾನದಲ್ಲಿ 230 ಕೇಂದ್ರಗಳಿಂದ ಔಷಧಗಳ ಮಾದರಿ ಸಂಗ್ರಹಿಸಲಾಗಿದ್ದು, 35 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿರದ ಬಗ್ಗೆ ವರದಿ ಬಂದಿದೆ. ಜನರಿಕ್ ಔಷಧಗಳನ್ನು ಮಾತ್ರ ಮಾರಾಟ ಮಾಡಬೇಕಾದ ಈ ಕೇಂದ್ರಗಳು, ಬ್ರ್ಯಾಂಡೆಡ್ ಔಷಧಗಳನ್ನು ಮಾರಾಟ ಮಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ದಿನೇಶ್ ಗುಂಡೂರಾವ್ ಎಚ್ಚರಿಸಿದರು. </p>.<div><blockquote>ನಿಯಮ ಬಾಹಿರವಾಗಿ ಮಾದಕ ಔಷಧಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ 1,309 ಔಷಧ ಮಳಿಗೆಗಳನ್ನು ಪರೀಶಿಲನೆ ನಡೆಸಿ, 457 ಔಷಧ ಮಳಿಗೆಗಳ ಪರವಾನಗಿ ರದ್ದು ಮಾಡಲಾಗಿದೆ </blockquote><span class="attribution">ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-4-1394591619</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳಿಗೆ ಕಡಿವಾಣ ಹಾಕಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಆನ್ಲೈನ್ ಆಧಾರಿತ ನಿಗಾ ವ್ಯವಸ್ಥೆ ಜಾರಿ ಮಾಡಿದೆ.</p>.<p>ಗುರುವಾರ ಈ ವ್ಯವಸ್ಥೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.</p>.<p>‘ಪೂರೈಕೆಯಾದ ಔಷಧಗಳ ಮೇಲೆ ನಿಯಂತ್ರಣ ಸಾಧಿಸಲು ದೇಶದಲ್ಲೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಪರಿಚಯಿಸಲಾಗಿದೆ. ಇದಕ್ಕಾಗಿ, ಪ್ರತ್ಯೇಕ ಪೋರ್ಟಲ್ ರೂಪಿಸಲಾಗಿದೆ. ಗುಣಮಟ್ಟ ಇರದ ಔಷಧಗಳ ನಿಗದಿತ ಬ್ಯಾಚ್ಗಳನ್ನು ಮಾರುಕಟ್ಟೆಯಿಂದ ಕೂಡಲೇ ಹಿಂಪಡೆಯಲು ಇದು ಸಹಕಾರಿಯಾಗಲಿದೆ. ಈ ಹಿಂದೆ ಹೀಗೆ ಮಾಡುವುದು ಕಷ್ಟವಾಗಿತ್ತು’ ಎಂದು ದಿನೇಶ್ ಹೇಳಿದರು.</p>.<p>‘ಪ್ರಮಾಣಿತ ಗುಣಮಟ್ಟ ಇರದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಕ್ರಮ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಕಳೆದ ವರ್ಷವೇ ಪತ್ರ ಬರೆಯಲಾಗಿತ್ತು. ಅವರು ಕ್ರಮ ಕೈಗೊಂಡಿಲ್ಲದ ಕಾರಣ ನಮ್ಮ ಹಂತದಲ್ಲಿ ಹೊಸ ವ್ಯವಸ್ಥೆ ರೂಪಿಸಿದ್ದೇವೆ. ಕಳೆದ ವರ್ಷ ಔಷಧ ಆಡಳಿತ ಇಲಾಖೆಯಿಂದ ಇ-ಸಹಿ ಸೌಲಭ್ಯ ಜಾರಿಗೆ ತರಲಾಗಿದ್ದು, ಇದರಿಂದ ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳ ನಿಗದಿತ ಬ್ಯಾಚ್ನ ಮಾಹಿತಿ ಪಡೆಯಲು ಸಾಧ್ಯವಾಯಿತು. ಪರಿಣಾಮ ₹1.85 ಕೋಟಿ ಮೌಲ್ಯದ ಔಷಧ ಹಿಂಪಡೆಯಲಾಗಿದೆ’ ಎಂದರು.</p>.<p>‘ಪ್ರಮಾಣಿತ ಗುಣಮಟ್ಟ ಹೊಂದಿರದಿದ್ದಲ್ಲಿ ಪೋರ್ಟಲ್ನಲ್ಲಿ ಆ ಬಗ್ಗೆ ಸೂಕ್ತ ಕಾರಣ ಸಹಿತ ಮಾಹಿತಿ ನಮೂದಿಸಲಾಗುವುದು. ಆ ಸಂದೇಶ ಎಲ್ಲ ಸಗಟು ವ್ಯಾಪಾರಿಗಳಿಗೆ ರವಾನೆ ಯಾಗಲಿದ್ದು, ಅವರು ಮುಂದೆ ಅದನ್ನು ಮಾರಾಟ ಮಾಡಲು ಸಾಧ್ಯ ವಾಗುವುದಿಲ್ಲ’ ಎಂದು ವಿವರಿಸಿದರು.</p>.<p>‘ನಮ್ಮಲ್ಲಿರುವ ಸುಮಾರು 15 ಸಾವಿರ ಔಷಧ ಸಗಟು ವರ್ತಕರ ಮಾಹಿತಿಯನ್ನು ಈ ಪೋರ್ಟಲ್ನಲ್ಲಿ ಅಳವಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ 45 ಸಾವಿರ ಚಿಲ್ಲರೆ ಔಷಧ ವರ್ತಕರಿದ್ದು, ಅವರ ಮಾಹಿತಿಯನ್ನು ಪೋರ್ಟಲ್ನಲ್ಲಿ ಅಳವಡಿಸಲಾಗುವುದು’ ಎಂದರು.</p>.<p>ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.</p>.<p><strong>‘ಮಾದಕ ಔಷಧಗಳ ದುರ್ಬಳಕೆಗೆ ಕಡಿವಾಣ’</strong></p><p>‘ನೂತನ ಪೋರ್ಟಲ್ ನೆರವಿನಿಂದ ಮಾದಕ ಔಷಧಗಳ ದುರ್ಬಳಕೆಗೂ ಕಡಿವಾಣ ಹಾಕಲಾಗುವುದು. ಈ ಮೊದಲು ಔಷಧ ವ್ಯಾಪಾರಿಗಳು ವೈದ್ಯರು ನೀಡಿದ ಔಷಧದ ಚೀಟಿ ಅನುಸಾರ ವೈದ್ಯರ ಹಾಗೂ ರೋಗಿಯ ಮಾಹಿತಿ ಮಾತ್ರ ದಾಖಲು ಮಾಡಿಕೊಳ್ಳುತ್ತಿದ್ದರು. ಔಷಧ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮಾತ್ರ ಆ ಔಷಧಗಳ ಮಾರಾಟ ಹಾಗೂ ಪ್ರಮಾಣದ ಮಾಹಿತಿ ಲಭ್ಯವಾ ಗುತ್ತಿತ್ತು. ನೂತನ ವ್ಯವಸ್ಥೆಯಡಿ ಔಷಧ ವ್ಯಾಪಾರಿಗಳು ರೋಗಿಯ ಹಾಗೂ ವೈದ್ಯರ ಹೆಸರು, ಔಷಧ ಚೀಟಿಯ ವಿವರ ಹಾಗೂ ಪ್ರಮಾಣ ವನ್ನು ದಾಖಲಿಸಬೇಕು’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.</p><p>‘ಈ ವ್ಯವಸ್ಥೆಯಿಂದ ಯಾವುದಾದರೂ ಒಬ್ಬ ವೈದ್ಯ ಮಾದಕ ಔಷಧಕ್ಕೆ ಶಿಫಾರಸು ಮಾಡುತ್ತಿದ್ದರೆ ಅಥವಾ ರೋಗಿ ಅಧಿಕ ಪ್ರಮಾಣದಲ್ಲಿ ಪಡೆಯುತ್ತಿದ್ದರೆ ಗೊತ್ತಾಗಲಿದೆ. ಇದರಿಂದ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದರು.</p>.<p><strong>‘ಜನೌಷಧ ಮಳಿಗೆ ಮೇಲೆ ಕ್ರಮ’</strong></p><p>‘ರಾಜ್ಯದಲ್ಲಿ 1,321 ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಔಷಧ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನಡೆಸಲಾದ ವಿಶೇಷ ಅಭಿಯಾನದಲ್ಲಿ 230 ಕೇಂದ್ರಗಳಿಂದ ಔಷಧಗಳ ಮಾದರಿ ಸಂಗ್ರಹಿಸಲಾಗಿದ್ದು, 35 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿರದ ಬಗ್ಗೆ ವರದಿ ಬಂದಿದೆ. ಜನರಿಕ್ ಔಷಧಗಳನ್ನು ಮಾತ್ರ ಮಾರಾಟ ಮಾಡಬೇಕಾದ ಈ ಕೇಂದ್ರಗಳು, ಬ್ರ್ಯಾಂಡೆಡ್ ಔಷಧಗಳನ್ನು ಮಾರಾಟ ಮಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ದಿನೇಶ್ ಗುಂಡೂರಾವ್ ಎಚ್ಚರಿಸಿದರು. </p>.<div><blockquote>ನಿಯಮ ಬಾಹಿರವಾಗಿ ಮಾದಕ ಔಷಧಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ 1,309 ಔಷಧ ಮಳಿಗೆಗಳನ್ನು ಪರೀಶಿಲನೆ ನಡೆಸಿ, 457 ಔಷಧ ಮಳಿಗೆಗಳ ಪರವಾನಗಿ ರದ್ದು ಮಾಡಲಾಗಿದೆ </blockquote><span class="attribution">ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-4-1394591619</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>